ಬೈ ಎಲೆಕ್ಷನ್ ಡೇಟ್ ಅನೌನ್ಸ್, ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಪ್ರಾಕ್ಟೀಸ್; ಇಲ್ಲಿವೆ ಸೆ.21ರ ಟಾಪ್ 10 ಸುದ್ದಿ!
ಕರ್ನಾಟಕದ ಉಪ ಚುನಾವಣೆ ದಿನಾಂಕ ನಿಗಧಿಯಾಗುತ್ತಿದ್ದಂತೆ, ರಾಜಕೀಯ ಚುಟುವಟಿಕೆ ಗರಿಗೆದರಿದೆ. ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರ ಬೀಳಲಿದೆ. ಆದರೆ ಬೈ ಎಲೆಕ್ಷನ್ ಅನರ್ಹ ಶಾಸಕರ ಟೆನ್ಶನ್ ಹೆಚ್ಚಿಸಿದೆ. ಪೈಲ್ವಾನ್ ಪೈರಸಿ ವಿರುದ್ಧ ಗುಡುಗಿರುವ ಕಿಚ್ಚ ಸುದೀಪ್ ಕೈಗೆ ಬಳೆತೊಟ್ಟುಕೊಂಡಿಲ್ಲ ಎಂದಿದ್ದಾರೆ. ಇತ್ತ ಅಂತಿಮ ಟಿ20 ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದೆ. ಸೆ.21ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.
1) ‘ಮಿಸ್ಟರ್ ಪಿಎಂ ನಿಮ್ಮ ತಾಯಿ ಮೀಟ್ ಆದ್ರಿ: ನನ್ನನ್ನೇಕೆ ದೂರ ಇಟ್ರಿ?’
2) ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್
3) ಇತ್ತ ಬೈ ಎಲೆಕ್ಷನ್ ಡೇಟ್ ಫಿಕ್ಸ್: ಅತ್ತ ಡಿಕೆಶಿ ಜಾಮೀನು ತೀರ್ಪು ಮತ್ತೆ ಮುಂದೂಡಿಕೆ
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಜಾಮೀನು ತೀರ್ಪು ಮುಂದೂಡಲಾಗಿದೆ. ಇಂದು (ಶನಿವಾರ) ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ಇಡಿ ವಿಶೇಷ ಕೋರ್ಟ್ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್, ಡಿಕೆಶಿ ಜಾಮೀನು ತೀರ್ಪು ಅನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿ ಆದೇಶ ಹೊರಡಿಸಿದರು.
4) ಬೈಎಲೆಕ್ಷನ್ ನಡೆಯೋದು ಡೌಟು! ಕುತೂಹಲ ಕೆರಳಿಸಿದೆ ಬಿಜೆಪಿ ನಾಯಕನ ಮಾತು
5) ಸಿಲಿಕಾನ್ ಸಿಟಿಗೆ ಉಗ್ರರ ಆತಂಕ; ನಗರದಲ್ಲಿ ಹೈ ಅಲರ್ಟ್!
6) ಬೆಂಗ್ಳೂರಲ್ಲಿ ಕೊಹ್ಲಿ ಪಡೆ ಬಿರುಸಿನ ಅಭ್ಯಾಸ
7) ಕೋಟ್ಯಧಿಪತಿಯಲ್ಲಿ ರಾಮಾಯಣದ ಬಗ್ಗೆ ಉತ್ತರ ಗೊತ್ತಿಲ್ಲದೇ ಒದ್ದಾಡಿದ ಸೋನಾಕ್ಷಿ
8) ನಾನು, ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆಯಲ್ಲ; ಸುದೀಪ್ ಗುಡುಗು
9) ವಿಕ್ರಮ್ ಲ್ಯಾಂಡರ್ ಪತನಗೊಂಡಿದ್ದು ಹೇಗೆ? ಬಯಲಾಯ್ತು ಕಾರಣ
10) ಪೆಟ್ರೋಲ್ ದರ ಏರಿಕೆಯ ಹೊರೆ: ವಿಕೇಂಡ್ಸ್’ನಲ್ಲೇ ಏಕೆ ಈ ಬರೆ?