MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial ವಿಲನ್​ ಎಷ್ಟು ಸ್ಮಾರ್ಟ್​ ​ ಅಲ್ವಾ ಅಂದ್ಕೊಂಡಿದ್ದೆ, ಕೊನೆಗೆ ಅವ್ರಿಗೇ ಜೋಡಿ ಆಗ್ಬಿಟ್ಟೆ: ರಿಯಾ ಮಾತು

Karna Serial ವಿಲನ್​ ಎಷ್ಟು ಸ್ಮಾರ್ಟ್​ ​ ಅಲ್ವಾ ಅಂದ್ಕೊಂಡಿದ್ದೆ, ಕೊನೆಗೆ ಅವ್ರಿಗೇ ಜೋಡಿ ಆಗ್ಬಿಟ್ಟೆ: ರಿಯಾ ಮಾತು

'ಕರ್ಣ' ಧಾರಾವಾಹಿಯ ಖಳನಾಯಕ ಸಂಜಯ್ ಪಾತ್ರಧಾರಿ ವಿನಯ್ ಕಶ್ಯಪ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಅವರಿಗೆ ನಾಯಕಿಯಾಗಿರುವ ರಿಯಾ ಪಾತ್ರಧಾರಿ ಅಂಕಿತಾ ಜಯರಾಮ್, ಈ ಹಿಂದೆ ಸಂಜಯ್ ಪಾತ್ರವನ್ನು ಮೆಚ್ಚಿಕೊಂಡಿದ್ದರಂತೆ. ಈ ಲೇಖನವು ಅಂಕಿತಾ ಅವರ ನಟನಾ ಪಯಣ ಮತ್ತು ಶೈಕ್ಷಣಿಕ ಸಾಧನೆ ವಿವರಿಸುತ್ತದೆ.

2 Min read
Author : Suchethana D
Published : Jul 13 2026, 03:20 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ಸೀರಿಯಲ್​ ಸ್ಮಾರ್ಟ್​ ವಿಲನ್​
Image Credit : Instagram

ಕರ್ಣ ಸೀರಿಯಲ್​ ಸ್ಮಾರ್ಟ್​ ವಿಲನ್​

ಕರ್ಣ ಸೀರಿಯಲ್​ನಲ್ಲಿ ವಿಲನ್​ ಸಂಜಯ್​ ಉರ್ಫ್​ ನಟ ವಿನಯ್​ ಕಶ್ಯಪ್ ಸಿಂಹ ಅವರು ಹಲವು ಯುವತಿಯರ ಕ್ರಷ್​ ಆಗಿದ್ದಾರೆ. ಇವರು ಸೀರಿಯಲ್​ನಲ್ಲಿ ವಿಲನ್​ ಆದ್ರೂ, ಇವರಿಗೆ ವಿಲನ್​ ರೋಲ್​ ಸ್ಯೂಟ್​ ಆಗಲ್ಲ, ಸೋ ಕ್ಯೂಟ್​ ಎಂದೆಲ್ಲಾ ನೆಟ್ಟಿಗರು ಕಮೆಂಟ್​ ಮಾಡುವುದನ್ನು ನೋಡಿದ್ರೆ ಇವರ ಮೇಲೆ ಕ್ರೇಜ್​ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಇಂತಿಪ್ಪ ವಿಲನ್​ ಸಂಜಯ್​ ಇದೀಗ ಸೀರಿಯಲ್​ನಲ್ಲಿ ರಿಯಾಳನ್ನು ಮೋಸದಿಂದ ಪ್ರೀತಿಸಿ ಪ್ರೆಗ್ನೆಂಟ್​ ಮಾಡಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಆದರೆ ಕರ್ಣ ಅದಕ್ಕೆ ಅವಕಾಶ ಕೊಡದೇ ಸಂಜಯ್​ ಜೊತೆ ರಿಯಾಳ ಮದುವೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೇ ತನ್ನ ಪಾಲಿನ ಆಸ್ತಿ ಸಂಜಯ್​ಗೆ ಬರಬೇಕು ಎಂದರೆ ರಿಯಾಳನ್ನು ಒಂದು ವರ್ಷ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ರಿಯಾಳದ್ದು ಕಣ್ಣೀರ ಸ್ಟೋರಿ
Image Credit : Instagram

ರಿಯಾಳದ್ದು ಕಣ್ಣೀರ ಸ್ಟೋರಿ

ಸದ್ಯ ಸೀರಿಯಲ್​ನಲ್ಲಿ ರಿಯಾಳದ್ದು ಕಣ್ಣೀರಿನ ಸ್ಟೋರಿ. ರಿಯಾ ಪಾತ್ರ ಮಾಡುತ್ತಿರುವ ನಟಿಯ ಹೆಸರು ಅಂಕಿತಾ ಜಯರಾಮ್​ (Ankita Jayaram) ಈಚೆಗಷ್ಟೇ ದ್ವಿತೀಯ ಪಿಯುಸಿಯನ್ನು ಕರ್ಣ ಸೀರಿಯಲ್​ ಮಾಡುತ್ತಲೇ ಅತಿ ಹೆಚ್ಚು ಅಂಕದೊಂದಿಗೆ ಮುಗಿಸಿ ಮನೆಮಾತಾದವರು 18ರ ಹರೆಯದ ಅಂಕಿತಾ. ದ್ವಿತೀಯ ಪಿಯುಸಿಯಲ್ಲಿ ಶೇ.97 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.

Related Articles

Related image1
Amruthadhaare: ಗೌತಮ್​ಗೆ ಗೊತ್ತಾಯ್ತು ಮಹಾಸತ್ಯ- ವೈದ್ಯರ ಮಾತು ನಂಬಿ ವೀಕ್ಷಕರಿಂದ ಗೂಗಲ್​ ಹುಡುಕಾಟ
Related image2
ಡಿವೋರ್ಸ್​ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು
36
ಸಂಜಯ್ ಪಾತ್ರದ ಬಗ್ಗೆ ಮೆಚ್ಚುಗೆ
Image Credit : Instagram

ಸಂಜಯ್ ಪಾತ್ರದ ಬಗ್ಗೆ ಮೆಚ್ಚುಗೆ

ಇದೀಗ ಅವರ ಸಂದರ್ಶನವೊಂದರಲ್ಲಿ ರಿಯಾ ಪಾತ್ರದ ಕುರಿತು ಮಾತನಾಡಿದ್ದಾರೆ. ಕರ್ಣ ಸೀರಿಯಲ್​ ಅನ್ನು ಮೊದಲಿನಿಂದಲೂ ನೋಡುತ್ತಿದ್ದೆ. ಸಂಜಯ್​ ಪಾತ್ರ ನೋಡಿದಾಗ ಸೋ ಕ್ಯೂಟ್​, ಎಷ್ಟೊಂದು ಚೆನ್ನಾಗಿದ್ದಾರಲ್ವಾ ಎನ್ನಿಸಿತು. ಕೊನೆಗೆ ಅಚ್ಚರಿ ಎಂದರೆ,, ಅವರಿಗೇ ನಾಯಕಿಯಾಗಿ ಸೆಲೆಕ್ಟ್​ ಆಗಿಬಿಟ್ಟೆ. ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.

46
ಎರಡು ವಿಭಿನ್ನ ಕ್ಯಾರೆಕ್ಟರ್​
Image Credit : Facebook

ಎರಡು ವಿಭಿನ್ನ ಕ್ಯಾರೆಕ್ಟರ್​

ಆರಂಭದಲ್ಲಿ ರಿಯಾ ಪಾತ್ರ, ಸಂಜಯ್​ಗೆ ಕಾಟ ಕೊಡುವುದು ಆಗಿತ್ತು. ಸಂಜಯ್​ಗೆ ಕಾಟ ಕೊಡುವವರು ಯಾರೂ ಇಲ್ಲ ಎನ್ನುವ ಸಮಯದಲ್ಲಿ ನನ್ನ ಎಂಟ್ರಿ ಆಗಿತ್ತು. ಆದರೆ ಇದೀಗ ಮದುವೆಯಾದ ಮೇಲೆ ಗೋಳಿನ ಸ್ಟೋರಿ. ರಿಯಾಳನ್ನು ಕೇಳುವವರು ಯಾರೂ ಇಲ್ಲ ಎನ್ನುವಂಥ ನೋವು ಎಂದಿರೋ ನಟಿ, ಈ ಎರಡೂ ವಿಭಿನ್ನ ಕ್ಯಾರೆಕ್ಟರ್​ ನನಗೆ ತುಂಬಾ ಇಷ್ಟವಾಗ್ತಿದೆ ಎಂದಿದ್ದಾರೆ.

56
ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಬಾಲನಟಿ
Image Credit : Facebook

ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಬಾಲನಟಿ

ಇನ್ನು ನಟಿ ಅಂಕಿತಾ ಜಯರಾಮ್​ ಅವರ ಕುರಿತು ಹೇಳುವುದಾದರೆ,, ಇದಾಗಲೇ ಹಲವು ಸಿನಿಮಾಗಳಲ್ಲಿ, ಸೀರಿಯಲ್ ಗಳಲ್ಲಿ ಬಾಲ ನಟಿಯಾಗಿ ನಟಿಸಿ, ವೀಕ್ಷಕರ ಮನ ಗೆದ್ದವರು. ಇವರು ಈ ಹಿಂದೆ ನವೀನ್ ಕೃಷ್ಣ ನಟಿಸಿ, ನಿರ್ದೇಶನ ಮಾಡಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಅವರ ಮಗಳು ಪ್ರಣೀತಾ ಪಾತ್ರದಲ್ಲಿ ನಟಿಸಿದ್ದರು. ಆಗಲೂ ನಾಡಿನ ಜನತೆಯ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಳು. ಆಗ ತಾನು ಅಭ್ಯಾಸ ಮಾಡುತ್ತಿದ್ದಂತೆ, ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಳು.

66
ಸ್ಟಾರ್​ ನಟರ ಜೊತೆಯೂ ಪಾತ್ರ
Image Credit : Instagram

ಸ್ಟಾರ್​ ನಟರ ಜೊತೆಯೂ ಪಾತ್ರ

ಅಂಕಿತಾ ಅವರು ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ ಮೊದಲಾದ ಸ್ಟಾರ್ ನಟರ ಸಿನಿಮಾಗಳಾದ ಭರಾಟೆ, ಕ್ರಾಂತಿ, ಯುವರತ್ನ, ರತ್ನನ್ ಪ್ರಪಂಚ, ವೇದ, ಶೋಕಿವಾಲ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ವಿಜಯ್ ರಾಘವೇಂದ್ರ ಅಭಿನಯದ ‘ಹಕೂನ ಮಟಾಟ’ ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಇದೀಗ ಕಳೆದ ವರ್ಷ ಬಿಡುಗಡೆಯಾದ ‘ಕಾಗದ’ ಎನ್ನುವ ಸಿನಿಮಾದಲ್ಲಿ ಅಂಕಿತಾ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಟೀನೇಜ್ ಪ್ರೇಮಕತೆಯಾಗಿದ್ದು, ಈ ಸಿನಿಮಾದಲ್ಲಿ ಅಂಕಿತಾ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಜೀ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು

Latest Videos
Recommended Stories
Recommended image1
ಡಿವೋರ್ಸ್​ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು
Recommended image2
Amruthadhaare: ಗೌತಮ್​ಗೆ ಗೊತ್ತಾಯ್ತು ಮಹಾಸತ್ಯ- ವೈದ್ಯರ ಮಾತು ನಂಬಿ ವೀಕ್ಷಕರಿಂದ ಗೂಗಲ್​ ಹುಡುಕಾಟ
Recommended image3
'ಇವನು ನನ್ನವನು' ಎಂದು ಬಾಯ್‌ಫ್ರೆಂಡ್‌ ಮೇಲೆ ಜಿಗಿದ Dhurandhar Movie ಗಾಯಕಿ; ನಾಚಿ ನೀರಾದ ಪ್ರಿಯತಮ!
Related Stories
Recommended image1
Amruthadhaare: ಗೌತಮ್​ಗೆ ಗೊತ್ತಾಯ್ತು ಮಹಾಸತ್ಯ- ವೈದ್ಯರ ಮಾತು ನಂಬಿ ವೀಕ್ಷಕರಿಂದ ಗೂಗಲ್​ ಹುಡುಕಾಟ
Recommended image2
ಡಿವೋರ್ಸ್​ ಕುರಿತು ಮನದ ಮಾತು ತೆರೆದಿಟ್ಟ 'ಕುಲವಧು' ಧನ್ಯಾ ದೀಪಿಕಾ: ಸಂಬಂಧದ ಬಗ್ಗೆ ನಟಿ ಹೇಳಿದ್ದೇನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved