MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ರೋಚಕ ತಿರುವು ಪಡೆದುಕೊಂಡ ನಾ ನಿನ್ನ ಬಿಡಲಾರೆ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು?

ರೋಚಕ ತಿರುವು ಪಡೆದುಕೊಂಡ ನಾ ನಿನ್ನ ಬಿಡಲಾರೆ; ಮಾಳವಿಕಾ ಮಾಯಾ ಲೋಕದಲ್ಲಿರೋರು ಯಾರು?

Naa Ninna Bidalare serial latest update: ನಾ ನಿನ್ನ ಬಿಡಲಾರೆ ಧಾರಾವಾಹಿಯು ರೋಚಕ ತಿರುವು ಪಡೆದಿದ್ದು, ಸತ್ತಳೆಂದು ಭಾವಿಸಲಾಗಿದ್ದ ಶರತ್ ತಾಯಿ ದಾಕ್ಷಾಯಿಣಿ ಬದುಕಿರುವುದನ್ನು ಮಾಳವಿಕಾ ಬಹಿರಂಗಪಡಿಸಿದ್ದಾಳೆ. 

2 Min read
Author : Mahmad Rafik
Published : Sep 30 2025, 12:10 PM IST
Share this Photo Gallery
  • FB
  • TW
  • Linkdin
  • Whatsapp
15
ನಾ ನಿನ್ನ ಬಿಡಲಾರೆ ಸೀರಿಯಲ್
Image Credit : Zee Kannada

ನಾ ನಿನ್ನ ಬಿಡಲಾರೆ ಸೀರಿಯಲ್

ನಾ ನಿನ್ನ ಬಿಡಲಾರೆ ಸೀರಿಯಲ್ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ಶರತ್‌ಗೆ ಮಾಳವಿಕಾ ಮಲತಾಯಿ. ಶರತ್ ತಾಯಿ ದಾಕ್ಷಾಯಿಣಿ ನಿಧನದ ಬಳಿಕ ಜಗನ್ನಾಥ್ ಜೊತೆ ಮಾಳವಿಕಾ ಮದುವೆ ಆಗಿದೆ ಅಂತಾನೇ ಎಲ್ಲರೂ ತಿಳಿದುಕೊಂಡಿದ್ದರು. ಇಷ್ಟು ದಿನ ಅದೇ ರೀತಿಯಲ್ಲಿಯೇ ಕಥೆಯನ್ನು ತೋರಿಸಲಾಗಿತ್ತು.

25
ಶರತ್ ತಾಯಿ ದಾಕ್ಷಾಯಿಣಿ
Image Credit : Zee Kannada

ಶರತ್ ತಾಯಿ ದಾಕ್ಷಾಯಿಣಿ

ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಶರತ್ ತಾಯಿ ದಾಕ್ಷಾಯಿಣಿ ಬದುಕಿರೋದನ್ನು ತೋರಿಸಲಾಗಿದೆ. ನನ್ನ ವಿರುದ್ಧ ಮಾತನಾಡಿದವರಿಗೆ ಏನು ಮಾಡುತ್ತೇನೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಮಾಯಾಗೆ ಮಾಳವಿಕಾ ತೋರಿಸಿದ್ದಾಳೆ. ಶರತ್ ತನ್ನನ್ನು ಮದುವೆಯಾಗಲಿಲ್ಲ ಎಂಬ ಹತಾಶೆಯಿಂದ ಮಾಳವಿಕಾ ವಿರುದ್ಧವೇ ಮಾತನಾಡಿದ್ದಾಳೆ.

Related Articles

Related image1
ದೆವ್ವ ಆದ್ಮೇಲೆ ಊಟ-ತಿಂಡಿ ಇಲ್ಲದೇ ಸಣ್ಣ ಆದೆ: ನೀತಾ ಅಶೋಕ್
Related image2
'ನೀಲಿ ಇರತ್ತೆ ಹೆವ್ವಿ ಇರಲ್ಲ-ಅದೇನು' ಪ್ರಶ್ನೆ ಕೇಳಿ ಎಲ್ಲರನ್ನೂ ಸುಸ್ತು ಮಾಡಿದ 'ನಾ ನಿನ್ನ ಬಿಡಲಾರೆ' ದುರ್ಗಾ!
35
ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ
Image Credit : Zee Kannada

ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ

ಮಾಯಾಳ ನಡೆಯಿಂದ ಕೆಂಡವಾದ ಮಾಳವಿಕಾ, ಆಕೆಯನ್ನು ತನ್ನ ಮಾಯಾಲೋಕಕ್ಕೆ ಕರೆದುಕೊಂಡು ಬಂದಿದ್ದಾಳೆ. ಮಾಳವಿಕಾ ಮೇಲೆಯೇ ಮಾಯಾ ಹಲ್ಲೆ ಮಾಡಲು ಬಂದಿದ್ದಳು. ತನ್ನಲ್ಲಿರುವ ಮಾಂತ್ರಿಕ ಶಕ್ತಿಯಿಂದ ಮಾಯಾಳನ್ನು ತಡೆದ ಮಾಳವಿಕಾ, ಕಪಾಳಕ್ಕೆ ಎರಡು ಏಟು ಸಹ ನೀಡಿದ್ದಾಳೆ. ಮಾಳವಿಕಾ ಆಡಿಸೋ ಆಟದ ಗೊಂಬೆ ಅನ್ನೋ ವಿಷಯ ಮಾಯಾಗೆ ಗೊತ್ತಿಲ್ಲ.

ಇದನ್ನೂ ಓದಿ: ಅಂಬಿಕಾ ಸೀರೆ ಧರಿಸಿದ ದುರ್ಗಾಳನ್ನು ನೋಡಿ ವೀಕ್ಷಕರಲ್ಲಿ ಗೊಂದಲ; ಕೊನೆಗೂ ಬಂದ ಮಾಳವಿಕಾ

45
 ಆತ್ಮ
Image Credit : Zee Kannada

ಆತ್ಮ

ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ಆಗಾಗ ಮುಚ್ಚಿದ ಮಡಿಕೆಯನ್ನು ತೋರಿಸಲಾಗುತ್ತದೆ. ಈ ಮಡಿಕೆಯಲ್ಲಿ ಶಂಭು ತಾಯಿಯ ಆತ್ಮವಿದೆ ಎಂದು ತೋರಿಸಲಾಗಿದೆ. ಇನ್ನುಳಿದ ಎರಡು ಮಡಿಕೆಯಲ್ಲಿ ಹಿತಾ ಮತ್ತು ಅಂಬಿಕಾ ಆತ್ಮವನ್ನು ತುಂಬಿಸಿ ಅಮ್ಮನನ್ನು ಅಮರ ಮಾಡೋದು ಮಾಳವಿಕಾಳ ಉದ್ದೇಶವಾಗಿದೆ. ಇದಕ್ಕಾಗಿ ಈ ಹಿಂದೆ ಅಂಬಿಕಾಳ ಆತ್ಮವನ್ನು ಮಾಯಾ ಕನ್ನಡಿಯಲ್ಲಿ ಬಂಧಿಸಿಡಲಾಗಿತ್ತು. ಇದೀಗ ಅದೇ ರೀತಿ ಶರತ್ ತಾಯಿಯನ್ನು ಬಂಧಿಸಿಡಲಾಗಿದೆಯಾ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮನ ಆತ್ಮದ ಜೊತೆ ಪುಟಾಣಿ ಹಿತಾ ತರ್ಲೆ! Naa Ninna Bidalaare ತಾಯಿ-ಮಗಳ ಕ್ಯೂಟ್​ ವಿಡಿಯೋ ವೈರಲ್​

55
ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನ
Image Credit : Zee Kannada

ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನ

ಈ ಪ್ರೋಮೋ ನೋಡಿದ ನೆಟ್ಟಿಗರು, ಓ ದೇವರೇ ಆ ಇನ್ನೊಂದು ಆತ್ಮ ಶಂಭು ಅವ್ರ ಹೆಂಡತಿ ದುರ್ಗಾ,ಅಂಬಿಕಾ ಅವ್ರ ಅಮ್ಮ ಅಂದುಕೊಂಡಿದ್ವಿ. ಆದರೆ ಇದು ಶರತ್ ಅಮ್ಮ ದಾಕ್ಷಾಯಣಿ. ಶಂಭು ಅಂಬಿಕಾ ಮುಂದೆ ದೆವ್ವಗಳ ಆಟ ಮಾಟ ಮಂತ್ರ ತಂತ್ರಗಾರಿಕೆ ನಡೆಯುವುದಿಲ್ಲ ಮಾಳವಿಕಾ ದುಷ್ಟ ಶಕ್ತಿಗಳ ಅಂತ್ಯ ಆಗಲೇಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ನಿಮ್ಮ ನೆಚ್ಚಿನ ಸೀರಿಯಲ್ ನಟರು ಯಾರು? ನಿಮ್ಮ ವೋಟ್​ನಿಂದ ಬೆಸ್ಟ್​ ತಾರೆಯರ ಆಯ್ಕೆ- ಫುಲ್​ ಡಿಟೇಲ್ಸ್​ ಇಲ್ಲಿದೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನಾ ನಿನ್ನ ಬಿಡಲಾರೆ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ
Recommended image2
ಪ್ಯಾನ್‌ ಇಂಡಿಯಾ ನಟಿಯಾದ್ರೂ ಸ್ನೇಹ ಮರೆತಿಲ್ಲ; ಕನ್ನಡ ಸೀರಿಯಲ್‌ ನಟಿಯನ್ನು ಫಾಲೋ ಮಾಡ್ತಿರೋ Rashmika Mandanna
Recommended image3
Photo: ದೀಪಿಕಾ ದಾಸ್‌ ಜನ್ಮದಿನ; ಮುತ್ತಿನಂಥ ಪತ್ನಿಗೆ ಬಂಗಾರ, ವಜ್ರದ ಗಿಫ್ಟ್‌ ಕೊಟ್ಟ ಪತಿ ದೀಪಕ್‌ ಗೌಡ
Related Stories
Recommended image1
ದೆವ್ವ ಆದ್ಮೇಲೆ ಊಟ-ತಿಂಡಿ ಇಲ್ಲದೇ ಸಣ್ಣ ಆದೆ: ನೀತಾ ಅಶೋಕ್
Recommended image2
'ನೀಲಿ ಇರತ್ತೆ ಹೆವ್ವಿ ಇರಲ್ಲ-ಅದೇನು' ಪ್ರಶ್ನೆ ಕೇಳಿ ಎಲ್ಲರನ್ನೂ ಸುಸ್ತು ಮಾಡಿದ 'ನಾ ನಿನ್ನ ಬಿಡಲಾರೆ' ದುರ್ಗಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved