MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • News
  • ಜೈಲಿಂದಲೇ ಅಭಿಮಾನಿಗಳಿಗೆ ದೊಡ್ಡ ಮೆಸೇಜ್‌ ಕಳಿಸಿದ ದರ್ಶನ್‌, ವಿಜಯಲಕ್ಷ್ಮೀ ಹೇಳಿದ್ರು ಸೀಕ್ರೆಟ್‌

ಜೈಲಿಂದಲೇ ಅಭಿಮಾನಿಗಳಿಗೆ ದೊಡ್ಡ ಮೆಸೇಜ್‌ ಕಳಿಸಿದ ದರ್ಶನ್‌, ವಿಜಯಲಕ್ಷ್ಮೀ ಹೇಳಿದ್ರು ಸೀಕ್ರೆಟ್‌

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದಿರುವ ಅವರು, ಡಿಸೆಂಬರ್ 12 ರಂದು ಬಿಡುಗಡೆಯಾಗಲಿರುವ ತಮ್ಮ 'ಡೆವಿಲ್' ಚಿತ್ರಕ್ಕೆ ಹೆಚ್ಚು ಪ್ರೀತಿ ನೀಡುವಂತೆ ಕೇಳಿಕೊಂಡಿದ್ದಾರೆ.

1 Min read
Santosh Naik
Published : Nov 20 2025, 08:00 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : X

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ ಅವರ ಕ್ರೇಜ್‌ ಒಂದು ಪೈಸೆ ಕೂಡ ಕಡಿಮೆಯಾಗಿಲ್ಲ. ಅವರ ಬಹುನಿರೀಕ್ಷಿತ ಸಿನಿಮಾ 'ಡೆವಿಲ್‌' ಡಿಸೆಂಬರ್‌ 12 ರಂದು ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ದರ್ಶನ್‌ ಅವರು ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಬಲವಾದ ಸಂದೇಶ ರವಾನಿಸಿದ್ದಾರೆ.

29
Image Credit : X

ಪತ್ನಿ ವಿಜಯಲಕ್ಷ್ಮಿ ಮೂಲಕ ದರ್ಶನ್‌ ಸಂದೇಶ ಕಳಿಸಿದ್ದಾರೆ. ಡಿ 'ಡೆವಿಲ್‌' ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು, ದರ್ಶನ್‌ ಜೈಲಿನಿಂದಲೇ ಅಭಿಮಾನಿಗಳ ಬಗ್ಗೆ ಆಡಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ:

Related Articles

Related image1
ಜೈಲಲ್ಲಿರೋ ದರ್ಶನ್.. ಫ್ಯಾನ್ಸ್ ಜೊತೆ ವಿಜಯಲಕ್ಷ್ಮೀ ಕನೆಕ್ಷನ್.. 'ದಾಸ'ನ ಪತ್ನಿ ಕೊಟ್ಟ ಸೂಚನೆ ಏನು..?
Related image2
ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್‌ ವಿಚಾರಣೆ ನ.19ಕ್ಕೆ ಮುಂದೂಡಿದ ಸಿಟಿ ಸಿವಿಲ್‌ ಕೋರ್ಟ್‌
39
Image Credit : X

"ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ..' ಎಂದು ದರ್ಶನ್‌ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ ಎಂದು ವಿಜಯಲಕ್ಷ್ಮಿ ಹೇಳಿದರು. ಆ ಮೂಲಕ ದರ್ಶನ್‌ ಆತ್ಮಸ್ಥೈರ್ಯದ ಮಾತುಗಳನ್ನಾಡಿದ್ದಾರೆ.

49
Image Credit : X

"ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, 'ಡೆವಿಲ್‌'ಗೆ ಹೆಚ್ಚು ಪ್ರೀತಿ ಕೊಡಿ ಅಂತ ದರ್ಶನ್‌ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ..' ಎಂದು ದರ್ಶನ್‌ ಅಭಿಮಾನಿಗಳ ಸಂಘಗಳ ಮುಖಂಡರು ಇದ್ದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಹೇಳಿದ್ದಾರೆ.

59
Image Credit : X

ಈ ಮಾತುಗಳಿಂದ ಉತ್ಸಾಹಿತರಾದ ಅಭಿಮಾನಿಗಳು, ಕಾರ್ಯಕ್ರಮದಲ್ಲಿ 'ಡಿ ಬಾಸ್.. ಡಿ ಬಾಸ್‌' ಎಂದು ಜೈಕಾರ ಹಾಕಿದ್ದಾರೆ.

69
Image Credit : X

'ತಾರಕ್‌' ಚಿತ್ರದ ನಂತರ ಪ್ರಕಾಶ್‌ ವೀರ್‌ ಅವರೊಂದಿಗೆ ದರ್ಶನ್‌ ಕೈಜೋಡಿಸಿರುವ 'ಡೆವಿಲ್‌' ಸಿನಿಮಾವು ನಟನ ವೃತ್ತಿಜೀವನಕ್ಕೆ ಅತ್ಯಂತ ಮಹತ್ವದ ಚಿತ್ರ ಎನಿಸಿಕೊಂಡಿದೆ.

79
Image Credit : X

ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ಶೂಟಿಂಗ್ ಮುಗಿಸಲು ಚಿತ್ರತಂಡ ಹರಸಾಹಸ ಪಟ್ಟಿತ್ತು. ಹೈಕೋರ್ಟ್‌ ಜಾಮೀನು ನೀಡಿದ ಬಳಿಕ ದರ್ಶನ್‌ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು.

89
Image Credit : Instagram

ಅಜನೀಶ್ ಲೋಕನಾಥ್ ಅವರು ಮೊದಲ ಬಾರಿಗೆ ದರ್ಶನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆದರೆ, ರಿಲೀಸ್ ಆಗಿರುವ ಹಾಡುಗಳು ಹರಿಕೃಷ್ಣ-ದರ್ಶನ್ ಕಾಂಬಿನೇಷನ್‌ನಷ್ಟು ಮೋಡಿ ಮಾಡಿಲ್ಲ ಎಂಬ ಅಭಿಪ್ರಾಯಗಳು ದರ್ಶನ್‌ ಅಭಿಮಾನಿಗಳದ್ದಾಗಿದೆ.

99
Image Credit : youtube

ಒಟ್ಟಿನಲ್ಲಿ, 'ಡೆವಿಲ್‌' ಚಿತ್ರವು ದರ್ಶನ್‌ ಅವರ ವೃತ್ತಿಜೀವನದ ಅಳಿವು-ಉಳಿವಿನ ದೃಷ್ಟಿಯಿಂದ ನಿರೀಕ್ಷೆ ಮತ್ತು ಒತ್ತಡ ಎರಡನ್ನೂ ಹೊಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ರೇಣುಕಾಸ್ವಾಮಿ ಪ್ರಕರಣ
ದರ್ಶನ್ ತೂಗುದೀಪ
ಕೊಲೆ
ಕನ್ನಡ ಚಲನಚಿತ್ರಗಳು
ಸಿನಿಮಾ
ಕ್ರೈಮ್ ನ್ಯೂಸ್
ವಿಜಯಲಕ್ಷ್ಮಿ ದರ್ಶನ್
Latest Videos
Recommended Stories
Recommended image1
ವಿಜಯಲಕ್ಷ್ಮೀ ‘ವೈರಲ್’ ಫೀವರ್... ಪತಿಗಾಗಿ ಕಾನೂನು ಕಂಟಕದಲ್ಲಿ ಸಿಲುಕಿಕೊಂಡ್ರಾ ಪತ್ನಿ..?
Recommended image2
Now Playing
ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Recommended image3
ಚಮೇಲಿ ಜೊತೆ ಮಜಾ.. ಸಿಕ್ಕಿಬಿದ್ದ ಸೃಜಾ.. ಏನಿದು ವೈರಲ್ ಆಗಿರೋ ಹೊಸ ಮ್ಯಾಟರ್..?
Related Stories
Recommended image1
ಜೈಲಲ್ಲಿರೋ ದರ್ಶನ್.. ಫ್ಯಾನ್ಸ್ ಜೊತೆ ವಿಜಯಲಕ್ಷ್ಮೀ ಕನೆಕ್ಷನ್.. 'ದಾಸ'ನ ಪತ್ನಿ ಕೊಟ್ಟ ಸೂಚನೆ ಏನು..?
Recommended image2
ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್‌ ವಿಚಾರಣೆ ನ.19ಕ್ಕೆ ಮುಂದೂಡಿದ ಸಿಟಿ ಸಿವಿಲ್‌ ಕೋರ್ಟ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved