ಕಾಂಗ್ರೆಸ್ ನಾಯಕರ ವಿರುದ್ಧ ಲೆಹರ್ ಸಿಂಗ್ ಆಯುಕ್ತರಿಗೆ ದೂರು
ಪೊಲೀಸರು ನನಗೆ ಕೂರಲೂ ಹೇಳದೆ ಕಚೇರಿಯ ಹೊರಗೇ ದೂರು ಸ್ವೀಕರಿಸಿದ್ದಾರೆ.
ಬೆಂಗಳೂರು(ಫೆ.26): ರಾಜ್ಯ ಬಿಜೆಪಿ ಹೈಕಮಾಂಡ್'ಗೆ ಕಪ್ಪ ನೀಡಿದ್ದಾರೆ ಎನ್ನಲಾದ ಆರೋಪಕ್ಕೆ ಬಿಜೆಪಿ ನಾಯಕ ಲೇಹರ್ ಸಿಂಗ್ ಕಾಂಗ್ರೆಸ್ ನಾಯಕರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
'ನನ್ನದೆಂದು ಹೇಳಿ ನಕಲಿ ಡೈರಿ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ದೂರು ನೀಡಿದ್ದೇನೆ' ಪೊಲೀಸರು ನನಗೆ ಕೂರಲೂ ಹೇಳದೆ ಕಚೇರಿಯ ಹೊರಗೇ ದೂರು ಸ್ವೀಕರಿಸಿದ್ದಾರೆ. ಪೊಲೀಸ್ ಆಯುಕ್ತರ ಮೇಲೆ ರಾಜ್ಯ ಸರ್ಕಾರದ ಭಾರೀ ಒತ್ತಡವಿದ್ದು, ಆಗಾಗಿ ಈ ರೀತಿ ವರ್ತಿಸಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಸಮರ ನಡೆಸುವ ಮೂಲಕ ಸಿಬಿಐ ತನಿಖೆಗೆ ಆಗ್ರಹಿಸುತ್ತೇನೆ. ಗೃಹ ಸಚಿವರನ್ನು ಭೇಟಿಯಾಗಿ ದೂರು ನೀಡುತ್ತೇನೆ' ಎಂದು ಸುವರ್ಣ ನ್ಯೂಸ್'ಗೆ ಲೇಹರ್ ಸಿಂಗ್ ತಿಳಿಸಿದ್ದಾರೆ.