MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Atharvaa: ಯೂತ್ ಐಕಾನ್ 2026 ಪ್ರಶಸ್ತಿ ಪಡೆದ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್

Atharvaa: ಯೂತ್ ಐಕಾನ್ 2026 ಪ್ರಶಸ್ತಿ ಪಡೆದ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್

Atharvaa: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ಮದನ್ ಪಾತ್ರದಲ್ಲಿ ತಮ್ಮ ನೆಗೆಟಿವ್ ಶೇಡ್ ಮೂಲಕವೇ ಗಮನ ಸೆಳೆಯುತ್ತಿರುವ ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್ ಅಥರ್ವ ಅವರಿಗೆ ಯೂತ್ ಐಕಾನ್ 2026 ಪ್ರಶಸ್ತಿ ಲಭಿಸಿತ್ತು, ಈ ಸಂಭ್ರಮವನ್ನು ನಟ ಹಂಚಿಕೊಂಡಿದ್ದಾರೆ. 

2 Min read
Author : Pavna Das
Published : Feb 04 2026, 10:18 PM IST
Share this Photo Gallery
  • FB
  • TW
  • Linkdin
  • Whatsapp
16
ಶ್ರಾವಣಿ ಸುಬ್ರಹ್ಮಣ್ಯ ನಟ
Image Credit : Instagram

ಶ್ರಾವಣಿ ಸುಬ್ರಹ್ಮಣ್ಯ ನಟ

ಜೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ವೀಕ್ಷಕರಿಗೆ ಅಥರ್ವ ಪರಿಚಯ ಇದ್ದೇ ಇದೆ. ವೀರೇಂದ್ರ ದೇಸಾಯಿ, ಅಕ್ಕ ವಿಜಯಾಂಬಿಕಾಳ ಒಬ್ಬನೇ ಮುದ್ದಿನ ಮಗ ಮದನ್ ಪಾತ್ರದಲ್ಲಿ ಅಥರ್ವ ನಟಿಸುತ್ತಿದ್ದಾರೆ. ಅಮ್ಮ ಮಗ ಇಬ್ಬರದೂ ವಿಲನ್ ಪಾತ್ರ. ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಿದ್ದಾರೆ ಅಥರ್ವ.

26
ಹ್ಯಾಂಡ್ಸಮ್ ವಿಲನ್ ಅಥರ್ವ
Image Credit : Instagram

ಹ್ಯಾಂಡ್ಸಮ್ ವಿಲನ್ ಅಥರ್ವ

ಅಥರ್ವ ಅವರನ್ನು ಕನ್ನಡ ಕಿರುತೆರೆಯ ಹ್ಯಾಂಡ್ಸಮ್ ವಿಲನ್ ಅಂತಾನೆ ಕರೆಯಬಹುದು. ಯಾಕಂದರೆ, ಹೈಟ್, ವೈಟ್ ಪರ್ಸನಾಲಿಟಿ, ಚಿಗುರು ಮೀಸೆ, ಕಣ್ಣಲ್ಲಿನ ಆ ಖಡಕ್ ಲುಕ್ ಎಲ್ಲವೂ ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹಾಗಾಗಿಯೇ ಅಥರ್ವ ಇಲ್ಲಿವರೆಗೂ ಶ್ರಾವಣಿ ಸುಬ್ರಹ್ಮಣ್ಯ ಅಲ್ಲದೇ, ನೀನಾದೆ ನಾ, ಗೌರಿ ಶಂಕರ ಧಾರಾವಾಹಿಗಳಲ್ಲೂ ವಿಲನ್ ಆಗಿ ಮಿಂಚಿದ್ದರು.

Related Articles

Related image1
Shravani Subramanya ಮೊದಲ ರಾತ್ರಿಗೆ ಇಂದೇ ಮುಹೂರ್ತ ಫಿಕ್ಸ್​: ದೀಪಾ-ದುರ್ಗಾದ್ದು ಯಾವಾಗ ಕೇಳಿದ ಫ್ಯಾನ್ಸ್​
Related image2
Shravani Subramanya: ಇಡೀ ರಾಜ್ಯವೇ ಬೆಚ್ಚಿಬೀಳೋ ಬ್ರೇಕಿಂಗ್​ ನ್ಯೂಸ್​- ರಾಜಕಾರಣಿ ಮಗನಿಂದ ಆಕೆಗೆ...
36
ಅಥರ್ವಗೆ ಸಿಕ್ಕಿದೆ ಯೂತ್ ಐಕಾನ್ ಪ್ರಶಸ್ತಿ
Image Credit : Instagram

ಅಥರ್ವಗೆ ಸಿಕ್ಕಿದೆ ಯೂತ್ ಐಕಾನ್ ಪ್ರಶಸ್ತಿ

ಇದೀಗ ಅಥರ್ವ ಅವರಿಗೆ ಮಿಲಿಯಾನ ಈವೆಂಟ್ಸ್ ಬೈ ನವ್ಯಾ ಗೌಡ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಯೂತ್ ಐಕಾನ್ 2026 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಾರ್ಯಕ್ರಮದ ಒಂದಷ್ಟು ಫೋಟೊಗಳನ್ನು ಅಥರ್ವ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಗ್ರೇಟ್ ಫುಲ್ ಫಾರ್ ದಿ ಜರ್ನಿ ಅಂತಾನೂ ಬರೆದುಕೊಂಡಿದ್ದಾರೆ.

46
ಓದಿದ್ದು ಸಿವಿಲ್ ಇಂಜಿನಿಯರ್ ಆಗಿದ್ದು ನಟ
Image Credit : Instagram

ಓದಿದ್ದು ಸಿವಿಲ್ ಇಂಜಿನಿಯರ್ ಆಗಿದ್ದು ನಟ

ಹಾಸನದಲ್ಲಿ ಹುಟ್ಟಿ ಬೆಳೆದ ಅಥರ್ವ ಓದಿದ್ದು ಸಿವಿಲ್ ಇಂಜಿನಿಯರ್. ಕೈತುಂಬಾ ಸಂಬಳ ಬರುವ ಕೆಲಸ ಸಿಗುತ್ತಿತ್ತು, ಆದರೆ ನಟನಾಗಬೇಕೆಂಬ ಒಲವಿನಿಂದ ಬೆಂಗಳೂರಿಗೆ ಬಂದ ಅಥರ್ವ, ಇಲ್ಲಿ ನಟನಾಗುವವರೆಗೂ ಸ್ವಿಗ್ಗಿ, ಝೊಮ್ಯಾಟೊಗೆ ಡಿಲೆವರಿ ಬಾಯ್ ಕೆಲಸ ಮಾಡಿದ್ದರು. ಆದರೆ ಛಲ ಮಾತ್ರ ಬಿಟ್ಟಿರಲಿಲ್ಲ. 50 ರಿಂದ 70 ಆಡಿಷನ್ ಕೊಟ್ಟು ಸಣ್ಣ, ಪುಟ್ಟ ಪಾತ್ರಗಳನ್ನು ಮಾಡಿ, ಕೊನೆಗೂ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

56
 ಕಷ್ಟದ ಹಾದಿಯಲ್ಲಿ ನಡೆದು ಬಂದ ನಟ
Image Credit : Instagram

ಕಷ್ಟದ ಹಾದಿಯಲ್ಲಿ ನಡೆದು ಬಂದ ನಟ

ಬಳಿಕ ನಾಟಕ ತಂಡ ಸೇರಿ, ಬೀದಿ ನಾಟಕಗಳನ್ನು ಮಾಡಿ, ಯೂಟ್ಯೂಬ್ ಚಾನೆಲ್ ನಲ್ಲಿ ಕೆಲಸ ಮಾಡಿ, ಸುಮಾರು ಒಂದು ವರ್ಷಗಳ ನಂತರ ಅವಕಾಶ ಸಿಗೋದಕ್ಕೂ ಶುರುವಾಯ್ತು. ಆರಂಭದಲ್ಲಿ ಶಾಂತಂ ಪಾಪಂ ಒಂದಷ್ಟು ಎಪಿಸೋಡ್ ಮಾಡಿ, ಬಳಿಕ ಕಮಲಿ ಧಾರಾವಾಹಿಯಲ್ಲಿ ಒಂದು ಎಪಿಸೋಡ್ ಮಾಡಿದ್ದರು. ನಂತರ ಸಿಕ್ಕ ದೊಡ್ಡ ಅವಕಾಶವೇ ‘ರಜಿಯಾ ರಾಮ್’.

66
ರಜಿಯಾ ರಾಮ್ ಮೂಲಕ ನಾಯಕ
Image Credit : Instagram

ರಜಿಯಾ ರಾಮ್ ಮೂಲಕ ನಾಯಕ

ಕೊನೆಗೆ ಸಿರಿ ಕನ್ನಡದಲ್ಲಿ ‘ರಜಿಯಾ ರಾಮ್’ ಎನ್ನುವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅಥರ್ವಗೆ ಒದಗಿ ಬಂತು. ಇದು ಹಿಂದೂ ಮುಸ್ಲಿಂ ಪ್ರೇಮಕಥೆಯ ಸೀರಿಯಲ್ ಆಗಿದ್ದು, ಈ ಧಾರಾವಾಹಿ ಸುಮಾರು 500 ಎಪಿಸೋಡ್ ಗಳನ್ನು ಪೂರೈಸಿ ಎರಡು ವರ್ಷಗಳ ಬಳಿಕ ಮುಕ್ತಾಯ ಕಂಡಿತು. ಬಳಿಕ ‘ಗೌರಿ ಶಂಕರ’ ಧಾರಾವಾಹಿ, ‘ಶ್ರಾವಣಿ ಸುಬ್ರಹ್ಮಣ್ಯ’ ಜೊತೆಗೆ ‘ನೀನಾದೆ ನಾ’ ಧಾರಾವಾಹಿಯಲ್ಲೂ ಅವಕಾಶ ಸಿಕ್ಕಿತು. ಸದ್ಯ ಸಿನಿಮಾದಲ್ಲೂ ನಟಿಸುತ್ತಿದ್ದಾರೆ ಅಥರ್ವ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಶ್ರಾವಣಿ ಸುಬ್ರಮಣ್ಯ
ಜೀ ಕನ್ನಡ

Latest Videos
Recommended Stories
Recommended image1
Bhagyalakshmi Serial: 2 ನೇ ಮದುವೆಯಾಗೋ ಖುಷಿಯಲ್ಲಿದ್ದ ಭಾಗ್ಯಗೆ ಭೂಮಿ ಇಬ್ಭಾಗವಾಗುವಂಥ ನ್ಯೂಸ್‌ ಸಿಕ್ಕಿತು!
Recommended image2
ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ
Recommended image3
Photos: 8 ವರ್ಷ ಕಾದು ಮದುವೆಯಾಗಿರೋ ನಟ ಮಂಡ್ಯ ರಮೇಶ್‌ ಮಗಳು ದಿಶಾ; ಈಗ ಆ ರಹಸ್ಯ ಬಿಚ್ಚಿಟ್ರು
Related Stories
Recommended image1
Shravani Subramanya ಮೊದಲ ರಾತ್ರಿಗೆ ಇಂದೇ ಮುಹೂರ್ತ ಫಿಕ್ಸ್​: ದೀಪಾ-ದುರ್ಗಾದ್ದು ಯಾವಾಗ ಕೇಳಿದ ಫ್ಯಾನ್ಸ್​
Recommended image2
Shravani Subramanya: ಇಡೀ ರಾಜ್ಯವೇ ಬೆಚ್ಚಿಬೀಳೋ ಬ್ರೇಕಿಂಗ್​ ನ್ಯೂಸ್​- ರಾಜಕಾರಣಿ ಮಗನಿಂದ ಆಕೆಗೆ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved