MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • Mystery of Karnataka: ನಾಳೆ ಬಾ… ಕರ್ನಾಟಕವನ್ನೇ ನಡುಗಿಸಿದ ಎದೆ ಝಲ್ ಎನಿಸುವ ಆ ದೆವ್ವದ ಕಥೆ ಕೇಳಿದ್ದೀರಾ?

Mystery of Karnataka: ನಾಳೆ ಬಾ… ಕರ್ನಾಟಕವನ್ನೇ ನಡುಗಿಸಿದ ಎದೆ ಝಲ್ ಎನಿಸುವ ಆ ದೆವ್ವದ ಕಥೆ ಕೇಳಿದ್ದೀರಾ?

ಒಂದು ಕಾಲದಲ್ಲಿ ಕರ್ನಾಟದ ಹಳ್ಳಿ ಹಳ್ಳಿಗಳನ್ನು ಬೆಚ್ಚಿ ಬೀಳಿಸಿದ್ದ ಮಾಟಗಾತಿ ದೆವ್ವವೊಂದರ ಕಥೆ ಗೊತ್ತಾ? ನಾಳೆ ಬಾ ಎಂದು ಜನಪ್ರಿಯತೆ ಪಡೆದಿರುವ ವಾಕ್ಯದ ಹಿಂದಿದೆ ಒಂದು ದೆವ್ವದ ಕಥೆ.  

3 Min read
Pavna Das
Published : May 22 2025, 02:22 PM IST| Updated : May 22 2025, 02:36 PM IST
Share this Photo Gallery
  • FB
  • TW
  • Linkdin
  • Whatsapp
19

ಪ್ರಾಚೀನ ಸಂಪ್ರದಾಯಗಳು ಮತ್ತು ಆಧುನಿಕ ಜೀವನವು ಹೆಣೆದುಕೊಂಡಿರುವ ಕರ್ನಾಟಕದ ಶಾಂತ ಹಳ್ಳಿಗಳಲ್ಲಿ, ತಲೆಮಾರುಗಳಿಂದ ಪಿಸುಗುಟ್ಟುತ್ತಿರುವ ಒಂದು ತಣ್ಣನೆಯ ನಗರ ದಂತಕಥೆ ಬಗ್ಗೆ ಇಲ್ಲಿದೆ ಮಾಹಿತಿ. ಇದು ರಾತ್ರಿಯಲ್ಲಿ ಬೀದಿಗಳಲ್ಲಿ ಅಲೆದಾಡುವ, ಜನರನ್ನು ಬಲಿ ಪಡೆಯಲು ಸಂಬಂಧಿಕರ ಸ್ವರದಲ್ಲಿ ಮಾತನಾಡಿ ಆಕರ್ಷಿಸುವ ಮಾಟಗಾತಿಯ ಕಥೆ ಇದು. 
 

29

ಈ ಕಥೆಯು 20 ನೇ ಶತಮಾನದಷ್ಟು ಹಿಂದಿನದು, ಕರ್ನಾಟಕದ ಗ್ರಾಮೀಣ ಸಮುದಾಯಗಳು (rural places of Karnataka) ಬಿಗಿಯಾಗಿ ಹೆಣೆದುಕೊಂಡಿದ್ದ ಸಮಯ. ಹಳ್ಳಿ ಜೀವನದ ಸರಳತೆ ಮತ್ತು ಪ್ರಶಾಂತತೆಯ ನಡುವೆ, ವಿಚಿತ್ರ ಘಟನೆಗಳು ಗ್ರಾಮಸ್ಥರನ್ನು ಆತಂಕಕ್ಕೆ ದೂಡಲು ಪ್ರಾರಂಭಿಸಿದವು. ಕತ್ತಲಾದ ನಂತರ ನಿಗೂಢ ವ್ಯಕ್ತಿ, ಮಾಟಗಾತಿ, ಅಥವಾ ದೆವ್ವ ಬೀದಿಗಳಲ್ಲಿ ಅಲೆದಾಡುತ್ತಾ, ನಿವಾಸಿಗಳ ಬಾಗಿಲುಗಳನ್ನು ತಟ್ಟುತ್ತಿದ್ದಳು ಎಂದು ಹೇಳಲಾಗಿದೆ.
 

Related Articles

Related image1
ಆತ್ಮಗಳ ಸಂಚಾರವಿದೆ ಎನ್ನಲಾಗುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು
Related image2
Warning : ಅಪ್ಪಿ ತಪ್ಪಿ ಈ ನಂಬರ್ Dial ಮಾಡ್ಬೇಡಿ… ಇದು ದೆವ್ವದ ನಂಬರ್ ಸಾವು ಖಚಿತಾ!
39

ಅದೊಂದು ಸಾಮಾನ್ಯ ದೆವ್ವ (ghost) ಆಗಿರಲಿಲ್ಲ. ಭಯಾನಕ ಸಾಮರ್ಥ್ಯವನ್ನು ಹೊಂದಿದ್ದ ದೆವ್ವ. ಆಕೆಗಿತ್ತು ಪ್ರೀತಿಪಾತ್ರರ ಧ್ವನಿಯನ್ನು ಅನುಕರಿಸುವ ಸಾಮರ್ಥ್ಯ. ಅದು ತಾಯಿಯ ಸಾಂತ್ವನದ ಸ್ವರವಾಗಿರಲಿ, ತಂದೆಯ ಪರಿಚಿತ ಕರೆಯಾಗಲಿ ಅಥವಾ ಸಂಗಾತಿಯ ಮಧುರವಾದ ಧ್ವನಿಯಾಗಿರಲಿ, ಮಾಟಗಾತಿ ಅದನ್ನು ಸಂಪೂರ್ಣವಾಗಿ ಅನುಕರಿಸಬಲ್ಲವಳಾಗಿದ್ದಳು.  ಹಾಗೇ ಆಕೆ ಮಧ್ಯರಾತ್ರಿ ಆ ಗ್ರಾಮಕ್ಕೆ ತೆರಳಿ ಬಾಗಿಲು ತಟ್ಟುತ್ತಾ, ಪರಿಚಿತರಂತೆ ಮಾತನಾಡುತ್ತಿದ್ದಳಂತೆ, ಒಂದು ವೇಳೆ ಪರಿಚಿತ ಧ್ವನಿ ಎಂದು ಬಾಗಿಲು ತೆರೆದರೆ ಮತ್ತೆ ಅವರ ಕಥೆ ಮುಗಿದೇ ಹೋಯಿತು. ಮತ್ಯಾವತ್ತೂ ಅವರನ್ನು ಆ ಊರಲ್ಲಿ ಕಂಡವರೇ ಇಲ್ಲವಂತೆ. 
 

49

ದಂತಕಥೆಯ ಪ್ರಕಾರ, ಆ ಮಾಟಗಾತಿ (story of witch) ದೆವ್ವ ತನ್ನ ಮದುವೆಯ ದಿನದಂದು ದುರಂತವಾಗಿ ಸಾವನ್ನಪ್ಪಿದ ವಧು ಒಬ್ಬಳ ದೆವ್ವವಾಗಿತ್ತಂತೆ. ತನಗಾದ ದ್ರೋಹ ಹಾಗೂ ಬೇಸರದಿಂದಾಗಿ ಆಕೆ ಪ್ರತೀಕಾರ ತೀರಿಸಲು ಆತ್ಮವಾಗಿ ಆ ಊರಿಗೆ ಬಂದಿದ್ದಳಂತೆ, ತಿಳಿಯದೆ ತನಗೆ ಬಾಗಿಲು ತೆರೆದವರ ಜೀವಗಳನ್ನು ತೆಗೆಯುವ ಮೂಲಕ, ಆ ಊರಿಗೆ ನಡುಕ ಹುಟ್ಟಿಸಿದ್ದ ಭಯಾನಕ ದೆವ್ವವಾಗಿದ್ದಳು ಆಕೆ. ಈಕೆ ಗಂಡಸರನ್ನು ಮಾತ್ರ ಕೊಲ್ಲುತ್ತಿದ್ದಳು ಅನ್ನೋದು ಕೂಡ ವಿಶೇಷ. 
 

59

ಈ ದುಷ್ಟಶಕ್ತಿಯ ಭಯವು ಹಳ್ಳಿಗಳಲ್ಲಿ ಬೇಗನೆ ಹರಡಿತು. ಜನ ಆ ದೆವ್ವಕ್ಕೆ ಎಷ್ಟು ಹೆದರಿದ್ದರು ಅಂದ್ರೆ, ಆ ಊರಿನ ಇಡೀ ಕುಟುಂಬಗಳು ರಾತ್ರೋರಾತ್ರಿ ಕಣ್ಮರೆಯಾದರು, ಬಾಗಿಲುಗಳನ್ನು ತೆರೆದಿಟ್ಟೇ ಮನೆ ಬಿಟ್ಟು ಹೋದ ಕಥೆಗಳು ಸಹ ಇವೆ. ಇನ್ನು ಅಲ್ಲೇ ಉಳಿದಂತಹ ಭಯಭೀತರಾದ ಗ್ರಾಮಸ್ಥರು ಆ ದೆವ್ವದ ಕೈಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಒಂದು ಮಾರ್ಗವನ್ನು ಹುಡುಕಲು ಪ್ರಾರಂಭಿಸಿದರು.
 

69

ಒಂದು ರಾತ್ರಿ, ತನ್ನ ಬುದ್ಧಿವಂತಿಕೆ ಮತ್ತು ಚತುರತೆಗೆ ಹೆಸರುವಾಸಿಯಾದ ವೃದ್ಧನೊಬ್ಬನಿಗೆ ಒಂದು ಉಪಾಯ ಹೊಳೆಯಿತು. ಮಾಟಗಾತಿ ಪ್ರತಿ ರಾತ್ರಿಯೂ ತನ್ನ ಬಲಿಯನ್ನು ಹುಡುಕುತ್ತಾ ಬರುವುದರಿಂದ, ಆಕೆಗೆ ಹೇಗಾದರೂ ಮೋಸ ಮಾಡಬೇಕೆಂದು ಅಂದುಕೊಂಡನು. ಹಾಗಾಗಿ ಆತ "ನಾಳೆ ಬಾ"  (come tomorrow) ಎಂಬ ಪದಗಳನ್ನು ತಮ್ಮ ಮನೆ ಬಾಗಿಲಿನ ಮೇಲೆ ಬರೆಯಲು ಗ್ರಾಮಸ್ಥರಿಗೆ ಸಲಹೆ ನೀಡಿದನು. ಇದು ಸಿಂಪಲ್ ಉಪಾಯ. ಬಾಗಿಲಿನ ಮೇಲೆ ಹಾಗೇ ಬರೆಯೋದರಿಂದ ಆ ದೆವ್ವ ರಾತ್ರಿ ಹೊತ್ತು ಬಂದಾಗ ಬಾಗಿಲ ಮೇಲೆ ನಾಳೆ ಬಾ ಅನ್ನೋದನ್ನು ಬರೆದಿರೋದನ್ನು ನೋಡಿ, ಆಕೆ ವಾಪಾಸ್ ಆಗುವಳು, ಹಾಗಾಗಿ ಸ್ವಲ್ಪ ದಿನದವರೆಗೂ ಆಕೆಯ ಉಪಟಳದಿಂದ ಮುಕ್ತಿ ಪಡೆಯಬಹುದೆಂಬ ಆಲೋಚನೆ ವೃದ್ಧನದಾಗಿತ್ತು. 

79

ಗ್ರಾಮಸ್ಥರು ಮೊದಲಿಗೆ ಸಂಶಯ ವ್ಯಕ್ತಪಡಿಸಿದರು, ಆದರೆ ಅವರಲ್ಲಿದ್ದ ಭಯವು ಅವರಿಗೆ ಬೇರೆ ದಾರಿಯಿಲ್ಲದಂತೆ ಮಾಡಿತು. ಮಾಟಗಾತಿಯನ್ನು ದೂರವಿಡಬಹುದೆಂಬ ಬಯಕೆಯಿಂದ ಅವರು ತಮ್ಮ ಬಾಗಿಲುಗಳ ಮೇಲೆ ಬಿಳಿ ಸೀಮೆಸುಣ್ಣದಲ್ಲಿ "ನಾಳೆ ಬಾ" ಎಂದು ಬರೆಯಲು ಪ್ರಾರಂಭಿಸಿದರು. ಅಚ್ಚರಿಯ ವಿಷ್ಯ ಅಂದ್ರೆ, ಅದು ಕೆಲಸ ಮಾಡಿತು. ಸಂದೇಶವನ್ನು ನೋಡಿದ ಮಾಟಗಾತಿ ಹಿಂದೆ ಸರಿದಳು, ಆದರೆ ಮರುದಿನ ರಾತ್ರಿ ಹಿಂತಿರುಗಿದಳು ಮತ್ತು ಮತ್ತೆ ಅದೇ ಸಂದೇಶ ಬಾಗಿಲ (message on door)  ಮೇಲೆ ನೋಡಿದಳು. ಇದೇ ಮುಂದುವರೆಯುತ್ತಂತೆ. 

89

"ನಾಳೆ ಬಾ" ಎಂಬುದು ರಕ್ಷಣಾತ್ಮಕ ಮಂತ್ರವಾಯಿತು, ಅಲ್ಲಿಗೆ ಆ ಊರು ದೆವ್ವದಿಂದ ಮುಕ್ತಿ ಪಡೆಯಿತು ಎನ್ನಲಾಗುತ್ತೆ. ಆದರೆ ಕರ್ನಾಟಕದ ಜನರು ಅವಳನ್ನು ದೂರವಿಟ್ಟ ಸರಳ ವಾಕ್ಯದಲ್ಲಿ ಸಾಂತ್ವನವನ್ನು ಕಂಡುಕೊಂಡರು. ವರ್ಷಗಳ ಕಾಲ, ಹಳ್ಳಿಗಳಾದ್ಯಂತ ಬಾಗಿಲುಗಳ ಮೇಲೆ ನಾಳೆ ಬಾ ಎನ್ನುವ ವಾಕ್ಯ ಸಾಮಾನ್ಯ ದೃಶ್ಯವಾಗಿ ಉಳಿಯಿತು.
 

99

ಕಾಲ ಕಳೆದಂತೆ, ಈ ದೆವ್ವದ ಕಥೆ ಬೇರೆ ಬೇರೆ ಅರ್ಥವನ್ನು ಪಡೆಯಿತು. ಕೆಲವರು ಇದನ್ನು ಕೇವಲ ಭೂತದ ಕಥೆ, ಇದೊಂದು ಕಟ್ಟು ಕಥೆ  ಎಂದು ತಳ್ಳಿಹಾಕಿದರೆ, ಇನ್ನು ಕೆಲವರು ಅದರ ಸತ್ಯವನ್ನು ಪ್ರತಿಪಾದಿಸುತ್ತಾ, ತಮಗಾದ ಅನುಭವಗಳು, ಕಾಣೆಯಾದವರ ವಿವರಗಳನ್ನು ನೀಡುತ್ತಾರೆ. ಅಲ್ಲದೇ ಇದೇ ಕಥೆಯನ್ನು ಆಧರಿಸಿ, ಹಿಂದಿಯಲ್ಲಿ ಸ್ತ್ರೀ ಕಲ್ ಆನಾ (Sthree Kal Anaa)ಸಿನಿಮಾ ಕೂಡ ರಿಲೀಸ್ ಆಗಿತ್ತು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಭೂತ
ಪ್ರವಾಸ

Latest Videos
Recommended Stories
Recommended image1
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!
Recommended image2
ನೀಮ್‌ ಕರೋಲಿ ಬಾಬಾ ಆಶ್ರಮದಲ್ಲಿ ನಾನು ಕಂಡದ್ದೇನು!
Recommended image3
Temple Wedding: ಈ ದೇಗುಲಗಳಲ್ಲಿ ಮದುವೆಯಾದ್ರೆ ಪತಿ-ಪತ್ನಿ ಎಂದಿಗೂ ಬೇರೆ ಆಗೋದೆ ಇಲ್ಲ
Related Stories
Recommended image1
ಆತ್ಮಗಳ ಸಂಚಾರವಿದೆ ಎನ್ನಲಾಗುವ ಜಗತ್ತಿನ 7 ಅತೀ ಭಯಾನಕ ಕಾಡುಗಳಿವು
Recommended image2
Warning : ಅಪ್ಪಿ ತಪ್ಪಿ ಈ ನಂಬರ್ Dial ಮಾಡ್ಬೇಡಿ… ಇದು ದೆವ್ವದ ನಂಬರ್ ಸಾವು ಖಚಿತಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved