MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi Serial Twist​: ಆದಿ- ತಾಂಡವ್​ ಜೀವನ ಸೆಟ್ಲ್​ ಮಾಡಿ ಭಾಗ್ಯ ಕೊನೆಗೂ ಒಂಟಿ?

Bhagyalakshmi Serial Twist​: ಆದಿ- ತಾಂಡವ್​ ಜೀವನ ಸೆಟ್ಲ್​ ಮಾಡಿ ಭಾಗ್ಯ ಕೊನೆಗೂ ಒಂಟಿ?

ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಳ ಜೀವನ ಹೊಸ ತಿರುವು ಪಡೆದಿದೆ. ಒಂದೆಡೆ ಪಶ್ಚಾತ್ತಾಪದಿಂದ ತಾಂಡವ್ ಕ್ಷಮೆ ಕೇಳುತ್ತಿದ್ದರೆ, ಇನ್ನೊಂದೆಡೆ ಆದಿ ಪ್ರೀತಿ ನಿವೇದನೆಗೆ ಸಿದ್ಧನಾಗಿದ್ದಾನೆ. ಈ ಇಬ್ಬರ ನಡುವೆ, ಭಾಗ್ಯ ಒಂಟಿಯಾಗಿ ಬದುಕು ಸಾಗಿಸುವ ನಿರ್ಧಾರ ತೆಗೆದುಕೊಳ್ಳಬಹುದೆ? 

1 Min read
Author : Suchethana D
Published : Dec 31 2025, 01:45 PM IST
Share this Photo Gallery
  • FB
  • TW
  • Linkdin
  • Whatsapp
16
ಹೆಜ್ಜೆ ಹೆಜ್ಜೆಗೂ ಅವಮಾನ
Image Credit : Instagram

ಹೆಜ್ಜೆ ಹೆಜ್ಜೆಗೂ ಅವಮಾನ

ಕಲರ್ಸ್​ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial) ಒಂದು ಸಾವಿರ ಕಂತುಗಳನ್ನು ಪೂರೈಸಿದೆ. ಇಲ್ಲಿಯವರೆಗೂ ಹೆಜ್ಜೆ ಹೆಜ್ಜೆಗೂ ಭಾಗ್ಯಳಿಗೆ ಅವಮಾನವೇ ಕಾದಿದ್ದು, ಅದೂ ಗಂಡನಿಂದಾಗಿ.

26
ಆದಿಯ ಎಂಟ್ರಿ
Image Credit : Instagram

ಆದಿಯ ಎಂಟ್ರಿ

ತೀರಾ ಗಡಿ ಮೀರಿದಂಥ ಭಾಗ್ಯಳ ಗೋಳು ನೋಡಿ ವೀಕ್ಷಕರೂ ರೊಚ್ಚಿಗೆದ್ದು ಹೋಗಿದ್ದು ಇದೆ. ಆದರೆ ಆದಿಯ ಎಂಟ್ರಿಯ ಬಳಿಕ ಭಾಗ್ಯಳ ಲೈಫ್​ನಲ್ಲಿ ಒಂದೊಳ್ಳೆ ದಿನಗಳು ಬರುತ್ತಿವೆ. ಅದರಲ್ಲಿಯೂ ಭಾಗ್ಯಳ ಅತ್ತೆ ಕುಸುಮಾ ಆದಿ ಮತ್ತು ಭಾಗ್ಯಳ ಮದುವೆ ಮಾಡಿಸೋ ಕನಸು ಕಾಣುತ್ತಿದ್ದಾಳೆ.

Related Articles

Related image1
ನನಗೆ ಸಿಎಂ ಮಲಗೋ ಜಾಗ ಕೊಟ್ರು, ನನ್​ ನಾಯಿ DCM ಜಾಗದಲ್ಲಿ ಮಲಗಿತ್ತು ಎಂದ Bigg Boss ಡಾಗ್​ ಸತೀಶ್​
Related image2
Bigg Bossಗೆ ನನ್ನಮ್ಮ ಎಂಟ್ರಿ ಕೊಟ್ಟಾಗ್ಲೇ ಗೆಲ್ಲುವ ಸ್ಪರ್ಧಿ ಬಗ್ಗೆ ರಿವೀಲ್​ ಮಾಡಿಬಿಟ್ಟಿದ್ರು ಎಂದ ಸೂರಜ್​ ಸಿಂಗ್​!
36
ಕಾಲಿಗೆ ಬಿದ್ದ ಗಂಡ
Image Credit : Instagram

ಕಾಲಿಗೆ ಬಿದ್ದ ಗಂಡ

ಭಾಗ್ಯಳ ಮೇಲೆ ಆದಿಗೆ ಲವ್​ ಮೂಡುವಂತೆ ಮಾಡುವಲ್ಲಿ ಕುಸುಮಾ ಸಕ್ಸಸ್​ ಕೂಡ ಆಗಿದ್ದಾಳೆ. ಆದಿ ಇನ್ನೇನು ತನ್ನ ಲವ್​ ಸ್ಟೋರಿ ಹೇಳಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ತಾಂಡವ್​ ಭಾಗ್ಯಳ ಕಾಲಿಗೆ ಬಿದ್ದು ಕ್ಷಮೆ ಕೋರಿ ಮತ್ತೆ ಒಂದಾಗೋಣ ಎಂದಿದ್ದಾನೆ.

46
ಆದಿ ಅಪ್ಪನ ರಿಕ್ವೆಸ್ಟ್​
Image Credit : Instagram

ಆದಿ ಅಪ್ಪನ ರಿಕ್ವೆಸ್ಟ್​

ಅತ್ತ ಆದಿಯ ಅಪ್ಪ, ಭಾಗ್ಯಳ ಬಳಿ ಕಂಡು ಕೈಮುಗಿದು ಬೇಡಿಕೊಂಡು ಆದಿಗೆ ಇನ್ನೊಂದು ಮದುವೆಗೆ ಮನವೊಲಿಸು ಎಂದು ಹೇಳಿದ್ದಾನೆ. ಆದಿಯ ಲೈಫ್​ ಸೆಟ್ಲ್​ ಆಗಬೇಕು ಎಂದರೆ ಆತ ಇನ್ನೊಂದು ಮದುವೆಯಾಗಬೇಕು. ಆತನಿಗೆ ಮದುವೆಗೆ ಮನವೊಲಿಸಲು ನಿನ್ನಿಂದ ಮಾತ್ರ ಸಾಧ್ಯ ಎಂದಿದ್ದಾನೆ!

56
ಅಪ್ಪನಿಗೆ ಮಾತು
Image Credit : Instagram

ಅಪ್ಪನಿಗೆ ಮಾತು

ಆದಿ ಅಪ್ಪನಿಗೆ ಭಾಗ್ಯ ಮಾತು ಕೊಟ್ಟರೆ, ಅವಳಂತೂ ಮದುವೆಯಾಗಲ್ಲ, ತಾಂಡವ್​ಗೆ ಇದಾಗಲೇ ಶ್ರೇಷ್ಠಾ ಜೊತೆ ಮದುವೆಯಾಗಿರುವ ಹಿನ್ನೆಲೆಯಲ್ಲಿ ಅವರಿಬ್ಬರ ಲೈಫ್​ ಸೆಟ್ಲ್​ ಮಾಡುವುದು ಗ್ಯಾರೆಂಟಿ.

66
ಸೀರಿಯಲ್​ ಉದ್ದೇಶ
Image Credit : Asianet News

ಸೀರಿಯಲ್​ ಉದ್ದೇಶ

ಹಾಗಿದ್ದರೆ ಆದಿ ಮತ್ತು ತಾಂಡವ್ ಲೈಫ್​ ಸೆಟ್ಲ್​ ಮಾಡಿ ಭಾಗ್ಯ ಒಂಟಿಯಾಗಿಯೇ ಜೀವನ ನಡೆಸುವ ಟ್ವಿಸ್ಟ್​ ಬಹುಶಃ ಈ ಸೀರಿಯಲ್​ಗೆ ಬರುವಂತೆ ಕಾಣಿಸುತ್ತಿದೆ. ಒಂಟಿಯಾಗಿಯೇ ಹೋರಾಟ ಮಾಡಿ, ಒಂಟಿಯಾಗಿಯೇ ಜೀವನ ಸಾಗಿಸುವ ಹೆಣ್ಣೊಬ್ಬಳ ಛಲವನ್ನು ತೋರಿಸುವ ಉದ್ದೇಶ ಈ ಸೀರಿಯಲ್​ಗೆ ಇರುವ ಹಿನ್ನೆಲೆಯಲ್ಲಿ, ಹಾಗಾದರೆ ಸಂದೇಹವೇ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕಲರ್ಸ್ ಕನ್ನಡ
ಭಾಗ್ಯಲಕ್ಷ್ಮಿ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Now Playing
ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Recommended image2
ನನಗೆ ಸಿಎಂ ಮಲಗೋ ಜಾಗ ಕೊಟ್ರು, ನನ್​ ನಾಯಿ DCM ಜಾಗದಲ್ಲಿ ಮಲಗಿತ್ತು ಎಂದ Bigg Boss ಡಾಗ್​ ಸತೀಶ್​
Recommended image3
ಬಿಗ್ ಬಾಸ್ ಬೊಂಬೆ ಫ್ಲೋರಿಡಾದಲ್ಲಿ ಮಿಂಚಿಂಗ್; ನಿವೇದಿತಾ ಗೌಡ ಒಂಟಿ ಪ್ರವಾಸದ ಹಿಂದಿದೆ ರೋಚಕ ಸ್ಟೋರಿ!
Related Stories
Recommended image1
ನನಗೆ ಸಿಎಂ ಮಲಗೋ ಜಾಗ ಕೊಟ್ರು, ನನ್​ ನಾಯಿ DCM ಜಾಗದಲ್ಲಿ ಮಲಗಿತ್ತು ಎಂದ Bigg Boss ಡಾಗ್​ ಸತೀಶ್​
Recommended image2
Bigg Bossಗೆ ನನ್ನಮ್ಮ ಎಂಟ್ರಿ ಕೊಟ್ಟಾಗ್ಲೇ ಗೆಲ್ಲುವ ಸ್ಪರ್ಧಿ ಬಗ್ಗೆ ರಿವೀಲ್​ ಮಾಡಿಬಿಟ್ಟಿದ್ರು ಎಂದ ಸೂರಜ್​ ಸಿಂಗ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved