MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Karnataka Districts
  • Gokak: 5 kgಯಿಂದ ಆರಂಭ, ಇಂದು ದಿನಕ್ಕೆ 2 ಸಾವಿರ ಕೆಜಿ; 3ನೇ ಕ್ಲಾಸ್ ಓದಿರೋ ಕೋಟಿ ಒಡೆಯ

Gokak: 5 kgಯಿಂದ ಆರಂಭ, ಇಂದು ದಿನಕ್ಕೆ 2 ಸಾವಿರ ಕೆಜಿ; 3ನೇ ಕ್ಲಾಸ್ ಓದಿರೋ ಕೋಟಿ ಒಡೆಯ

ಬೆಳಗಾವಿಯ ಗೋಕಾಕ್‌ನಲ್ಲಿ ಸೈಕಲ್ ಮೇಲೆ 5 ಕೆ.ಜಿ ಕರದಂಟು ಮಾರಾಟ ಆರಂಭಿಸಿದ ಶಂಕರ್ ಅಂಕದವರ್, ಇಂದು ಕೋಟಿಗಳ ಒಡೆಯರಾಗಿದ್ದಾರೆ. ಶುದ್ಧ ತುಪ್ಪ, ಉತ್ತಮ ಬೆಲ್ಲ ಮತ್ತು ಡ್ರೈ ಫ್ರೂಟ್ಸ್ ಬಳಸಿ ತಯಾರಾಗುವ 'ಜನತಾ ಕರದಂಟು' ಇಂದು ಕರ್ನಾಟಕ, ಗೋವಾ, ಮಹಾರಾಷ್ಟ್ರಕ್ಕೂ ತಲುಪಿದೆ.

2 Min read
Author : Mahmad Rafik
Published : Sep 03 2026, 09:50 AM IST
Share this Photo Gallery
  • FB
  • TW
  • Linkdin
  • Whatsapp
15
ಗೋಕಾಕ್ ಪಟ್ಟಣದ ಜನತಾ ಕರದಂಟು
Image Credit : Janata Karadantu FB

ಗೋಕಾಕ್ ಪಟ್ಟಣದ ಜನತಾ ಕರದಂಟು

ಬೆಳಗಾವಿ ಜಿಲ್ಲೆಯ ಗೋಕಾಕ್ ಅಂದ್ರೆ ಎರಡು ವಿಷಯಗಳು ಕಣ್ಮುಂದೆ ಬರುತ್ತವೆ. ಒಂದು ಸುಂದರವಾದ ಫಾಲ್ಸ್, ಮತ್ತೊಂದು ಕರದಂಟು. ಅದರಲ್ಲಿಯೂ ಜನತಾ ಕರದಂಟು ಅಂದ್ರೆ ಇಲ್ಲಿಯ ಜನರಿಗೆ ಸಿಕ್ಕಾಪಟ್ಟೆ ಇಷ್ಟ. 5 ಕೆ.ಜಿ. ಕರದಂಟನ್ನು ಸೈಕಲ್ ಮೇಲೆ ಹೊತ್ತು ಊರೂರು ಸುತ್ತಿ, ಜಾತ್ರೆಗಳಲ್ಲಿ ಮಾರಿ ಬದುಕು ಕಟ್ಟಿಕೊಂಡ ಸಾಧಕರಿವರು. ಇಂದು ಕೋಟಿ ಕೋಟಿ ಒಡೆಯನಾಗಿರುವ ಶಂಕರ್ ಅಂಕದವರ್, ಅಂದ್ರೆ ಇಡೀ ಬೆಳಗಾವಿ ಜಿಲ್ಲೆಗೆ ಜನಪ್ರಿಯರು. ಶಂಕರ್ ಅವರು ತಯಾರಿಸುವ ಕರದಂಟು, ಕರ್ನಾಟಕದ ಮೂಲೆ ಮೂಲೆಯನ್ನು ತಲುಪಿದೆ. ಶಂಕರ್ ಆರಂಭಿಸಿದ ಕರದಂಟು ವ್ಯಾಪಾರವನ್ನು ಆಧುನಿಕ ಮಾರುಕಟ್ಟೆ ತಂತ್ರಜ್ಞಾನದ ಜೊತೆ ಅವರ ಮಗ ಪ್ರಶಾಂತ್ ಮುಂದುವರಿಸಿಕೊಂಡು ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ದಿನಕ್ಕೆ 2 ಸಾವಿರ ಕೆಜಿ ಕರದಂಟು ಮಾರಾಟ
Image Credit : Janata Karadantu FB

ದಿನಕ್ಕೆ 2 ಸಾವಿರ ಕೆಜಿ ಕರದಂಟು ಮಾರಾಟ

ಜನತಾ ಕರದಂಟು ತಯಾರಿಸಲು ಇಲ್ಲಿ ಶುದ್ಧ ತುಪ್ಪ, ಉತ್ತಮವಾದ ಬೆಲ್ಲ, ಪ್ರೀಮಿಯಂ ಕ್ವಾಲಿಟಿಯ ಡ್ರೈ ಫ್ರೂಟ್ಸ್ ಬಳಕೆ ಮಾಡಲಾಗುತ್ತದೆ. ಮೂರು ಬಗೆಯ ಕರದಂಟು (ಸ್ಪೆಷಲ್, ಪ್ರೀಮಿಯಂ ಮತ್ತು ರಾಯಲ್ ಗೋಲ್ಡ್) ಮಾರಾಟ ಮಾಡಲಾಗುತ್ತದೆ. ಈ ಮೂರರಲ್ಲಿ ಸ್ಪೆಷಲ್ ಕರದಂಟು ಶೇ.70 ರಿಂದ ಶೇ.80 ರಷ್ಟು ಮಾರಾಟವಾಗುತ್ತದೆ. ಫ್ಯಾಕ್ಟರಿಯಲ್ಲಿಯೇ ಸುಮಾರು 20 ರಿಂದ 25 ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಾರೆ. ಶಂಕರ್ ಅವರ ಪತ್ನಿಯೇ ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ.

Related Articles

Related image1
Hassan: ದಿನಕ್ಕೆ 5 ಸಾವಿರ ರೂ ಸಂಪಾದನೆ, 26 ಲಕ್ಷದ ಮನೆ ಕಟ್ಟಿಕೊಂಡ ರೈತ ಮಹಿಳೆ ಆಶಾ
Related image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
35
ಡ್ರೈ ಫ್ರೂಟ್ಸ್ ಎಲ್ಲಿಂದ ಬರುತ್ತೆ?
Image Credit : Janata Karadantu FB

ಡ್ರೈ ಫ್ರೂಟ್ಸ್ ಎಲ್ಲಿಂದ ಬರುತ್ತೆ?

ಮುಂಬೈನ ವಾಸಿಯಲ್ಲಿಂದ ಡ್ರೈ ಫ್ರೂಟ್ಸ್ ಖರೀದಿ ಮಾಡಿಕೊಳ್ಳಲಾಗುತ್ತದೆ. ಎಮೆರ್ಜೆನ್ಸಿ ಸಮಯದಲ್ಲಿ ಹುಬ್ಬಳ್ಳಿಯಿಂದ ಖರೀದಿ ಮಾಡಿಕೊಳ್ಳುತ್ತೆ. ಅಮ್ಮಾ ಕರದಂಟು ಮಾಡೋದನ್ನು ನೋಡಿಕೊಳ್ಳುತ್ತಾರೆ. ತಂದೆಯವರು ಔಟ್‌ಲೆಟ್ ಸೇರಿದಂತೆ ಹಣಕಾಸಿನ ವಿಭಾಗ ನೋಡಿಕೊಳ್ಳುತ್ತಾರೆ. ನಾನು ಸೇಲ್, ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಪ್ರಶಾಂತ್ ಹೇಳುತ್ತಾರೆ.

45
ಮಾರುಕಟ್ಟೆ ಜೊತೆ ಹೊಂದಾಣಿಕೆ ಅಗತ್ಯ
Image Credit : Janata Karadantu FB

ಮಾರುಕಟ್ಟೆ ಜೊತೆ ಹೊಂದಾಣಿಕೆ ಅಗತ್ಯ

ತಂದೆಯವರು ದಿನಕ್ಕೆ 5 ಕೆಜಿಯಿಂದ ಕರದಂಟು ವ್ಯಾಪಾರ ಆರಂಭಿಸಿದ್ದರು. ನಾನು ಮತ್ತು ನನ್ನ ಪತ್ನಿ ಇಬ್ಬರು ಎಂಬಿಎ ಓದಿದ್ದೇವೆ. ನಾನು ಏಳನೇ ಕ್ಲಾಸ್‌ನಿಂದಲೇ ಅಂಗಡಿಯಲ್ಲಿ ಕುಳಿತುಕೊಳ್ಳುತ್ತಿದ್ದೆ. ಹಾಗಾಗಿ ಪ್ರಾಕ್ಟಿಕಲ್ ಅನುಭವ ಬಾಲ್ಯದಿಂದಲೇ ಬಂದಿದೆ. ಮಾರುಕಟ್ಟೆ ಜಗತ್ತು ತುಂಬಾ ವೇಗದಲ್ಲಿದ್ದು, ನಾವು ಅದಕ್ಕೆ ತಕ್ಕಂತೆಯೇ ಕೆಲಸ ಮಾಡಬೇಕು. ಡ್ರೈಫ್ರೂಟ್ಸ್ ಬೆಲೆ ಏರಿಳಿತ ಆಗುತ್ತಿರುತ್ತದೆ. ಹಾಗಾಗಿ ಎಲ್ಲಾ ಮಾರುಕಟ್ಟೆ ಬದಲಾವಣೆಗಳೊಂದಿಗೆ ನಾನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿರಬೇಕು. ಫ್ಯಾಕ್ಟರಿ, ಬೇಕರಿ ಸೇರಿದಂತೆ ಎಲ್ಲಾ ವಿಭಾಗ ಸೇರಿ 40 ಜನರು ಕೆಲಸ ಮಾಡುತ್ತಾರೆ.

55
ಫ್ರಾಂಚೈಸಿಯೂ ಲಭ್ಯ
Image Credit : Janata Karadantu FB

ಫ್ರಾಂಚೈಸಿಯೂ ಲಭ್ಯ

ನಮ್ಮ ಕರದಂಟು ಮಾರಾಟ ಮಾಡಲು ಫ್ರಾಂಚೈಸಿಯನ್ನು 2 ಲಕ್ಷ ರೂಪಾಯಿಗೆ ನೀಡುತ್ತೇವೆ. ಗೋಕಾಕ್‌ನಲ್ಲಿ ನನ್ನದೇ ಐದು ಮತ್ತು ಮತ್ತೈದು ಫ್ರಾಂಚೈಸಿಯನ್ನು ನೀಡಿದ್ದೇನೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಜನತಾ ಕರದಂಟು ಸಿಗುತ್ತೆ. ಮಹಾರಾಷ್ಟ್ರ, ಗೋವಾ ಭಾಗಗಳಿಗೂ ನಮ್ಮ ಉತ್ಪನ್ನ ತಲುಪುತ್ತದೆ. ಗೋಕಾಕ್ ಅಂದ್ರೆ ಜನತಾ ಕರದಂಟು ಎಂಬಂತಾಗಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಳಗಾವಿ
ವ್ಯವಹಾರ
ವ್ಯಾಪಾರ ಸುದ್ದಿ
ವ್ಯಾಪಾರ ಕಲ್ಪನೆ

Latest Videos
Recommended Stories
Recommended image1
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ನೌಕರ ಸಾವು; ಮ್ಯಾನೇಜರ್ ಕಿರುಕುಳವೇ ಕಾರಣವೆಂದ ಕುಟುಂಬ!
Recommended image2
ರಾಮನಗರದಲ್ಲಿ ತಯಾರಾದ ಖೋಟಾ ನೋಟು ಯಾವುದಕ್ಕೆ ಬಳಸಲಾಗ್ತಿತ್ತು ಗೊತ್ತಾ? ಪೊಲೀಸರಿಂದ ಸೀಕ್ರೆಟ್ ರಿವೀಲ್!
Recommended image3
ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ: ಹೊಸ ಶಕೆ ಆರಂಭ Chamarajanagar
Related Stories
Recommended image1
Hassan: ದಿನಕ್ಕೆ 5 ಸಾವಿರ ರೂ ಸಂಪಾದನೆ, 26 ಲಕ್ಷದ ಮನೆ ಕಟ್ಟಿಕೊಂಡ ರೈತ ಮಹಿಳೆ ಆಶಾ
Recommended image2
ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು, ₹240ಯಂತೆ 150 kg ಖೋವಾ ಮಾರಾಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved