Asianet Suvarna News Asianet Suvarna News

ವ್ಯಾಟ್ಯ್ಆ್ಯಪ್ ಬಳಕೆದಾರರಿಗೆ ರಿಲೀಫ್, ಕಿಚ್ಚ ಸುದೀಪ್ ಸರ್ಪ್ರೈಸ್; ಜ.16ರ ಟಾಪ್ 10 ಸುದ್ದಿ!

ವಾಟ್ಸಾಪ್‌, ಶೀಘ್ರವೇ ತನ್ನ ಬಳಕೆದಾರರಿಗೆ ‘ರೀಡ್‌ ಲೇಟರ್‌’ ಹೊಸ ಸೌಲಭ್ಯ ನೀಡಲುು ಮುಂದಾಗಿದೆ. ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ ವಿಶೇಷ ಮನವಿ ಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಅಮಿತ್ ಶಾ ಮಾಸ್ಟರ್ ಪ್ಲಾನ್ ಸಿದ್ದಪಡಿಸಲಾಗಿದೆ. ಕಾರು ವಾಶ್ ಸಿಬ್ಬಂದಿ ಮಾಡಿ ಎಡವಟ್ಟಿನಿಂದ ಫೆರಾರಿ ಕಾರು ಪುಡಿ ಪುಡಿಯಾಗಿದೆ. ಕಿಚ್ಚ ಸುದೀಪ್ ಸರ್ಪ್ರೈಸ್ ಗಿಫ್ಟ್, ಭೀಮಾತೀರದಿಂದ ಕೇಳಿ ಬಂತು ಮತ್ತೊಂದು ಹೆಸರು ಸೇರಿದಂತೆ ಜನವರಿ 16ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

whatsapp update to kiccha sudeep top 10 news of January 16 ckm
Author
Bengaluru, First Published Jan 16, 2021, 4:50 PM IST

ವಾಟ್ಸಾಪ್‌ನ ಹೊಸ ಫೀಚರ್‌, ಬಳಕೆದಾರರಿಗೆ ನೆಮ್ಮದಿ!...

whatsapp update to kiccha sudeep top 10 news of January 16 ckm

ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್‌ ಮೀಡಿಯಾ ತಾಣಗಳ ಪೈಕಿ ಒಂದಾದ ವಾಟ್ಸಾಪ್‌, ಶೀಘ್ರವೇ ತನ್ನ ಬಳಕೆದಾರರಿಗೆ ‘ರೀಡ್‌ ಲೇಟರ್‌’ (ಆಮೇಲೆ ಓದಿ) ಎಂಬ ಹೊಸ ಸೌಲಭ್ಯ ಕಲ್ಪಿಸಲು ಮುಂದಾಗಿದೆ.

ಲಸಿಕೆ ಪಡೆಯುವ ಮುನ್ನ ಮೋದಿ ಎಚ್ಚರಿಕೆ, ಈ ತಪ್ಪು ಮಾಡಬೇಡಿ ಎಂದ ಪಿಎಂ!...

whatsapp update to kiccha sudeep top 10 news of January 16 ckm

ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಇಂದು ದೇಶಾದ್ಯಂತ ಕೊರೋನಾ ಲಸಿಕೆ ಅಭಿಯಾನ ಆರಂಭವಾಗಿದೆ. ಹೀಗಿರುವಾಗ ಪಿಎಂ ಮೋದಿ ಈ ಅಭಿಯಾನ ಆರಂಭವಾಗುವುದಕ್ಕೂ ಮೊದಲು ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರು ಕೊರೋನಾ ಲಸಿಕೆ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಯತ್ನ ನಡೆಸಿದ್ದಾರೆ.

ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ; ಮುಷ್ತಾಕ್ ಅಲಿ ಟೂರ್ನಿಯಿಂದ ಹೊರನಡೆದ ಬರೋಡ ನಾಯಕ...

whatsapp update to kiccha sudeep top 10 news of January 16 ckm

ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ ಎದುರಾಗಿದೆ. ಹಿಮಾಂಶು ಪಾಂಡ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವೈರಲ್ ಆಯ್ತು ಸುದೀಪ್‌ ಸರ್ಪ್ರೈಸ್‌ ಕೊಟ್ಟ ವಿಡಿಯೋ!...

whatsapp update to kiccha sudeep top 10 news of January 16 ckm

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಜೊತೆ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್‌ಗೆ ಸರ್ಪ್ರೈಸ್‌ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ...

ಕಾರು ವಾಶ್ ಸಿಬ್ಬಂದಿಯ ಎಡವಟ್ಟು, 5 ಕೋಟಿ ರೂ ಫೆರಾರಿ ಕಾರು ಪುಡಿ ಪುಡಿ!...

whatsapp update to kiccha sudeep top 10 news of January 16 ckm

ಫೆರಾರಿ 812 ಸೂಪರ್‌ಫಾಸ್ಟ್ ಕಾರು. ಎಕ್ಸ್ ಶೋ ರೂಂ ಬೆಲೆ 5.20 ಕೋಟಿ ರೂಪಾಯಿ. ದುಬಾರಿ ಕಾರನ್ನು ವಾಶ್ ಮಾಡಲು ಕೊಡಲಾಗಿತ್ತು. ಸರ್ವೀಸ್ ಸೆಂಟರ್ ಉದ್ಯೋಗಿ ಕಾರು ವಾಶ್ ಮಾಡಿ, ಫೆರಾರಿ ಕಾರನ್ನು ಮರಳಿ ಮಾಲೀಕನಿಗೆ ಕೊಡಲು ತೆರಳಿದ್ದಾರೆ. ಫೆರಾರಿ ಕಾರಿನ ವೇಗಕ್ಕೆ ಸಾಟಿ ಎಲ್ಲಿದೆ.  ನೌಕರ ಕೂಡ ಅತೀ ವೇಗದಿಂದ ತೆರಳಿದ್ದಾನೆ. ನಿಯಂತ್ರಣಕ್ಕೆ ಸಿಗದ ಕಾರು ಅಪಘಾತಕ್ಕೀಡಾಗಿ ಪುಡಿ ಪುಡಿಯಾಗಿದೆ. ಮುಂದೇನಾಯ್ತು? ಈ ಕಾರು ಯಾರದು? ಇಲ್ಲಿದೆ ವಿವರ.

ಪೂರ್ಣಾ​ವಧಿ ಆಡ​ಳಿ​ತಕ್ಕೆ ಒಕ್ಕ​ಲಿಗ​ರಿಗೆ ಶಾಪವಿದೆ : ಇವರದ್ದೆಲ್ಲಾ ಅರ್ಧದ ಅಧಿಕಾರ...

whatsapp update to kiccha sudeep top 10 news of January 16 ckm

ಪೂರ್ಣಾವಧಿಯಲ್ಲಿ ಅಧಿಕಾರ ನಡೆಸಲು ಒಕ್ಕಲಿಗರಿಗೆ ಶಾಪವಿದೆ. ಇವರದ್ದೆಲ್ಲಾವೂ ಅರ್ಧಕ್ಕೆ ಅಧಿಕಾರ ಮುಕ್ತಾಯ.. ಏನಿದು ವಿಚಾರ..?

ಲಾಂಗ್‌ನಲ್ಲಿ ಕೇಕ್ ಕತ್ತರಿಸಿದ ನಟ: ಕ್ಷಮೆ ಕೇಳಿದ ವಿಜಯ್...

whatsapp update to kiccha sudeep top 10 news of January 16 ckm

ಲಾಂಗ್ ಹಿಡಿದು ಕೇಕ್ ಕಟ್ ಮಾಡಿದ್ದಕ್ಕಾಗಿ ಕಾಲಿವುಡ್ ನಟ ವಿಜಯ ಸೇತುಪತಿ ಕ್ಷಮೆ ಕೇಳಿದ್ದಾರೆ. ನಾನು ಲಾಂಗ್ ಹಿಡಿದು ಕೇಕ್ ಕಟ್ ಮಾಡೋ ಮೂಲಕ ಕೆಟ್ಟ ಉದಾಹರಣೆ ಕೊಟ್ಟಿದ್ದೇನೆ. ಇನ್ಮುಂದೆ ಹುಷಾರಾಗಿರುತ್ತೇನೆ ಎಂದು ನಟ ಹೇಳಿದ್ದಾರೆ.

ಭೀಮತೀರದಲ್ಲೊಂದು ಹೊಸ ಹೆಸ್ರು, ಅವನ ಹೆಸರು ಕೇಳಿದ್ರೇ ಕುಖ್ಯಾತರೆಲ್ಲಾ ಸೈಲೆಂಟ್..!...

whatsapp update to kiccha sudeep top 10 news of January 16 ckm

ಭೀಮಾ ತೀರದಲ್ಲಿ ನಟೋರಿಯಸ್ ಹಂತಕರ ಹೆಸರು ಸ್ವಲ್ಪ ಸೈಲೆಂಟ್ ಆಗಿತ್ತೇನೋ. ಆದ್ರೆ,  ಅಷ್ಟರಲ್ಲಿಯೇ ಈಗ ಹೊಸ ಪಾಪಿಯ ಹೆಸರು ಕೇಳುತ್ತಿದೆ.

ಬಿಜೆಪಿಯಲ್ಲಿ ಸಿದ್ಧವಾಗುತ್ತಿದೆ ಮಾಸ್ಟರ್ ಪ್ಲಾನ್ : ಭರ್ಜರಿ ಗೆಲುವಿವಾಗಿ ತಂತ್ರಗಾರಿಕೆ...

whatsapp update to kiccha sudeep top 10 news of January 16 ckm

ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ಇಂದು ನಡೆಯುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಈ ವೇಳೆ ಹಲವು ತಂತ್ರಗಾರಿಕೆಗಳು ಸಿದ್ಧವಾಗಲಿದೆ

Follow Us:
Download App:
  • android
  • ios