Asianet Suvarna News Asianet Suvarna News

ಡಾರ್ಲಿಂಗ್‌ ಕೃಷ್ಣಗೆ ಧೈರ್ಯ ಇದ್ದರೆ ಮನೇಲಿ ಹೆಂಡ್ತಿ ಕಾಲೆಳೆದು ಕೂರಿಸಲಿ!

ಡಾರ್ಲಿಂಗ್‌ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಟ್ರೇಲರ್‌ ಲಾಂಚ್‌ಗೆ ಬಂದ ಕಿಚ್ಚ ಸುದೀಪ್‌ ಡಾರ್ಲಿಂಗ್‌ ಕೃಷ್ಣಗೆ ಕಾಲೆಳೆದಿದ್ದಾರೆ.

actor sudeep participated in darling krishna Kousalya Supraja Rama Trailer Launch event gow
Author
First Published Jul 17, 2023, 6:17 PM IST | Last Updated Jul 17, 2023, 6:17 PM IST

‘ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ಟ್ರೇಲರಲ್ಲಿ ಡಾರ್ಲಿಂಗ್‌ ಕೃಷ್ಣ ಅವ್ರು ಒಂದು ಮಾತು ಹೇಳಿದ್ದಾರೆ - ಹುಡುಗೀರು ತಲೆ ಮೇಲೆ ಕೂತ್ಕೊಳ್ಳೋಕೆ ಹೋದಾಗಲೆಲ್ಲ ಕಾಲೆಳೆದು ಕೆಳಗಡೆ ಹಾಕ್ಬೇಕು ಅಂತ. ಧೈರ್ಯ ಇದ್ರೆ ಇದನ್ನವರು ಮನೇಲಿ ಮಾಡ್ಲಿ ಸಾರ್. ಆಮೇಲೆ ಅವರು ರಿಯಲ್‌ ಮ್ಯಾನ್‌ ಅಂತ ನಾನೂ ಒಪ್ತೀನಿ. ಮಿಲನಾ ಅವ್ರ ಪಾಯಿಂಟೆಡ್‌ ಹೀಲ್ಸ್‌ ನೋಡಿದ್ರಲ್ಲಾ, ಒಂದು ವೇಳೆ ಅವ್ರು ಈ ಡೈಲಾಗ್ ಮನೇಲಿ ಹೇಳಿದ್ರೆ ಅದೆಲ್ಲಿರುತ್ತೆ ಅಂತ ಊಹಿಸಬಹುದು. ಈಗ ಹೇಳಿ ಕೃಷ್ಣ, ನೀವು ರಿಯಲ್‌ ಮ್ಯಾನಾ?’

ಸಲ್ಮಾನ್ ಖಾನ್ ರ ಬಜರಂಗಿ ಭಾಯಿಜಾನ್ ಬಾಲ ನಟಿ ಮುನ್ನಿ ಈಗ ಹೇಗಿದ್ದಾರೆ ನೋಡಿ!

ಡಾರ್ಲಿಂಗ್‌ ಕೃಷ್ಣ ನಟನೆಯ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾ ಟ್ರೇಲರ್‌ ಲಾಂಚ್‌ಗೆ ಬಂದ ಕಿಚ್ಚ ಸುದೀಪ್‌ ಡಾರ್ಲಿಂಗ್‌ ಕೃಷ್ಣಗೆ ಕಾಲೆಳೆದಿದ್ದು ಹೀಗೆ. ಸುದೀಪ್‌ ಪ್ರಶ್ನೆಗೆ ಡಾರ್ಲಿಂಗ್‌ ಕೃಷ್ಣ ಅವರ ನಗುವೇ ಉತ್ತರವಾಗಿತ್ತು.

ಗಂಡ ನನಗೆ ಮೋಸ ಮಾಡಿದ್ದಾನೆ, ಹಾಟ್ ನಟಿ ಸನ್ನಿ ಲಿಯೋನ್ ಆರೋಪ

ಡಾರ್ಲಿಂಗ್ ಕೃಷ್ಣ, ‘ನನ್ನ ನಟನಾ ಕೆರಿಯರ್‌ನಲ್ಲಿ ದಿ ಬೆಸ್ಟ್‌ ಕಥೆ ಈ ಚಿತ್ರದ್ದು. ಇದೊಂದು ಬೆಸ್ಟ್‌ ಫಿಲಂ ಆಗುತ್ತೆ. ಇನ್ನು ರಿಯಲ್‌ ಮ್ಯಾನ್‌ ವಿಷಯಕ್ಕೆ ಬರೋದಾದ್ರೆ ನನ್‌ ಪ್ರಕಾರ ರಿಯಲ್‌ ಮ್ಯಾನ್‌ ಸುದೀಪ್‌. ನಮ್ಮನೇಲೆಲ್ಲ ಗೆಸ್ಟ್‌ಗಳಿಗೆ ಹೆಂಡತಿ, ಅಮ್ಮ ಅಡುಗೆ ಮಾಡಿ ಬಡಿಸಿದ್ರೆ ಸುದೀಪ್‌ ಸ್ವತಃ ತಾವೇ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸ್ತಾರೆ. ನಮಗೆಲ್ಲ ತಿನ್ನಿಸ್ತಾರೆ’ ಅಂದರು.

ನಿರ್ದೇಶಕ ಶಶಾಂಕ್‌, ನಾಯಕಿ ಬೃಂದಾ, ವಿಶೇಷ ಪಾತ್ರದಲ್ಲಿ ನಟಿಸಿರುವ ಮಿಲನಾ ನಾಗರಾಜ್‌ ಚಿತ್ರದ ಕುರಿತು ಮಾತನಾಡಿದರು. ನಿರ್ಮಾಪಕರಾದ ಬಿ ಸಿ ಪಾಟೀಲ್‌, ಸೃಷ್ಟಿ ಪಾಟೀಲ್‌ ಇದ್ದರು.

Latest Videos
Follow Us:
Download App:
  • android
  • ios