09:16 AM (IST) Apr 10

India latest news live:ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ

ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮದ ಅನ್ವಯ, ಹೋರ್ಮುಜ್ ಜಲಸಂಧಿಯಲ್ಲಿ ದಿನಕ್ಕೆ 15 ಹಡಗುಗಳಿಗೆ ಇರಾನ್ ಅನುಮತಿಯೊಂದಿಗೆ ಸಾಗಲು ಅವಕಾಶ ನೀಡಲಾಗಿದೆ. ಆದರೆ, ಜಲಸಂಧಿಯ ರಕ್ಷಣೆಗೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪಿಯನ್ ಒಕ್ಕೂಟಕ್ಕೆ ಕರೆ ನೀಡಿದ್ದಾರೆ.

Read Full Story
08:51 AM (IST) Apr 10

India latest news live:ಪಂಚರಾಜ್ಯ ಚುನಾವಣೆ - ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ

ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಗುರುವಾರ ದಾಖಲೆಯ ಮತದಾನ ನಡೆದಿದೆ. ಪುದುಚೇರಿಯಲ್ಲಿ ಸಾರ್ವಕಾಲಿಕ ಗರಿಷ್ಠ ಶೇ.89.08, ಅಸ್ಸಾಂನಲ್ಲಿ ಶೇ.85.04 ಮತ್ತು ಕೇರಳದಲ್ಲಿ ಶೇ.78 ರಷ್ಟು ಮತದಾನವಾಗಿದ್ದು, ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು.
Read Full Story
08:26 AM (IST) Apr 10

India latest news live:ಸ್ವಂತ ಕಾರೂ ಇಲ್ಲದ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ದೀದಿ ಆಸ್ತಿ ಬರೀ 15.4 ಲಕ್ಷ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದು, ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ 1.35 ಲಕ್ಷ ರು. ಇಳಿಕೆಯಾಗಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಪ್ರಸ್ತುತ ಆಸ್ತಿ ಕೇವಲ 15.37 ಲಕ್ಷ ರು. ಅವರ ಬಳಿ ಸ್ವಂತ ವಾಹನವಿಲ್ಲ ಮತ್ತು ಯಾವುದೇ ಹೂಡಿಕೆ ಇಲ್ಲ.

Read Full Story
07:42 AM (IST) Apr 10

India latest news live:Supreme Court on temple entry - ಕೆಲವು ಪಂಗಡಗಳಿಗೆ ದೇಗುಲ ಪ್ರವೇಶ ನಿರ್ಬಂಧ ಹಿಂದೂ ಧರ್ಮಕ್ಕೆ ಮಾರಕ - ಸುಪ್ರೀಂ

ಎಲ್ಲಾ ದೇವಾಲಯ ಮತ್ತು ಮಠಗಳಿಗೆ ಪ್ರತಿಯೊಬ್ಬರಿಗೂ ಪ್ರವೇಶವಿರಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಶಬರಿಮಲೆ ಸೇರಿದಂತೆ ದೇಗುಲ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ, ಯಾವುದೇ ಪಂಗಡವನ್ನು ಹೊರಗಿಡುವುದು ಹಿಂದೂ ಧರ್ಮಕ್ಕೆ ಹಾನಿಕಾರಕ ಎಂದು ಸಾಂವಿಧಾನಿಕ ಪೀಠ ಹೇಳಿದೆ.

Read Full Story