MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ

ಕೇರಳದ ಈ ದೇಗುಲಕ್ಕೆ ನಾಯಿಯೂ ಪ್ರವೇಶಿಸಬಹುದು, ಸಿಗೋದು ಮೀನಿನ ಪ್ರಸಾದ

ಭಾರತದಲ್ಲಿ ವಿಭಿನ್ನ ರೀತಿಯ, ವಿವಿಧ ವೈಶಿಷ್ಟ್ಯತೆಗಳಿಂದ ಕೂಡಿದ ದೇವಾಲಯಗಳಿವೆ.  ಕೇರಳದಲ್ಲಿನ ಒಂದು ನದಿಯ ದಡದಲ್ಲಿರುವ ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯವು ಅಂತಹ ವೈವಿಧ್ಯಮಯ ಸಂಪ್ರದಾಯವುಳ್ಳ ದೇಗುಲಗಳಲ್ಲಿ ಒಂದಾಗಿದೆ. 

2 Min read
Author : Suvarna News
Published : Jun 10 2023, 05:55 PM IST
Share this Photo Gallery
  • FB
  • TW
  • Linkdin
  • Whatsapp
19

ಭಾರತದ ವೈವಿಧ್ಯತೆಯನ್ನು ಇಲ್ಲಿನ ದೇವಾಲಯಗಳಿಂದ ಕಾಣಬಹುದು. ಈ ದೇವಾಲಯಗಳು ವಿನ್ಯಾಸದಲ್ಲಿ ಮಾತ್ರವಲ್ಲದೆ ಅವುಗಳ ಅಲಂಕಾರ ಮತ್ತು ನಂಬಿಕೆಗಳಲ್ಲಿಯೂ ಭಿನ್ನವಾಗಿವೆ. ಈ ದೇವಾಲಯಗಳಲ್ಲಿ ಪ್ರಸಾದಕ್ಕೆ ವಿಶಿಷ್ಟ ಮಹತ್ವವಿದೆ. ಹಣ್ಣು, ಲಡ್ಡು, ಪುರಿ ಪ್ರಸಾದಗಳಾಗಿ ಲಭ್ಯವಿದೆ, ಆದರೆ ಪ್ರಸಾದದಲ್ಲಿ ಮೀನುಗಳನ್ನು ನೀಡುವ ದೇಗುಲವನ್ನು ನೀವು ಎಂದಾದರೂ ನೋಡಿದ್ದೀರಾ? ಕೇರಳದ ಮುತ್ತಪ್ಪನ್ ದೇವಸ್ಥಾನದಲ್ಲಿ  (Muthappan Temple)ಮೀನನ್ನು ಪ್ರಸಾದದಲ್ಲಿ ನೀಡಲಾಗುತ್ತದೆ. ಇದು ವಿಚಿತ್ರವಾಗಿ ತೋರಬಹುದು, ಆದರೆ ಇದು ನಿಜ.

29

ಇಷ್ಟೇ ಅಲ್ಲ, ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ವಿಶಿಷ್ಟ ವಿಷಯಗಳಿವೆ, ಅದನ್ನು ತಿಳಿದ ನಂತರ ನೀವು ಆಶ್ಚರ್ಯಚಕಿತರಾಗುವಿರಿ. ನದಿಯ ದಡದಲ್ಲಿರುವ ಕಾರಣ, ಈ ದೇವಾಲಯವು ಇಲ್ಲಿನ ಮತ್ತಷ್ಟು ಸುಂದರವಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳೋಣ-

39

ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯದ ಆಸಕ್ತಿದಾಯಕ ಸಂಪ್ರದಾಯಗಳು
ಮುತ್ತಪ್ಪನ್ ದೇವಾಲಯವು (Parassinanikadavu Muthappan temple) ಕೇರಳದ ಕಣ್ಣೂರು ಜಿಲ್ಲೆಯ ತಾಲಿಪರಂಬದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ವಲಪ್ತನಂ ನದಿಯ ದಡದಲ್ಲಿದೆ. ಈ ದೇವಾಲಯದ ಆರಾಧ್ಯ ದೇವತೆ ಶ್ರೀ ಮುತ್ತಪ್ಪನ್. ಜನರ ಪ್ರಕಾರ, ಮುತ್ತಪ್ಪನ್ ಇಲ್ಲಿನ ಪ್ರಧಾನ ದೇವತೆಯಾಗಿದ್ದು, ಶಿವ ಮತ್ತು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಸ್ಥಳೀಯ ಜನರ ಪ್ರಕಾರ, ಇಲ್ಲಿನ ಜಾನಪದ ದೇವತೆಗಳು ಅಸಹಾಯಕ ಮತ್ತು ದುರ್ಬಲ ಜನರ ಹಿತಾಸಕ್ತಿಗಳನ್ನು ರಕ್ಷಿಸುತ್ತಾರೆ. 

49

ದೇವಾಲಯಕ್ಕೆ ಬರುವ ಜನರಿಗೆ ಇಲ್ಲಿ ಉಚಿತ ಆಹಾರ ನೀಡುವುದಲ್ಲದೆ ಉಳಿದುಕೊಳ್ಳಲು ಆಶ್ರಯವನ್ನು ಸಹ ನೀಡಲಾಗುತ್ತದೆ. ದೇವಾಲಯಕ್ಕೆ ಭೇಟಿ ನೀಡಿದ ನಂತರ, ಜನರಿಗೆ ಬೇಯಿಸಿದ ಕಪ್ಪು ಕಡಲೆ ಮತ್ತು ಚಹಾವನ್ನು ನೀಡಲಾಗುತ್ತದೆ. ಅದನ್ನು ಅಲ್ಲಿನ ಜನರು ಪ್ರಸಾದ ಎಂದು ಕರೆಯುತ್ತಾರೆ.

59

ನಾಯಿಗೂ ದೇಗುಲದ ಒಳಗೆ ಅವಕಾಶ
ಯಾವುದೇ ದೇಗುಲಗಳಿಗೆ ನಾಯಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಆದರೆ ಇಲ್ಲಿನ ವಿಶೇಷವೆಂದರೆ, ಜನರಲ್ಲದೆ, ನಾಯಿಗಳಿಗೂ ಈ ದೇವಾಲಯದೊಳಗೆ ಹೋಗಲು ಅವಕಾಶವಿದೆ. ಏಕೆಂದರೆ ಅವು ಭಗವಾನ್ ಮುತ್ತಪ್ಪನ್ ನ ವಾಹನಗಳಾಗಿವೆ (vehicle of Muthappan), ಆದ್ದರಿಂದ ಅವುಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
 

69

ಈ ದೇವಾಲಯವು ಕೂನೂರಿನ ಪರಂಪರೆ
ಪರಶಿನಕಡವು ಶ್ರೀ ಮುತ್ತಪ್ಪನ್ ದೇವಾಲಯವನ್ನು ಕೂನೂರಿನ ಪರಂಪರೆ ಎಂದು ಪರಿಗಣಿಸಲಾಗಿದೆ. ಪ್ರಸಾದದ ಹೊರತಾಗಿ, ಮೀನು ಮತ್ತು ಕಳ್ಳನ್ನು (ಸಾರಾಯಿ) ಇಲ್ಲಿ ಮುತ್ತಪ್ಪನ್ ದೇವರಿಗೆ ಅರ್ಪಿಸಲಾಗುತ್ತದೆ, ಇದನ್ನು ನಂತರ ಜನರಿಗೆ ಸಾಂಪ್ರದಾಯಿಕ ಪ್ರಸಾದವಾಗಿ ಬಡಿಸಲಾಗುತ್ತದೆ. 
 

79

ವಿಶೇಷವೆಂದರೆ ಇದು ಹಿಂದೂ ದೇವಾಲಯವಾಗಿದ್ದರೂ, ವಿವಿಧ ಧರ್ಮಗಳು, ಜಾತಿಗಳು ಮತ್ತು ಪ್ರದೇಶಗಳ ಜನರನ್ನು ಆಕರ್ಷಿಸುತ್ತದೆ. ದೇವಾಲಯದ ಆವರಣದಲ್ಲಿ, ಥೈಯಂ (Theyyam) ನಡೆಯುತ್ತದೆ. ಇದು ಇಲ್ಲಿನ ವಿಶಿಷ್ಟ ರೀತಿಯ ದೈವೀಕ ಸಂಪ್ರದಾಯವಾಗಿದೆ. ನಂತರ ಜನರಿಗೆ ಆಶೀರ್ವಾದ ನೀಡಲಾಗುತ್ತೆ. ಥೈಯಂ ನೋಡಲು ವಿವಿದೆಡೆಯಿಂದ ಜನರು ಬರುತ್ತಾರೆ. .

89

ಕೂನೂರು ರೈಲ್ವೆ ನಿಲ್ದಾಣವನ್ನು (Railway Station) ತಲುಪಿದ ನಂತರ, ನೀವು ಬಸ್, ಟ್ಯಾಕ್ಸಿ ಇತ್ಯಾದಿಗಳ ಮೂಲಕ ಪರಶಿನಕಡವು ತಲುಪಬಹುದು. ಇದು ನಿಮಗೆ ಅರ್ಧ ಗಂಟೆ ಅಥವಾ ಒಂದು ಗಂಟೆ ದಾರಿಯಾಗಿದೆ. ಮಂಗಳೂರಿನಿಂದಲೂ ನೀವು ರೈಲಿನ ಮೂಲಕ ಈ ತಾಣಕ್ಕೆ ಪ್ರಯಾಣ ಬೆಳೆಸಬಹುದು.

99

ಪ್ರವಾಸಿ ತಾಣಗಳು :
ಕೂನೂರಿನ ಈ ದೇವಾಲಯವನ್ನು ಹೊರತುಪಡಿಸಿ, ಅನೇಕ ಪ್ರವಾಸಿ ಸ್ಥಳಗಳಿವೆ, ನೀವು ಬಯಸಿದರೆ ಇಲ್ಲಿದೆ ಭೇಟಿ ನೀಡಬಹುದು. ಕಡಲತೀರಗಳು, ವಸ್ತುಸಂಗ್ರಹಾಲಯಗಳು, ಸ್ನೇಕ್ ಪಾರ್ಕ್, ವಾಟರ್ ಪಾರ್ಕ್ ಮೊದಲಾದವುಗಳು ಹತ್ತಿರದಲ್ಲೇ ಇವೆ. ಇಲ್ಲಿ ನೀವು ದೇವರ ದರ್ಶನದ ಜೊತೆಗೆ ಸುತ್ತಲಿನ ಪ್ರದೇಶದಲ್ಲಿ ಎಂಜಾಯ್ ಕೂಡ ಮಾಡಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಕೇರಳ
ಪ್ರವಾಸ

Latest Videos
Recommended Stories
Recommended image1
ಬಡವರೇ ಇಲ್ಲದ ದೇಶ ಇದು, ಕಷ್ಟದ ಸಮಯದಲ್ಲಿ ಸರ್ಕಾರವೇ ತುಂಬಿಸುತ್ತೆ ಜನರ ಜೇಬು!
Recommended image2
ಐಷಾರಾಮಿ ಹೋಟೆಲ್‌ಗಿಂತಲೂ ಚಂದ ಈ ರೈಲ್ವೆ ಸ್ಟೇಷನ್ ವಾಸ್ತವ್ಯ! ನೀಲಗಿರಿ ತಪ್ಪಲಿನಲ್ಲಿ 'ರಾಜಮನೆತನದ' ಅನುಭವ!
Recommended image3
Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved