Asianet Suvarna News Asianet Suvarna News

HDK ಮತ್ತೆ ಸಿಎಂ, ಸ್ಲಿಪ್ಪರ್‌ಗೂ ಬೀಳುತ್ತೆ ಟ್ರಾಫಿಕ್ ಫೈನ್; ಇಲ್ಲಿವೆ ಸೆ.10ರ ಟಾಪ್ 10 ಸುದ್ದಿ!

ಸೆಪ್ಟೆಂಬರ್ 10 ರಂದು ರಾಜಕೀಯ ಭವಿಷ್ಯ ಹೆಚ್ಚು ಸದ್ದು ಮಾಡಿದೆ. ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಅನ್ನೋ ಭವಿಷ್ಯ ಮಿಂಚನ ವೇಗ ಪಡೆದುಕೊಂಡಿದೆ. ಅತ್ತ ಕಾಂಗ್ರೆಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ. ಪಕ್ಷದ ಸ್ಟಾರ್ ನಟಿ ಇದೀಗ ಗುಡ್ ಬೈ ಹೇಳಿರುವುದು ನುಂಗರಲಾದ ತುತ್ತಾಗಿ ಪರಿಣಮಿಸಿದೆ.  ರಾಜಕೀಯ ಚದುರಂಗದಾಟ ನಡುವೆ ಟ್ರಾಫಿಕ್ ನಿಯಮ ಹಾಗೂ ದಂಡ ಭಾರಿ ಸದ್ದು ಮಾಡುತ್ತಿದೆ. ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿ ಬೈಕ್, ಸ್ಕೂಟರ್ ಓಡಿಸಿದರೂ ಬೀಳುತ್ತೆ ಭಾರಿ ದಂಡ. ಹೀಗಾಗಿ ಎಚ್ಚರ ವಹಿಸುವುದು ಅಗತ್ಯ. ಮನೆಯಲ್ಲಿ ಬೆಚ್ಚಗೆ ಕುಳಿತು ಬಿಗ್‌ಬಾಸ್‌ಗಾಗಿ ಕಾಯುತ್ತಿರುವರಿಗೆ ಕಿಚ್ಚ ಸುದೀಪ್ ಸಿಹಿ ಸುದ್ದಿ ನೀಡಿದ್ದಾರೆ. ಇಮ್ರಾನ್ ಖಾನ್ ಪಕ್ಷದ ಸಚಿವ ಪಾಕ್ ತೊರೆದು ಭಾರತಕ್ಕೆ ಆಗಮನ ಸೇರಿದಂತೆ ಸೆಪ್ಟೆಂಬರ್ 10 ರಂದು ಹಲವು ಸುದ್ದಿಗಳು ಸಂಚಲನ ಮೂಡಿಸಿದೆ. ಇದರಲ್ಲಿ ಆಯ್ದ ಟಾಪ್ 10 ಸುದ್ದಿ ಇಲ್ಲಿವೆ.    

HD kumaraswamy to New Traffic Rule top 10 news of September 10
Author
Bengaluru, First Published Sep 10, 2019, 5:03 PM IST

1) ‘ಶೀಘ್ರದಲ್ಲೇ ಎಚ್‌ಡಿಕೆ ಮತ್ತೆ ಕರ್ನಾಟಕ ಸಿಎಂ’

HD kumaraswamy to New Traffic Rule top 10 news of September 10

ಸದ್ಯ ದೋಸ್ತಿ ಸರ್ಕಾರ ಉರುಳಿ ಬಿಜೆಪಿ ಆಡಳಿತಕ್ಕೆ ಏರಿ ಅಧಿಕಾರ ನಿರ್ವಹಣೆ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ಮತ್ತೆ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ. 

2) ಮೋದಿ ಸಾಹಬ್ ದಯವಿಟ್ಟು ಆಶ್ರಯ ನೀಡಿ: ಕಣ್ಣೀರಿಟ್ಟ ಇಮ್ರಾನ್ ಪಕ್ಷದ ನಾಯಕ!

HD kumaraswamy to New Traffic Rule top 10 news of September 10

 ಭಾರತದ ವಿರುದ್ಧ ನಿರಂತರ ಬೆಂಕಿಯುಗುಳುತ್ತಿದ್ದ ಪಾಕಿಸ್ತಾನದ ವಿರುದ್ಧ ಸದ್ಯ ಅಲ್ಲಿನ ನಾಗರಿಕರೇ ಧ್ವನಿ ಎತ್ತಲಾರಂಭಿಸಿದ್ದಾರೆ. ಪಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷ PTI ಶಾಸಕರಾಗಿದ್ದ ಬಲ್ ದೇವ್ ಕುಮಾರ್ ಸಿಂಗ್ ಸದ್ಯ ಪಾಕಿಸ್ತಾನಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ಬಂದಿದ್ದಾರೆ. ಪಂಜಾಬ್ ಗೆ ಮರಳಿರುವ ಸಿಂಗ್ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಹೇಗೆ ದೌರ್ಜನ್ಯ ನಡೆಯುತ್ತಿದೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ. 

3) ಕಾಂಗ್ರೆಸ್‌ಗೆ ಮತ್ತೆ ಶಾಕ್: ಕೈಗೆ ಗುಡ್ ಬೈ ಎಂದ ಸ್ಟಾರ್ ನಟಿ!

HD kumaraswamy to New Traffic Rule top 10 news of September 10

ರಾಜೀನಾಮೆಯಿಂದ ಹಲವು ನಾಯಕರನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ತಗುಲಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೋಂಡ್ಕರ್ ಮಂಗಳವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

4) ದಟ್ಟಾರಣ್ಯದಲ್ಲಿ ಜೀಪಿಂದ ಬಿದ್ದರೂ ಅಂಬೆಗಾಲಿಟ್ಟು ಬಂದ ಮಗು!

HD kumaraswamy to New Traffic Rule top 10 news of September 10

ಆಯುಷ್ಯ ಗಟ್ಟಿಇದ್ದರೆ ಯಮನೂ ಹತ್ತಿರ ಸುಳಿಯಲಾರ ಎನ್ನುವುದಕ್ಕೆ ಈ ಘಟನೆ ಒಂದು ನೈಜ ಉದಾಹರಣೆ. ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‌ ಪ್ರದೇಶದ ದಟ್ಟಅರಣ್ಯದ ಮಧ್ಯೆ ಹೋಗುತ್ತಿದ್ದಾಗ ಜೀಪ್‌ನಿಂದ ಬಿದ್ದ ಮಗುವೊಂದು ಪವಾಡ ಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದೆ.

5) ಉಗ್ರ ರೂಪ ತಾಳಿದ ಕೋಚ್ ಶಾಸ್ತ್ರಿ; ಟೀಂ ಇಂಡಿಯಾ ಕ್ರಿಕೆಟಿಗರಿಗ ಎದುರಾಯ್ತು ಸಂಕಷ್ಟ!

HD kumaraswamy to New Traffic Rule top 10 news of September 10

ಟೀಂ ಇಂಡಿಯಾ ಕೋಚ್ ಆಗಿ ಪುನರ್ ಆಯ್ಕೆಯಾಗಿರುವ ರವಿ ಶಾಸ್ತ್ರಿ 2ನೇ ಅವಧಿಯ ಮೊದಲ ಸವಾಲು ಸೌತ್ ಆಫ್ರಿಕಾ ವಿರುದ್ದದ ಸರಣಿ. ಸೆ.15 ರಿಂದ ಟೂರ್ನಿ ಆರಂಭಗೊಳ್ಳಲಿದೆ. 2ನೇ ಬಾರಿ ಕೋಚ್ ಹುದ್ದೆ ಅಲಂಕರಿಸಿರುವ ಶಾಸ್ತ್ರಿ ತಮ್ಮ ಹಿಡಿತ ಬಿಗಿಗೊಳಿಸಿದ್ದಾರೆ.  ಇದು ಹಲವು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಕಷ್ಟ ತಂದೊಡ್ಡಿದೆ.

6) ಬಿಗ್ ಬಾಸ್ ಸೀಸನ್-7; ಪ್ರಸಾರದ ಡೇಟ್ ರಿವೀಲ್ ಮಾಡಿದ ಕಿಚ್ಚ!

HD kumaraswamy to New Traffic Rule top 10 news of September 10

ಕಿರುತೆರೆ ಮೇಲೆ ಕಿಚ್ಚನನ್ನು ನೋಡುವುದೇ ಒಂದು ಮಜಾ. ವಾರದ ಕೊನೆಯಲ್ಲಿ ಯಾರು ಯಾರು ಎಲಿಮಿನೇಟ್ ಆಗುತ್ತಾರೆ? ಯಾರು ಸೇಫ್ ಆಗುತ್ತಾರೆ? ಕಿಚ್ಚ ಧರಿಸಿರುವ ಔಟ್ ಫಿಟ್ ಯಾವುದು? ಎಂದೆಲ್ಲಾ ಪ್ರಶ್ನೆ ಹಿಡಿದು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.


7) ಯಶ್ ಬಳಸಿದ #Boss ಟ್ಯಾಗ್: ಜೋಡೆತ್ತಿನ ಫ್ಯಾನ್ಸ್ ವಾರ್ ಶುರು!

HD kumaraswamy to New Traffic Rule top 10 news of September 10

ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂ ರಾಕಿಂಗ್ ರಾಕಿ ಬಾಯ್ ಸ್ಯಾಂಡಲ್‌ವುಡ್ ಪಿಲ್ಲರ್‌ಗಳಿದ್ದಂತೆ. ಮಂಡ್ಯ ಚುನಾವಣೆಯಲ್ಲಿ ಮಂದರ್ ಇಂಡಿಯಾ ಸುಮಲತಾಗೆ ಒಂದಾದ ಜೋಡೆತ್ತುಗಳು ಇದೀಗ ಮತ್ತೆ ಅಭಿಮಾನಿಗಳ ಬಿಗ್ ವಾರ್ ಫೈಟಿನಲ್ಲಿ ಸಿಲುಕಿ ಹಾಕಿಕೊಂಡಂತೆ ಕಾಣಿಸುತ್ತದೆ.

8) ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಕೆ ಅಸಾಧ್ಯ: ESA ಅಭಿಮತ!

HD kumaraswamy to New Traffic Rule top 10 news of September 10

ಇಸ್ರೋದ ಚಂದ್ರಯಾನ-2 ಯೋಜನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದು ಅಸಾಧ್ಯ ಎಂಧು ಅಭಿಪ್ರಾಯಪಟ್ಟಿದೆ.

9) ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

HD kumaraswamy to New Traffic Rule top 10 news of September 10
ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ.

10) ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!

HD kumaraswamy to New Traffic Rule top 10 news of September 10

ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ ಪರ ವಿರೋಧ ಕೇಳಿ ಬಂದಿದೆ. ಇದರಲ್ಲಿ ರಸ್ತೆ ರಿಪೇರಿ ಮಾಡಿ ಹೊಸ ನಿಯಮ ಜಾರಿ ಮಾಡಿ ಅನ್ನೋ ಒತ್ತಾಯ  ಕೇಳಿ ಬಂದಿತ್ತು. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ನೆರೆ ರಾಜ್ಯ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ.
 

Follow Us:
Download App:
  • android
  • ios