- Home
- Entertainment
- ಮತ್ತೊಮ್ಮೆ ಲವರ್ಬಾಯ್ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ
ಮತ್ತೊಮ್ಮೆ ಲವರ್ಬಾಯ್ ಆಗಿ ಬೆಳ್ಳಿ ಪರದೆ ಮೇಲೆ Bhagyalkashmi ಆದಿ: ನಾಯಕ, ನಿರ್ದೇಶಕ ಎಲ್ಲರೂ ಇವರೇ
ಭಾಗ್ಯಲಕ್ಷ್ಮಿ ಸೀರಿಯಲ್ ಖ್ಯಾತಿಯ ನಟ ಹರೀಶ್ ರಾಜ್, 50ರ ಹರೆಯದಲ್ಲಿ 'ಲವ್ ಕಾಕ್ಟೇಲ್' ಎಂಬ ಸಿನಿಮಾದ ಮೂಲಕ ಲವರ್ ಬಾಯ್ ಆಗಿ ಮತ್ತೆ ಬೆಳ್ಳಿಪರದೆಗೆ ಮರಳಿದ್ದಾರೆ. ಪ್ರೇಮದಲ್ಲಿ ಸೋತ ನಂತರದ ಜೀವನವನ್ನು ಹಾಸ್ಯಮಯವಾಗಿ ಹೇಳುವ ಈ ಚಿತ್ರವನ್ನು ಅವರೇ ನಿರ್ದೇಶಿಸಿದ್ದಾರೆ.

ಭಾಗ್ಯಲಕ್ಷ್ಮಿ ಲವರ್ಬಾಯ್
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ (Bhagyalkashmi Serial)ನಲ್ಲಿ ಆದಿಯಾಗಿ ಭರ್ಜರಿ ಎಂಟ್ರಿ ಕೊಟ್ಟು, ಬಳಿಕ ಭಾಗ್ಯಳ ಜೀವನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು ನಟ ಹರೀಶ್ ರಾಜ್. 50ರ ಹರೆಯದಲ್ಲಿಯೂ ಲವರ್ ಬಾಯ್ ಎಂದೇ ಗುರುತಿಸಿಕೊಂಡವು ನಟ. ಇದೀಗ ಅದೇ ಕ್ರೇಜ್ನೊಂದಿಗೆ ಮತ್ತೊಮ್ಮೆ ಲವರ್ ಬಾಯ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟ, ನಿರ್ದೇಶಕನಾಗಿ ಬೆಳ್ಳಿ ಪರದೆಗೆ
ನಿರ್ದೇಶಕರಾಗಿ, ನಟನಾಗಿ 'ಲವ್ ಕಾಕ್ಟೇಲ್' ಚಿತ್ರದಲ್ಲಿ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ ನಟ ಹರೀಶ್ ರಾಜ್. ಮೂರು ದಶಕಗಳ ತಮ್ಮ ಬಣ್ಣದ ಲೋಕದಲ್ಲಿ ಇದೀಗ ಹೊಸ ಪ್ರಯೋಗಕ್ಕೆ ನಟ ಮುಂದಾಗಿದ್ದಾರೆ. ಪ್ರೇಮಕಥೆಗೆ ಮನರಂಜನೆಯ ಸ್ಪರ್ಶ ನೀಡುವ ಪಾತ್ರದಲ್ಲಿ ನಟ ಮಿಂಚಲಿದ್ದಾರೆ.
ಪ್ರೇಮದಲ್ಲಿ ಸೋತ ನಂತರವೂ ಜೀವನ
ಪ್ರೇಮದಲ್ಲಿ ಸೋತ ನಂತರವೂ ಜೀವನವನ್ನು ಹೇಗೆ ಖುಷಿಯಾಗಿ ಎದುರಿಸಬಹುದು ಎಂಬ ಸಂದೇಶವನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ ಲವ್ ಕಾಕ್ಟೇಲ್' ಚಿತ್ರದಲ್ಲಿ. ಈ ಕುರಿತು ಖುದ್ದು ಅವರೇ ಮಾಹಿತಿ ನೀಡಿದ್ದಾರೆ.
ನಟ ಹೇಳಿದ್ದೇನು?
'ಲವ್ ಕಾಕ್ಟೇಲ್' ಚಿತ್ರದ ಕುರಿತು ಮಾತನಾಡಿದ ಹರೀಶ್ ರಾಜ್, ತಮ್ಮ ಸಿನಿ ಬದುಕಿನ ಮಹತ್ವದ ಘಟ್ಟವನ್ನು ಈ ಚಿತ್ರದ ಮೂಲಕ ಆಚರಿಸುತ್ತಿರುವುದಾಗಿ ಹೇಳಿದರು. ಚಿತ್ರರಂಗದಲ್ಲಿ ನನಗೆ 30 ವರ್ಷದ ಪಯಣ. ಈಗ ನನಗೆ 50 ವರ್ಷ. ಈ ಸಂತೋಷವನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಈ ಸಿನಿಮಾ ಮಾಡಿದ್ದೇನೆ. ಇದು ನನ್ನ ಮನಸ್ಸಿಗೆ ಹತ್ತಿರವಾದ ಕಥೆ ಎಂದು ಹೇಳಿದರು.
ವೆಂಕಟೇಶಾಯ ನಮಃ'
ಈ ಸಿನಿಮಾಕ್ಕೆ ಆರಂಭದಲ್ಲಿ 'ವೆಂಕಟೇಶಾಯ ನಮಃ' ಎಂಬ ಹೆಸರನ್ನು ಇಡಲು ನಿರ್ಧರಿಸಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯ ಸಲಹೆಯ ಮೇರೆಗೆ ಚಿತ್ರದ ಶೀರ್ಷಿಕೆಯನ್ನು 'ಲವ್ ಕಾಕ್ಟೇಲ್' ಎಂದು ಬದಲಾಯಿಸಲಾಗಿದೆ ಎಂದೂ ವಿವರಿಸಿದರು. ಈಚೆಗೆ ನಿಧನರಾದ ಹಿರಿಯ ನಟ ಉಮೇಶ್ ಕೂಡ ಈ ಸಿನಿಮಾದಲ್ಲಿ ಇದ್ದಾರೆ. ಅವರ ಬಗ್ಗೆ ನೆನಪಿಸಿಕೊಂಡ ನಟ ಹರೀಶ್ ರಾಜ್, "ಅವರು ಚಿತ್ರದಲ್ಲಿ ಅದ್ಭುತ ಪಾತ್ರ ನಿರ್ವಹಿಸಿದ್ದರು. ಆದರೆ ಇಂದು ಅವರು ನಮ್ಮ ಜೊತೆ ಇಲ್ಲ ಎನ್ನುವುದು ನೋವಿನ ಸಂಗತಿ" ಎಂದರು.
ಚಿತ್ರದ ಕುರಿತು
ಶ್ರೀ ಲಕ್ಷ್ಮೀ ಜನಾರ್ಧನ ಬ್ಯಾನರ್ ಅಡಿಯಲ್ಲಿ ಪಿ. ಜನಾರ್ಧನ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಪ್ರವೀಣ್ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸಿದ್ದು, ರಾಜಾ ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಹರೀಶ್ ರಾಜ್, ಪ್ರಕೃತಿ ಪ್ರಸಾದ್, ತಬಲಾ ನಾಣಿ, ಅಶೋಕ್, ಉಮಾಶ್ರೀ, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

