- Home
- Entertainment
- TV Talk
- Karna Serial ಭರ್ಜರಿ ಟ್ವಿಸ್ಟ್! ಬಾತ್ರೂಮ್ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ
Karna Serial ಭರ್ಜರಿ ಟ್ವಿಸ್ಟ್! ಬಾತ್ರೂಮ್ನಲ್ಲಿ ಕರ್ಣ- ನಿಧಿ ಸರಸ: ಎಣ್ಣೆ ಸ್ನಾನ ಮಾಡಿಸಲು ಬಂದ ನಿತ್ಯಾ
ರಮೇಶ್ ಕುತಂತ್ರದಿಂದಾಗಿ ನಿತ್ಯಾಳು ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸುವ ನಾಟಕವಾಡುತ್ತಾಳೆ. ನಂತರ, ನಿಜವಾಗಿಯೂ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಹೋದ ನಿಧಿಯು, ಅವನೊಂದಿಗೆ ರೊಮ್ಯಾನ್ಸ್ ಮಾಡುವಾಗ ನಿತ್ಯಾಳ ಕೈಗೆ ಸಿಕ್ಕಿಬೀಳುತ್ತಾಳೆ.

ನಿಧಿ-ಕರ್ಣ ದೂರ
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ಕರ್ಣ ಮತ್ತು ನಿಧಿಯನ್ನು ದೂರ ದೂರ ಮಾಡಲು ರಮೇಶ್ ಸಾಕಷ್ಟು ಪ್ರಯತ್ನ ಪಟ್ಟು ಒಂದು ಹಂತಕ್ಕೆ ಯಶಸ್ವಿಯನ್ನೂ ಆಗಿದ್ದಾರೆ. ಇದರ ಹೊರತಾಗಿಯೂ ಅವನಿಗೆ ಇನ್ನಷ್ಟು ಹಿಂಸೆ ನೀಡಬೇಕು ಎನ್ನುವ ಆಸೆ.
ರಮೇಶ್ ಕುತಂತ್ರ
ಇದೇ ಕಾರಣಕ್ಕೆ ನಿಧಿಯ ಎದುರು ನಿತ್ಯಾಳಿಗೆ, ಯುಗಾದಿ ಹಬ್ಬದ ಸಂಪ್ರದಾಯ ಮುರಿಯಬಾರದು. ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸು ಎಂದಿದ್ದಾನೆ ರಮೇಶ. ನಿತ್ಯಾ ಬೇಡ ಎಂದರೂ ಕೇಳದೇ ನಿಧಿಗೆ ಹೊಟ್ಟೆ ಉರಿ ಆಗಲಿ ಎಂದು ಹೀಗೆ ಮಾಡಿಸಿದ್ದಾನೆ.
ಎಣ್ಣೆ ಹಚ್ಚೋ ನಾಟಕ
ಅತ್ತ ಬಾತ್ರೂಮ್ಗೆ ಹೋದ ನಿತ್ಯಾ, ಕರ್ಣನಿಗೆ ಸನ್ನೆ ಮಾಡುವ ಮೂಲಕ ಸುಮ್ಮನೇ ಇರುವಂತೆ ಹೇಳಿ, ಎಣ್ಣೆ ಹಚ್ಚಿ ಸ್ನಾನ ಮಾಡಿಸೋ ರೀತಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದನ್ನು ಅರೆ ಕ್ಷಣ ನಿಧಿ ಕೂಡ ನಿಜ ಎಂದು ನಂಬಿದ್ದಾಳೆ.
ಬಾತ್ರೂಮ್ನಲ್ಲಿ ನಿಧಿ
ಕೊನೆಗೆ ಕರ್ಣನ ಸತ್ಯ ನಿಧಿಗೆ ಗೊತ್ತಾಗಿದೆ. ನಿತ್ಯಾ ಹೊರಕ್ಕೆ ಬರುತ್ತಲೇ ತಾನು ಹೋಗಿ ಕರ್ಣನಿಗೆ ಎಣ್ಣೆ ಸ್ನಾನ ಮಾಡಿಸಲು ಮುಂದಾಗಿದ್ದಾಳೆ.
ಬಂದ ನಿತ್ಯಾ
ಅಲ್ಲಿಗೆ ನಿತ್ಯಾ ಬಂದು ಬಿಟ್ಟಿದ್ದಾಳೆ. ಕರ್ಣ ಮತ್ತು ನಿಧಿ ರೊಮಾನ್ಸ್ ಮಾಡಲು ಹತ್ತಿರ ಬರುತ್ತಿರುವುದನ್ನು ಅವಳು ನೋಡಿದ್ದಾಳೆ.
ಸತ್ಯ ಗೊತ್ತಾಗತ್ತಾ?
ಹಾಗಿದ್ರೆ ನಿತ್ಯಾಳಿಗೆ ಈಗಾದ್ರೂ ಸತ್ಯ ಗೊತ್ತಾಗತ್ತಾ ಎನ್ನುವ ಪ್ರಶ್ನೆ ಇದೆ. ಬೇಗ ಗೊತ್ತಾಗಲಿ ಎಂದು ಫ್ಯಾನ್ಸ್ ಹೇಳ್ತಿದ್ರೆ, ಇಬ್ಬರ ಕೈಯಿಂದ ಎಣ್ಣೆ ಹಚ್ಚಿಕೊಳ್ಳುವ ಸೌಭಾಗ್ಯ ಅಲ್ವಾ ಎಂದು ನಟನ ಕಾಲೆಳೆಯುತ್ತಿದ್ದಾರೆ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

