MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • 'ಇವನು ನನ್ನವನು' ಎಂದು ಬಾಯ್‌ಫ್ರೆಂಡ್‌ ಮೇಲೆ ಜಿಗಿದ Dhurandhar Movie ಗಾಯಕಿ; ನಾಚಿ ನೀರಾದ ಪ್ರಿಯತಮ!

'ಇವನು ನನ್ನವನು' ಎಂದು ಬಾಯ್‌ಫ್ರೆಂಡ್‌ ಮೇಲೆ ಜಿಗಿದ Dhurandhar Movie ಗಾಯಕಿ; ನಾಚಿ ನೀರಾದ ಪ್ರಿಯತಮ!

ಪಂಜಾಬಿ ಚಿತ್ರರಂಗದ ಖ್ಯಾತ ಗಾಯಕಿ ಜಾಸ್ಮಿನ್ ಸಂಡ್ಲಾಸ್ ತಮ್ಮ ಅಭಿಮಾನಿಗಳಿಗೆ ಎಂದಿಗೂ ಮರೆಯಲಾಗದ ಬಿಗ್ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ. ದೆಹಲಿಯಲ್ಲಿ ನಡೆದ ಲೈವ್ ಕಾನ್ಸರ್ಟ್‌ನಲ್ಲಿ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಅಧಿಕೃತವಾಗಿ ಹೇಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ.

1 Min read
Author : Padmashree Bhat
Published : Jul 12 2026, 05:40 PM IST
Share this Photo Gallery
  • FB
  • TW
  • Linkdin
  • Whatsapp
15
ದೆಹಲಿ ಸಂಗೀತ ಕಾರ್ಯಕ್ರಮದಲ್ಲಿ ಅನಿರೀಕ್ಷಿತ ತಿರುವು
Image Credit : jasmine sandlas instagram

ದೆಹಲಿ ಸಂಗೀತ ಕಾರ್ಯಕ್ರಮದಲ್ಲಿ ಅನಿರೀಕ್ಷಿತ ತಿರುವು

ಶನಿವಾರ (ಜುಲೈ 11) ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ದಿ ಡ್ರೀಮ್ ಗರ್ಲ್ ಇಂಡಿಯಾ ಟೂರ್' ಸಂಗೀತ ಕಾರ್ಯಕ್ರಮದ ಉದ್ಘಾಟನಾ ದಿನದಂದೇ ಈ ವಿಶೇಷ ಘಟನೆ ನಡೆದಿದೆ. ಸಹಸ್ರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರದರ್ಶನ ನೀಡುತ್ತಿದ್ದ ಜಾಸ್ಮಿನ್, ಶೋ ಮಧ್ಯದಲ್ಲೇ ತಮಗೆ ಎಂಗೇಜ್‌ಮೆಂಟ್ ಆಗಿರುವ ವಿಚಾರವನ್ನು ಹಂಚಿಕೊಂಡರು. ಅಷ್ಟೇ ಅಲ್ಲದೆ, ತಮ್ಮ ಭಾವಿ ಪತಿ ಶೇಖರ್ ಚೌಧರಿ ಅವರನ್ನು ವೇದಿಕೆಗೆ ಕರೆತಂದು ಎಲ್ಲರಿಗೂ ಪರಿಚಯಿಸಿದರು. ಈ ಅನಿರೀಕ್ಷಿತ ಕ್ಷಣಕ್ಕೆ ಸಾಕ್ಷಿಯಾದ ಅಭಿಮಾನಿಗಳು ಹರ್ಷೋದ್ಗಾರ ಮುಗಿಲುಮುಟ್ಟಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
"ಇವರೇ ನನ್ನವರು!"
Image Credit : jasmine sandlas instagram

"ಇವರೇ ನನ್ನವರು!"

ಕಾರ್ಯಕ್ರಮದ ಅತ್ಯಂತ ಹೈಲೈಟ್ ಕ್ಷಣ ಎಂದರೆ, ಜಾಸ್ಮಿನ್ ತಮ್ಮ ಕೈಯಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ಅಭಿಮಾನಿಗಳಿಗೆ ತೋರಿಸಿ ಖುಷಿ ಹಂಚಿಕೊಂಡಿದ್ದು.

"ನನಗೆ ಉಂಗುರ ತೊಡಿಸಿದ ವ್ಯಕ್ತಿ ಇವರೇ. ಇವರೇ ನನ್ನವರು!" ಎಂದು ಜಾಸ್ಮಿನ್ ಹೆಮ್ಮೆಯಿಂದ ಘೋಷಿಸಿದರು.

ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ, ಜಾಸ್ಮಿನ್ ಓಡಿಹೋಗಿ ಶೇಖರ್ ಅವರನ್ನು ತಬ್ಬಿಕೊಂಡರು. ಶೇಖರ್ ಕೂಡ ಜಾಸ್ಮಿನ್ ಅವರನ್ನು ಎತ್ತಿಕೊಂಡು ವೇದಿಕೆಯಲ್ಲೇ ಗಿರಕಿ ಹೊಡೆಸಿದರು. ಈ ಭಾವನಾತ್ಮಕ ಮತ್ತು ಸಿನಿಮೀಯ ದೃಶ್ಯ ನೆರೆದಿದ್ದವರ ಮನಗೆದ್ದಿತು.

Related Articles

Related image1
ಕಾಲು ನೋವು ತೋರಿಸಲು ಬಂದಿದ್ದ ಗಾಯಕಿ ಎಸ್‌ ಜಾನಕಿ ಸಾವು ಕಂಡಿದ್ದು ಹೇಗೆ? ಖಾಸಗಿ ಆಸ್ಪತ್ರೆ ಹೇಳಿದ್ದಿಷ್ಟು..
Related image2
S Janaki: ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಹೊಂದಿದ್ದ ಗಾಯಕಿ ಇನ್ನು ನೆನಪು ಮಾತ್ರ!
35
'ಲಾವಾ' ಹಾಡಿಗೆ ಮನಮೋಹಕ ನೃತ್ಯ
Image Credit : jasmine sandlas instagram

'ಲಾವಾ' ಹಾಡಿಗೆ ಮನಮೋಹಕ ನೃತ್ಯ

ಖುಷಿಯ ಬೆನ್ನಲ್ಲೇ ಈ ಜೋಡಿ ಜಾಸ್ಮಿನ್ ಅವರದ್ದೇ ಸೂಪರ್ ಹಿಟ್ 'ಲಾವಾ' ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿತು. ಇದು ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬದಂತಿತ್ತು.

45
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳು
Image Credit : jasmine sandlas instagram

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳು

ಎಂಗೇಜ್‌ಮೆಂಟ್ ಘೋಷಣೆ ಹಾಗೂ ವೇದಿಕೆ ಮೇಲಿನ ಈ ಜೋಡಿಯ ಸಂಭ್ರಮಾಚರಣೆಯ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರು ಕಾಮೆಂಟ್ ಸೆಕ್ಷನ್‌ನಲ್ಲಿ ಈ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಅನೇಕರು ಈ ಕ್ಷಣವನ್ನು 'ಬ್ಯೂಟಿಫುಲ್', 'ಹೋಲ್ಸಮ್' ಮತ್ತು 'ಪಕ್ಕಾ ಸಿನಿಮೀಯ ದೃಶ್ಯ' ಎಂದು ಬಣ್ಣಿಸುತ್ತಿದ್ದಾರೆ.

55
ವೈಯಕ್ತಿಕ ಗುಟ್ಟು ರಟ್ಟು
Image Credit : jasmine sandlas instagram

ವೈಯಕ್ತಿಕ ಗುಟ್ಟು ರಟ್ಟು

ತಮ್ಮ ಇಂಡಿಯಾ ಟೂರ್‌ನ ಮೊದಲ ಶೋನಲ್ಲೇ ವೈಯಕ್ತಿಕ ಜೀವನದ ದೊಡ್ಡ ಗುಟ್ಟನ್ನು ರಟ್ಟು ಮಾಡಿದ ಜಾಸ್ಮಿನ್, ಸಂಗೀತ ಪ್ರೇಮಿಗಳಿಗೆ ಮರೆಯಲಾಗದ ಅನುಭವ ನೀಡಿದ್ದಾರೆ. ಜಾಸ್ಮಿನ್ ಸಂಡ್ಲಾಸ್ ಮತ್ತು ಶೇಖರ್ ಚೌಧರಿ ಅವರ ಈ ಹೊಸ ಪಯಣಕ್ಕೆ ಎಲ್ಲೆಡೆಯಿಂದ ಪ್ರೀತಿಯ ಹಾರೈಕೆಗಳು ಹರಿದುಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಸೆಲೆಬ್ರಿಟಿಗಳು
ಮನರಂಜನಾ ಸುದ್ದಿ
ಭಾರತ ಸುದ್ದಿ
ಸುದ್ದಿ

Latest Videos
Recommended Stories
Recommended image1
ಇಟಲಿಯಲ್ಲಿ ಕನ್ನಡತಿ… ಫೋಟೊ ತೆಗೆದಿದ್ದು ಯಾರು ಎಂದವರಿಗೆ ಕ್ಲೂ ಕೊಟ್ಟ ರಂಜನಿ ರಾಘವನ್
Recommended image2
JDS ಸೇರಿದ ಬೆನ್ನಲ್ಲೇ ಮಾನವೀಯತೆ ಮೆರೆದ 'ಬಿಗ್‌ ಬಾಸ್‌' ಜಾನ್ವಿ: ಕಷ್ಟದಲ್ಲಿದ್ದ ಅತ್ತೆ-ಮಾವನಿಗೆ ನೆರವಾದ ನಟಿ
Recommended image3
ಇನ್ನೊಂದ್ವರ್ಷ ಮಗು ಬಗ್ಗೆ ಕೇಳ್ಬೇಡಿ ಅಂದಿದ್ದೆ, ಮರು ದಿನವೇ ಪ್ರೆಗ್ನೆಂಟ್​! ಘಟನೆ ನೆನೆದ ನಟಿ ಲಾವಣ್ಯ ಭಾರಧ್ವಾಜ್​
Related Stories
Recommended image1
ಕಾಲು ನೋವು ತೋರಿಸಲು ಬಂದಿದ್ದ ಗಾಯಕಿ ಎಸ್‌ ಜಾನಕಿ ಸಾವು ಕಂಡಿದ್ದು ಹೇಗೆ? ಖಾಸಗಿ ಆಸ್ಪತ್ರೆ ಹೇಳಿದ್ದಿಷ್ಟು..
Recommended image2
S Janaki: ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಹೊಂದಿದ್ದ ಗಾಯಕಿ ಇನ್ನು ನೆನಪು ಮಾತ್ರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved