MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಬೆನ್ನಿಗೆ ಚೂರಿ ಹಾಕಿದ್ರೂ ವಂಶದ ಕುಡಿ ರಕ್ಷಿತಾ ಶೆಟ್ಟಿಗೆ ಬುದ್ಧಿ ಹೇಳಿದ ಗಿಲ್ಲಿ ನಟ

BBK 12: ಬೆನ್ನಿಗೆ ಚೂರಿ ಹಾಕಿದ್ರೂ ವಂಶದ ಕುಡಿ ರಕ್ಷಿತಾ ಶೆಟ್ಟಿಗೆ ಬುದ್ಧಿ ಹೇಳಿದ ಗಿಲ್ಲಿ ನಟ

ಬಿಗ್‌ಬಾಸ್ ಸೀಸನ್ 12ರ 9ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಹೊಸ ತಿರುವು ಪಡೆದಿದೆ. ಮಾಳು ಅವರನ್ನು ಉಳಿಸಲು ಹೋಗಿ ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಘಟನೆಯು ಸ್ಪರ್ಧಿಗಳ ನಡುವಿನ ಸ್ನೇಹ ಸಂಬಂಧದಲ್ಲಿ ಮನಸ್ತಾಪದ ಕಿಡಿ ಹೊತ್ತಿಸಿದೆ.

2 Min read
Mahmad Rafik
Published : Dec 02 2025, 07:49 AM IST
Share this Photo Gallery
  • FB
  • TW
  • Linkdin
  • Whatsapp
15
 ಮನಸ್ತಾಪದ ಕಿಡಿ
Image Credit : Jiohotstar

ಮನಸ್ತಾಪದ ಕಿಡಿ

ಬಿಗ್‌ಬಾಸ್ ಸೀಸನ್ 12 ಶೋ 9ನೇ ವಾರಕ್ಕೆ ಕಾಲಿಟ್ಟಿದ್ದು, ಹಲವು ತಿರುವುಗಳೊಂದಿಗೆ ವೀಕ್ಷಕರನ್ನು ಆಕರ್ಷಿಸುತ್ತಿದೆ. ಇಷ್ಟು ದಿನ ಬಂದಾಯ್ತು, ಟ್ರೋಫಿ ಪಡೆಯಲೇಬೇಕೆಂಬ ಹಠಕ್ಕೆ ಸ್ಪರ್ಧಿಗಳು ಬಂದಿದ್ದಾರೆ. ಹಾಗಾಗಿ ತಮ್ಮ ಆಟದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತಿದ್ರೆ, ಜೊತೆಯಾಗಿದ್ದರ ನಡುವೆಯೇ ಮನಸ್ತಾಪದ ಕಿಡಿ ಹೊತ್ತಿಕೊಂಡಿದೆ

25
ನಾಮಿನೇಟ್
Image Credit : Jiohotstar

ನಾಮಿನೇಟ್

ಬೆನ್ನಿಗೆ ಕಟ್ಟಿಕೊಂಡಿರುವ ಅರ್ಧವೃತ್ತಾಕಾರದ ಹಲಗೆಗೆ ಚೂರಿ ಹಾಕುವ ಮೂಲಕ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ಅತ್ಯುತ್ಸಾಹದಿಂದ ಕಂಡು ಬಂತೆ ಕಾಣಿಸಿತ್ತು. ಜನರು ತಮ್ಮನ್ನು ಸೇವ್ ಮಾಡ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವೂ ಕಾಣಿಸಿತು. ಏಳನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಪಡೆದು ಮೊದಲಿಗರಾಗಿ ಸೇವ್ ಆಗಿರೋದು ಈ ಆತ್ಮವಿಶ್ವಾಸಕ್ಕೆ ಕಾರಣವಾಗಿರಬಹುದು.

Related Articles

Related image1
Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?
Related image2
BBK 12: ಬೆನ್ನಿಗೆ ಚೂರಿ ಹಾಕಿದ್ಯಾರು? ಕಾವ್ಯಾ Vs ರಕ್ಷಿತಾ, ಇಬ್ಬರಲ್ಲಿ ಚೀಪ್ ಗಿಮಿಕ್ ಯಾರದ್ದು?
35
ವಂಶದ ಕುಡಿ
Image Credit : Jiohotstar

ವಂಶದ ಕುಡಿ

ಗಿಲ್ಲಿ ನಟ ಅವನರನ್ನು ರಕ್ಷಿತಾ ಶೆಟ್ಟಿ ನಾಮಿನೇಟ್ ಮಾಡುತ್ತಾರೆ. ತಮ್ಮ ಹಲಗೆಯಲ್ಲಿರುವ ಚೂರಿಗಳನ್ನು ತೆಗೆದುಕೊಳ್ಳದೇ ಮಾಳು ಅವರ ಬಳಿಯಲ್ಲಿದ್ದ ಚೂರಿ ಬಳಕೆ ಮಾಡುತ್ತಾರೆ. ಈ ಮೂಲಕ ಮಾಳು ಅವರನ್ನು ಸೇಫ್ ಮಾಡಲು ಪ್ರಯತ್ನಿಸುತ್ತಾರೆ. ಇದನ್ನು ನೋಡಿದ ಗಿಲ್ಲಿ ನಟ ತನ್ನ ವಂಶದ ಕುಡಿಗೆ ಬುದ್ಧಿ ಹೇಳುವ ಕೆಲಸವನ್ನು ಮಾಡುತ್ತಾರೆ.

45
ನಂಬಿಕೆ
Image Credit : Jiohotstar

ನಂಬಿಕೆ

ನಿನ್ನ ಹಲಗೆಯಲ್ಲಿಯೇ 5 ಚೂರಿಗಳಿದ್ದು, ಮೊದಲು ನೀನು ಸೇವ್ ಆಗೋದನ್ನು ನೋಡಿಕೊಳ್ಳಬೇಕು. ಇದೇನೋ ಫ್ಯಾಮಿಲಿ ಅಲ್ಲ. ನಿನ್ನ ಆಟವನ್ನು ನೀನು ಆಡಬೇಕು. ನಿನಗೆ ಮಾಳು ಅವರನ್ನು ಸೇವ್ ಮಾಡೋದು ಬೇಕಿದೆ ಎಂದು ಗಿಲ್ಲಿ ನಟ ಹೇಳುತ್ತಾರೆ. ಇದಕ್ಕೆ ಜನರು ನನ್ನನ್ನು ಉಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಕ್ಷಿತಾ ಶೆಟ್ಟಿ ತಿರುಗೇಟು ಹೇಳುತ್ತಾರೆ.

ಇದನ್ನೂ ಓದಿ: BBK 12: ಗಿಲ್ಲಿ ನಟ, ಹೆಣ್ಣು ಮಕ್ಕಳ ಜೊತೆ ಬೆಳೆದಿಲ್ವಾ? - ವೀಕ್ಷಕರ ಕೆಂಗಣ್ಣಿಗೆ ಗುರಿಯಾದ Kavya Shaiva

55
ಮಾಳು 11ನೇ ಸ್ಥಾನ
Image Credit : Jiohotstar

ಮಾಳು 11ನೇ ಸ್ಥಾನ

ಮಾಳು ಅವರನ್ನು 11ನೇ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ರಕ್ಷಿತಾ ಶೆಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾರೆ. ತಮ್ಮನ್ನು ನಾಲ್ಕನೇ ಸ್ಥಾನದಲ್ಲಿ ನಿಲ್ಲಿಸಿದ್ಯಾಕೆ ಎಂಬುದರ ಬದಲಾಗಿ ಮಾಳು ಮತ್ತು ಗಿಲ್ಲಿ ನಟ ಅವರನ್ನು ಹೋಲಿಕೆ ಮಾಡಿ ಧನುಷ್ ಅವರನ್ನು ಪ್ರಶ್ನೆ ಮಾಡುತ್ತಾರೆ. ಹಾಗೆಯೇ ನಾಮಿನೇಷನ್ ಪ್ರಕ್ರಿಯೆಯಲ್ಲಿಯೂ ಕಾವ್ಯಾ ಜೊತೆಗೂ ರಕ್ಷಿತಾ ವಾಕ್ಸಮರ ನಡೆಸಿರೋದು ಕಂಡು ಬಂತು.

ಇದನ್ನೂ ಓದಿ: Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ರಕ್ಷಿತಾ
ರಿಯಾಲಿಟಿ ಶೋ
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ

Latest Videos
Recommended Stories
Recommended image1
Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ
Recommended image2
Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ
Recommended image3
ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!
Related Stories
Recommended image1
Bigg Boss ಮನೆಯಲ್ಲಿ ರಕ್ಷಿತಾ ಶೆಟ್ಟಿ ಒಂಥರಾ ಲಕ್ಕಿ; ನಾಲ್ಕರಲ್ಲಿ ಮೂರು ಸತ್ಯ ಆಯ್ತು! ಇದು ಕಾಕತಾಳೀಯನಾ?
Recommended image2
BBK 12: ಬೆನ್ನಿಗೆ ಚೂರಿ ಹಾಕಿದ್ಯಾರು? ಕಾವ್ಯಾ Vs ರಕ್ಷಿತಾ, ಇಬ್ಬರಲ್ಲಿ ಚೀಪ್ ಗಿಮಿಕ್ ಯಾರದ್ದು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved