Asianet Suvarna News Asianet Suvarna News

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ, ರಾಮಮಂದಿರಕ್ಕೆ ಪಾಕ್ ಸಿಡಿಮಿಡಿ; ಮೇ.29ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾ ವೈರಸ್ ತೀವ್ರ ವಾಗುತ್ತಿದೆ. ಇತ್ತ ಕರ್ನಾಟಕದಲ್ಲೂ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ನಡುವೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಭುಗಿಲೆದ್ದಿದೆ. ಬಿಎಸ್‌ವೈ ನಾಯಕತ್ವ ಬದಲಿಸುವಂತೆ ಬಂಡಾಶ ಶುರುವಾಗಿದೆ.  ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು ತೆಗೆದಿದೆ. ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್,  ಭಾರತದ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಡಲು ಸಜ್ಜಾದ ಗೂಗಲ್ ಸೇರಿದಂತೆ ಮೇ.29ರ ಟಾಪ್ 10 ಸುದ್ದಿ ಇಲ್ಲಿವೆ.

Karnataka Bjp to Ayodhya ram mandir top 10 news of may 29
Author
Bengaluru, First Published May 29, 2020, 4:52 PM IST

ಕೊರೋನಾ ಭೀಕರತೆ ತುತ್ತಾದ ರಾಷ್ಟ್ರಗಳ ಪೈಕಿ ಭಾರತಕ್ಕೆ 9ನೇ ಸ್ಥಾನ!

Karnataka Bjp to Ayodhya ram mandir top 10 news of may 29

ಇತರ ದೇಶದಲ್ಲಿ ಕೊರೋನಾ ಆರ್ಭಟ ಶುರುಮಾಡಿದಾಗ ಭಾರತ ಸುರಕ್ಷಿತವಾಗಿತ್ತು. ಇದೀಗ ಇತರ ದೇಶಗಳು ಚೇತರಿಕೆ ಕಾಣುತ್ತಿರುವಾಗ ಭಾರತದಲ್ಲಿ ಪ್ರತಿ ದಿನ ಪ್ರಕರಣಗಳ ಸಂಖ್ಯೇ ಗಣನೀಯವಾಗಿ ಏರಿಕೆಯಾಗುತ್ತಿದೆ. ಕೊರೋನಾ ಭೀಕರತೆ ಗುರಿಯಾದ ದೇಶಗಳ ಪೈಕಿ ಭಾರತ ಈಗ 9ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಭಾರತದ ಕೊರೋನಾ ಭೀಕರತ ಕುರಿತ ವಿವರ ಇಲ್ಲಿದೆ.


ನೆಕ್ಸ್ಟ್ ಲಾಕ್‌ಡೌನ್ ಹೇಗಿರುತ್ತೆ? ಮೋದಿ ಬದಲು ಸಿಎಂಗಳ ಸಭೆ ಮಾಡಿದ ಶಾ!...

Karnataka Bjp to Ayodhya ram mandir top 10 news of may 29

ಇಡೀ ದೇಶವೇ ಕೊರೋನಾ ಆತಂಕದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ತೀವ್ರ ಒತ್ತಡದಲ್ಲಿಯೇ ಪರಿಸ್ಥಿತಿ ನಿಭಾಯಿಸುತ್ತ ಇದ್ದಾರೆ.  ಲಾಕ್ ಡೌನ್ ಮುಂದೆ ಏನು ಮಾಡಬೇಕು ಎಂಬ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುವ ಸಂದರ್ಭ ಎದುರಾಗಿದೆ.

ಚೀನಾ-ಭಾರತದ ಶಾಂತಿಗೆ ಟ್ರಂಪ್‌ ಮಧ್ಯಸ್ಥಿಕೆ ಆಫರ್‌ ತಿರಸ್ಕರಿಸಿದ ಮೋದಿ

Karnataka Bjp to Ayodhya ram mandir top 10 news of may 29

ಸಿಕ್ಕಿಂ ಹಾಗೂ ಲಡಾಖ್‌ ಬಳಿಯ ವಾಸ್ತವ ಗಡಿ ರೇಖೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಉದ್ಭವವಾಗಿದ್ದ ಬಿಕ್ಕಟ್ಟು ಪರಿಹಾರಕ್ಕಾಗಿ ಮಧ್ಯಸ್ಥಿಕೆ ವಹಿಸುವ ಕುರಿತಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಫರ್‌ ಅನ್ನು ಭಾರತ ತಿರಸ್ಕರಿಸಿದೆ.

ರಾಮಮಂದಿರಕ್ಕೆ ಪಾಕ್‌ ತಕರಾರು: ಭಾರತದ ಭರ್ಜರಿ ತಿರುಗೇಟು

Karnataka Bjp to Ayodhya ram mandir top 10 news of may 29

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು, ಬಾಬ್ರಿ ಮಸೀದಿ ಇರುವ ಸ್ಥಳದಲ್ಲಿ ಭಾರತ ಈಗ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದೆ.

ಮಳೆಗಾಲದಲ್ಲಿ ಕೊರೋನಾ ವೈರಸ್ ಶಕ್ತಿ ಹೆಚ್ಚಾಗುತ್ತಾ? ಬೆಚ್ಚಿ ಬೀಳಿಸುತ್ತಿದೆ ಅಧ್ಯಯನ ವರದಿ!

Karnataka Bjp to Ayodhya ram mandir top 10 news of may 29

ಬೇಸಿಗೆ ಕಾಲ ಅಂತ್ಯವಾಗುತ್ತಿದೆ. ಇನ್ನು ಮಳೆಗಾಲ. ಈಗಾಗಲೇ ಬಿರುಗಾಳಿ ಸಹಿತ ಮಳೆರಾಯನ ಆಟ ಶುರುವಾಗಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಆರ್ಭಟಿಸುತ್ತಿರುವ ಕೊರೋನಾ ವೈರಸ್ ಇನ್ನು ಆಟಮುಗಿಸಿಲ್ಲ. ಇದೀಗ ಮಳೆಗಾಲದಲ್ಲಿ ಅಥವಾ ತಂಪಾಗಿರುವ ವಾತಾವರಣದಲ್ಲಿ ಕೊರೋನಾ ವೈರಸ್ ಶಕ್ತಿ ಕುರಿತು ವೈದ್ಯರು, ಸಂಶೋಧಕರು ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದಾರೆ. 

ಅಂದು 2009, ಇಂದು 2020 ಬಂಡಾಯ,  ಮಾವಿನಹಣ್ಣು ತಿಂದ 'ರತ್ನಗಿರಿ' ರಹಸ್ಯ!

Karnataka Bjp to Ayodhya ram mandir top 10 news of may 29

ಲಾಕ್ ಡೌನ್ ನಡುವೆ ಬಿಜೆಪಿ ಭಿನ್ನರಿಂದ ಆರು ಸಭೆಗಳು ನಡೆದಿವೆ. ಯಡಿಯೂರಪ್ಪ ಅತ್ಯಾಪ್ತರು ಎಂನಿಸಿಕೊಂಡವರೆ ಸಭೆಯ , ಡಿನ್ನರ್ ಮೀಟ್ ನ ಮುಂಚೂಣಿಯಲ್ಲಿ ನಿಂತಿದ್ದಾರೆ.

48 ಕೋಟಿ ರೂ. ಆಫೀಸಲ್ಲಿ ಕಂಗನಾಗೇನು ಕೆಲ್ಸ? ಕೊಳ್ಳೋಕೆ ಹಣ ಬಂದಿದ್ದೆಲ್ಲಿಂದ?

Karnataka Bjp to Ayodhya ram mandir top 10 news of may 29

ಬಿ-ಟೌನ್‌ನ ಕಾಂಟ್ರೋವರ್ಸಿ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆಯುವ ನಟಿ ಕಂಗನಾ ರಣಾವತ್. ಸಿನಿಮಾ ಮಾಡಿದ್ರೂ, ಮಾಡದೇ ಇದ್ರೂ ಆಕೆಯ ಅಕ್ಕನಿಂದನೋ, ಒಟ್ಟಿನಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸದಾ ವಿವಾದದಲ್ಲಿರುತ್ತಾರೆ. 

ಗೂಗಲ್ ಎಂಟ್ರಿ: ರಂಗೇರಲಿದೆ ಭಾರತದ ಟೆಲಿಕಾಂ ಲೋಕ!

Karnataka Bjp to Ayodhya ram mandir top 10 news of may 29

ಭಾರತೀಯ ಟೆಲಿಕಾಂ ಕ್ಷೇತ್ರ ಮತ್ತೆ ರಂಗೇರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ರಿಲಾಯನ್ಸ್ ಜಿಯೋವಿನ ಶೇ.10ರಷ್ಟು ಷೇರನ್ನು ಕೊಳ್ಳಲು ಈಗಾಗಲೇ ಫೇಸ್‌ಬುಕ್ ಮುಂದಾಗಿರುವ ವಿಷಯ ಎಲ್ಲರಿಗೂ ಗೊತ್ತಿರುವಂತೆ, ಟೆಕ್ ಲೋಕದ ದಿಗ್ಗಜ ಗೂಗಲ್ ತೆರೆಮರೆಯಲ್ಲೇ ವೋಡಾಫೋನ್-ಐಡಿಯಾ ಮುಖೇನ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿ ಕೊಡಲು ಹೊರಟಿದೆ. ಎಲ್ಲವೂ ಅಂದುಕೊಂಡಂತಾದರೆ ಭಾರಿ ಪೈಪೋಟಿ ಎದುರಾಗಿ ಗ್ರಾಹಕ ಇದರ ಲಾಭ ಪಡೆದುಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.

ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್

Karnataka Bjp to Ayodhya ram mandir top 10 news of may 29

ಕೇವಲ 10 ನಿಮಿಷಗಳಲ್ಲೇ ಇ ಪಾನ್‌ ಕಾರ್ಡ್‌ ನಂಬರ್‌ ಒದಗಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಚಾಲನೆ ನೀಡಿದ್ದಾರೆ.


ಜಾವಾ ಮೀಟರ್, ಬೊಲೆರೋ ಕನ್ಸೋಲ್; ಮಹೀಂದ್ರ ವೆಂಟಿಲೇಟರ್ ಹಿಂದಿದೆ ರೋಚಕ ಕತೆ!

Karnataka Bjp to Ayodhya ram mandir top 10 news of may 29

ಕಾರು ಬೈಕ್ ನಿರ್ಮಾಣ ಮಾಡುತ್ತಿದ್ದ ಮಹೀಂದ್ರ ಕಂಪನಿ ಕೊರೋನಾ ವೈರಸ್ ಕಾರಣ, ಭಾರತಕ್ಕೆ ಅಗತ್ಯವಾಗಿ ಬೇಕಿರುವ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿದೆ. ಆಟೋಮೊಬೈಲ್ ಕಂಪನಿ ದಿಢೀರ್ ಆಗಿ ವೆಂಟಿಲೇಟರ್ ಉತ್ಪಾದನೆ ಮಾಡುತ್ತಿರುವುದು ಹೇಗೆ? ತಯಾರಿ ಹೇಗಿತ್ತು? ವೆಂಟಿಲೇಟರ್ ಉತ್ಪಾದನೆಯಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ವೈದ್ಯ ಈ ಕುರಿತು ವಿವರಿಸಿದ್ದಾರೆ.

Follow Us:
Download App:
  • android
  • ios