ಡಿಜಿಟಲ್ ವ್ಯವಹಾರದಲ್ಲಿ ಬಹುಮಾನ ಗೆದ್ದಿದ್ದ ಸಂತೋಷ್ ತಮ್ಮ ಬಹುಮಾನವನ್ನು ಬೆಂಕಿ ಅವಘಡದದಲ್ಲಿ ಗಾಯಗೊಂಡಿದ್ದ ವೃದ್ಧೆಗೆ ನೆರವಾಗಲು ಮುಂದಾಗಿದ್ದರು. ಸಂತೋಷ್ ಅವರಿಗೆ ಡಿಜಿಟಲ್ ವ್ಯವಹಾರದಲ್ಲಿ ಲಕ್ಕಿಡಿಪ್’ನಲ್ಲಿ ಬಹುಮಾನ ಬಂದಿದ್ದು, ಈ ಬಹುಮಾನವನ್ನು ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡು ಗಾಯಗೊಂಡಿದ್ದ ವೃದ್ದೆಯ ಸಹಾಯಕ್ಕೆ ನೆರವು ನೀಡಿದ್ದರು.
ನವದೆಹಲಿ (ಫೆ.26): ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೈಸೂರಿನ ಸಂತೋಷ್ ಎಂಬುವವರಿಗೆ ಅಭಿನಂದನೆ ಸಲ್ಲಿಸಿಸಿದ್ದಾರೆ.
ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 29ನೇ ಸರಣಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಸಂತೋಷ್ ಅವರ ಸಾಧನೆಯನ್ನು ಪ್ರಸ್ತಾಪಿಸಿ, ದೇಶದ ಯುವಜರಿಗೆ ನಿಮ್ಮ ಕೆಲಸ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಡಿಜಿಟಲ್ ವ್ಯವಹಾರದಲ್ಲಿ ಬಹುಮಾನ ಗೆದ್ದಿದ್ದ ಸಂತೋಷ್ ತಮ್ಮ ಬಹುಮಾನವನ್ನು ಬೆಂಕಿ ಅವಘಡದದಲ್ಲಿ ಗಾಯಗೊಂಡಿದ್ದ ವೃದ್ಧೆಗೆ ನೆರವಾಗಲು ಮುಂದಾಗಿದ್ದರು. ಸಂತೋಷ್ ಅವರಿಗೆ ಡಿಜಿಟಲ್ ವ್ಯವಹಾರದಲ್ಲಿ ಲಕ್ಕಿಡಿಪ್’ನಲ್ಲಿ ಬಹುಮಾನ ಬಂದಿದ್ದು, ಈ ಬಹುಮಾನವನ್ನು ಬೆಂಕಿ ಅವಘಡದಲ್ಲಿ ಮನೆ ಕಳೆದುಕೊಂಡು ಗಾಯಗೊಂಡಿದ್ದ ವೃದ್ದೆಯ ಸಹಾಯಕ್ಕೆ ನೆರವು ನೀಡಿದ್ದರು.
ಈ ಬಗ್ಗೆ ಸಂತೋಷ್ ಮೋದಿ ಆಪ್ ನಲ್ಲಿ ಬರೆದುಕೊಂಡಿದ್ದರು. ಇದನ್ನು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಸಂತೋಷ್ ಜೀ ನೀವು ಯುವಕರಿಗೆ ಮಾದರಿಯಾಗಿದ್ದೀರಿ. ಇದಕ್ಕಾಗಿ ನಮ್ಮ ಅಭಿನಂದನೆ ಎಂದು ತಿಳಿಸಿದ್ದಾರೆ.
