MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • BBK 12: ಬಿಗ್‌ಬಾಸ್‌ ಶೋಗೆ ಮತ್ತೆ ಸಂಕಷ್ಟ: ಫಿನಾಲೆ ಸಂದರ್ಭದಲ್ಲಿಯೇ ಹೋಯ್ತು ನೋಟಿಸ್

BBK 12: ಬಿಗ್‌ಬಾಸ್‌ ಶೋಗೆ ಮತ್ತೆ ಸಂಕಷ್ಟ: ಫಿನಾಲೆ ಸಂದರ್ಭದಲ್ಲಿಯೇ ಹೋಯ್ತು ನೋಟಿಸ್

ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕ ಸುದೀಪ್ ಅವರು ರಣಹದ್ದುಗಳ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಅರಣ್ಯ ಇಲಾಖೆಯು ಆಯೋಜಕರಿಗೆ ನೋಟಿಸ್ ಜಾರಿ ಮಾಡಿದೆ. ಅಳಿವಿನಂಚಿನಲ್ಲಿರುವ ಪಕ್ಷಿಯ ಬಗ್ಗೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಸ್ಪಷ್ಟೀಕರಣ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

1 Min read
Author : Mahmad Rafik
Published : Jan 18 2026, 01:11 PM IST
Share this Photo Gallery
  • FB
  • TW
  • Linkdin
  • Whatsapp
15
ಬಿಗ್‌ಬಾಸ್ ಮತ್ತು ವಿವಾದ
Image Credit : Colors Kannada

ಬಿಗ್‌ಬಾಸ್ ಮತ್ತು ವಿವಾದ

ಬಿಗ್‌ಬಾಸ್ ಅಂದ್ರೆ ವಿವಾದ ಎಂಬ ಮಾತುಗಳಿವೆ. ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಾಡುವ ಮಾತುಗಳು ಹೊರಗೆ ವಿವಾದದ ರೂಪ ಪಡೆದುಕೊಳ್ಳುತ್ತವೆ. ಈ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತಿರುತ್ತವೆ. ಈ ಬಾರಿಯಂತೂ ಸುಮಾರು 48 ಗಂಟೆಗಳ ಕಾಲ ಬಿಗ್‌ಬಾಸ್ ಮನೆಗೆ ಸರ್ಕಾರ ಬೀಗ ಹಾಕಿತ್ತು.

25
ಮತ್ತೊಂದು ಸಂಕಷ್ಟ
Image Credit : Colors Kannada

ಮತ್ತೊಂದು ಸಂಕಷ್ಟ

ಇಂದು ಬಿಗ್‌ಬಾಸ್ ಫಿನಾಲೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿಯೇ ಬಿಬಿ ಹೌಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್ ಸೀಸನ್ 12ರ ವಿನ್ನರ್ ಯಾರು ಎಂಬ ಚರ್ಚೆ ನಡೆಯುತ್ತಿದೆ. ಇದೀಗ ಆರಣ್ಯ ಇಲಾಖೆಯಿಂದ ಬಿಗ್‌ಬಾಸ್ ಆಯೋಜಕರಿಗೆ ನೋಟಿಸ್ ನೀಡಲಾಗಿದೆ.

Related Articles

Related image1
BBK 12 Grand Finale: ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?
Related image2
BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ
35
ಟ್ರಸ್ಟ್‌ನಿಂದ ಅರಣ್ಯ ಇಲಾಖೆಗೆ ಪತ್ರ
Image Credit : Colors Kannada

ಟ್ರಸ್ಟ್‌ನಿಂದ ಅರಣ್ಯ ಇಲಾಖೆಗೆ ಪತ್ರ

ಕೆಲ ವಾರಗಳ ಹಿಂದೆ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕ, ನಟ ಸುದೀಪ್ ವೇದಿಕೆ ರಣಹದ್ದು ಕುರಿತು ನೀಡಿದ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು. ಸುದೀಪ್ ಹೇಳಿಕೆಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ವಿರೋಧ ವ್ಯಕ್ತಪಡಿಸಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ಟ್ರಸ್ಟ್ ಪತ್ರ ಬರೆದಿತ್ತು.

45
ನೋಟಿಸ್‌ನಲ್ಲಿ ಏನಿದೆ?
Image Credit : Colors Kannada

ನೋಟಿಸ್‌ನಲ್ಲಿ ಏನಿದೆ?

ತಪ್ಪು ಮಾಹಿತಿ ಹರಡಿದ ಆರೋಪದಡಿ ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಸುಷ್ಮಾ ಅವರು ಖಾಸಗಿ ಚಾನೆಲ್‌ನ ಪ್ರೋಗ್ರಾಂ ಹೆಡ್‌ಗೆ ತಿಳುವಳಿಕೆ ನೋಟಿಸ್ ನೀಡಿದ್ದಾರೆ. ನಟ ಸುದೀಪ್ ಅವರ ಹೇಳಿಕೆ ಪಕ್ಷಿ ಪ್ರೇಮಿಗಳಿಗೆ ಬೇಸರ ತರಿಸಿದ್ದು, ಅಳಿವಿನಂಚಿನಲ್ಲಿರುವ ಪಕ್ಷಿ ಉಳಿವಿಗೆ ಹಿನ್ನಡೆಯಾಗಲಿದೆ. ಹಾಗಾಗಿ ಹದ್ದು ಹಾಗೂ ರಣಹದ್ದಿಗೂ ಇರುವ ವ್ಯತ್ಯಾಸದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Gilli Nata: ದರ್ಶನ್ ಜೊತೆ ಗಿಲ್ಲಿಯನ್ನು ಹೋಲಿಕೆ ಮಾಡಿದ ಅಭಿಮಾನಿಗಳು; ಇದು ಬೇಕಿತ್ತಾ ಎಂದ ಡೆವಿಲ್ ಫ್ಯಾನ್ಸ್?

55
ರಣಹದ್ದು ಬಗ್ಗೆ ಸುದೀಪ್ ಹೇಳಿದ್ದೇನು?
Image Credit : Colors Kannada

ರಣಹದ್ದು ಬಗ್ಗೆ ಸುದೀಪ್ ಹೇಳಿದ್ದೇನು?

ಬಿಗ್‌ಬಾಸ್‌ನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ನಟ ಸುದೀಪ್ ಅವರು ರಣಹದ್ದು ‘ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು’ ಎಂದು ಹೇಳಿದ್ದರು. ತಪ್ಪು ಮಾಹಿತಿ ಹರಡಿದ್ದಾರೆ ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ನ ಪದಾಧಿಕಾರಿಗಳು ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ: BBK 12: ಫಿನಾಲೆಗೆ 10 ಲಕ್ಷ ಮೌಲ್ಯದ ಜಾಕೆಟ್ ಧರಿಸಿ ಬಂದ ಡಾಗ್ ಸತೀಶ್; 2 ಲಕ್ಷ ಕೇಳಿದ ಕಾಕ್ರೋಚ್ ಸುಧಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕಿಚ್ಚ ಸುದೀಪ್
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
BBK 12 Grand Finale: ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?
Recommended image2
BBK 12: ಫಿನಾಲೆಗೆ 10 ಲಕ್ಷ ಮೌಲ್ಯದ ಜಾಕೆಟ್ ಧರಿಸಿ ಬಂದ ಡಾಗ್ ಸತೀಶ್; 2 ಲಕ್ಷ ಕೇಳಿದ ಕಾಕ್ರೋಚ್ ಸುಧಿ
Recommended image3
ಗಿಲ್ಲಿ ಗೆಲ್ಬೇಕು ಎನ್ನುತ್ತಿದ್ದ ಮಾಸ್ಟರ್ ಆನಂದ್ ಅಭಿಪ್ರಾಯ ಬದಲಾಯ್ತಾ? ಭಯಬೇಡ ಅಂತಿದ್ದಾರೆ ನೆಟ್ಟಿಗರು
Related Stories
Recommended image1
BBK 12 Grand Finale: ಬಿಗ್‌ಬಾಸ್ ಕನ್ನಡ 12 ಕಿರೀಟ ಯಾರ ಪಾಲು? ಟಾಪ್ 3ರಲ್ಲಿ ಅಚ್ಚರಿ ಅಭ್ಯರ್ಥಿ?
Recommended image2
BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved