ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ, ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ, ಕಾವು ಪಡೆದುಕೊಂಡಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಅಚ್ಚರಿ ನಿರ್ಧಾರ ಕೈಗೊಂಡಿದೆ.
- Home
- Karnataka Districts
- Karnataka News Live: Breaking ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ,ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ
Karnataka News Live: Breaking ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ,ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ

ಇಂದು ಯುಗಾದಿ ಹಬ್ಬದ ಸಂಭ್ರಮ. ರಾಜ್ಯದೆಲ್ಲೆಡೆ ಹಬ್ಬದ ವಾತಾವರಣ ಕಳೆಗೆಟ್ಟಿದೆ. ಬೆಂಗಳೂರಿನಲ್ಲಿ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ಕೆಆರ್ ಮಾರುಕಟ್ಟೆಯಲ್ಲಿ ಕಿಕ್ಕಿರಿದು ಜನ ತುಂಬಿದ್ದಾರೆ. ಹೂವು,ಹಣ್ಣು, ಮಾವಿನ ಸೊಪ್ಪು, ಬೇವಿನಸೊಪ್ಪು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಮಧ್ಯರಾತ್ರಿಯಿಂದಲೇ ಕೆ.ಆರ್ ಮಾರ್ಕೆಟ್ ನಲ್ಲಿ ವ್ಯಾಪಾರ ಆರಂಭಗೊಂಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ರಾಜಕೀಯ ರಂಗು ಪಡೆದುಕೊಂಡಿದೆ. ಒಂದೆಡೆ ಉಪ ಚುನಾವಣೆ ಕಾವು ಏರತೊಡಗಿದರೆ ಮತ್ತೊಂದೆಡೆ ಮಂಡ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ.
Karnataka News Live 19 March 2026Breaking ಕರ್ನಾಟಕ ಉಪ ಚುನಾವಣೆ ಟಿಕೆಟ್ ಘೋಷಣೆ,ಅಚ್ಚರಿ ತೀರ್ಮಾನ ಕೈಗೊಂಡ ಬಿಜೆಪಿ
Karnataka News Live 19 March 2026Ugadi Festival 2026 - ಯುಗಾದಿ ಎಂದರೆ ಕೇವಲ ಹಬ್ಬವಲ್ಲ, ಹೊಸ ವರ್ಷದ ಶುಭಾರಂಭ, ಬೇವು-ಬೆಲ್ಲದ ಆರೋಗ್ಯ ಮಹತ್ವ ತಿಳಿಯಿರಿ
ಯುಗಾದಿ ಹಬ್ಬವು ವಸಂತ ಋತುವಿನ ಆಗಮನದೊಂದಿಗೆ ಪ್ರಕೃತಿಯಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ವೈಜ್ಞಾನಿಕ ಹಿನ್ನೆಲೆ ಹೊಂದಿರುವ ಈ ಹಬ್ಬದಲ್ಲಿ ಬೇವು-ಬೆಲ್ಲ ಸೇವನೆಯು ಜೀವನದ ಸುಖ-ದುಃಖಗಳನ್ನು ಸಮಭಾವದಿಂದ ಸ್ವೀಕರಿಸುವ ಪಾಠವನ್ನು ಕಲಿಸುತ್ತದೆ.
Karnataka News Live 19 March 2026ತ.ನಾಡು ರೀತಿ ಇಲ್ಲೂ ಹೋಟೆಲ್ ವಿದ್ಯುತ್ ಸಬ್ಸಿಡಿ ಕೊಡಿ | ಪಿ.ಸಿ. ರಾವ್ ಅವರ ವಿಶೇಷ ಸಂದರ್ಶನ
Exclusive Interview with PC Rao ಬೆಂಗಳೂರಿನಲ್ಲಿ ಗ್ಯಾಸ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ! 100 ಕೋಟಿಗೂ ಅಧಿಕ ನಷ್ಟ, ಮೆನು ಕಡಿತ. ಇದರ ಪರಿಣಾಮಗಳೇನು? ಪಿ.ಸಿ. ರಾವ್ ಅವರ ವಿಶೇಷ ಸಂದರ್ಶನ ಓದಿ.
Karnataka News Live 19 March 2026ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ, ಆರೇಂಜ್ ಅಲರ್ಟ್
ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ, ಆರೇಂಜ್ ಅಲರ್ಟ್ ನೀಡಲಾಗಿದೆ. ರಾಜ್ಯದಲ್ಲಿ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಇದರ ನಡುವೆ ಮಳೆ ಅಲರ್ಟ್ ಕೂಡ ನೀಡಲಾಗಿದ್ದು, ರೈತರು ಮತ್ತೆ ಆತಂಕಗೊಂಡಿದ್ದಾರೆ.
Karnataka News Live 19 March 2026ಬಳ್ಳಾರಿಯ ಕೆಲವು ಹಳ್ಳಿಗಳಲ್ಲಿ ಯುಗಾದಿ ಹಬ್ಬ ಏಕೆ ಆಚರಿಸುವುದಿಲ್ಲ? ವಿಚಿತ್ರ ಪರಂಪರೆಯ ಹಿಂದಿನ ಕಾರಣವೇನು?
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ, ಕೆಲವು ಸಮುದಾಯಗಳು ತಲೆಮಾರುಗಳಿಂದ ಯುಗಾದಿ ಹಬ್ಬವನ್ನು ಆಚರಿಸುವುದಿಲ್ಲ. ಹಬ್ಬ ಆಚರಿಸಿದರೆ ಕೇಡಾಗುತ್ತದೆ ಎಂದು ನಂಬುತ್ತಾರೆ. ಈ ವಿಚಿತ್ರ ಪರಂಪರೆಯ ಹಿಂದಿನ ನಿಖರ ಕಾರಣ ಯಾರಿಗೂ ತಿಳಿದಿಲ್ಲ
Karnataka News Live 19 March 2026ಬಿಜೆಪಿ ಒಪ್ಪಿದರೆ ಡಿಜೆ, ಐಟಂ ಸಾಂಗ್ಗೆ ಬ್ರೇಕ್? ಸದನದಲ್ಲಿ ಕೇಳಿಬಂತು ಒತ್ತಾಯ
ರಾಜ್ಯದಲ್ಲಿ ನಡೆಯುವ ಜಯಂತಿ ಹಾಗೂ ಉತ್ಸವಗಳಲ್ಲಿ ಡಿಜೆ ಸೌಂಡ್ ಮತ್ತು ಐಟಂ ಸಾಂಗ್ಗಳನ್ನು ನಿಷೇಧಿಸುವಂತೆ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದ್ದಾರೆ. ಡಿಜೆ ಸದ್ದಿನಿಂದಾಗುವ ಆರೋಗ್ಯ ಸಮಸ್ಯೆ ಹಾಗೂ ಸಾಂಸ್ಕೃತಿಕ ಅಸಹ್ಯದ ಬಗ್ಗೆ ಚರ್ಚೆಯ ವಿವರ ತಿಳಿಯಿರಿ
Karnataka News Live 19 March 2026ಆರಂಭಗೊಂಡ ಮೂರೇ ದಿನಕ್ಕೆ ಇಂದಿರಾ ಕ್ಯಾಂಟೀನ್ ಬಂದ್!
Karnataka News Live 19 March 2026ಧರ್ಮಸ್ಥಳ ಅಸಹಜ ಸಾವು ಪ್ರಕರಣ - ಸೌಜನ್ಯ ತಾಯಿ ಪಿಐಎಲ್, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ
ಧರ್ಮಸ್ಥಳದಲ್ಲಿ 1990 ರಿಂದ 2021ರ ನಡುವೆ ನಡೆದಿದೆ ಎನ್ನಲಾದ 74 ಅಸಹಜ ಸಾವಿನ ಪ್ರಕರಣ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
Karnataka News Live 19 March 2026ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು?
ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು?, ಡಿನ್ನರ್ ಮೀಟಿಂಗ್ ಸಾಮಾನ್ಯ ಪ್ರಕ್ರಿಯೆ ಇದರಲ್ಲಿ ರಾಜಕೀಯವಿಲ್ಲ ಎಂದಿರುವ ಸೋನಿಲ್ ಬೋಸ್, ಪಂಚ ರಾಜ್ಯ ಚುನಾವಣೆ ಬಳಿಕ ನಡೆಯುವ ಕೆಲ ಮಹತ್ವದ ನಿರ್ಧಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.
Karnataka News Live 19 March 2026ಕೆಡಿ ಚಿತ್ರದ ‘ಸೆರಗು ಸರ್ಸೇ’ ಹಾಡು ಬಗ್ಗೆ ಸಂಸತ್ನಲ್ಲೂ ಕಿಡಿ
ತೀವ್ರ ವಿವಾದ ಸೃಷ್ಟಿಸಿರುವ ಕನ್ನಡದ ‘ಕೆಡಿ’ ಚಿತ್ರ ‘ಸರ್ಸೆ ಸೆರಗು ಸರ್ಸೆ’ ಹಾಗೂ ಅದರ ಹಿಂದಿ ಅವತರಣಿಗೆ ‘ಸರ್ಕೆ ಚುನರ್ ತೇರಿ ಸರ್ಕೆ’ ಗದ್ದಲ ಇದೀಗ ಸಂಸತ್ತಿನ ಮೆಟ್ಟಿಲೇರಿದ್ದು, ಅಲ್ಲೂ ಹಾಡಿನ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
Karnataka News Live 19 March 2026ಮುಡಾ ತನಿಖೆಗೆ ರಾಜ್ಯಪಾಲ ಅಸ್ತು ವಿರುದ್ಧ ಸಿದ್ದರಾಮಯ್ಯರ ಮೇಲ್ಮನವಿ ಅರ್ಜಿ ವಿಚಾರಣೆ 10ನೇ ಬಾರಿಗೆ ಮುಂದೂಡಿಕೆ!
Karnataka News Live 19 March 2026ಹೂವು ಹಣ್ಣ ಬೆಲೆ ದುಬಾರಿ
ಯುಗಾದಿ ಹಬ್ಬದ ಹಿನ್ನಲೆಯಲ್ಲಿ ಹೂವು ಹಣ್ಣು ಸೇರಿದಂತೆ ಹಬ್ಬದ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಜನರು ತುಂಬಿದ್ದಾರೆ.