MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • NH 169: ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ

NH 169: ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ

ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್‌ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್‌ನಿಂದ ಎಸ್.ಕೆ. ಬಾರ್ಡರ್‌ವರೆಗೆ ನಿಷೇಧಿಸಲಾಗಿದೆ. ಪ

1 Min read
Author : Mahmad Rafik
Published : Jul 09 2026, 07:33 AM IST
Share this Photo Gallery
  • FB
  • TW
  • Linkdin
  • Whatsapp
15
ರಾಷ್ಟ್ರೀಯ ಹೆದ್ದಾರಿ 169
Image Credit : Gemini

ರಾಷ್ಟ್ರೀಯ ಹೆದ್ದಾರಿ 169

ರಾಷ್ಟ್ರೀಯ ಹೆದ್ದಾರಿ 169ರ ಕಿ.ಮೀದಲ್ಲಿನ ಸೇತುವೆಗಳನ್ನು ಪರಿವೀಕ್ಷಣೆ ಮಾಡಿದ್ದು, ಸದರಿ ಕಿರು ಸೇತುವೆಗಳ ಕಲ್ಲುಗಳು ಅಲ್ಲಲ್ಲಿ ಕಿತ್ತು ಬಂದಿರುವುದು, ಕಂಬಗಳು ಭಾಗಶಃ ಹಾನಿಗೊಳಗಾಗಿರೋದು ಕಂಡು ಬಂದಿದ. ಸೇತುವೆ ಸ್ಲಾಬ್ ನ ಬೀಮ್ ಗಳ ಕಾಂಕ್ರೀಟ್ ಅಲ್ಲಲ್ಲಿ ಬಿದ್ದು ಹೋಗಿದ್ದು ಸರಳುಗಳು ಹೊರಚಾಚಿರುವುದು ಮತ್ತು ಸೇತುವೆಗಳ ಕೈಪಿಡಿಗಳು ಬಿದ್ದು ಹೋಗಿರುವುದು ಕಂಡು ಬಂದಿರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರಸ್ತೆ ಕುಸಿಯುವ ಸಾಧ್ಯತೆ
Image Credit : Gemini

ರಸ್ತೆ ಕುಸಿಯುವ ಸಾಧ್ಯತೆ

ಈ ಹೆದ್ದಾರಿ ವಲಯದಲ್ಲಿ ಬರುವ ನಾಲ್ಕು ಕಿರು ಸೇತುವೆಗಳು ತೀರಾ ಶಿಥಿಲಾವಸ್ಥೆಯಲ್ಲಿದ್ದು, ಭಾರಿ ವಾಹನಗಳು ಸಂಚರಿಸಿದರೆ ಕುಸಿಯುವ ಅಪಾಯವಿದೆ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.

Related Articles

Related image1
ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
Related image2
ಮಳೆ ಪ್ರವಾಹಕ್ಕೆ ವಿಷಕಾರಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರ ನಾಶ, ನಗರದೊಳಗೆ ನುಗ್ಗಿದ 900 ಹಾವುಗಳು! Video Viral
35
30-09-2026 ರವರೆಗೆ ನಿಷೇಧ
Image Credit : Gemini

30-09-2026 ರವರೆಗೆ ನಿಷೇಧ

ಈ ಹಿನ್ನೆಲೆ ದಿನಾಂಕ 30-09-2026 ರವರೆಗೆ 12 ಟನ್ ಗಿಂತ ಅಧಿಕ ಭಾರದ ಸರಕು ಸಾಗಾಣಿಕೆಯ (ಟಿಪ್ಪರ್, ಲಾರಿ ಮತ್ತು ಕಟ್ಟಡ ನಿರ್ಮಾಣದ ಸಾಮಾಗ್ರಿಗಳು ಮತ್ತು ಇನ್ನಿತರೆ) ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡ್‌ನಿಂದ ಎಸ್.ಕೆ. ಬಾರ್ಡರ್‌ವರೆಗೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

45
ಪರ್ಯಾಯ ಮಾರ್ಗಗಳು
Image Credit : Gemini

ಪರ್ಯಾಯ ಮಾರ್ಗಗಳು

1. ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.

2. ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು- ಮಾಗುಂಡಿ-ಕಳಸ -ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.

3. ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ - ಬಾಳೆಹೊನ್ನೂರು- ಮಾಗುಂಡಿ-ಕಳಸ-ಕುದುರೆಮುಖ - ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.

55
ಸೇತುವೆಗಳು ಕುಸಿಯುವ ಭೀತಿ
Image Credit : Gemini

ಸೇತುವೆಗಳು ಕುಸಿಯುವ ಭೀತಿ

ಈ ಹೆದ್ದಾರಿಯು ತೀವ್ರ ತಿರುವುಗಳು, ಕಡಿದಾದ ಏರಿ ಹಾಗೂ ಏಕಪಥ (Single Lane) ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಸಂಚಾರ ಅತ್ಯಂತ ಅಪಾಯಕಾರಿ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಚಿಕ್ಕಮಗಳೂರು
ಕರ್ನಾಟಕ ಮಳೆ
ಮಳೆ

Latest Videos
Recommended Stories
Recommended image1
ಗಂಗಾವತಿ: ಮನೆ ಮುಂದೆ ಮಂಡಲ, ಅರಿಶಿನ ಕುಂಕುಮ! ವಾಮಾಚಾರಕ್ಕೆ ಬೆಚ್ಚಿಬಿದ್ದ ಜನ
Recommended image2
Varanasi train emergency delivery: ರೈಲಲ್ಲಿ ಹೆರಿಗೆ ಮಾಡಿಸಿದ ಹಾಸನ ಆಯುರ್ವೇದ ವಿದ್ಯಾರ್ಥಿನಿಯರು (ವಿಡಿಯೋ)
Recommended image3
ವಯನಾಡು ರೀತಿ ರಾಜ್ಯದಲ್ಲೂ ಭೂಕುಸಿತದ ಆತಂಕ! ಚಂದ್ರಗಿರಿ ಪರ್ವತದಲ್ಲಿ ಕುಸಿತಿದೆ ಗುಡ್ಡ!
Related Stories
Recommended image1
ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
Recommended image2
ಮಳೆ ಪ್ರವಾಹಕ್ಕೆ ವಿಷಕಾರಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರ ನಾಶ, ನಗರದೊಳಗೆ ನುಗ್ಗಿದ 900 ಹಾವುಗಳು! Video Viral
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved