RCB ಗೆಲುವಿಗೆ ರುದ್ರಾಭಿಷೇಕ, ಮನದಾಳ ಬಿಚ್ಚಿಟ್ಟ ರಶ್ಮಿಕಾ: ನ.2ರ ಟಾಪ್ 10 ಸುದ್ದಿ
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ನಿವೃತ್ತಿಯಾಗುತ್ತಿದ್ದೇನೆ ಎಂಬ ಟ್ವೀಟ್ ಭಾರಿ ಸಂಚಲನ ಸೃಷ್ಟಿಸಿದೆ. ಮೋದಿ ಉದ್ಘಾಟಿಸಿದ ಸೀ ಪ್ಲೇನ್ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್ ಲಭಿಸಿದೆ. ಕಿತಾಪತಿ ಮಾಡಿದ 'ಕೈ' ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ ಮಾಡಿದ ಘಟನೆ ನಡೆದಿದೆ. ಆರ್ಸಿಬಿ ಗೆಲುವಿಗೆ ರುದ್ರಾಭಿಷೇಕ ಮಾಡಿದ ದೇವಸ್ಥಾನದ ರಶೀದಿ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಮನಾದಳ, ಮಾಜಿ ಸಿಎಂಗೆ ಬಿಗ್ ರಿಲೀಫ್ ಸೇರಿದಂತೆ ನವೆಂಬರ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ನಾನು ನಿವೃತ್ತಿಯಾಗುತ್ತಿದ್ದೇನೆ, ಸುಂಟರಗಾಳಿ ಎಬ್ಬಿಸಿದ ಪಿವಿ ಸಿಂಧೂ ಟ್ವೀಟ್!...
ಭಾರತೀಯ ಕ್ರೀಡಾಭಿಮಾನಿಗಳಿಗೆ ದಿಢೀರ್ ಆಘಾತ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಪಿವಿ ಸಿಂಧೂ ಟ್ವಿಟರ್ ಮೂಲಕ ನಾನು ನಿವತ್ತಿಯಾಗುತ್ತಿದ್ದೇನೆ ಎಂಬ ಪೋಸ್ಟ್ ಭಾರಿ ಸಂಚಲನದ ಜೊತೆಗೆ ಅಷ್ಟೇ ಗೊಂದಲ ಸೃಷ್ಟಿಸಿದೆ.
ಕಾಂಗ್ರೆಸ್ ಕನಸು ಭಗ್ನ : ಕೈ ನಾಯಕಿ ಬಿಜೆಪಿ ಸೇರ್ಪಡೆ...
ಕಾಂಗ್ರೆಸ್ ನಾಯಕಿ ಬಿಜೆಪಿ ಸೇರ್ಪಡೆಯಾದ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಕನಸು ಭಗ್ನವಾದಂತಾಗಿದೆ
RCB ಸಂಭಾವ್ಯ ತಂಡ: ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಪಡೆಯಲ್ಲಿ 2 ಬದಲಾವಣೆ?...
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸುತ್ತಿದ್ದು, 2 ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಇಂದಿನ(ನ.02) ಪಂದ್ಯದಲ್ಲಿ ಗುರುಕೀರತ್ ಮನ್ ಹಾಗೂ ಇಸುರು ಉಡಾನಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ಮೋದಿ ಉದ್ಘಾಟಿಸಿದ ಸೀ ಪ್ಲೇನ್ಗೆ ಒಂದೇ ದಿನದಲ್ಲಿ 3000 ಬುಕ್ಕಿಂಗ್!...
ಶನಿವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ಕೆವಾಡಿಯದಲ್ಲಿ ಉದ್ಘಾಟಿಸಿದ್ದ ದೇಶದ ಮೊದಲ ಸೀ ಪ್ಲೇನ್ಗೆ ಭರ್ಜರಿ ಪ್ರತಿಕ್ರಿಯೆ ದೊರಕಿದ್ದು, ಒಂದೇ ದಿನ ಬರೋಬ್ಬರಿ 3000 ಬುಕ್ಕಿಂಗ್ ಲಭಿಸಿದೆ ಎಂದು ಸ್ಪೈಸ್ ಜೆಟ್ ಹೇಳಿದೆ.
ಆರ್ಸಿಬಿ ಗೆಲುವಿಗೆ ರುದ್ರಾಭಿಷೇಕ, ದೇವಸ್ಥಾನದ ರಶೀದಿ ವೈರಲ್..!...
ಇಂಡಿಯನ್ ಪ್ರೀಮಿಯನ್ ಲೀಗ್ 2020ರ ಲೀಗ್ ಹಂತದ ಕೊನೆ ಪಂದ್ಯ ಆಡಲು ಸಜ್ಜಾಗಿರುವ ಆರ್ಸಿಬಿ ತಂಡದ ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.
ಟ್ರೋಲ್ ಆದರೂ ಪೋಸ್ಟ್ ಮಾಡುವುದ ನಿಲ್ಲಿಸಿಲ್ಲ; ರಶ್ಮಿಕಾ ಮಂದಣ್ಣ ಮನದಾಳದ ಮಾತು!...
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಟ್ರೋಲ್ ಆದ ನಟಿ ರಶ್ಮಿಕಾ ಮಂದಣ್ಣ. ಮೊದಲ ಬಾರಿಗೆ ತಮ್ಮ ಮನದಾಳದ ನೋವಿನ ಬಗ್ಗೆ ಬರೆದಿದ್ದಾರೆ.
ಕಿತಾಪತಿ ಮಾಡಿದ 'ಕೈ' ಮುಖಂಡನಿಗೆ ಮಹಿಳೆಯರಿಂದ ಚಪ್ಪಲಿ ಸೇವೆ! ವಿಡಿಯೋ...
ಮಹಿಳೆಯರೊಂದಿಗೆ ಕಿತಾಪತಿ ಮಾಡಿದ ಕೈ ನಾಯಕನಿಗೆ ಧರ್ಮದೇಟು ಸಿಕ್ಕಿದೆ. ನಡು ರಸ್ತೆಯಲ್ಲಿ ಮಹಿಳೆಯರೇ ಚಪ್ಪಲಿಯಿಂದ ಹಿಗ್ಗಾ ಮುಗ್ಗಾ ಬಾರಿಸಿದ್ದಾರೆ.
ಇನ್ಸ್ಟಾಗ್ರಾಂಗೆ ವಿಡಿಯೋ ಹಾಕಿದ 6 ನೇ ಕ್ಲಾಸ್ ಬಾಲಕಿ; ನೋಡಿದ ಹುಡುಗರು ಮಾಡಿದ್ದೇನು ಗೊತ್ತಾ?...
ಆನ್ಲೈನ್ ಕ್ಲಾಸ್ಗಾಗಿ ಈಗ ಎಲ್ಲ ಮಕ್ಕಳ ಬಳಿ ಮೊಬೈಲ್ ಇರುತ್ತದೆ. ಪೋಷಕರು ಆಗಾಗ ಮಕ್ಕಳ ಚಲನವಲನಗಳನ್ನು ಗಮನಿಸೋದು ಒಳಿತು. 6 ನೇ ಕ್ಲಾಸ್ ಬಾಲಕಿಯೊಬ್ಬಳು ಆನ್ಲೈನ್ ಕ್ಲಾಸ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ, ಹಾಡು ಹೇಳುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಳು.
ಉಪ ಚುನಾಣೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ, ಮಾಜಿ ಸಿಎಂಗೆ ಬಿಗ್ ರಿಲೀಫ್..!...
ಉಪಚುನಾವಣೆಯಲ್ಲಿ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ವಿರುದ್ಧ ಚುನಾವಣೆ ಆಯೋಗ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಇದರಿಂದ ಕಾಂಗ್ರೆಸ್ ನಾಯಕಗೆ ಬಿಗ್ ರಿಲೀಫ್ ಸಿಕ್ಕಿದೆ.
2024ರಲ್ಲಿ ಮೋದಿಗೇ ಸಿಎಂ ನಿತೀಶ್ ಸವಾಲು: ಚಿರಾಗ್ ಪಾಸ್ವಾನ್ ಭವಿಷ್ಯ!...
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ವಿಧಾನಸಭೆ ಚುನಾವಣೆ ಬಳಿಕ ಆರ್ಜೆಡಿ ನೇತೃತ್ವದ ಮಹಾ ಘಟಬಂಧನ್ ಜತೆ ಸೇರಿಕೊಂಡು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸವಾಲೆಯುತ್ತಾರೆ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಭವಿಷ್ಯ ನುಡಿದಿದ್ದಾರೆ.