Asianet Suvarna News Asianet Suvarna News

ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಅಭಿಯಾನ, BSYಗೆ ಗವರ್ನರ್ ಸ್ಥಾನ? ಜೂ.19ರ ಟಾಪ್ 10 ಸುದ್ದಿ!

ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಭಾರತ ರತ್ನ ನೀಡಿ ಎಂದು ಅಭಿಯಾನ ಆರಂಭಗೊಂಡಿದೆ. ನಾಯಕತ್ವ ಬದಲಾವಣೆ ಅಸಮಾಧಾನಕ್ಕೆ ಅಂತ್ಯಹಾಡಲು ಬಿಎಸ್ ಯಡಿಯೂರಪ್ಪಗೆ ಗನರ್ವರ್ ಸ್ಥಾನ ನೀಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಹುಡುಗಿ ನೋಡಿ ಕಮೆಂಟರಿ ಮೆರೆತ ಕಮೆಂಟೇಟರ್, ಹರಿಪ್ರಿಯಾ ಹಾಟ್‌ಲುಕ್‌ಗೆ ಫಿದಾ ಆದ ಫ್ಯಾನ್ಸ್ ಸೇರಿದಂತೆ ಜೂನ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Condolences pour for Milkha Singh to Karnataka leadership change poitics top 10 News of June 19 ckm
Author
Bengaluru, First Published Jun 19, 2021, 4:32 PM IST

ಮುಸ್ಲಿಂ ವೃದ್ಧನಿಗೆ ಥಳಿತ: ಸುಳ್ಳು ಕತೆ ಹೆಣೆದ SP ನಾಯಕ ಉಮ್ಮೇದ್ ಅರೆಸ್ಟ್!...

Condolences pour for Milkha Singh to Karnataka leadership change poitics top 10 News of June 19 ckm

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಮುಸ್ಲಿಂ ವೃದ್ಧನಿಗೆ ಥಳಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕ ಉಮ್ಮೇದ್ ಪಹಲ್ವಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 14ರ ಈ ವೈರಲ್ ವಿಡಿಯೋ ಪ್ರಕರಣ ಸಂಬಂಧ ಪೊಲೀಸರು ಫೇಸ್‌ಬುಕ್‌ಗೂ ಸವಾಲೆಸೆದಿದ್ದಾರೆ. 

ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!...

Condolences pour for Milkha Singh to Karnataka leadership change poitics top 10 News of June 19 ckm

ಪಶ್ಚಿಮ ಬಂಗಾಳ ವಿಧಾ​ನ​ಸ​ಭೆಯ ವಿಪಕ್ಷ ನಾಯ​ಕ​, ಬಿಜೆಪಿ ಮುಖಂಡ ಸುವೇಂದು ಅಧಿ​ಕಾ​ರಿ ಅವರು ವಿಧಾ​ನ​ಸಭೆಗೆ ಆಯ್ಕೆ ಆಗಿದ್ದನ್ನು ಪ್ರಶ್ನಿಸಿ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಹೈಕೋ​ರ್ಟ್‌ ಮೊರೆ ಹೋಗಿ​ದ್ದಾರೆ. ಇದನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾ​ಲಯ, ವಿಚಾ​ರ​ಣೆ​ಯನ್ನು ಜೂ.24ಕ್ಕೆ ಮುಂದೂ​ಡಿದೆ.

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: 24ಕ್ಕೆ ಮೋದಿ ಸಭೆ!...

Condolences pour for Milkha Singh to Karnataka leadership change poitics top 10 News of June 19 ckm

ಜಮ್ಮು-ಕಾಶ್ಮೀರ ವಿಚಾ​ರಕ್ಕೆ ಪುನಃ ರಾಜ್ಯ ಸ್ಥಾನಮಾನ ನೀಡುವ ಸಂಬಂಧ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್‌ 24ರಂದು ಸರ್ವ​ಪ​ಕ್ಷ​ಗಳ ಸಭೆ ಕರೆ​ಯುವ ಸಾಧ್ಯ​ತೆ​ಯಿದೆ.

ಕರ್ನಾಟಕ ಸಿಎಂ ಬಿಎಸ್‌ವೈ ಇನ್ನು ಗವರ್ನರ್?...

Condolences pour for Milkha Singh to Karnataka leadership change poitics top 10 News of June 19 ckm

ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತಾತರೂಢ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದು, ಈ ವಿಚಾರ ಈಗ ಹೈಕಮಾಂಡ್ ಅಂಗಳ ಸೇರಿದೆ. 

'ಫ್ಲೈಯಿಂಗ್ ಸಿಖ್' ಖ್ಯಾತಿಯ ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಇನ್ನಿಲ್ಲ!...

Condolences pour for Milkha Singh to Karnataka leadership change poitics top 10 News of June 19 ckm

ಕೊರೋನಾ ಸೋಂಕು ತಗುಲಿದ 30 ದಿನಗಳ ಬಳಿಕ, ತಮ್ಮ ಪತ್ನಿ ನಿರ್ಮಲ್‌ ಕೌರ್‌ ನಿಧನರಾಗಿ ಕೇವಲ 5 ದಿನಗಳಲ್ಲಿ ಭಾರತದ ದಿಗ್ಗಜ ಅಥ್ಲೀಟ್‌, ‘ದಿ ಫ್ಲೈಯಿಂಗ್‌ ಸಿಖ್‌’ ಎಂದೇ ಖ್ಯಾತರಾದ ಮಿಲ್ಖಾ ಸಿಂಗ್‌(91) ನಿಧನರಾಗಿದ್ದಾರೆ. ಶುಕ್ರವಾರ ತಡರಾತ್ರಿ ಅವರು ಕೊನೆಯುಸಿರೆಳೆದರು ಎಂದು ಅವರ ಪುತ್ರ, ಅಂತಾರಾಷ್ಟ್ರೀಯ ಗಾಲ್‌್ಫ ಆಟಗಾರ ಜೀವ್‌ ಮಿಲ್ಖಾ ಸಿಂಗ್‌ ಮಾಧ್ಯಮಗಳಿಗೆ ಖಚಿತಪಡಿಸಿದರು.

ಸುಂದರಿಯ ನೋಡಿ ಕಮೆಂಟರಿ ಬಿಟ್ಟು ಹಾಡು ಹಾಡಿದ ಕಮೆಂಟೇಟರ್; ವಿಡಿಯೋ ವೈರಲ್!...

Condolences pour for Milkha Singh to Karnataka leadership change poitics top 10 News of June 19 ckm

ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮಾರ ಸುಂದರಿ ಹುಡುಗಿಯತ್ತ ತಿರುಗಿದೆ. ಕಮೆಂಟೇಟರ್, ಕಮೆಂಟರಿ ಬಿಟ್ಟು ಹಾಡು ಹಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಲಗಾಮು ಸಿನಿಮಾದಲ್ಲಿ ಹರಿಪ್ರಿಯಾ ಹಾಟ್ ಲುಕ್!...

Condolences pour for Milkha Singh to Karnataka leadership change poitics top 10 News of June 19 ckm

ಉಪೇಂದ್ರ, ಹರಿಪ್ರಿಯಾ ನಟನೆಯ ‘ಲಗಾಮು’ ಸಿನಿಮಾದ ಫೋಟೋಶೂಟ್ ವೀಡಿಯೋ ವೈರಲ್ ಆಗ್ತಿದೆ. ಇದರಲ್ಲಿ ಹರಿಪ್ರಿಯಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿನ್ನ ಪ್ರಿಯರಿಗೆ ಸುಗ್ಗಿ, ಬಂಗಾರ ದರ ಭಾರೀ ಇಳಿಕೆ!...

Condolences pour for Milkha Singh to Karnataka leadership change poitics top 10 News of June 19 ckm

ಆದರೀಗ ಎರಡನೇ ಅಲೆಯ ಅಬ್ಬರವೂ ಇಳಿಯಲಾರಂಭಿಸಿದೆ. ಹೀಗಿರುವಾಗ ಚಿನ್ನವೂ ಕಳೆದ ಹತ್ತು ದಿನಗಳಿಂದ ಇಳಿಕೆಯಾಗುತ್ತಿದ್ದು ಗ್ರಾಹಕರಿಗೆ ಕೊಂಚ ಸಂತಸ ಕೊಟ್ಟಿದೆ.

ಮಿಲ್ಕಾ ಸಿಂಗ್‌ಗೆ ಭಾರತ ರತ್ನ ನೀಡಿ ಆಗ್ರಹ; ತಕ್ಷಣ ಸ್ಪಂದಿಸಿದ ಕೇಂದ್ರ ಕ್ರೀಡಾ ಸಚಿವ!...

Condolences pour for Milkha Singh to Karnataka leadership change poitics top 10 News of June 19 ckm

ಮಿಲ್ಖಾ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತ ಅಭಿಮಾನಿಗಳು ಸಂತಾಪದ ಜೊತೆಗೆ ವಿಶೇಷ ಆಗ್ರಹವನ್ನು ಮಾಡಿದ್ದಾರೆ. ಮಿಲ್ಕಾ ಸಿಂಗ್‌‍ಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯರ ಆಗ್ರಹಕ್ಕೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸ್ಪಂದಿಸಿದ್ದಾರೆ.

Follow Us:
Download App:
  • android
  • ios