Asianet Suvarna News Asianet Suvarna News

ಪೂರ್ಣಾ​ವಧಿ ಆಡ​ಳಿ​ತಕ್ಕೆ ಒಕ್ಕ​ಲಿಗ​ರಿಗೆ ಶಾಪವಿದೆ : ಇವರದ್ದೆಲ್ಲಾ ಅರ್ಧದ ಅಧಿಕಾರ

ಪೂರ್ಣಾವಧಿಯಲ್ಲಿ ಅಧಿಕಾರ ನಡೆಸಲು ಒಕ್ಕಲಿಗರಿಗೆ ಶಾಪವಿದೆ. ಇವರದ್ದೆಲ್ಲಾವೂ ಅರ್ಧಕ್ಕೆ ಅಧಿಕಾರ ಮುಕ್ತಾಯ.. ಏನಿದು ವಿಚಾರ..?

HD Kumaraswamy  visits Ramanagara Temple snr
Author
Bengaluru, First Published Jan 16, 2021, 4:18 PM IST

ರಾಮ​ನ​ಗರ (ಜ.16):  ಕೆಂಗಲ್‌ ಹನು​ಮಂತಯ್ಯ, ದೇ​ವೇ​ಗೌಡ ಮುಖ್ಯ​ಮಂತ್ರಿಗಳಾಗಿ ಅವಧಿ ಪೂರ್ಣ​ಗೊ​ಳಿ​ಸ​ಲಿಲ್ಲ. ಒಕ್ಕ​ಲಿ​ಗ ಸಮು​ದಾ​ಯದ ನಾಯ​ಕ​ರಿಗೆ ಪೂರ್ಣಾ​ವ​ಧಿ ಆಡ​ಳಿ​ತ ನಡೆ​ಸಲು ಶಾಪ ತಗು​ಲಿದೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌ .ಡಿ.​ಕು​ಮಾ​ರ​ಸ್ವಾಮಿ ಹೇಳಿ​ದರು.

ತಾಲೂ​ಕಿನ ಜಾಲ​ಮಂಗಲ ಗ್ರಾಮ​ದಲ್ಲಿ ಲಕ್ಷ್ಮೀ ನಾರಾ​ಯ​ಣ​ಸ್ವಾ​ಮಿಗೆ ತಪ್ಪೊ​ಪ್ಪಿನ ಕಾಣಿಕೆ ಅರ್ಪಿ​ಸಿದ ಬಳಿಕ ದೇವಾ​ಲ​ಯದ ಆವ​ರ​ಣ​ದಲ್ಲಿ ಆಯೋ​ಜಿ​ಸಿದ್ದ ಕಾರ್ಯ​ಕ್ರ​ಮ​ದಲ್ಲಿ ಮಾತ​ನಾಡಿದ ಅವರು, ರಾಜ್ಯ​ದ​ಲ್ಲಿ ಆಡ​ಳಿತ ನಡೆ​ಸುವ ವಿಚಾ​ರ​ದಲ್ಲಿ ನಮ್ಮ ಒಕ್ಕ​ಲಿಗ ಸಮು​ದಾ​ಯಕ್ಕೆ ಒಂದು ರೀತಿ ಅಂಟು ಶಾಪ​ವಿದೆ ಎಂದ​ರು.

ನಿಖಿಲ್‌ ಕುಮಾ​ರ​ಸ್ವಾಮಿ ಪಕ್ಷದ ಜವಾ​ಬ್ದಾರಿ:

ರಾಜ್ಯ​ದಲ್ಲಿ 2023ಕ್ಕೂ ಮೊದಲೇ ವಿಧಾ​ನ​ಸಭಾ ಚುನಾವಣೆ ಘೋಷಣೆಯಾದರೂ ಎದು​ರಿ​ಸಲು ಸಿದ್ಧ​ರಿ​ದ್ದೇವೆ. ಈಗ ಪಕ್ಷ ಸಂಘಟನೆಗೆ ಮುಂದಾಗಿದ್ದೇನೆ. ಮುಂದಿನ ದಿನಗಳಲ್ಲಿ ನಡೆಯಲಿರುವ ತಾಪಂ ಹಾಗೂ ಜಿಪಂ ಚುನಾವಣೆಯ ಸಂಪೂರ್ಣ ಜವಾ​ಬ್ದಾ​ರಿ​ಯನ್ನು ನಾನೇ ವಹಿ​ಸಿ​ಕೊ​ಳ್ಳು​ತ್ತೇನೆ. ಪುತ್ರ ನಿಖಿಲ್‌ ಕುಮಾ​ರ​ಸ್ವಾಮಿ ಪಕ್ಷದ ಜವಾ​ಬ್ದಾರಿ ಹೊರ​ಲಿ​ದ್ದಾ​ರೆ. ಇಂದಿನಿಂದ ರಾಜ್ಯ ಪ್ರವಾಸ ಆರಂಭಿ​ಸಿದ್ದು, ಪ್ರತಿ ಮತದಾರರ ಬಳಿ ಹೋಗುತ್ತೇನೆ. 2004ರಲ್ಲಿ ಮತದಾರರ ಬಳಿ ಹೋಗಿದ್ದೆ. ಅದನ್ನು ಬಿಟ್ಟರೆ ಈವರೆಗೂ ನನನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ. ಇದೊಂದು ಬಾರಿ ಕಡೆಯ ಅವಕಾಶ ನೀಡಿದರೆ ರಾಜ್ಯವನ್ನು ಅಭಿವೃದ್ಧಿ ಮಾಡಿ, ಜನರ ಋುಣ ತೀರಿಸುತ್ತೇನೆ. ಮುಂಬರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಸವಾ​ಲಾಗಿ ಸ್ವೀಕ​ರಿ​ಸಿದ್ದು, ನಾಡಿನ ಮತ​ದಾ​ರರು 5 ವರ್ಷ​ಗಳ ಅಧಿ​ಕಾರ ನೀಡು​ವಂತೆ ಮನವಿ ಮಾಡಿ​ದರು.

ಜೆಡಿಎಸ್‌ ತೊರೆದು ಬಿಜೆಪಿ ಸೇರಲು ಸಜ್ಜಾದ ನಾಯಕಿ ...

ಮುಂದಿನ ಚುನಾವಣೆ ನನ್ನ ಪಾಲಿನ ಕೊನೆ ಹೋರಾಟ. 5 ವರ್ಷಗಳ ಪೂರ್ಣ ಆಡಳಿತ ನೀಡಿದರೆ, ಪಂಚರತ್ನ ಯೋಜನೆ ಮೂಲಕ ಪ್ರತಿ ಗ್ರಾಮ ಪಂಚಾ​ಯಿ​ತಿ​ಗೊಂದು ಕರ್ನಾಟಕ ಪಬ್ಲಿಕ್‌ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ. ಯುವಕರಿಗೆ ಉದ್ಯೋಗ ನೀಡಲು ಪೈಲೆಟ್‌ ಪ್ರಾಜೆಕ್ಟ್ ಮಾದರಿಯಲ್ಲಿ ಹೊಸ ಯೋಜನೆಯನ್ನು ಪ್ರಾರಂಭಿ​ಸು​ತ್ತೇನೆ. ಸರ್ಕಾರ ಮನಸ್ಸು ಮಾಡಿದರೆ ಏನು ಅಭಿವೃದ್ಧಿ ಬೇಕಿದ್ದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದು ತಿಳಿ​ಸಿ​ದರು.

ಲಕ್ಷ್ಮೀ ನಾರಾಯಣನಿಗೆ ಸಮರ್ಪಣೆ:

ಲಕ್ಷ್ಮೀ ನಾರಾಯಣ ಸ್ವಾಮಿ ಬೆಟ್ಟದ ಅಭಿವೃದ್ಧಿಗೆ ನಾನು ಟೊಂಕ ಕಟ್ಟಿದ್ದೇನೆ. ದೇಣಿಗೆ ರೂಪದಲ್ಲಿ 42 ಲಕ್ಷ ರು..ಗಳನ್ನು ಸಂಗ್ರಹಿಸಿ​ರುವ ಗ್ರಾಮಸ್ಥರು ಬೆಟ್ಟಕ್ಕೆ ಕಚ್ಚಾ ರಸ್ತೆ ನಿರ್ಮಿಸಿದ್ದಾರೆ. ಇಡೀ ಬೆಟ್ಟದ ರಸ್ತೆಗೆ ಡಾಂಬರೀಕರಣ ಸೇರಿದಂತೆ ಬೆಟ್ಟದ ಸಂಪೂರ್ಣ ಅಭಿವೃದ್ಧಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಕುಮಾ​ರ​ಸ್ವಾಮಿ ಭರವಸೆ ನೀಡಿದರು.

ಶಾಸಕರಾದ ಎ.ಮಂಜುನಾಥ್‌, ಅನಿತಾ ಕುಮಾರಸ್ವಾಮಿ, ಜೆಡಿ​ಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್‌ ಕುಮಾ​ರ​ಸ್ವಾ​ಮಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ, ಜೆಡಿಎಸ್‌ ಮುಖಂಡರಾದ ಸುಬ್ಬಾಶಾಸ್ತಿ್ರ , ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಇದ್ದರು.

1983ರಲ್ಲಿ ನಾನು ಬಿಡದಿ ಸಮೀಪದ ಕೇತಗಾನಹಳ್ಳಿಗೆ ಬಂದೆ. ಅಂದು ಜಮೀನು ಖರೀದಿಸಿದ್ದ ದೆಸೆಯಿಂದಾಗಿ ಈ ಮಣ್ಣಿನ ಋುಣ ನನ್ನ ಮೇಲಿದೆ. ಆ ಜಮೀನು ಇಲ್ಲದಿದ್ದರೆ ನಾನು ರಾಮನಗರಕ್ಕೆ ಬರುತ್ತಿರಲಿಲ್ಲ ಅನ್ನಿಸುತ್ತದೆ. ಆದರೆ, ಹಿರೇ​ಮಠ್‌, ರವಿಕೃಷ್ಣಾರೆಡ್ಡಿ ಅಂತ​ಹ​ವರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಕಾನೂನು ರೀತಿ ಕೊಂಡುಕೊಂಡಿದ್ದರೂ, ಕಿರುಕುಳ ನೀಡುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳಿಂದಾಗಿ ರೋಸಿ ಹೋಗಿದ್ದೇನೆ.

ಎಚ್‌.ಡಿ. ​ಕು​ಮಾ​ರ​ಸ್ವಾಮಿ, ಮಾಜಿ ಮುಖ್ಯ​ಮಂತ್ರಿ.

ಜಿಲ್ಲೆಯಲ್ಲಿ 540 ಕೋಟಿ ವೆಚ್ಚದಲ್ಲಿ ಸತ್ತೇಗಾಲದಿಂದ ವೈ.ಜಿ. ಗುಡ್ಡ, ಮಂಚನಬೆಲೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿದ್ದೇ ಕುಮಾರಸ್ವಾಮಿ. ಮಾಗಡಿಗೆ 1560 ಕೋಟಿ ವೆಚ್ಚದ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರ​ವೇ​ರಿ​ಸಿ​ದ್ದರು. ಮಂಚನಬೆಲೆ ಬಳಿ 120 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಿದರು. ರಾಮನಗರಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ಬರಲು ಕುಮಾರಣ್ಣ ಕಾರಣ.

-ಎ.ಮಂಜುನಾಥ್‌, ಮಾಗಡಿ ಶಾಸಕ

ರೈತರು, ಬಡ​ವರು ಹಾಗೂ ಶೋಷಿ​ತ​ರಿ​ಗಾಗಿ ಜೆಡಿ​ಎಸ್‌ ಉಳಿ​ದಿದೆ. ಇನ್ನು ಮುಂದೆ ಯುವ​ಕರ ಧ್ವನಿ​ಯಾಗಿಯೂ ಕೆಲಸ ಮಾಡ​ಲಿದೆ. ಪಕ್ಷಕ್ಕೆ ಬಹು​ಮತ ಬರ​ದಿ​ದ್ದರೂ ಕುಮಾ​ರ​ಸ್ವಾ​ಮಿ​ರ​ವರು ಮೈತ್ರಿ ಸರ್ಕಾ​ರ​ದಲ್ಲಿ ರೈತರ ಸಾಲ​ಮನ್ನಾ ಮಾಡಿ ಕೊಟ್ಟಮಾತನ್ನು ಉಳಿ​ಸಿ​ಕೊಂಡರು. ಕುಮಾ​ರ​ಸ್ವಾಮಿ ಅವ​ರನ್ನು ಮತ್ತೊಮ್ಮೆ ಮುಖ್ಯ​ಮಂತ್ರಿ​ಯ​ನ್ನಾಗಿ ಮಾಡ​ಲು 2023ರ ಚುನಾ​ವ​ಣೆ​ಯಲ್ಲಿ ನಾನೂ ಸಾಮಾನ್ಯ ಕಾರ್ಯ​ಕ​ರ್ತ​ನಾಗಿ ದುಡಿ​ಯು​ತ್ತೇನೆ.

-ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

ಮಾಜಿ ಸಿಎಂ ಕುಮಾ​ರ​ಸ್ವಾಮಿ ಮಾನ​ವೀಯ ಗುಣ​ವುಳ್ಳ ರಾಜ​ಕಾ​ರಣಿ. ಅವರ ಮಾರ್ಗ​ದ​ರ್ಶ​ನ​ದಲ್ಲಿ ಕ್ಷೇತ್ರ​ಗ​ಳನ್ನು ಅಭಿ​ವೃದ್ಧಿಪಡಿ​ಸಲು ಪ್ರಾಮಾ​ಣಿ​ಕ​ವಾಗಿ ಶ್ರಮಿ​ಸು​ತ್ತಿ​ದ್ದೇವೆ. ಕುಮಾ​ರ​ಸ್ವಾ​ಮಿ ಅವ​ರನ್ನು ಮತ್ತೊಮ್ಮೆ ಮುಖ್ಯ​ಮಂತ್ರಿ​ಯಾಗಿ ಕಾಣ​ಬೇ​ಕಾ​ದರೆ ನಿಮ್ಮೆ​ಲ್ಲರ ಆಶೀ​ರ್ವಾದ ಬೇಕಿದೆ.

-ಅನಿತಾ ಕುಮಾ​ರ​ಸ್ವಾಮಿ, ರಾಮ​ನ​ಗ​ರ ಶಾಸ​ಕ

Follow Us:
Download App:
  • android
  • ios