MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ: ಗಿಲ್ಲಿ ನಟನ ಬೇಸರ ನುಡಿ

ಚಿನ್ನದ ಸರವನ್ನು ನಂಗೇ ಕೊಟ್ಟಿದ್ದು ಅಂದ್ಕೊಂಡುಬಿಟ್ಟಿದ್ದೆ, ಆದ್ರೆ ಆಗಿದ್ದೇ ಬೇರೆ: ಗಿಲ್ಲಿ ನಟನ ಬೇಸರ ನುಡಿ

ಚಿನ್ನದ ಉದ್ಯಮಿ ಶರವಣ ಅವರು ಗಿಲ್ಲಿ ನಟನಿಗೆ ಚಿನ್ನದ ಸರ ಹಾಕಿದ್ದು, ಅವರು ಕೋಟ್ಯಧಿಪತಿಯಾದರು ಎಂಬ ಸುದ್ದಿ ಹಬ್ಬಿತ್ತು. ಆದರೆ, ಆ ಸರ ಕೇವಲ ಜಾಹೀರಾತಿಗಾಗಿ ಹಾಕಿದ್ದು, ಅದನ್ನು ವಾಪಸ್ ಪಡೆಯಲಾಗಿದೆ ಎಂಬ ಸತ್ಯವನ್ನು ಗಿಲ್ಲಿ ನಟರೇ ಇದೀಗ ಬಹಿರಂಗಪಡಿಸಿದ್ದಾರೆ.

1 Min read
Author : Suchethana D
Published : Jan 25 2026, 12:14 PM IST
Share this Photo Gallery
  • FB
  • TW
  • Linkdin
  • Whatsapp
16
ಗಿಲ್ಲಿ ನಟನ ಹವಾ
Image Credit : Instagram

ಗಿಲ್ಲಿ ನಟನ ಹವಾ

ಈಗ ಎಲ್ಲೆಲ್ಲೂ ಗಿಲ್ಲಿ ನಟನ ಹವಾ. ಇದಕ್ಕೆ ಇನ್ನಷ್ಟು ಪುಷ್ಟಿ ನೀಡಲು ಎಂಬಂತೆ, ಮೊನ್ನೆ ಚಿನ್ನದ ಉದ್ಯಮಿ ಶರವಣ ಅವರು, ಗಿಲ್ಲಿ ನಟನಿಗೆ (Bigg Boss Gilli Nata) ಭರ್ಜರಿ ಚಿನ್ನದ ಸರ ಹಾಕಿದ್ದರು. ಇದರಿಂದಾಗಿ ಗಿಲ್ಲಿ ನಟ ಕೋಟ್ಯಧಿಪತಿ ಆಗಿಬಿಟ್ಟರು ಎಂದೇ ಬಹುತೇಕ ಎಲ್ಲರೂ ಅಂದುಕೊಂಡಿದ್ದಾರೆ.

26
ಚಿನ್ನದ ಸರದ ಉಡುಗೊರೆ
Image Credit : instagram

ಚಿನ್ನದ ಸರದ ಉಡುಗೊರೆ

ಅದಕ್ಕೆ ಇಂಬು ನೀಡಲು ಎಂಬಂತೆ, ಶರವಣ ಅವರು, ಈ ಚಿನ್ನದ ಸರವನ್ನು ತಾವು ಗಿಲ್ಲಿ ನಟನಿಗೆ ಉಡುಗೊರೆಯಾಗಿ ಕೊಟ್ಟಂತೆ ಮಾತನಾಡಿದ್ದರು. ಗಿಲ್ಲಿನೇ ಚಿನ್ನ. ಅವರಿಗೆ ಇದನ್ನು ಕೊಟ್ಟಿದ್ದೇನೆ. ಬಿಗ್​ಬಾಸ್​ನಿಂದ ನನಗೆ ತುಂಬಾ ಲಾಭವಾಗಿದೆ. ಅದಕ್ಕೇ ಕೊಟ್ಟಿದ್ದೇನೆ ಎಂದಿದ್ದರು.

Related Articles

Related image1
ದಿಢೀರ್​ ಲೈವ್​ಗೆ ಬಂದ Gilli Nata: ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ
Related image2
ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB
36
ಸತ್ಯ ನುಡಿದ ಗಿಲ್ಲಿ
Image Credit : Instagram

ಸತ್ಯ ನುಡಿದ ಗಿಲ್ಲಿ

ಆದರೆ, ಇದೀಗ ಗಿಲ್ಲಿ ನಟ ಮಾಧ್ಯಮದವರ ಮುಂದೆ ಸತ್ಯವನ್ನು ನುಡಿದಿದ್ದಾರೆ. ಅದೇನೆಂದರೆ, ಶರವಣ ಅವ್ರು ಚಿನ್ನದ ಸರ ಹಾಕಿದಾಗ ಅದನ್ನು ನನಗೇ ಕೊಟ್ಟಿದ್ದು ಎಂದುಕೊಂಡಿದ್ದೆ. ನಾನು ನನಗೆ ಸರ ಹಾಕಿದ ಬಳಿಕ ಅದನ್ನು ಒಳಗೆ ಸೇರಿಸಿ ಷರ್ಟ್​ ಬಟನ್​ ಹಾಕಿಕೊಂಡು ಭದ್ರಮಾಡಿಕೊಂಡು ಬಿಟ್ಟೆ ಎಂದಿದ್ದಾರೆ.

46
ಸತ್ಯ ತಿಳಿದು ಶಾಕ್​ ಆಯ್ತು
Image Credit : Instagram

ಸತ್ಯ ತಿಳಿದು ಶಾಕ್​ ಆಯ್ತು

ಆದರೆ, ಕೊನೆಗೆ ನನಗೆ ಸತ್ಯ ತಿಳಿದು ಶಾಕ್​ ಆಯ್ತು. ಅದನ್ನು ಸುಮ್ಮನೇ ನನಗೆ ಹಾಕಿದ್ದು, ಅದನ್ನು ಅವರು ವಾಪಸ್​ ತೆಗೆದುಕೊಂಡರು. ಅದನ್ನು ಜಾಹೀರಾತಿನ ಉದ್ದೇಶಕ್ಕೆ ಹಾಕಲಾಗಿತ್ತು. ಆದರೆ ಹಲವರು ಅದು ನನಗೇ ಹಾಕಿದ್ದು ಎಂದು ನನ್ನ ಹಾಗೆಯೇ ತಿಳಿದುಕೊಂಡು ಕೋಟ್ಯಧೀಶ್ವರ ಆಗಿಬಿಟ್ಟೆ ಎನ್ನುತ್ತಿದ್ದಾರೆ ಎಂದು ಗಿಲ್ಲಿ ಸ್ವಲ್ಪ ಬೇಸರದಿಂದಲೇ ಮಾತನಾಡಿದರು.

56
ನನಗೂ ಆ ಕಾಲ ಬರಬಹುದು
Image Credit : Instagram

ನನಗೂ ಆ ಕಾಲ ಬರಬಹುದು

ಇರಲಿ ಬಿಡಿ. ನನಗೂ ಆ ಕಾಲ ಬರಬಹುದು. ಅಂಥದ್ದೇ ಚಿನ್ನದ ಸರ ಹಾಕಿಕೊಳ್ಳುವ ಕಾಲವೂ ಬರಬಹುದು ಎಂದು ಹೇಳಿದ್ದಾರೆ.

66
ರಕ್ಷಿತಾ ಅವರಿಗೆ ಕೊಟ್ಟ ಗಿಫ್ಟ್​ ಗುಟ್ಟು
Image Credit : Instagram

ರಕ್ಷಿತಾ ಅವರಿಗೆ ಕೊಟ್ಟ ಗಿಫ್ಟ್​ ಗುಟ್ಟು

ಅದೇ ರೀತಿ ಶರವಣ ಅವರು ಬಿಗ್​ಬಾಸ್​ ರನ್ನರ್​ ಅಪ್​ ರಕ್ಷಿತಾ ಅವರಿಗೂ ನೆಕ್ಲೆಸ್​ ಗಿಫ್ಟ್​ ಕೊಟ್ಟಿರುವುದಾಗಿ ಹಲವರು ಅಂದುಕೊಂಡಿದ್ದಾರೆ. ಅದು ಕೂಡ ಜಾಹೀರಾತಿಗೇ ಹೊರತು ರಕ್ಷಿತಾ ಅವರಿಗೆ ಕೊಟ್ಟಿದ್ದಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಗಿಲ್ಲಿ ನಟ
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ತನ್ನ ಯಶಸ್ಸಿನ ಹಿಂದಿನ ರೂವಾರಿಯನ್ನು ಪರಿಚಯಿಸಿದ ಬಿಗ್ಬಾಸ್ ರಕ್ಷಿತಾ ಶೆಟ್ಟಿ
Recommended image2
Sri Raghavendra Mahathme TV Serial: ವೈಭವದಿಂದ ನೆರವೇರಿದ ವೆಂಕಟನಾಥ, ಸರಸ್ವತಿಯ ವಿವಾಹ ಮಹೋತ್ಸವ!
Recommended image3
Anubandha Awards 2026: ಈ ಬಾರಿ ಏನೆಲ್ಲ ವಿಶೇಷತೆಗಳಿವೆ? ಸುಷ್ಮಾ ರಾವ್‌ಗೆ ವಿಶೇಷ ಗೌರವ ಕೊಟ್ಟಿದ್ಯಾಕೆ?
Related Stories
Recommended image1
ದಿಢೀರ್​ ಲೈವ್​ಗೆ ಬಂದ Gilli Nata: ಕನ್ನಡಿಯಲ್ಲಿ ಮುಖ ನೋಡಲು ಆಗ್ತಿಲ್ಲ ಎನ್ನುತ್ತಲೇ ಫ್ಯಾನ್ಸ್​ಗೆ ಮಾಡಿದ್ರು ಮನವಿ
Recommended image2
ದುಡ್ಡಿಲ್ಲದೇ ಹೂವು ಮಾರ್ತಿದ್ದೆ: ಬಡತನದ ದಿನ ನೆನೆದು ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ Bhargavi LLB
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved