MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Kannada Serial: ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!

Karna Kannada Serial: ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!

Karna Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಳ್ಳುವುದೊಂದು, ಆಗುವುದೊಂದು ಎನ್ನೋ ಥರ ಆಗಿದೆ. ಕರ್ಣ-ನಿತ್ಯಾ ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ತೇಜಸ್‌ ಆಗಮನವಾಗಿದೆ, ಈಗ ಕಥೆ ಇನ್ನೊಂದು ತಿರುವು ಪಡೆದುಕೊಳ್ಳಲಿದೆ.

1 Min read
Padmashree Bhat
Published : Dec 18 2025, 11:59 AM IST
Share this Photo Gallery
  • FB
  • TW
  • Linkdin
  • Whatsapp
15
ರಮೇಶ್‌ ಪತ್ನಿ ಪ್ಲ್ಯಾನ್
Image Credit : zee5

ರಮೇಶ್‌ ಪತ್ನಿ ಪ್ಲ್ಯಾನ್

ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದು ಸುಳ್ಳು ಎನ್ನೋದು ನಿಧಿಗೂ, ಕರ್ಣನ ತಂಗಿ ರಾಧಿಕಾಗೂ ಗೊತ್ತಾಗಿದೆ. ಇನ್ನೊಂದು ಕಡೆ ಇನ್ನೊಮ್ಮೆ ಇವರಿಬ್ಬರ ಮದುವೆಯನ್ನು ನೋಡಬೇಕು ಎಂದು ಸಂಜಯ್‌, ನಿತ್ಯಾಳ ಕೊರಳಲ್ಲಿದ್ದ ತಾಳಿಯನ್ನು ಕಟ್‌ ಮಾಡಿದ್ದನು. ಹೀಗಾಗಿ ಮನೆಯಲ್ಲಿ ಮತ್ತೆ ಕರ್ಣ-ನಿತ್ಯಾ ಮದುವೆ ಆಗಬೇಕಿತ್ತು. ಆಗಲೂ ಕರ್ಣನ ತಾಯಿ, ಗಂಡ ರಮೇಶ್‌ ಮೈಮೇಲೆ ಬಿಸಿನೀರು ಹಾಕಿದಳು. ಆಗ ಎಲ್ಲರ ಗಮನ ರಮೇಶ್‌ ಮೇಲೆ ಹೋದಾಗ, ನಿತ್ಯಾ ತನಗೆ ತಾನೇ ತಾಳಿ ಹಾಕಿಕೊಂಡಳು.

25
ತೇಜಸ್‌ ತಪ್ಪು ತಿಳ್ಕೊಂಡಿದ್ದಾನೆ
Image Credit : zee5

ತೇಜಸ್‌ ತಪ್ಪು ತಿಳ್ಕೊಂಡಿದ್ದಾನೆ

ತಮಗೆ ಮದುವೆ ಆಗಿದೆ ಎಂದು ಕರ್ಣ, ನಿತ್ಯಾ ಎಲ್ಲರನ್ನು ಯಾಮಾರಿಸುತ್ತಿದ್ದಾರೆ. ಇವರು ಖುಷಿಯಾಗಿರಬಾರದು ಎಂದು ರಮೇಶ್‌, ನಯನತಾರಾ, ಸಂಜಯ್‌ ದಿನಕ್ಕೊಂದು ಢಷ್ಯಂತ್ರ ಮಾಡುತ್ತಿದ್ದಾರೆ. ಈಗ ತೇಜಸ್‌ ಹೊರಗಡೆ ಬಂದಿರೋದು ಕೂಡ ರಮೇಶ್‌ ಕುತಂತ್ರ ಎಂದು ಕಾಣುತ್ತದೆ. ನಿತ್ಯಾಳನ್ನು ಮದುವೆ ಆಗಬೇಕಿದ್ದ ತೇಜಸ್‌ನನ್ನು ರಮೇಶ್‌ ಕಿಡ್ನ್ಯಾಪ್‌ ಮಾಡಿಸಿದ್ದನು. ತೇಜಸ್‌ನನ್ನು ಕರ್ಣನೇ ಕಿಡ್ನ್ಯಾಪ್‌ ಮಾಡಿಸಿರೋದು ಎಂದು ನಂಬಿಸಿದ್ದನು.

Related Articles

Related image1
Karna Serial: ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್​! ಮುಂದಿದೆ ಮಾರಿಹಬ್ಬ
Related image2
Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
35
ಮನೆಹಾಳ ರಮೇಶ್‌ಗೆ ಎಲ್ಲ ಗೊತ್ತು
Image Credit : zee5

ಮನೆಹಾಳ ರಮೇಶ್‌ಗೆ ಎಲ್ಲ ಗೊತ್ತು

ಈಗ ತೇಜಸ್‌ ಹೊರಗಡೆ ಬಂದರೆ ಕರ್ಣ-ನಿತ್ಯಾ ಮದುವೆ ಆಗಿರೋ ವಿಷಯ ಗೊತ್ತಾದರೆ ಈ ಮೂವರ ಜೀವನ ಏನಾಗುತ್ತೆ? ನಿಧಿ ಏನ್‌ ಮಾಡ್ತಾಳೆ ಎಂದು ರಮೇಶ್‌ಗೆ ಗೊತ್ತಿದೆ. ಈಗ ತೇಜಸ್‌ ತಪ್ಪಿಸಿಕೊಳ್ಳಲು ಅವನೇ ಅನುವು ಮಾಡಿಕೊಟ್ಟಿದ್ದಾನೆ.

45
ಮುಂದಿರುವ ಪ್ರಶ್ನೆಗಳೇನು?
Image Credit : zee5

ಮುಂದಿರುವ ಪ್ರಶ್ನೆಗಳೇನು?

ಇಂದು ರಿಲೀಸ್‌ ಆಗಿರುವ ಪ್ರೋಮೋದಲ್ಲಿ ತೇಜಸ್‌ ತಪ್ಪಿಸಿಕೊಂಡು ಬಂದು, ನಿತ್ಯಾಳನ್ನು ಭೇಟಿ ಮಾಡಲು ಬಂದಿದ್ದಾನೆ, ಇವರಿಬ್ಬರ ಮುಖಾಮುಖಿಯಾಗಿದೆ. ಕರ್ಣನಿಂದಲೇ ನನ್ನ, ನಿನ್ನ ಮದುವೆ ನಿಂತು ಹೋಗಿದೆ, ಕರ್ಣನಿಂದಲೇ ಜೀವನ ಹಾಳಾಯ್ತು ಎಂದು ತೇಜಸ್‌ ಹೇಳಬಹುದು. ಕರ್ಣ, ನಿತ್ಯಾ ಮದುವೆ ಆಗಿರುವ ವಿಷಯ ಗೊತ್ತಾದರೆ ತೇಜಸ್‌ ಏನು ಮಾಡಬಹುದು? ನಿತ್ಯಾಳ ಹೊಟ್ಟೆಯಲ್ಲಿರೋದು ನನ್ನ ಮಗು ಎಂದು ತೇಜಸ್‌ ನಂಬುತ್ತಾನಾ? ಹೀಗೆ ಸಾಕಷ್ಟು ಪ್ರಶ್ನೆಗಳಿವೆ.

55
ಮುಂದೆ ಏನಾಗಲಿದೆ?
Image Credit : zee5

ಮುಂದೆ ಏನಾಗಲಿದೆ?

ಒಟ್ಟಿನಲ್ಲಿ ಕರ್ಣನ ಮೇಲೆ ಆರೋಪ ಬರೋದಂತೂ ಗ್ಯಾರಂಟಿ. ಕರ್ಣನಿಂದಲೇ ನಾನು ತೇಜಸ್‌ನಿಂದ ದೂರ ಆದೆ, ನನ್ನ, ತೇಜಸ್‌ ಮದುವೆ ಆಗಿಲ್ಲ ಎಂದು ನಿತ್ಯಾ ನಂಬಿದರೂ ಆಶ್ಚರ್ಯವಿಲ್ಲ. ಆಮೇಲೆ ಅವಳು ಕರ್ಣನ ವಿರುದ್ಧ ಸೇಡು ತೀರಿಸಿಕೊಳ್ತಾಳಾ? ಕರ್ಣ-ನಿಧಿ ಮದುವೆ ಆಗದಂತೆ ತಡೆಯುತ್ತಾಳಾ ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಕಿರಣ್ ರಾಜ್

Latest Videos
Recommended Stories
Recommended image1
ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್' ಮುಗಿದ ಬಳಿಕ ಬರಲಿರೋ ಸೀರಿಯಲ್ ಯಾವುದು? ಉತ್ತರ ಇಲ್ಲಿದೆ..
Recommended image2
ಎಲ್ಲರನ್ನು ನಗಿಸೋ ಗಿಲ್ಲಿ ನಟನ ಮನಸ್ಸಿನಲ್ಲೂ ಹೇಳಲಾಗದಷ್ಟು ನೋವಿದೆ! ದುರಂತ ಪ್ರೇಮಕಥೆ ಯಾರಿಗೂ ಗೊತ್ತಿಲ್ಲ
Recommended image3
ಗಿಲ್ಲಿ ಅಂಟೆ ಗಿಲ್ಲಿ: ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್
Related Stories
Recommended image1
Karna Serial: ಹಿಂದೆ ಯಮರಾಯ ನಿಂತಿರೋದು ಗೊತ್ತಿಲ್ದೇ ಹಾಯಾಗಿದ್ದಾನೆ ಪಾಪಿ ಸಂಜಯ್​! ಮುಂದಿದೆ ಮಾರಿಹಬ್ಬ
Recommended image2
Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved