Asianet Suvarna News Asianet Suvarna News

ರೈತ ಪ್ರತಿಭಟನೆಯ ಅಸಲಿ ಕಹಾನಿ, ಬರುತ್ತಿದೆ KGF2 ಸುನಾಮಿ; ಜ.20ರ ಟಾಪ್ 10 ಸುದ್ದಿ!

ಪಂಜಾಬ್ ಹಳ್ಳಿ ರೈತರು ದೆಹಲಿ ಪ್ರತಿಭಟನೆಯ ಅಸಲಿ ಕಹಾನಿ ಹೇಳಿದ್ದಾರೆ.  ಇತ್ತ ದೆಹಲಿ ಬಾಂಬ್ ಸ್ಫೋಟದ ಹಿಂದೆ ಜೈಶ್ ಉಲ್ ಹಿಂದೆ ಉಗ್ರಸಂಘಟನೆ ಕೈವಾಡದ ಮಾಹಿತಿಯನ್ನು ತನಿಖಾ ಸಂಸ್ಥೆ ಬಹಿರಂಗ ಪಡಿಸಿದೆ. ಯಶ್ ಅಭಿಯನದ ಕೆಜಿಎಫ್ 2 ಬಿಡುಗಡೆಗೆ ಸಜ್ಜಾಗಿದೆ. ಮಂಗಳೂರು ಗೋಲಿಬಾರ್ ಪ್ರತೀಕಾರಕ್ಕೆ ಹೊಸ ಗ್ಯಾಂಗ್, ಬಿಜೆಪಿ ಶಾಸಕನಿಗೆ 1 ವರ್ಷ ಜೈಲು ಶಿಕ್ಷೆ ಸೇರಿದಂತೆ ಜನವರಿ 30ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

Farmers Protest to Yash KGF2 top 10 News of January ckm
Author
Bengaluru, First Published Jan 30, 2021, 4:55 PM IST

ದೆಹಲಿ ಬಾಂಬ್ ಸ್ಫೋಟದ ಹಿಂದೆ ಜೈಶ್-ಉಲ್-ಹಿಂದ್ ಉಗ್ರಸಂಘಟನೆ ಕೈವಾಡ?...

Farmers Protest to Yash KGF2 top 10 News of January ckm

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟದ ತನಿಖೆ ತೀವ್ರಗೊಂಡಿದೆ. ಈ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಹೊರಬಂದಿದೆ. ಇದೀಗ ಈ ಬಾಂಬ್ ಸ್ಫೋಟದ ಹಿಂದೆ ಜೈಶ್ ಉಲ್ ಹಿಂದ್ ಉಗ್ರ ಸಂಘಟನೆ ಕೈವಾಡವಿರುವ ಕುರಿತು ಕೇಂದ್ರ ತನಿಖಾ ಸಂಸ್ಥೆ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ

ಪ್ರತಿ ಮನೆಯಿಂದ ಕನಿಷ್ಠ ಒಬ್ಬರು, ರೈತ ಪ್ರತಿಭಟನೆಗೆ ತೆರಳದಿದ್ದರೆ 1,500 ರೂ ಫೈನ್!...

Farmers Protest to Yash KGF2 top 10 News of January ckm

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಶ್ವದ ಗಮನಸೆಳೆದಿದೆ. ಟ್ರಾಕ್ಟರ್ ರ್ಯಾಲಿ ಬಳಿಕ ಹಿಂಸಾ ರೂಪ ಪಡೆದ ರೈತರ ಪ್ರತಿಭಟನೆ ಅಸಲಿ ಮುಖಗಳು ಬಹಿರಂಗವಾಗತೊಡಗಿದೆ. ಇದೀಗ ರೈತರ ಪ್ರತಿಭಟನೆಗೆ ಜನಸಾಗರ ಸೇರಿದ್ದೇಗೆ ಅನ್ನೋ ಮಾಹಿತಿಯನ್ನು ಸ್ಪತಃ ಪಂಜಾಬ್ ಗ್ರಾಮಸ್ಥರು ಬಹಿರಂಗ ಪಡಿಸಿದ್ದಾರೆ.

ಮಂಗಳೂರು ಗೋಲಿಬಾರ್‌ ಪ್ರತೀಕಾರಕ್ಕೆ ಕಾರ್ಖಾನಾ ಗ್ಯಾಂಗ್‌!...

Farmers Protest to Yash KGF2 top 10 News of January ckm

ಮಂಗ​ಳೂರು ಗೋಲಿ​ಬಾರ್‌ ಪ್ರಕರ​ಣಕ್ಕೆ ಪ್ರತೀ​ಕಾ​ರ​ವಾಗಿ ಪೊಲೀ​ಸ್‌ ಕಾನ್ಸ್‌​ಟೇ​ಬ​ಲ್‌​ವೊ​ಬ್ಬರ ಮೇಲಿನ ಇರಿ​ತ ಪ್ರಕ​ರ​ಣದ ತನಿ​ಖೆ ನಡೆ​ಸು​ತ್ತಿ​ರುವ ಪೊಲೀ​ಸ​ರಿಗೆ ಇದರ ಹಿಂದೆ ಬಹು​ದೊಡ್ಡ ವ್ಯವ​ಸ್ಥಿತ ಜಾಲವೇ ಇರು​ವುದು ಬೆಳ​ಕಿಗೆ ಬಂದಿ​ದೆ.

ಇಂಡೋ-ಆಂಗ್ಲೋ ಸರಣಿಗೆ ಭಾರೀ ಡಿಮ್ಯಾಂಡ್‌; ಪ್ರತಿ 10 ಸೆಕೆಂಡ್‌ ಜಾಹಿರಾತಿಗೆ 7-8 ಲಕ್ಷ ರುಪಾಯಿ..!...

Farmers Protest to Yash KGF2 top 10 News of January ckm

ಭಾರತ-ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಜಾಹಿರಾತಿನಿಂದಲೇ 500 ಕೋಟಿ ರುಪಾಯಿ ಗಳಿಸಲು ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ಲೆಕ್ಕಾಚಾರ ಹಾಕಿಕೊಂಡಿದೆ. 

ಜುಲೈ 16ಕ್ಕೆ ಕೆಜಿಎಫ್‌ 2 ರಿಲೀಸ್‌;ಯಶ್‌ಗೆ ಯಾರೂ ಸ್ಪರ್ಧಿಗಳೇ ಇಲ್ಲ!...

Farmers Protest to Yash KGF2 top 10 News of January ckm

ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಬಹು ನಿರೀಕ್ಷಿತ ‘ಕೆಜಿಎಫ್‌ 2’ ಸಿನಿಮಾ ಜುಲೈ 16ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂಲ್ಲಿ ಏಕಕಾಲದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.

ಕೈಯಲ್ಲಿ ಫೋನ್ ಹಿಡ್ಕೊಂಡು ರೂಮ್‌ನಲ್ಲಿ ಓಡಾಡಿದ್ರೆ ಸಾಕು ಫೋನ್ ಚಾರ್ಜ್!...

Farmers Protest to Yash KGF2 top 10 News of January ckm

ಯಾವುದೇ ಕೇಬಲ್, ಚಾರ್ಜಿಂಗ್ ಸ್ಟ್ಯಾಂಡ್ ಇಲ್ಲದೇ ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಚಾರ್ಜ್ ಆಗುವಂಥ ತಂತ್ರಜ್ಞಾನವನ್ನು ಶಿಯೋಮಿ ಅಭಿವೃದ್ಧಿಪಡಿಸಿದೆ. ಈ ಹೊಸ ತಂತ್ರಜ್ಞಾನದ  ಮೂಲಕ ಮನೆಯಲ್ಲಿ ನೀವು ಒಂದಕ್ಕಿಂತ ಹೆಚ್ಚು ಸಾಧನಗಳನ್ನು ಚಾರ್ಜ್ ಮಾಡಬಹುದಾಗಿದೆ. ಕಂಪನಿ ಇನ್ನು ಈ ತಂತ್ರಜ್ಞಾನವನ್ನು ಸಾರ್ವಜನಿಕ ಬಳಕೆಗೆ ಬಿಟ್ಟಿಲ್ಲ.

ಮನೆಯೂಟ ಆರ್ಥಿಕತೆ: ಯಾವ ರಾಜ್ಯದಲ್ಲಿ ಊಟ ಅಗ್ಗ? ಎಲ್ಲಿ ದುಬಾರಿ?...

Farmers Protest to Yash KGF2 top 10 News of January ckm

ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ 2020-21ರ ಆರ್ಥಿಕ ಸಮೀಕ್ಷೆಯಲ್ಲಿ ಥಾಲಿ ಸೂಚ್ಯಂಕ ಮತ್ತು ಥಾಲಿನಾಮಿಕ್ಸ್‌ ಎಂಬ ಪರಿಕಲ್ಪನೆಗಳ ಕುರಿತಾಗಿ ವಿಶೇಷ ವಿವರಣೆ ನೀಡಲಾಗಿದೆ. ಇದರಲ್ಲಿ ನಿಗದಿತ ಅವಧಿಯಲ್ಲಿ ದೇಶಾದ್ಯಂತ ವಿವಿಧ ಭಾಗಗಳಲ್ಲಿ ಮನೆಯೂಟದ ವೆಚ್ಚ ಎಷ್ಟಿತ್ತು ಎಂಬ ವಿವರಣೆ ನೀಡಲಾಗಿದೆ. ವರದಿ ಅನ್ವಯ 2020ರ ಜೂನ್‌ನಿಂದ ನವೆಂಬರ್‌ 2020ರ ವೇಳೆಗೆ ಊಟದ ಬೆಲೆ ಏರಿಕೆಯಾಗಿತ್ತಾದರೂ, ಡಿಸೆಂಬರ್‌ನಲ್ಲಿ ಹಲವು ಮೂಲಭೂತ ವಸ್ತುಗಳ ದರ ಇಳಿಕೆಯಾದ ಪರಿಣಾಮ ಆಹಾರದ ಬೆಲೆಯಲ್ಲಿ ಭಾರೀ ಇಳಿಕೆಯಾಯಿತು.

ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!...

Farmers Protest to Yash KGF2 top 10 News of January ckm

ಕಾರು ಸರ್ವೀಸ್ ಸರಿಯಾಗಿಲ್ಲ, ಹೊಸ ಕಾರು ಡೆಲಿವರಿ ವೇಳೆ ಡ್ಯಾಮೇಜ್,  ಡೀಲರ್ ಜೊತೆಗೆ ಕಿರಿಕ್ ಸೇರಿದಂತೆ ಹಲವು ಪ್ರಕರಣಗಳು ಗ್ರಾಹಕರ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ಬಹುತೇಕ ಪ್ರಕರಣಗಳು ಗ್ರಾಹಕರ ಪರವಾಗಿಯೇ ಬಂದಿದೆ. ಇದೇ ರೀತಿ ಈ ಪ್ರಕರಣವನ್ನೂ ಗೆಲ್ಲಬಹುದು ಎಂಬ ಅಹಂನಿಂದ ಹೋದ ಮಹಿಳಾ ವಕೀಲೆಗೆ ಕೋರ್ಟ್ ತಿರುಗೇಟು ನೀಡಿದೆ. 

ಬಿಜೆಪಿ ಶಾಸಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್: ಕಾರಣ...?...

Farmers Protest to Yash KGF2 top 10 News of January ckm

ಪೊಲೀಸರ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕಿದ್ದ ಕೇಸ್​ಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 

ಚಂದದ ಚೆಲುವೆ ಶನಾಯಾ ಗೊತ್ತಾ..? ಕಪೂರ್ ಕುಡಿ ಇವಳು...

Farmers Protest to Yash KGF2 top 10 News of January ckm

ಬಾಲಿವುಡ್ ನಟಿ ಸೋನಮ್ ಕಪೂರ್, ಅರ್ಜುನ್ ಕಪೂರ್, ಜಾಹ್ನವಿ ಕಪೂರ್‌ಗೆ ಚಂದದ ಕಸಿನ್ ಒಬ್ಬಳಿದ್ದಾಳೆ. ಇವಳೇ ನೋಡಿ ಬ್ಯೂಟಿಫುಲ್ ಶನಾಯಾ

Follow Us:
Download App:
  • android
  • ios