MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!

ಕನ್ನಡ ಸೀರಿಯಲ್‌ಗಳಲ್ಲಿ ಜ್ಯೋತಿಷಿಗಳನ್ನು ವಂಚಕರಂತೆ ಚಿತ್ರಿಸಲಾಗುತ್ತಿದೆ. ಕರ್ಣ ಸೀರಿಯಲ್‌ನಲ್ಲಿ, ವಿಲನ್ ರಮೇಶ್ ಜ್ಯೋತಿಷಿಗೆ ಲಂಚ ನೀಡಿ, ಕರ್ಣ ಮತ್ತು ನಿತ್ಯಾಳ ಮದುವೆಯನ್ನು ಬಲವಂತವಾಗಿ ಮಾಡಲು ಸುಳ್ಳು ಶಾಸ್ತ್ರ ಹೇಳಿಸುತ್ತಾನೆ. ಈ ಕುರಿತು ವೀಕ್ಷಕರು ಭಾರಿ ಅಸಮಾಧಾನ ಹೊರಹಾಕಿದ್ದಾರೆ. 

2 Min read
Suchethana D
Published : Dec 09 2025, 05:21 PM IST
Share this Photo Gallery
  • FB
  • TW
  • Linkdin
  • Whatsapp
18
ವಂಚಕರಾಗಿ ಜ್ಯೋತಿಷಿಗಳು!
Image Credit : Instagram

ವಂಚಕರಾಗಿ ಜ್ಯೋತಿಷಿಗಳು!

ಸಾಮಾನ್ಯವಾಗಿ ನಿಜ ಜೀವನದಲ್ಲಿಯೂ ಶುಭ ಕಾರ್ಯಗಳನ್ನು ಮಾಡುವಾಗ ಜ್ಯೋತಿಷಿಗಳ ಮೊರೆ ಹೋಗುವುದು ಸಾಮಾನ್ಯ. ಅದರಲ್ಲಿಯೂ ಮದುವೆಯಂಥ ಕಾರ್ಯಗಳಲ್ಲಿ ತಿಥಿ, ಗಳಿಗೆ ಎಲ್ಲವನ್ನೂ ನೋಡಿ ಮದುವೆ ಮುಹೂರ್ತ ಫಿಕ್ಸ್​ ಮಾಡುವುದೂ ಇವರೇ. ಆದರೆ ಇದೀಗ ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಜ್ಯೋತಿಷಿಗಳನ್ನು ಮಹಾ ವಂಚಕರಂತೆ ತೋರಿಸಲಾಗುತ್ತಿದೆ!

28
ಕರ್ಣದಲ್ಲೂ ಇದೇ ಸ್ಟೋರಿ
Image Credit : zee5

ಕರ್ಣದಲ್ಲೂ ಇದೇ ಸ್ಟೋರಿ

ಇದೀಗ ಕರ್ಣ ಸೀರಿಯಲ್​ (Karna Serial)ನಲ್ಲಿಯೂ ಇದೇ ಸ್ಟೋರಿ. ಇದಾಗಲೇ ಬಹುತೇಕ ಸೀರಿಯಲ್​ಗಳಲ್ಲಿ ವಿಲನ್​ಗಳು ಜ್ಯೋತಿಷಿಗಳಿಗೆ ಲಂಚ ನೀಡಿ ನಾಯಕ-ನಾಯಕಿಯನ್ನು ಬೇರೆ ಬೇರೆ ಮಾಡುವುದು ನಡೆದೇ ಇದೆ. ಅದರಲ್ಲಿಯೂ ಹೆಚ್ಚಾಗಿ ಅವರಿಬ್ಬರೂ ದೈಹಿಕ ಸಂಬಂಧ ಮಾಡಬಾರದು ಎಂದು ಸುಳ್ಳು ಜ್ಯೋತಿಷ ಹೇಳಿಸುವುದು ಸೀರಿಯಲ್​ಗಳಲ್ಲಿ ಸರ್ವೇ ಸಾಮಾನ್ಯವಾಗಿದೆ.

Related Articles

Related image1
Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
Related image2
Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?
38
ಕರ್ಣ- ನಿತ್ಯಾ ಮದುವೆ!
Image Credit : Instagram

ಕರ್ಣ- ನಿತ್ಯಾ ಮದುವೆ!

ಇದಕ್ಕಿಂತ ತುಸು ಭಿನ್ನ ಎನ್ನುವಂತೆ ಕರ್ಣ ಸೀರಿಯಲ್​ನಲ್ಲಿ ಕರ್ಣ ಮತ್ತು ನಿತ್ಯಾಳ ಮದುವೆ ಮಾಡಿಸಲು ವಿಲನ್​ ಮುಂದಾಗಿದ್ದಾನೆ. ಕರ್ಣನ ತಂದೆ ರಮೇಶ್ ಮಾಡಿರುವ ಕುತಂತ್ರದಿಂದ ಇದೀಗ ಕರ್ಣ ಮತ್ತು ನಿತ್ಯಾ ನಿಜವಾಗಿಯೂ ಮದುವೆಯಾಗಬೇಕಾಗಿದೆ.

48
ನಿತ್ಯಾ ಒಡಲ ಗುಟ್ಟು
Image Credit : zee5, Namratha gowda

ನಿತ್ಯಾ ಒಡಲ ಗುಟ್ಟು

ಇದಾಗಲೇ ಇವರಿಬ್ಬರ ಮದುವೆಯಾಗಿರುವುದಾಗಿ ಎಲ್ಲರೂ ನಂಬಿದ್ದಾರೆ. ಆದರೆ ಅಸಲಿಗೆ ನಿಧಿ ಗರ್ಭಿಣಿಯಾಗಿರುವುದರಿಂದ ಆಕೆಯನ್ನು ರಕ್ಷಿಸಲು ಕರ್ಣ ಮದುವೆಯಾದಂತೆ ನಾಟಕ ಮಾಡಿದ್ದಾನೆ. ಇದರಲ್ಲಿ ನಿಧಿನೇ ತನ್ನ ಕೊರಳಿಗೆ ತಾಳಿ ಕಟ್ಟಿಕೊಂಡಿದ್ದಾಳೆ.

58
ರಮೇಶನ ಪ್ಲ್ಯಾನ್​
Image Credit : Instagram

ರಮೇಶನ ಪ್ಲ್ಯಾನ್​

ಈ ಸತ್ಯ ರಮೇಶ್​ಗೆ ಗೊತ್ತಿದೆ. ನಿಧಿ ಮತ್ತು ಕರ್ಣ ಲವ್​ ಮಾಡ್ತಿರೋದೂ ಗೊತ್ತಿದೆ. ಆದ್ದರಿಂದ ಅವರಿಗೆ ಹಿಂಸೆ ಕೊಡುವುದಕ್ಕಾಗಿಯೇ ಈ ಪ್ಲ್ಯಾನ್​ ಮಾಡಿದ್ದಾನೆ.

68
ಅಶುಭ ಎಂದ ಜ್ಯೋತಿಷಿ
Image Credit : Instagram

ಅಶುಭ ಎಂದ ಜ್ಯೋತಿಷಿ

ನಿತ್ಯಾಳ ಕುತ್ತಿಗೆಯಲ್ಲಿ ಇದ್ದ ತಾಳಿಯನ್ನು ಆಕೆ ಮಲಗಿದಾಗ ಗಾಯಬ್​ ಮಾಡಿ, ಅದು ಬಿದ್ದುಹೋಗಿರುವುದಾಗಿ ನಟಿಸಲಾಗಿದೆ. ಈ ಸಂದರ್ಭದಲ್ಲಿ ಜ್ಯೋತಿಷಿಗೆ ದುಡ್ಡು ಕೊಟ್ಟು ಕರೆಸಿದ್ದಾನೆ ರಮೇಶ. ಅವನು ತನಗೆ ಎಲ್ಲವೂ ಗೊತ್ತಿರುವ ಹಾಗೆ ನಾಟಕ ಮಾಡಿ, ಮಂಗಳಸೂತ್ರ ಕಿತ್ತು ಹೋಗಿರುವುದು ಅಶುಭ ಎಂದಿದ್ದಾನೆ.

78
ಎರಡೇ ದಿನಗಳಲ್ಲಿ ಮದುವೆ
Image Credit : Instagram

ಎರಡೇ ದಿನಗಳಲ್ಲಿ ಮದುವೆ

ಎರಡು ದಿನಗಳಲ್ಲಿ ಶುಭ ಮುಹೂರ್ತ ಇದ್ದು, ಮತ್ತೊಮ್ಮೆ ಕರ್ಣ ನಿತ್ಯಾಳಿಗೆ ತಾಳಿ ಕಟ್ಟಿದರೆ ಎಲ್ಲವೂ ಸರಿಯಾಗುತ್ತೆ ಎಂದಿದ್ದಾನೆ. ಅಲ್ಲಿಗೆ ಕರ್ಣ ಅಜ್ಜಿಗೆ ಖುಷಿಯಾಗಿದೆ. ಇದೇ ವೇಳೆ ರಮೇಶ್​ ಈ ಜ್ಯೋತಿಷಿಯತ್ತ ಓರೆನೋಟ ಬೀರಿ, ಧನ್ಯವಾದ ಸಲ್ಲಿಸಿದ್ದಾನೆ.

88
ವಿಲನ್ ಯಾಕೆ?
Image Credit : Instagram

ವಿಲನ್ ಯಾಕೆ?

ಅಲ್ಲಿಗೆ ರಮೇಶನೇ ದುಡ್ಡು ಕೊಟ್ಟು ಜ್ಯೋತಿಷಿ ಬಳಿ ಸುಳ್ಳು ಹೇಳಿಸಿರುವುದು ತಿಳಿಯುತ್ತದೆ. ಪದೇ ಪದೇ ಜ್ಯೋತಿಷಿಗಳನ್ನು ಈ ರೀತಿಯಾಗಿ ಸೀರಿಯಲ್​ಗಳಲ್ಲಿ ತೋರಿಸುವುದಕ್ಕೆ ಭಾರಿ ಆಕ್ರೋಶ, ಅಸಮಾಧಾನ ಹೊರ ಹಾಕಲಾಗುತ್ತಿದೆ. ಇದೇ ಮಾರ್ಗ ಬೇಕಾ? ಬೇರೆಯ ರೀತಿಯಲ್ಲಿ ಇದೇ ದೃಶ್ಯಗಳನ್ನು ತೋರಿಸಬಹುದಲ್ವಾ, ಎಲ್ಲಾ ಸೀರಿಯಲ್​ಗಳಲ್ಲಿಯೂ ಜ್ಯೋತಿಷಿಗಳನ್ನು ವಿಲನ್​ಗಳಂತೆ ಬಿಂಬಿಸುವುದು ಏಕೆ ಎನ್ನುವ ಪ್ರಶ್ನೆ ಮೂಡಿಬರುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಜ್ಯೋತಿಷ್ಯ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ
Recommended image2
Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
Recommended image3
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!
Related Stories
Recommended image1
Brahmagantu Serial ದೀಪಾ ಅರೆಸ್ಟ್​- ಅಷ್ಟಕ್ಕೂ ಆಗಿದ್ದೇನು? ದೂರು ಕೊಟ್ಟೋರು ಯಾರು?
Recommended image2
Bigg Bossನಲ್ಲಿ ಲೈಟ್​ ಆಫ್​ ಆದ್ಮೇಲೆ ಇವರದ್ದು ನಡಿಯತ್ತೆ: ಇನ್ನೊಂದು ವಾರ ಇದ್ರೆ ಸತ್ತೇ ಹೋಗ್ತಿದ್ದೆ- ಡಾಗ್​ ಸತೀಶ್ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved