Asianet Suvarna News Asianet Suvarna News

ಕುಂಭಮೇಳಕ್ಕೆ ಸಜ್ಜಾಗ್ತಿದೆ ಪ್ರಯಾಗ್‌ರಾಜ್; ಏರ್‌ಪೋರ್ಟ್‌ಗಾಗಿ ಎಷ್ಟು ಖರ್ಚು ಮಾಡ್ತಿದೆ ಯುಪಿ ಸರ್ಕಾರ?

2025 ರ ಮಹಾಕುಂಭಮೇಳಾಗೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣವನ್ನು ನವೀಕರಿಸಲಾಗುತ್ತಿದೆ.  ಅಂತರಾಷ್ಟ್ರೀಯ ದರ್ಜೆಯ ಸೌಲಭ್ಯಗಳೊಂದಿಗೆ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಯೋಗಿ ಸರ್ಕಾರ ಎಷ್ಟು ಖರ್ಚು ಮಾಡುತ್ತಿದೆ ಗೊತ್ತಾ?  

Prayagraj Airport undergoes massive upgrade for Kumbh Mela 2025 mrq
Author
First Published Oct 9, 2024, 5:29 PM IST | Last Updated Oct 9, 2024, 5:29 PM IST

ಪ್ರಯಾಗ್‌ರಾಜ್: ಮುಂದಿನ ವರ್ಷ ನಡೆಯಲಿರುವ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಯೋಗಿ ಸರ್ಕಾರ ಅದ್ದೂರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ತ್ರಿವೇಣಿ ಸಂಗಮದಲ್ಲಿ ನಡೆಯುವ ಈ ಕುಂಭಮೇಳಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾಮಾನ್ಯ ಜನರಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಸುಲಭವಾಗಿ ತಲುಪಲು ಯೋಗಿ ಸರ್ಕಾರ ವಿಶೇಷ ವ್ಯವಸ್ಥೆ ಮಾಡುತ್ತಿದೆ. 

ಈಗಾಗಲೇ ಪ್ರಯಾಗ್‌ರಾಜ್‌ಗೆ ರಸ್ತೆ, ರೈಲು ಮಾರ್ಗಗಳನ್ನು ವಿಸ್ತರಿಸುವ ಕೆಲಸವನ್ನು ಯುಪಿ ಸರ್ಕಾರ ಕೈಗೆತ್ತಿಕೊಂಡಿದೆ. ಅಲ್ಲದೆ, ವಿಮಾನಯಾನ ಸೌಲಭ್ಯಗಳನ್ನು ಸಹ ಸುಧಾರಿಸಲಾಗುತ್ತಿದೆ. ಇದರ ಭಾಗವಾಗಿ ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ವಿಶ್ವ ದರ್ಜೆಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ನಂತರ ಮಹಾಕುಂಭಮೇಳದ ಸಿದ್ಧತೆಗಳು ಮತ್ತಷ್ಟು ಚುರುಕುಗೊಂಡಿವೆ.

ಮಹಾಕುಂಭಮೇಳ ಅಂಗವಾಗಿ ಬೇರೆ ಬೇರೆ ದೇಶಗಳಿಂದ ಬರುವ ಪ್ರವಾಸಿಗರು ಮತ್ತು ಭಕ್ತರ ಅನುಕೂಲಕ್ಕಾಗಿ ಪ್ರಯಾಗ್‌ರಾಜ್ ವಿಮಾನ ನಿಲ್ದಾಣವನ್ನು ನವೀಕರಿಸಲಾಗುತ್ತಿದೆ.  ಮಹಾಕುಂಭಮೇಳ ಅಂಗವಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ 274.38 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಲ್ಲಿ ಸುಮಾರು ಶೇ.70ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಫಾರುಕ್ ಅಹ್ಸಾನ್ ತಿಳಿಸಿದ್ದಾರೆ.

ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ 6700 ಚದರ ಮೀಟರ್ ವಿಸ್ತೀರ್ಣದಲ್ಲಿ ಒಂದು ಟರ್ಮಿನಲ್ ಕಟ್ಟಡವಿದೆ. ಇದನ್ನು ಎರಡು ಹಂತಗಳಲ್ಲಿ ವಿಸ್ತರಿಸಲಾಗುತ್ತಿದೆ. ಒಂದೆಡೆ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣವಾಗುತ್ತಿದ್ದರೆ, ಹಳೆಯ ಟರ್ಮಿನಲ್‌ಗೆ ಹೊಸ ರೂಪ ನೀಡಲಾಗುತ್ತಿದೆ. 231 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣವಾಗುತ್ತಿದೆ. ಇದರ ನಿರ್ಮಾಣದಿಂದ ಪ್ರಯಾಣಿಕರ ನಿರ್ವಹಣಾ ವೇದಿಕೆ (ಪಿಹೆಚ್‌ಪಿ) ಸಾಮರ್ಥ್ಯ 1200ಕ್ಕೆ ಏರಲಿದೆ. ಇದರಲ್ಲಿ ಶೇ.48ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕಾಮಗಾರಿ ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಅದೇ ರೀತಿ, ಪ್ರಸ್ತುತ ಟರ್ಮಿನಲ್‌ಗೆ ಹೊಸ ರೂಪ ನೀಡಲಾಗುತ್ತಿದೆ. ಇದರಿಂದ ಪಿಹೆಚ್‌ಪಿ ಸಾಮರ್ಥ್ಯ 350 ರಿಂದ 850 ಕ್ಕೆ ಏರಲಿದೆ. ಇದರಲ್ಲಿ ಶೇ.70ರಷ್ಟು ಕೆಲಸ ಪೂರ್ಣಗೊಂಡಿದೆ. ಇದರ ನಿರ್ಮಾಣ ಕಾರ್ಯ ಅಕ್ಟೋಬರ್ 31 ರೊಳಗೆ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕೌಂಟರ್‌ಗಳನ್ನು ಸಹ ವಿಸ್ತರಿಸಲಾಗುತ್ತಿದೆ. ಇವುಗಳ ಸಂಖ್ಯೆ 42 ಕ್ಕೆ ಏರಲಿದೆ.

ಪ್ರಯಾಗರಾಜ್‌ ಕುಂಭಮೇಳದಲ್ಲಿ ಮಾಂಸ-ಮದ್ಯ ಮಾರಾಟ ನಿಷೇಧ: ಸಿಎಂ ಯೋಗಿ

ವಿಮಾನ ನಿಲ್ದಾಣದಲ್ಲಿ ಆಪ್ರಾನ್, ಲಿಂಕ್ ಟ್ಯಾಕ್ಸಿ ಮಾರ್ಗಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದೆ. 29 ಕೋಟಿ ರೂಪಾಯಿ ವೆಚ್ಚದಲ್ಲಿ ಈ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದು ಅಕ್ಟೋಬರ್ 31 ರೊಳಗೆ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪಾರ್ಕಿಂಗ್‌ಗಾಗಿ ಆಪ್ರಾನ್ ವಿಸ್ತರಣೆ ಕಾರ್ಯ ಶೇ.95 ರಷ್ಟು ಪೂರ್ಣಗೊಂಡಿದೆ. ಈಗ ಇಲ್ಲಿ ಒಂದೇ ಬಾರಿಗೆ ಹತ್ತು-ಹನ್ನೊಂದು ಸಣ್ಣ ವಿಮಾನಗಳನ್ನು ಸುಲಭವಾಗಿ ನಿಲ್ಲಿಸಬಹುದು ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಹೆಚ್ಚುತ್ತಿರುವುದರಿಂದ ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳ ಸಂಖ್ಯೆಯನ್ನೂ ಹೆಚ್ಚಿಸುವ ಅಗತ್ಯತೆ ಎದುರಾಗಿದೆ. ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ಪ್ರಸ್ತುತ ಎರಡು ಏರೋಬ್ರಿಡ್ಜ್‌ಗಳಿವೆ. ಮಹಾಕುಂಭಮೇಳಕ್ಕೂ ಮುನ್ನ ಇವುಗಳ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲಾಗುವುದು. ಈ ವಿಸ್ತರಣೆಯ ನಂತರ ಯುಪಿಯಲ್ಲಿ ಆರು ಏರೋಬ್ರಿಡ್ಜ್‌ಗಳನ್ನು ಹೊಂದಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣ ಪಾತ್ರವಾಗಲಿದೆ. 

ಕೈಗಾರಿಕಾ ವಿವಾದ ಇತ್ಯರ್ಥಕ್ಕೆ ಯೋಗಿ ಸರ್ಕಾರದಿಂದ 'ಇ-ಕೋರ್ಟ್ ವ್ಯವಸ್ಥೆ'

Latest Videos
Follow Us:
Download App:
  • android
  • ios