- Home
- Life
- Travel
- Blood River of India: ಈ ರಾಜ್ಯದಲ್ಲಿ ಹರಿಯುತ್ತೆ ಭಾರತದ ಏಕೈಕ ರಕ್ತಸಿಕ್ತ ನದಿ.. ಕೆಂಪು ಬಣ್ಣಕ್ಕೆ ಕಾರಣವೇನು?
Blood River of India: ಈ ರಾಜ್ಯದಲ್ಲಿ ಹರಿಯುತ್ತೆ ಭಾರತದ ಏಕೈಕ ರಕ್ತಸಿಕ್ತ ನದಿ.. ಕೆಂಪು ಬಣ್ಣಕ್ಕೆ ಕಾರಣವೇನು?
ಭಾರತದ ಈ ರಾಜ್ಯದಲ್ಲಿ ಹರಿಯುತ್ತಿರುವ ನದಿಯೊಂದು ಕೆಂಪು ಬಣ್ಣವನ್ನ ಹೊಂದಿದೆ. ಅದೇ ಕಾರಣಕ್ಕೆ ಈ ನದಿಯನ್ನು ರಕ್ತ ನದಿ ಎನ್ನುತ್ತಾರೆ. ಈ ನದಿಗೆ ಕೆಂಪು ಬಣ್ಣ ಬರೋದಕ್ಕೆ ಕಾರಣ ಏನು ಗೊತ್ತಾ?

ಭಾರತದಲ್ಲಿ ಒಂದು ನದಿ ಇದೆ, ಅದನ್ನು ಜನರು 'ರಕ್ತಸಿಕ್ತ ನದಿ' (bloody river) ಎಂದು ಕರೆಯುತ್ತಾರೆ. ಅದರ ಹೆಸರು ಕೇಳಿದರೆ ಸಾಕು, ಭಯ ಆಗುತ್ತೆ. ಕೆಂಪು ನೀರು ಮತ್ತು ಭಯಾನಕ ಪ್ರವಾಹ ಆ ನದಿಯನ್ನು ನಿಗೂಢವಾಗಿಸುತ್ತದೆ. ಇದರ ಹಿಂದಿನ ಸತ್ಯ ಏನು ಗೊತ್ತಾ?
ಲೋಹಿತ್ ನದಿಯನ್ನು (Lohit River) 'ರಕ್ತಸಿಕ್ತ ನದಿ' ಎಂದೂ ಕರೆಯುತ್ತಾರೆ. ಈ ನದಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಮೂಲಕ ಹರಿಯುತ್ತದೆ. ಅಷ್ಟಕ್ಕೂ ಈ ನದಿ ಯಾಕೆ ಕೆಂಪು ಬಣ್ಣದಿಂದ ಕೂಡಿದೆ. ಇದರ ನೀರು ಕೆಂಪಾಗಿ ಕಾಣೋದಕ್ಕೆ ರಕ್ತ ಕಾರಣವೇ?
ಲೋಹಿತ್ ನದಿಯು ಪೂರ್ವ ಟಿಬೆಟ್ನಲ್ಲಿರುವ ಝಯಾಲ್ ಚು ಪರ್ವತ ಶ್ರೇಣಿಯಿಂದ ಹುಟ್ಟುತ್ತದೆ. ಈ ನದಿ ಅರುಣಾಚಲ ಪ್ರದೇಶದಲ್ಲಿ ಸುಮಾರು 200 ಕಿಲೋಮೀಟರ್ ಹರಿಯುತ್ತದೆ. ಇದಾದ ನಂತರ ಅದು ಅಸ್ಸಾಂನ ಬಯಲು ಪ್ರದೇಶವನ್ನು ಪ್ರವೇಶಿಸುತ್ತದೆ. ಲೋಹಿತ್ ನದಿ ಅಂತಿಮವಾಗಿ ಬ್ರಹ್ಮಪುತ್ರ ನದಿಯನ್ನು (Brahmaputra river) ಸೇರುತ್ತದೆ.
ಈ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗೋದಕ್ಕೆ ಏನು ಕಾರಣ ಗೊತ್ತಾ? ಖಂಡಿತವಾಗಿಯೂ ನೀವು ಅಂದುಕೊಂಡಂತೆ ಇದಕ್ಕೆ ಕಾರಣ ರಕ್ತ ಅಲ್ವೇ ಅಲ್ಲ. ಇಲ್ಲಿ ನದಿಯಲ್ಲಿ ಕೆಂಪು ಮಣ್ಣು ಇರೋದರಿಂದ, ನದಿ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಹಾಗಾಗಿಯೇ ಈ ನದಿಯನ್ನು ರಕ್ತ ನದಿ ಅಥವಾ ಬ್ಲಡಿ ರಿವರ್ ಎನ್ನುತ್ತಾರೆ.
ಅಷ್ಟೇ ಅಲ್ಲ ಲೋಹಿತ್ ನದಿಗೆ ಅದರ ಅಪಾಯಕಾರಿ ಹರಿವು ಮತ್ತು ಬಣ್ಣದಿಂದಾಗಿ ಈ ಹೆಸರು ಬಂದಿದೆ. ಈ ನದಿಯು ತುಂಬಾನೆ ವೇಗದಲ್ಲಿ ಹರಿಯುತ್ತದೆ. ಇದರ ವೇಗಕ್ಕೆ ಜೀವವೇ ಹೋಗಬಹುದು ಅಷ್ಟೊಂದು ವೇಗವಾಗಿ ಹರಿಯುತ್ತೆ ನದಿ, ಜೊತೆಗೆ ಇದರ ಬಣ್ಣ ಕೆಂಪಾಗಿರೋದರಿಂದ ಈ ನದಿಯನ್ನು ರಕ್ತ ನದಿ ಎನ್ನುತ್ತಾರೆ.
ಈ ನದಿಯು ನೈಸರ್ಗಿಕ ಸೌಂದರ್ಯ ಮತ್ತು ನಿಗೂಢತೆಯಿಂದ ತುಂಬಿದೆ. ಈ ನದಿ ಕೇವಲ ಭಯಾನಕ ಮಾತ್ರ ಅಲ್ಲ. ನೈಸರ್ಗಿಸ ಸೌಂದರ್ಯದಿಂದ ಕೂಡ ಕೂಡಿದೆ. ಕೊನೆಯದಾಗಿ ಇದು ಬ್ರಹ್ಮ ಪುತ್ರ ನದಿಯನ್ನು ಸೇರಿ ದೊಡ್ಡ ನದಿಯಾಗಿ ಹರಿಯುತ್ತೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.