ಗುಡ್ ನ್ಯೂಸ್: KGF ಚಿತ್ರ ಅಬ್ಬರಕ್ಕೆ ತಡೆ ಕೋರಿದ್ದ ಅರ್ಜಿ ಧೂಳಿಪಟ
ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೆಜಿಎಫ್ ಚಿತ್ರ ಎದುರಾಗಿದ್ದ ತೊಂದರೆಗೆ ರಿಲೀಫ್ ಸಿಕಿದೆ.
ಬೆಂಗಳೂರು, [ಡಿ.21]: ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಬಿಡುಗಡೆಗೆ ತಡೆ ಕೋರಿ ಹೂಡಿದ್ದ ದಾವೆಯನ್ನು ದೂರುದಾರ ವೆಂಕಟೇಶ್ ಹಿಂಪಡೆದಿದ್ದಾರೆ.
"
ಕನ್ನಡದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಬಿಡುಗಡೆಗೆ ಒಂದು ಬಾಕಿ ಇರುವಾಗ ಅಂದ್ರೆ ನಿನ್ನೆ [ಗುರುವಾರ] ರಾತ್ರಿ ವೆಂಕಟೇಶ್ ಸಿಟಿ ಸಿವಿಲ್ ಕೋರ್ಟ್ 10 ರಲ್ಲಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು.
KGF ಚಿತ್ರಕ್ಕೆ ಸಂಕಷ್ಟ: ಡಿ.21ಕ್ಕೆ ಬಿಡುಗಡೆ ಇಲ್ಲ
ಈ ಸಂಬಂಧ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಚಿತ್ರವನ್ನು ಜನವರಿ 7ರ ವರೆಗೆ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿ ಆದೇಶಿಸಿತ್ತು.
ಡಿ.21ಕ್ಕೆ KGF ರಿಲೀಸ್ ಮಾಡಿಯೇ ಶತಸಿದ್ಧ: ನಿರ್ಮಾಪಕ ವಿಜಯ್ ಕಿರಗಂದೂರು
ಈ ಸಂಬಂಧ ಇಂದು [ಶುಕ್ರವಾರ] ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ದೂರುದಾರರ ವೆಂಕಟೇಶ್ ಒಪ್ಪಿಗೆ ಮೇರೆಗೆ ಕೋರ್ಟ್ ವಕೀಲ ಕೆ. ರಘುನಾಥ್ ವಿತ್ ಡ್ರಾ ಅರ್ಜಿಯನ್ನು ಸಲ್ಲಿಸಿದರು. ಈ ವೇಳೆ ನ್ಯಾಯಾಧೀಶರಾದ ಎಂ ಪಂಚಾಕ್ಷರಿ ಅರ್ಜಿ ಸ್ವೀಕರಿಸಿದರು.