ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ನ ಐಆರ್ಜಿಸಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಸಮುದ್ರದಾಳದ ಇಂಟರ್ನೆಟ್ ಕೇಬಲ್ಗಳನ್ನು ಗುರಿಯಾಗಿಸುವ ದೊಡ್ಡ ಎಚ್ಚರಿಕೆ ನೀಡಿದೆ.
- Home
- News
- India News
- India Latest News Live: ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್ಗಳ ಮುಂದಿನ ಟಾರ್ಗೆಟ್
India Latest News Live: ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್ಗಳ ಮುಂದಿನ ಟಾರ್ಗೆಟ್

ನವದೆಹಲಿ: ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ಕೆಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಸನ್ರೈಸರ್ಸ್ ವಿರುದ್ಧ ಪಂದ್ಯದ ವೇಳೆ ಸ್ನಾಯುಸೆಳೆತಕ್ಕೆ ತುತ್ತಾಗಿದ್ದ ತಂಡದ ಯುವ ಬ್ಯಾಟರ್ ಆಯುಶ್ ಮ್ಹಾತ್ರೆ ಈ ಬಾರಿ ಐಪಿಎಲ್ನ ಇನ್ನುಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ಇದನ್ನು ಫ್ರಾಂಚೈಸಿ ಖಚಿತಪಡಿಸಿದೆ. ಅವರಿಗೆ 6ರಿಂದ 12 ವಾರಗಳ ಕಾಲ ಪುನಶ್ಚೇತನ ಶಿಬಿರ ಅಗತ್ಯವಿದೆ ಎಂದು ಸಿಎಸ್ಕೆ ತಿಳಿಸಿದೆ. 18 ವರ್ಷದ ಬ್ಯಾಟರ್ ಆಯುಶ್ ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. 6 ಪಂದ್ಯಗಳನ್ನಾಡಿರುವ ಅವರು 177.87ರ ಸ್ಟ್ರೈಕ್ರೇಟ್ನಲ್ಲಿ 201 ರನ್ ಕಲೆಹಾಕಿದ್ದಾರೆ.
ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಗಾಯದಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಮತ್ತೊಂದೆಡೆ ವೇಗಿ ಖಲೀಲ್ ಅಹ್ಮದ್ ಕೂಡಾ ಕೆಲ ದಿನಗಳ ಹಿಂದಷ್ಟೇ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರು.
India Latest News Live 22 April 2026ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್ಗಳ ಮುಂದಿನ ಟಾರ್ಗೆಟ್
India Latest News Live 22 April 2026"ಇಲ್ಲಿಂದ ತೊಲಗಿ, ಟ್ರಾಫಿಕ್ ಜಾಮ್ ಮಾಡ್ಬೇಡಿ" - ಬಿಜೆಪಿ ಸಚಿವನ ಮೆರವಣಿಗೆ ತಡೆದು ತರಾಟೆಗೆ ತೆಗೆದುಕೊಂಡ ಮಹಿಳೆ!
ಮುಂಬೈನ ವರ್ಲಿಯಲ್ಲಿ ರಾಜಕೀಯ ರ್ಯಾಲಿಯಿಂದಾದ ಭಾರಿ ಟ್ರಾಫಿಕ್ ಜಾಮ್ನಿಂದ ಕೋಪಗೊಂಡ ಮಹಿಳೆಯೊಬ್ಬರು, ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ಪ್ರಶ್ನಿಸಿದ್ದಾರೆ.
India Latest News Live 22 April 2026Simbu Diet - ಬಿರಿಯಾನಿಗೆ ನೋ, ಸಪ್ಪೆ ಊಟಕ್ಕೆ ಯೆಸ್ - ನಟ ಸಿಂಬು ಸಸ್ಯಹಾರಿಯಾದ ಹಿಂದಿನ ಸೀಕ್ರೆಟ್ ಏನು?
ನಟ ಸಿಂಬು ಮತ್ತೆ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಕಡಿಮೆ ಉಪ್ಪಿನ ಸಸ್ಯಹಾರಿ ಊಟಕ್ಕೆ ಬದಲಾಗಿದ್ದು, ಅನ್ನಕ್ಕೂ ಮುನ್ನ ಪ್ರೊಟೀನ್ ಆಹಾರ ಸೇವಿಸುತ್ತಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.
India Latest News Live 22 April 2026ಪೆಟ್ರೋಲ್-ಡೀಸಲ್ ಬೆಲೆ 28 ರೂಪಾಯಿ ಏರಿಕೆ ಸಾಧ್ಯತೆ - ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ!
ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ವರದಿ ಪ್ರಕಾರ, ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.
India Latest News Live 22 April 2026ತಿಂಗಳಿಗೆ 16 ಲಕ್ಷ ಬಾಡಿಗೆ! ಮುಂಬೈನಲ್ಲಿ ವಿರಾಟ್-ಅನುಷ್ಕಾ, ವಿಕ್ಕಿ-ಕ್ಯಾಟ್ಗೆ ಪಕ್ಕದ ಮನೆಯವರಾದ ಅಲ್ಲು ಅರ್ಜುನ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 'ರಾಕಾ' ಸಿನಿಮಾ ಶೂಟಿಂಗ್ಗಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕಾಗಿ ಅವರು ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!
India Latest News Live 22 April 2026'ಇಲ್ಲೀನತಕ ಯಾಕ್ ಹೇಳಿಲ್ಲ?'.. ಈಗ ಹೊರಬಿದ್ದ ರಶ್ಮಿಕಾರ ಚಿನ್ನದಂಥ ಸೀಕ್ರೆಟ್ಗೆ ಫ್ಯಾನ್ಸ್ ಸಖತ್ ಕ್ಲಾಸ್!
'ನಾನು ಹೆವ್ವಿ ಎನ್ನುವಷ್ಟು ವರ್ಕ್ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ. ಯಾವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಶ್ಮಿಕಾ? ಮುಂದೆ ನೋಡಿ..
India Latest News Live 22 April 2026ಶೂಟಿಂಗ್ ಮುಗಿಸಿದ 'ಜೈಲರ್ 2' - ರಿಲೀಸ್ ಡೇಟ್ ಯಾವಾಗ? ತಲೈವಾ ರಜನಿಕಾಂತ್ ಹೇಳಿದ್ದೇನು?
ಬಹುನಿರೀಕ್ಷಿತ ಸೀಕ್ವೆಲ್ಗಳಲ್ಲಿ ಒಂದಾದ 'ಜೈಲರ್ 2' ಶೂಟಿಂಗ್ ಮುಗಿದಿದೆ. ಸೂಪರ್ಸ್ಟಾರ್ ರಜನಿಕಾಂತ್ ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅಭಿಮಾನಿಗಳಿಗೆ ದೊಡ್ಡ ಅಪ್ಡೇಟ್ ನೀಡಿದ್ದಾರೆ.
India Latest News Live 22 April 2026180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಯಾಜ್ನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು
ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
India Latest News Live 22 April 2026ಮಮತಾ ಬ್ಯಾನರ್ಜಿ ನಡೆ ಪ್ರಜಾಪ್ರಭುತ್ವಕ್ಕೆ ಆಪತ್ತು - ಇಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ
ಐ-ಪ್ಯಾಕ್ ಮೇಲಿನ ಇಡಿ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದೆ.
India Latest News Live 22 April 2026ಪೋಕ್ಸೊನಲ್ಲಿ ಮೊನಾಲಿಸಾ, ಲವ್ ಜಿಹಾದ್ನಲ್ಲಿ ನಿದಾ, ಸಿಎಎ ವೇಳೆ ಸಫೂರಾ - ಏನಿದು ಪ್ರೆಗ್ನೆನ್ಸಿ ಗುಟ್ಟು? ಬಿಸಿಬಿಸಿ ಚರ್ಚೆ
India Latest News Live 22 April 2026ಲೈವ್ ಶೋನಲ್ಲಿ ತಲೆಗೆ ನೀರು ಸುರಿದುಕೊಂಡ ಧುರಂಧರ್ ಗಾಯಕಿ - ಲಿಪ್ಸಿಂಕ್ ಮಾಡಿ ಸಿಕ್ಕಿಬಿದ್ದ ವಿಡಿಯೋ ವೈರಲ್!
ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.
India Latest News Live 22 April 2026ಸ್ಮಾರ್ಟ್ಫೋನ್ ಪ್ರಿಯರಿಗೆ ಗುಡ್ನ್ಯೂಸ್ - ಇನ್ಮುಂದೆ ಮೊಬೈಲ್ ಬ್ಯಾಟರಿ ನೀವೇ ಬದಲಾಯಿಸಬಹುದು!
ಯುರೋಪಿಯನ್ ಯೂನಿಯನ್ ಸ್ಮಾರ್ಟ್ಫೋನ್ಗಳ ಬಾಳಿಕೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 2027ರಿಂದ ಬಳಕೆದಾರರೇ ಬ್ಯಾಟರಿ ಬದಲಾಯಿಸುವಂತಹ ವಿನ್ಯಾಸ ಕಡ್ಡಾಯವಾಗಲಿದೆ.
India Latest News Live 22 April 2026ಮತ್ತೆ ವಿಲನ್ ಹೆಸರು ವಿವಾದ - 'ಪೇಟ್ರಿಯಾಟ್' ಚಿತ್ರಕ್ಕೆ ಸೆನ್ಸಾರ್ ಕತ್ತರಿ, ರೀ-ಎಡಿಟಿಂಗ್ ಮುಗೀತು!
ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಯಾವುದು ಅಂತ ಕೇಳಿದ್ರೆ, ಅದಕ್ಕೆ ಒಂದೇ ಉತ್ತರ 'ಪೇಟ್ರಿಯಾಟ್'. ಯಾಕಂದ್ರೆ, ಬರೋಬ್ಬರಿ 18 ವರ್ಷಗಳ ದೊಡ್ಡ ಗ್ಯಾಪ್ ನಂತರ ಸೂಪರ್ಸ್ಟಾರ್ಗಳಾದ..
India Latest News Live 22 April 2026ಮೋದಿಯನ್ನು 'ಟೆರರಿಸ್ಟ್' ಎಂದ ಖರ್ಗೆಗೆ ಬೀದರ್ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ
ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ, ಖರ್ಗೆಯವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತೀಕ್ಷ್ಣ ತಿರುಗೇಟು ನೀಡಿದ್ದು, ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
India Latest News Live 22 April 2026ಮನೆಯಲ್ಲೇ ಲೈಂ**ಕ ದೌರ್ಜನ್ಯವೆಸಗಿ IRS ಅಧಿಕಾರಿಯ ಪುತ್ರಿಯ ಭೀಕರ ಹತ್ಯೆ
ನವದೆಹಲಿಯ ಅಮರ್ ಕಾಲೋನಿಯಲ್ಲಿ ಭಾರತೀಯ ಕಂದಾಯ ಸೇವಾ ಅಧಿಕಾರಿಯ 22 ವರ್ಷದ ಪುತ್ರಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಮೊಬೈಲ್ ಚಾರ್ಜರ್ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮನೆಗೆಲಸದಾತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
India Latest News Live 22 April 2026ಒಂದೇ ಚಾರ್ಜ್ಗೆ 681ಕಿ.ಮೀ ರೇಂಜ್, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ
India Latest News Live 22 April 2026ಟೀಂ ಹೋಟೆಲ್ನಲ್ಲಿ ಕಗಿಸೋ ರಬಾಡ...? ಗುಜರಾತ್ ಟೈಟಾನ್ಸ್ ಆಟಗಾರನ ವಿವಾದಾತ್ಮಕ ವಿಡಿಯೋ ವೈರಲ್
India Latest News Live 22 April 2026ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಸುಪ್ರೀಂ ಕೋರ್ಟ್ ಆಸರೆ - ಕೃತಕ ಅಂಗಾಂಗಗಳ ವೆಚ್ಚಕ್ಕೂ ಸಿಗಲಿದೆ ಭಾರಿ ಪರಿಹಾರ!
ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲಿ ಕೃತಕ ಅಂಗಾಂಗಗಳ ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಸೇರಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.