MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮಾಧವನಂತ ಮಗ ಇದ್ರೆ ಆ ಮನೆ ಸ್ವರ್ಗ… ‘Nandagokula’ ನೋಡಿ ವೀಕ್ಷಕರು ಭಾವುಕರಾಗಿದ್ದೇಕೆ?

ಮಾಧವನಂತ ಮಗ ಇದ್ರೆ ಆ ಮನೆ ಸ್ವರ್ಗ… ‘Nandagokula’ ನೋಡಿ ವೀಕ್ಷಕರು ಭಾವುಕರಾಗಿದ್ದೇಕೆ?

Nandagokula Serial ಅದ್ಭುತವಾಗಿ ಮೂಡಿ ಬರುತ್ತಿದೆ. ತುಂಬು ಕುಟುಂಬದ ಕಥೆಯನ್ನು ಹೇಳುತ್ತಿರುವ ಈ ಧಾರಾವಾಹಿಯಲ್ಲಿ ಇದೀಗ ಮಾಧವನ ಮದುವೆಯ ಸಂಭ್ರಮ ನಡೆಯುತ್ತಿದ್ದು, ಪ್ರತಿಯೊಂದು ಮನೆಯಲ್ಲೂ ಮಾಧವನಂತ ಮಗ ಇರಬೇಕು ಎನ್ನುತ್ತಿದ್ದಾರೆ ಜನ. 

2 Min read
Author : Pavna Das
Published : Jan 31 2026, 02:52 PM IST
Share this Photo Gallery
  • FB
  • TW
  • Linkdin
  • Whatsapp
16
ನಂದಗೋಕುಲ
Image Credit : Colors Kannada

ನಂದಗೋಕುಲ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ನಂದಗೋಕುಲ’. ಗಿರಿಜಾ ಮತ್ತು ನಂದಕುಮಾರ್ ಅವರ ಸುಂದರವಾದ ‘ನಂದಗೋಕುಲ’ದಂತಹ ಮನೆಯ ಕಥೆಯೇ ನಂದಗೋಕುಲ. ಇದೀಗ ಹಿರಿಯ ಮಗ ಮಾಧವನನ್ನು ಜನರು ಆಡಿ ಕೊಂಡಾಡುತ್ತಿದ್ದಾರೆ. ಇಂತ ಮಗ ಪ್ರತಿ ಮನೆಯಲ್ಲೂ ಹುಟ್ಟಿ ಬಂದರೆ, ಅದೇ ಸ್ವರ್ಗ ಎನ್ನುತ್ತಿದ್ದಾರೆ.

26
ಮಾಧವನ ಮದುವೆ
Image Credit : Colors Kannada

ಮಾಧವನ ಮದುವೆ

ಸದ್ಯ ಧಾರಾವಾಹಿಯಲ್ಲಿ ಮಾಧವನ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಆದರೆ ಅದಕ್ಕೂ ಮುನ್ನ ಉಂಟಾದ ಜಗಳ, ಭಯ, ಅವಮಾನ ಎಲ್ಲವೂ ಕಥೆಯಲ್ಲಿ ಕುತೂಹಲವನ್ನು ಹೆಚ್ಚಿಸಿತ್ತು. ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ಕಿಚ್ಚು ಹಚ್ಚಲು, ಗಿರಿಜಾ ಅಣ್ಣನವರು ಜೊತೆ ಸೇರಿ, ಮಾಧವನಿಗೆ ಬೇರೆ ಹುಡುಗಿಯ ಸಂಬಂಧ ಇದೆ, ಹಾಗಾಗಿ ಆತ ಮನೆ ಬಿಟ್ಟು ಬೇರೆ ಹುಡುಗಿ ಜೊತೆ ಓಡಿ ಹೋಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು.

Related Articles

Related image1
Kannada Serial TRP: ದಾಖಲೆ ಬರೆದ Bigg Boss; ಧಾರಾವಾಹಿಗಳ ಯುದ್ಧದಲ್ಲಿ ಗೆದ್ದು ಬೀಗಿದ್ಯಾರು?
Related image2
Karna Serial Update: ಅರೆರೆ ಇದೇನಾಗೋಯ್ತು? ನಿತ್ಯಾಗೆ ಕರ್ಣನ ಮೇಲೆ ಲವ್​ ಆಯ್ತಾ? ನಿಧಿ ಗತಿ ಏನು?
36
ಮರಳಿ ಬಂದು ಶಾಕ್ ಕೊಟ್ಟ ಮಾಧವ
Image Credit : Colors Kannada

ಮರಳಿ ಬಂದು ಶಾಕ್ ಕೊಟ್ಟ ಮಾಧವ

ನಂದ ಕುಮಾರ್ ಗೆ ಅವಮಾನ ಮಾಡಲು ಚಂದ್ರಕಾಂತ, ಸೂರ್ಯಕಾಂತ ತಯಾರಾಗಿ ನಿಂತಿದ್ರೆ, ಮರಳಿ ಬರುವ ಮಾಧವ, ಇಬ್ಬರಿಗೂ ಬೈದು, ಮುಖಕ್ಕೆ ಮಂಗಳಾರತಿ ಮಾಡುತ್ತಾನೆ. ನಿಮ್ಮ ಷಡ್ಯಂತ್ರಕ್ಕೆ ನಾನು ಬಲಿಯಾಗುತ್ತೇನೆ ಅಂತ ನೀವು ಅಂದುಕೊಂಡಿದ್ರೆ ಅದು ನಿಮ್ಮ ತಪ್ಪು. ನಾನು ಯಾವತ್ತಿದ್ರೂ ಅಪ್ಪ ಹಾಕಿದ ಗೆರೆಯನ್ನು ದಾಟುವುದಿಲ್ಲ. ಅಪ್ಪ ತೋರಿಸಿದ ಹುಡುಗಿ ಜೊತೆಗೆ ಮದುವೆಯಾಗುವುದಾಗಿ ತಿಳಿಸಿದ್ದಾನೆ.

46
ಮಾಧವನ ಮಾತು ಕೇಳಿ ಕಣ್ಣೀರಿಟ್ಟ ನಂದಕುಮಾರ್
Image Credit : Colors Kannada

ಮಾಧವನ ಮಾತು ಕೇಳಿ ಕಣ್ಣೀರಿಟ್ಟ ನಂದಕುಮಾರ್

ಮಗ ಮಾಧವ ಹೇಳಿದ ಮಾತು ಕೇಳಿ ನಂದ ಕುಮಾರ್ ಕಣ್ಣೀರಿಟ್ಟಿದ್ದಾರೆ. ತನ್ನ ಮರ್ಯಾದೆ ಎಲ್ಲರ ಎದುರು ಹೋಯಿತು ಎಂದು ಅಂದುಕೊಂಡಿರುವಾಗಲೇ, ಮರಳಿ ಬಂದ ಮಾಧವ, ಅಪ್ಪನ ಮಾತನ್ನು ಮೀರಲ್ಲ ಎಂದು ಹೇಳಿರುವುದನ್ನು ಕೇಳಿ, ನೀನೆ ನನ್ನ ಪಾಲಿನ ಶ್ರೀರಾಮ ಚಂದ್ರ. ಅಂದು ಶ್ರೀರಾಮ ದಶರಥನ ಮಾತು ಪಾಲಿಸಿದಂತೆ, ಇಂದು ನೀನು ನನ್ನ ಮಾತು ಪಾಲಿಸಿದೆ ಎನ್ನುತ್ತಾ ಮಗನನ್ನು ತಬ್ಬಿ ಮುದ್ದಾಡಿದ್ದಾರೆ.

56
ಭಾವುಕರಾದ ವೀಕ್ಷಕರು
Image Credit : Colors Kannada

ಭಾವುಕರಾದ ವೀಕ್ಷಕರು

ಈ ಸುಂದರವಾದ ದೃಶ್ಯವನ್ನು ನೋಡಿ ವೀಕ್ಷಕರು ಕೂಡ ಭಾವುಕರಾಗಿದ್ದಾರೆ. ಯಪ್ಪಾ ಎಂಥ ಸೀರಿಯಲ್ ಇಡೀ ಕುಟುಂಬ ಸಮೇತ ಕೂತು ನೋಡುವ ಸೀರಿಯಲ್. ಈ ಸೀರಿಯಲ್ ಸಿಕ್ಕಾಪಟ್ಟೆ ಇಷ್ಟ, ಈ ವಾರದ ಚಪ್ಪಾಳೆ ನಂದಗೋಕುಲದ ಮಾಧವನಿಗೆ. ಅಂತು ಇಂತು ತಂದೆ ತಾಯಿಯ ಕನಸು ನನಸಾಯಿತು. ಪ್ರತಿ ಮನೆಯಲ್ಲೂ ಮಾಧವನಂತಹ ಮಗ ಇದ್ದರೆ ಆ ಮನೆ ಸ್ವರ್ಗ ಎನ್ನುತ್ತಿದ್ದಾರೆ.

66
ಕಥೆ ಏನು?
Image Credit : Colors Kannada

ಕಥೆ ಏನು?

ನಂದ ಕುಮಾರ್ ಮತ್ತು ಗಿರಿಜಾ ದಂಪತಿಗಳು ಪ್ರೀತಿಸಿ ಮದುವೆಯಾಗಿದ್ದು, ಮನೆಯವರ ವಿರೋಧ ಕಟ್ಟಿಕೊಂಡಿದ್ದಾರೆ. ಆದರೆ ತನ್ನ ಮಕ್ಕಳು ಪ್ರೀತಿಯಲ್ಲಿ ಬೀಳಬಾರದು ಎಂದು ತುಂಬಾನೆ ಸ್ಟ್ರಿಕ್ಟ್ ಆಗಿ ಬೆಳೆಸುತ್ತಾನೆ. ಆದರೆ ಎರಡನೇ ಮಗ ಕೇಶವ ಪ್ರೀತಿಸಿ ಮದುವೆಯಾಗುತ್ತಾನೆ, ಮನೆಗೆ ಬಂದ ಸೊಸೆ ಮೀನಾಳನ್ನು ಆರಂಭದಲ್ಲಿ ದ್ವೇಷಿಸಿದ್ದ ನಂದಕುಮಾರ್, ಕೊನೆಗೆ ಆಕೆಯ ಗುಣಕ್ಕೆ ಸೋತು ಸೊಸೆ ಎಂದು ಒಪ್ಪಿಕೊಂಡಿದ್ದಾರೆ. ಕೊನೆಯ ಮಗ ವಲ್ಲಭನಿಗೆ ಶತ್ರು ಅಮೂಲ್ಯ ಜೊತೆ ಗಿರಿಜಾ ಮದುವೆ ಮಾಡಿಸಿದ್ರೆ, ಹಿರಿಯ ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದು, ಕಿರಿಯ ಮಗಳು ಓದುತ್ತಿದ್ದಾಳೆ. ಇದೀಗ ಹಿರಿಯ ಮಗ ಮಾಧವನ ಮದುವೆ ನಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕನ್ನಡ ಧಾರಾವಾಹಿ
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
Annayya: ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!
Recommended image2
CJ Roy Self Death: ಬಹುಕೋಟಿ ಶ್ರೀಮಂತ ಸಿಜೆ ರಾಯ್ ಸಾವು ಪರಿಣಾಮ, ಕಾರಣ ಏನಿದ್ದರೂ ನೆಪ ಅಷ್ಟೇ!
Recommended image3
ಪ್ರಿ ವೆಡ್ಡಿಂಗ್ ಫೋಟೊ ಶೂಟಲ್ಲಿ ಮಿಂಚಿದ ನಟಿ ತೇಜಸ್ವಿನಿ ಆಚಾರ್-ವಿರಾಟ್
Related Stories
Recommended image1
Kannada Serial TRP: ದಾಖಲೆ ಬರೆದ Bigg Boss; ಧಾರಾವಾಹಿಗಳ ಯುದ್ಧದಲ್ಲಿ ಗೆದ್ದು ಬೀಗಿದ್ಯಾರು?
Recommended image2
Karna Serial Update: ಅರೆರೆ ಇದೇನಾಗೋಯ್ತು? ನಿತ್ಯಾಗೆ ಕರ್ಣನ ಮೇಲೆ ಲವ್​ ಆಯ್ತಾ? ನಿಧಿ ಗತಿ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved