MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • YASH: ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?

YASH: ಅಂದು IIFA ವೇದಿಕೆಯಲ್ಲಿ ಯಶ್ ಆಡಿದ್ದ ಮಾತೇನು? ಇಂದು 'ವಿಷಕಾರಿ' ಆಗಿರೋ ರಾಕಿಂಗ್ ಸ್ಟಾರ್ ಮಾಡಿದ್ದೇನು?

ನಟ ಯಶ್ ಅವರು ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಫಿಲಂಪೇರ್ ಅವಾರ್ಡ್ ಪಡೆದು ಅಂದು ನಟ ಯಶ್ ಅವರು ಆಡಿದ್ದ ಮಾತುಗಳು ಅವು.. ಹಾಗಿದ್ದರೆ ನಟ ಯಶ್ ಅವರು ಅದೇನು ಹೇಳಿದ್ದರು? ಯಾಕೆ ಅದು ಇಷ್ಟೊಂದು ವೈರಲ್ ಆಗ್ತಿದೆ? ಈ ಸ್ಟೋರಿ ನೊಡಿ..

2 Min read
Author : Shriram Bhat
Published : Jan 16 2026, 10:55 AM IST
Share this Photo Gallery
  • FB
  • TW
  • Linkdin
  • Whatsapp
114
Image Credit : Asianet News

ನಟ ಯಶ್ (Rocking Star Yash) ಅವರು ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. 

214
Image Credit : Asianet News

ಫಿಲಂಪೇರ್ ಅವಾರ್ಡ್ ಪಡೆದು ಅಂದು ನಟ ಯಶ್ ಅವರು ಆಡಿದ್ದ ಮಾತುಗಳು ಅವು.. ಹಾಗಿದ್ದರೆ ನಟ ಯಶ್ ಅವರು ಅದೇನು ಹೇಳಿದ್ದರು? ಯಾಕೆ ಅದು ಇಷ್ಟೊಂದು ವೈರಲ್ ಆಗ್ತಿದೆ? ಈ ಸ್ಟೋರಿ ನೊಡಿ..

Related Articles

Related image1
ಸಂಕಷ್ಟಕ್ಕೆ ಸಿಲುಕಿದ ಟಾಕ್ಸಿಕ್; ಮೌತ್‌ ಟಾಕ್ ಮೂಲಕ ಜಗತ್ತು ಹೇಳ್ತಿರೋದೇನು..? ಯಶ್ ಮುಂದಿನ ದಾರಿ?
Related image2
Yash: ರಾಕಿಂಗ್ ಸ್ಟಾರ್ ಬಗ್ಗೆ ಗೀತು ಮೋಹನ್‌ದಾಸ್.. 'ಟಾಕ್ಸಿಕ್' ನಿರ್ದೇಶಕಿಯೇ ಹೀಗೆ ಹೇಳಿದ್ರು!?.. ವೈರಲ್ ಆಗ್ತಿದೆ ಟಾಕ್!
314
Image Credit : Asianet News

ನಟ ಯಶ್ ಅವರು ಐಫಾ ವೇದಿಕೆ ಮೇಲೆ 'ನನಗೆ ತುಂಬಾ ಖುಷಿ ಆಗ್ತಿದೆ ಯಾಕೋ.. ಬಟ್, ನಿಜ ಹೇಳ್ಬೇಕು ಅಂದ್ರೆ ಸಂಚಾರಿ ವಿಜಯ್ ಇಲ್ಲಿದಾರೆ. ನ್ಯಾಷನಲ್ ಅವಾರ್ಡ್ ವಿನ್ನರ್.. ಅವ್ರ ಸಿನಿಮಾನ ನೋಡಿದೆ.. ಅವ್ರ ಪರ್‌ಫಾರ್ಮನ್ಸ್‌ ಮುಂದೆ ನಂದೇನೂ ಇಲ್ಲ. ಸಂಚಾರಿ ವಿಜಯ್ ನಮ್ಮ ಕರ್ನಾಟಕದ ಆಸ್ತಿ ಅಂತ ಹೇಳೋಕೆ ಇಷ್ಟಪಡ್ತೀನಿ..

414
Image Credit : Asianet News

ನಮ್ಮ ಕನ್ನಡ ಚಿತ್ರರಂಗಕ್ಕೆ ನ್ಯಾಷನಲ್ ಅವಾರ್ಡ್ ತಂದುಕೊಡೋ ಮೂಲಕ ನಮ್ಮೆಲ್ಲರಿಗೂ ಗೌರವ ತಂದುಕೊಟ್ಟಿದಾರೆ.. ಅಷ್ಟೇ ಅಲ್ಲ, ನಿರೂಪ್ ಭಂಡಾರಿ ಸೇರಿದಂತೆ ಹಲವಾರು ಉದಯೋನ್ಮುಖ ಕಲಾವಿದರು ಬರ್ತಿದಾರೆ..

514
Image Credit : Asianet News

ನಾನು ಒಂದೇ ಕೇಳೋದು.. ನಮ್ಮ ಭಾಷೆ, ನಮ್ಮ ಚಿತ್ರ, ನಮ್ಮ ಹಿರಿಯರು ಏನು ನಮ್ಮ ಚಿತ್ರರಂಗಕ್ಕೆ ಗೌರವ ತಂದುಕೊಟ್ಟಿದಾರೆ, ಸೇವೆ ಸಲ್ಲಿಸಿದಾರೆ, ಅವೆಲ್ಲಾ ಅಪಾರವಾಗಿದೆ.. ಅದನ್ನು ಇನ್ನಷ್ಟು ಬೆಳೆಸುವಂಥ ಪ್ರಯತ್ನ ಮಾಡೋಣ..

614
Image Credit : Asianet News

ಶಿವಣ್ಣ ನಮಗೆಲ್ಲರಿಗೂ ಪ್ರೋತ್ಸಾಹ ಕೊಡ್ತಿದಾರೆ.. ಅವ್ರು ಇಲ್ಲಿರೋದೇ ನಮ್ಮೆಲ್ಲರಿಗೂ ಸ್ಪೂರ್ತಿ.. ಐಫಾದವ್ರಿಗೆ ಒಂದು ಹೇಳೋಕೆ ಇಷ್ಟಪಡ್ತೀನಿ.. ಹೈದ್ರಾಬಾದ್‌ನಲ್ಲಿ ನಡೆಸಿದ್ದೀರಿ, ವೆರಿಗುಡ್.. ಇಲ್ಲಿ ನಡೆಸ್ತಾ ಇದೀರ.. ಬೆಂಗಳೂರಿಗೆ ಕೂಡ ಬರ್ಲಿ...

714
Image Credit : Asianet News

ಕರ್ನಾಟಕಕ್ಕೆ ಸ್ವಲ್ಪ ನಮ್ ಪ್ರೀತಿ ತೋರ್ಸೋಣ.. ಬೆಂಗಳೂರು ಪ್ರೀತಿ, ಬೆಂಗಳೂರಿ ಆಡಿಯನ್ಸ್ ಖದರ್, ಹಾಗೂ ಬೆಂಗಳೂರು ಸ್ಟೈಲ್ ಸ್ವಲ್ಪ ತೋರಿಸೋಕೆ ಇಷ್ಟಪಡ್ತೀವಿ.. ಥ್ಯಾಂಕ್ಸ್ ಎಂದು ನಟ ಯಶ್ ಅವರು ಅಂದು ಐಫಾ (IIFA) ವೇದಿಕೆ ಮೇಲೆ ಹೇಳಿದ್ದರು.

814
Image Credit : Asianet News

International Indian Film Academy Awards (ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಯನ್ನು ನಟ ಯಶ್ ಅವರು 2014ರಲ್ಲಿ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾಗೆ ಹಾಗೂ 2018ರಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕಾಗಿ ಈ ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಟ ಯಶ್ ಅವರು ವೇದಿಕೆಯಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.

914
Image Credit : Asianet News

ಅಂದು ನಟ ಯಶ್ ಆಡಿರುವ ಈ ಮಾತುಗಳ ಬಗ್ಗೆ ಇಂದೂ ಸಹ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಲೇ ಇವೆ. 

1014
Image Credit : Asianet News

ಕಾರಣ, ಅಂದು ತಮಗೆ ಪ್ರಶಸ್ತಿ ಬಂದಿದ್ದರೂ ಕೂಡ, ಆ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದೇ, ನ್ಯಾಷನಲ್ ಅವಾರ್ಡ್ ವಿನ್ನರ್, ಈಗ ದಿವಂಗತರಾಗಿರುವ ನಟ ಸಂಚಾರಿ ವಿಜಯ್ ಬಗ್ಗೆ ಹೇಳಿದ್ದನ್ನು ಹಲವರು ಮೆಚ್ಚಿಕೊಂಡಿದ್ದಾರೆ.

1114
Image Credit : Asianet News

ಜೊತೆಗೆ, ಶಿವಣ್ಣ, ಕನ್ನಡ ಭಾಷೆ ಹಾಗೂ ಕರ್ನಾಟಕದ ಬಗ್ಗೆ ನಟ ಯಶ್ ಅವರು ಅಂದು ಮಾತನ್ನಾಡಿದ್ದರು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಆ ಫಿಲಂಪೇರ್ ಸಮಾರಂಭ ನಡೆಯಬೇಕು, ಕನ್ನಡದ ಜನ, ಕರ್ನಾಟಕ ಹೆಸರು ಮಾಡಬೇಕು ಎಂಬ ಉದ್ದೇಶ ಹಾಗೂ ಆಸೆಯನ್ನು ಅಂದೇ ನಟ ಯಶ್ ಅವರು ವ್ಯಕ್ತಪಡಿಸಿದ್ದರು.

1214
Image Credit : Asianet News

ಜೊತೆಗೆ, ಅ ಗುರಿಯನ್ನು ಅಂದೇ ಅವರು ತುಂಬಾ ಸ್ಪಷ್ಟವಾಗಿ ಹೊಂದಿದ್ದರು. ಅದೀಗ ಕಾರ್ಯರೂಪಕ್ಕೆ ತಂದು ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

1314
Image Credit : Asianet News

ಜೊತೆಗೆ, ಬಿಗ್ ಬಜೆಟ್ ಹಾಗೂ ಇಂಟರ್‌ನ್ಯಾಷಬಲ್ ಲೆವೆಲ್‌ನ ಸಿನಿಮಾ 'ಟಾಕ್ಸಿಕ್' ನಟನೆಯ ಮೂಲಕ ಜಾಗತಿಕ ಐಕಾನ್, ಅಂದರೆ ಪ್ಯಾನ್ ವರ್ಲ್ಡ್ ಸ್ಟಾರ್ ಆಗಲು ಹೊರಟಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್.

1414
Image Credit : Asianet News

ಅಂದಹಾಗೆ, ನಟ ಯಶ್ ಅವರ ಅಪಾರ ನಿರೀಕ್ಷೆಯ ‘ಟಾಕ್ಸಿಕ್’ ಸಿನಿಮಾ 19 ಮಾರ್ಚ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಬಿಡುಗಡೆ ಆಗಿರುವ ಟೀಸರ್ ಬಳಿಕ ಟಾಕ್ಸಿಕ್ ಚಿತ್ರದ ಬಗ್ಗೆ ವಿವಾದಗಳು ಹಾಗೂ ಭಾರೀ ನಿರೀಕ್ಷೆ ಎರಡೂ ಮನೆ ಮಾಡಿವೆ. ಮುಂದಿನ ಬೆಳವಣಿಗೆಯನ್ನು ಜಗತ್ತು ಸೂಕ್ಷ್ಮವಾಗು ಕುತೂಹಲದಿಮದ ಕಾಯುತ್ತಿದೆ.    

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ಸ್ಯಾಂಡಲ್‌ವುಡ್
ಕನ್ನಡ ಚಲನಚಿತ್ರಗಳು
ಸುದ್ದಿ

Latest Videos
Recommended Stories
Recommended image1
ಗಿಲ್ಲಿನೇ ಗೆಲ್ಬೇಕು ಅಂತ ಗಲಾಟೆ ಆಗ್ತಿರೋದು ಯಾಕೆ? ಈ ಪ್ರಚಾರದ ಹಿಂದಿನ ಕಾಣದ ಕೈ-ಬಾಯಿ ಯಾವುದು?
Recommended image2
ನಟಿ ಕಾರುಣ್ಯ ರಾಮ್ ತಂಗಿಯ ಜೂಜಾಟಕ್ಕೆ ಬೀದಿಗೆ ಬಿದ್ದ ಕುಟುಂಬ, ಸಂಪಾದಿಸಿದ ಗೌರವ ಸಹೋದರಿಯಿಂದ ಹೋಯ್ತೆಂದು ಕಣ್ಣೀರು!
Recommended image3
Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
Related Stories
Recommended image1
ಸಂಕಷ್ಟಕ್ಕೆ ಸಿಲುಕಿದ ಟಾಕ್ಸಿಕ್; ಮೌತ್‌ ಟಾಕ್ ಮೂಲಕ ಜಗತ್ತು ಹೇಳ್ತಿರೋದೇನು..? ಯಶ್ ಮುಂದಿನ ದಾರಿ?
Recommended image2
Yash: ರಾಕಿಂಗ್ ಸ್ಟಾರ್ ಬಗ್ಗೆ ಗೀತು ಮೋಹನ್‌ದಾಸ್.. 'ಟಾಕ್ಸಿಕ್' ನಿರ್ದೇಶಕಿಯೇ ಹೀಗೆ ಹೇಳಿದ್ರು!?.. ವೈರಲ್ ಆಗ್ತಿದೆ ಟಾಕ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved