- Home
- Entertainment
- TV Talk
- Karna Serial: ವಿಲನ್ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು
Karna Serial: ವಿಲನ್ ಕುತಂತ್ರಕ್ಕೆ ನಿಧಿ ಇದ್ದ ಕಾರು ಧಗಧಗ- ಕುಸಿದು ಬಿದ್ದ ಕರ್ಣ! ಮುಂದಾಗಿದ್ದು ಊಹಿಸದ ತಿರುವು
ಕರ್ಣ ಧಾರಾವಾಹಿಯಲ್ಲಿ, ನಿಧಿಯಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ನಿಧಿ ಸತ್ತೇ ಹೋದಳೆಂದು ಕರ್ಣ ಆಘಾತಕ್ಕೆ ಒಳಗಾಗುತ್ತಾನೆ. ಆದರೆ, ಅಲ್ಲಾಗಿದ್ದೇ ಬೇರೆ. ನಿಧಿ ಏನಾದಳು? ರೋಚಕ ತಿರುವು ಇಲ್ಲಿದೆ!

ರೋಚಕ ಟ್ವಿಸ್ಟ್
ಕರ್ಣ ಸೀರಿಯಲ್ (Karna Serial) ಇದೀಗ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಅತ್ತ ನಿತ್ಯಾ, ನಿಧಿ, ತೇಜಸ್ ಅಥವಾ ಕರ್ಣ ಯಾರನ್ನಾದರೂ ಮುಗಿಸಲು ವಿಲನ್ಗಳು ಸ್ಕೆಚ್ ಹಾಕುತ್ತಲೇ ಇದ್ದಾರೆ.
ಅವಘಡ
ಅದೇ ಇನ್ನೊಂದೆಡೆ, ಈ ನಾಲ್ವರೂ ಬೇರೆ ಊರಿಗೆ ಹೋದಾಗ ಒಂದರ ಮೇಲೊಂದರಂತೆ ಅವಘಡಗಳು ಸಂಭವಿಸುತ್ತಿವೆ. ನಯನತಾರಾ ಮೊದಲು ನಿತ್ಯಾಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದಳು. ಆದರೆ ಕರ್ಣ ಬಂದು ರಕ್ಷಿಸಿದ್ದ.
ಐಸ್ಕ್ರೀಮ್ ತಿನ್ನುವ ಆಸೆ
ಇದೀಗ ನಿತ್ಯಾಳಿಗೆ ಐಸ್ಕ್ರೀಮ್ ತಿನ್ನುವ ಆಸೆಯಾಗಿತ್ತು. ಅದನ್ನು ತರಲು ಕರ್ಣ ಮತ್ತು ನಿಧಿ ಹೋಗಿದ್ದರು. ಸುಪಾರಿ ಪಡೆದುಕೊಂಡಿರುವ ವಿಲನ್ ಇದನ್ನೇ ಬಂಡವಾಳ ಮಾಡಿಕೊಂಡ.
ಕಾರು ಧಗಧಗ
ನಿಧಿ ಕಾರಿನಲ್ಲಿ ಇದ್ದಳು. ಕರ್ಣ ಇಳಿದು ಐಸ್ಕ್ರೀಮ್ ತರಲು ಹೋದಾಗ, ಲಾರಿಯಿಂದ ನಿಧಿ ಇರುವ ಕಾರಿಗೆ ಗುದ್ದಿಸಿದ್ದಾನೆ. ಕಾರು ಧಗಧಗ ಹೊತ್ತಿ ಉರಿದಿದೆ.
ನೆಲವೇ ಅಲುಗಾಡಿದೆ
ಇದನ್ನು ನೋಡಿದ ಕರ್ಣನ ನೆಲವೇ ಅಲುಗಾಡಿ ಹೋಗಿದೆ. ಓಡೋಡಿ ಬಂದು ಕಾರಿನಲ್ಲಿ ನೋಡಿದಾಗ ಅಲ್ಲಿಂದ ಸೌಂಡ್ ಬರಲಿಲ್ಲ. ತನ್ನ ಪ್ರಾಣವನ್ನೂ ಲೆಕ್ಕಿಸದೇ ಆತ ಗ್ಲಾಸ್ ಒಡೆಯಲು ಮುಂದಾದಾಗ ಗಾಜಿನ ಚೂರುಗಳೆಲ್ಲಾ ಕೈಹೊಕ್ಕಿದೆ.
ಬಿಕ್ಕಿ ಬಿಕ್ಕಿ ಅತ್ತ
ಆದರೆ, ಅದೇ ಇನ್ನೊಂದೆಡೆ, ಅದಾಗಲೇ ಕಾರಿನಿಂದ ಇಳಿದುಹೋಗಿದ್ದ ನಿಧಿ ಬಂದಾಗ, ಕರ್ಣನಿಗೆ ಮಾತೇ ಹೊರಳದೆ ಆಕೆಯನ್ನು ತಬ್ಬಿ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ನಿಮ್ಮನ್ನು ಮತ್ತೊಮ್ಮೆ ಕಳೆದುಕೊಳ್ಳಲು ನಾನು ತಯಾರಿಲ್ಲ ಎಂದಿದ್ದಾರೆ.
ಜೋಡಿಗೆ ಆತಂಕ
ಒಟ್ಟಿನಲ್ಲಿ, ಕ್ಷಣ ಕ್ಷಣಕ್ಕೂ ಈ ಜೋಡಿಗೆ ಆತಂಕ ಎದುರಾಗಿದೆ. ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಭಯವಿದೆ. ಅದೇ ಇನ್ನೊಂದೆಡೆ, ಕರ್ಣ ನಿತ್ಯಾಳ ಮೇಲೆ ತೋರಿಸುತ್ತಿರುವ ಪ್ರೀತಿ ತೇಜಸ್ಗೆ ಹೊಟ್ಟೆ ಉರಿ ತರಿಸುತ್ತಿರುವುದು ಕೂಡ ಮುಂದೇನಾಗತ್ತೆ ಎಂದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

