Asianet Suvarna News Asianet Suvarna News

ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ; ಬಾಲಿವುಡ್​ ಇಷ್ಟೊಂದು ಹೆದರುತ್ತಿರೋದೇಕೆ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ.

Bollywood fears for south cinema Industry since yash leads KGF Series movies srb
Author
First Published Feb 19, 2024, 6:53 PM IST

ಸೌತ್​​ ಸ್ಟಾರ್ಸ್​ಗಳಾದ ಯಶ್​​, ಪ್ರಭಾಸ್​, ಅಲ್ಲು ಅರ್ಜುನ್​ ರಾಮ್​ ಚರಣ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್​ ಇವ್ರೆಲ್ಲಾ ಪ್ಯಾನ್ ಇಂಡಿಯಾ ​ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿದ್ರು. ಅದರಲ್ಲೂ ಬಾಲಿವುಡ್​ನಲ್ಲಿ ಭಾರಿ ದೊಡ್ಡ ಕಲೆಕ್ಷನ್​ ಮಾಡಿದ್ರು. ಇದ್ರಿಂದ ಹಿಂದಿ ಸಿನಿಮಾಗಳ ಸ್ಟಾರ್​​​​ಗಳು ಗಲ್ಲಾಪೆಟ್ಟೆಗೆ ಕೊಳ್ಳೆ ಹೊಡೆಯಲಾಗದೇ ಒದ್ದಾಡಿದ್ರು. ಸಲ್ಮಾನ್ ಖಾನ್​ ಶಾರುಖ್ ಖಾನ್, ಅಮೀರ್​ ಖಾನ್​ ಅಕ್ಷಯ್​ರಂತ ಸೂಪರ್ ಸ್ಟಾರ್​ಗಳೇ ಗೆಲುವಿಗಾಗಿ ಒದ್ದಾಡಿದ್ರು. ಈಗ ಸೌತ್​ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ಭಯ ಬಂದಿದೆ. ಆ ಐದು ಸಿನಿಮಾಗಳ ಎದುರು ತಮ್ಮ ಸಿನಿಮಾ ರಿಲೀಸ್ ಮಾಡೋಕೆ ಬಾಲಿವುಡ್​ ಮಂದಿ ಹೆದರುತ್ತಿದ್ದಾರಂತೆ.

ಹಿಂದಿ ಚಿತ್ರರಂಗ ರೂಲ್ ಮಾಡೋಕೆ ರೆಡಿ ಅಲ್ಲು ಅರ್ಜುನ್..!
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ: ದಿ ರೂಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಭಾಗ 2021ರಲ್ಲಿ ಕೊನೆಯಲ್ಲಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈಗ ಎರಡನೇ ಭಾಗಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ  2024ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರದ ಎದುರು ರಿಲೀಸ್ ಆಗಲಿದೆ.

ಬಿಗ್ ಬಾಸ್ ಬಳಿಕ ಸಂಗೀತಾ-ಚಾರ್ಲಿ ಭೇಟಿ; ನೆಟ್ಟಿಗರು ಎಂತೆಂತಹ ಕಾಮೆಂಟ್ ಹಾಕ್ತಿದಾರೆ ನೋಡ್ರಿ!

ಬಾಲಿವುಡ್​​ಗೆ ಭಯ ಹುಟ್ಟಿಸಿದೆ ರಿಷಬ್ ಶೆಟ್ಟಿಯ ಕಾಂತಾರ..!
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’ ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಆ ಸಿನಿಮಾದ ಎದುರು ಬಾಲಿವುಡ್​​​ನ ಯಾವ ಸಿನಿಮಾನೂ ರಿಲೀಸ್​ ಮಾಡುತ್ತಿಲ್ಲ.

ಅಂಬರೀಷ್‌ಗಾಗಿ ಮನೆಯಲ್ಲಿ ಬಾರ್ ಓಪನ್ ಮಾಡಿದ್ರು ವಿಷ್ಣುವರ್ಧನ್; ದಿಗ್ಗಜರ ದರ್ಬಾರ್ ಹೇಗಿತ್ತು ನೋಡ್ರಿ!
 
ದೇವರ, ತಂಗಲಾನ್ ಎದುರು ನಡೆಯಲ್ಲ ಹಿಂದಿ ಮಂದಿ ಆಟ..!
ಜೂನಿಯರ್ ಎನ್​​ಟಿಆರ್ ಅಂದ್ರೆ ಬಾಲಿವುಡ್ ಮಂದಿಗೆ ಭಯ ಇದೆ. ಅದಕ್ಕೆ ಕಾರಣ ಆರ್​ಆರ್​ ಆರ್ ಸಿನಿಮಾದ ಬಿಗ್ ಸಕ್ಸಸ್.. ಈಗ  ಜೂನಿಯರ್ ಎನ್​​ಟಿಆರ್ ‘ದೇವರ’ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ನ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 5ರಂದು ಬಿಡುಗಡೆ ಆಗಲಿರೋ ದೇವಾರ ಸಿನಿಮಾ ಎದುರು ಹಿಂದಿಯ ಸ್ಟಾರ್​ ಹೀರೋಗಳ ಸಿನಿಮಾ ಬಿಡುಗಡೆ ಮಾಡದಿರಲು ಬಾಲಿವುಡ್ ಡಿಸೈಡ್​​ ಮಾಡಿದೆಯಂತೆ. 

ಬೆಂಗಳೂರು ಸಿನಿಮೋತ್ಸವದಲ್ಲಿ ಪ್ರಶಸ್ತಿ ಬೇಟೆಗಿಳಿದ ಲೈನ್‌ಮ್ಯಾನ್; ರಘು ಶಾಸ್ತ್ರಿ ಚಿತ್ರ ಮ್ಯಾಜಿಕ್ ಮಾಡಬಹುದೇ?

ಅಷ್ಟೆ ಅಲ್ಲ ಪಾ. ರಂಜಿತ್ ನಿರ್ದೇಶನದಲ್ಲಿ ರೆಡಿ ಆಗುತ್ತಿರುವ, ಚಿಯಾನ್ ವಿಕ್ರಮ್ ನಟನೆಯ ‘ತಂಗಲಾನ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ದಳಪತಿ ವಿಜಯ್ ನಟನೆಯ ‘GOAT’ ಸಿನಿಮಾ ಕೂಡ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸಿದ್ಧವಾಗುತ್ತಿವೆ. ಇದರ ಜತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಕೂಡ ಪ್ಯಾನ್ ಇಂಡಿಯಾದಲ್ಲಿ ಸಿದ್ಧವಾಗುತ್ತಿದೆ. ಉಪ್ಪಿಯ ಯುಐ ಕೂಡ ಬಾಕ್ಸಾಫೀಸ್​ನಲ್ಲಿ ಮಾರ್ಕ್​ ಮಾಡೋ ಎಲ್ಲಾ ಸಾಧ್ಯತೆಯೂ ಇದೆ. ಟೋಟಲ್ಲಾಗಿ ಹೇಳೋದಾದ್ರೆ ಈ ಭಾರಿ ಸೌತ್​​ ಸಿನಿಮಾಗಳ ಪಾರುಪತ್ಯ ಬಾಲಿವುಡ್​​ ನಿದ್ದೆ ಕೆಡಿಸಿರೋದಂತು ನಿಜ..

ರೋಡ್‌ನಲ್ಲಿ ಬೋರಲು ಬಿದ್ದ ರಾಮ; ಸೀತಾ ಕೇರ್‌ ಟೇಕರ್ ರಾಮನಿಗೆ ಹೀಗಾದ್ರೆ ಮುಂದೇನು ಗತಿ?

Follow Us:
Download App:
  • android
  • ios