MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Travel
  • ಪಶುಪತಿನಾಥನ ಲಿಂಗವು ದೇಗುಲದಿಂದ ಮರೆಯಾದರೆ ಈ ಕಲಿಯುಗದ ಅಂತ್ಯ ಖಚಿತ!

ಪಶುಪತಿನಾಥನ ಲಿಂಗವು ದೇಗುಲದಿಂದ ಮರೆಯಾದರೆ ಈ ಕಲಿಯುಗದ ಅಂತ್ಯ ಖಚಿತ!

ಪಶುಪತಿನಾಥ ಮಂದಿರದಲ್ಲಿರುವ ಶಿವ ವಿಗ್ರಹ ಮುಳುಗಿದರೆ ಕಲಿಯುಗ ಅಂತ್ಯ ಖಚಿತ. ಈ ಭೂಮಿ ಮೇಲೆ ಅಧರ್ಮ, ಅಸತ್ಯ ಹೆಚ್ಚಾದಾಗ ಇದು ಸಂಭವಿಸುತ್ತೆ.  

1 Min read
Pavna Das
Published : Apr 01 2025, 04:41 PM IST| Updated : Apr 01 2025, 05:21 PM IST
Share this Photo Gallery
  • FB
  • TW
  • Linkdin
  • Whatsapp
17

ನೇಪಾಳ ಮತ್ತು ಭಾರತದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇದರಲ್ಲಿ ಪಶುಪತಿನಾಥವು (Pashupatinath Mandir) ಶಿವನ ಶಕ್ತಿಯ ಕೇಂದ್ರವಾಗಿದೆ ಮತ್ತು ಕೇದಾರನಾಥವು ಶಿವನ ಭಕ್ತಿಯ ಸಂಕೇತವಾಗಿದೆ. ಪಶುಪತಿನಾಥ ಮಂದಿರದಲ್ಲಿ ನೀವು ಶಿವನ 'ಮುಖ'ವನ್ನು ನೋಡಬಹುದು.

27

ಶಿವನನ್ನು ಸಂಪೂರ್ಣವಾಗಿ ಮೆಚ್ಚಿಸಲು, ಅವನ ಎರಡೂ ರೂಪಗಳಾದ ಕೇದಾರನಾಥ (ಭೌತಿಕ ರೂಪ) ಮತ್ತು ಪಶುಪತಿನಾಥ (ಮುಖ ರೂಪ) ಗಳ ದರ್ಶನ ಅತ್ಯಗತ್ಯವೆಂದು ಪರಿಗಣಿಸಲಾಗಿದೆ. ಪಶುಪತಿನಾಥವು ಶಿವನ ಶಕ್ತಿಯ ಕೇಂದ್ರವಾಗಿದೆ.
 

37

ನೇಪಾಳದ ಕಠ್ಮಂಡುವಿನಲ್ಲಿ (Kathmandu of Nepal) ನೆಲೆಗೊಂಡಿರುವ ಪಶುಪತಿನಾಥ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿವೆ, ಅವುಗಳಲ್ಲಿ ಒಂದು ಕಲಿಯುಗದ ಅಂತ್ಯಕ್ಕೆ ಸಂಬಂಧಿಸಿದೆ. ಕಲಿಯುಗಕ್ಕೂ ಪಶುಪತಿ ನಾಥನ ಮಂದಿರಕ್ಕೂ ಏನು ಸಂಬಂಧ ಅನ್ನೋದನ್ನು ನೋಡೋಣ. 
 

47

 ಭೂಮಿ ಮೇಲೆ ಈಗಾಗಲೇ ಹಿಂಸಾಚಾರ, ಭೂಮಿಯ ಪತನ ನಡೆಯುತ್ತಿದೆ. ಇದೆಲ್ಲವೂ ನಿಧಾನವಾಗಿ ಕಲಿಯುವೂ ಅಂತ್ಯವಾಗುತ್ತಿದೆ ಅನ್ನೋದನ್ನು ಸೂಚಿಸುತ್ತೆ. ಕಲಿಯುಗವು ಉತ್ತುಂಗದಲ್ಲಿದ್ದಾಗ, ಪಶುಪತಿನಾಥ ದೇವಾಲಯದಲ್ಲಿರುವ ಶಿವಲಿಂಗವು ಬಾಗಮತಿ ನದಿಯಲ್ಲಿ ಮುಳುಗುತ್ತದೆ ಎಂದು ನಂಬಲಾಗಿದೆ.

57

ಈ ಘಟನೆಯು ಈ ಯುಗದ ಅಂತ್ಯ ಮತ್ತು ಹೊಸ ಯುಗದ ಆರಂಭವನ್ನು ಗುರುತಿಸುತ್ತದೆ. ಹೌದು ಪಶುಪತಿನಾಥನ ಲಿಂಗವು ಈ ಭೂಮಿಯ ರಕ್ಷಣೆಯ ಸಂಕೇತ, ಆ ಲಿಂಗವು ಯಾವಾಗಲೂ ನದಿಯಲ್ಲಿ ಲೀನವಾಗುತ್ತೋ, ಅಂದು ಕಲಿಯುಗ ಅಂತ್ಯ ಕಾಣುತ್ತದೆ. 
 

67

ಸಮಾಜದಲ್ಲಿ ಧರ್ಮ, ಸತ್ಯ ಮತ್ತು ನೈತಿಕತೆಯ ಸಂಪೂರ್ಣ ಕುಸಿತ ಯಾವಾಗ ಸಂಭವಿಸುತ್ತದೆಯೋ, ಇದರೊಂದಿಗೆ ಅಧರ್ಮ ಹೆಚ್ಚಾಗುತ್ತದೆ, ಅನೈತಿಕತೆ ಹೆಚ್ಚುತ್ತದೆ, ಭೂಮಿಯ ಮೇಲೆ ಅಸತ್ಯವೇ ತುಂಬಿರುತ್ತೆ. ಅತ್ಯಂತ ಕೆಟ್ಟ ದಿನಗಳು ಬರುವ ಸಮಯದದಲ್ಲಿ ಪಶುಪತಿನಾಥನು ಈ ಸ್ಥಳವನ್ನು ತೊರೆಯುತ್ತಾನೆ ಎನ್ನುವ ನಂಬಿಕೆ ಇದೆ.
 

77

ಪಶುಪತಿನಾಥ ದೇವಾಲಯದಲ್ಲಿ ಶಿವ ಇರುವವರೆಗೆ, ಕಲಿಯುಗದ ದುಷ್ಟ ಶಕ್ತಿಗಳು ಭೂಮಿಯ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ. ಆದರೆ ಯಾವಾಗ ಪಶುಪತಿನಾಥ ಆ ಸ್ಥಾನದಿಂದ ಎದ್ದು ಹೊರಡುವನೋ, ದುಷ್ಟ ಶಕ್ತಿಗಳಿಂದ ಭೂಮಿಯೇ ಅಂತ್ಯವಾಗುತ್ತೆ. 
 

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರವಾಸ
ಜೀವನಶೈಲಿ
ದೇವಸ್ಥಾನ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved