MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮೂತ್ರ ಮಾಡುವಾಗ ಉರಿ ಉರಿಯಾಗತ್ತಾ? ಈ ಒಂದು ಜ್ಯೂಸ್​ನಲ್ಲಿದೆ ಇದಕ್ಕೆ ರಾಮಬಾಣ...

ಮೂತ್ರ ಮಾಡುವಾಗ ಉರಿ ಉರಿಯಾಗತ್ತಾ? ಈ ಒಂದು ಜ್ಯೂಸ್​ನಲ್ಲಿದೆ ಇದಕ್ಕೆ ರಾಮಬಾಣ...

ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಬರುವುದು ಹಲವರಿಗೆ ಆಗಬಹುದು. ಉಷ್ಣದಿಂದ ಇದು ಹೆಚ್ಚಾಗಿ ಆಗುವ ಸಾಧ್ಯತೆ ಇದ್ದು, ಇದರ ಬಗ್ಗೆ ಸದ್ಗುರು ಜಗ್ಗಿ ವಾಸುದೇವ ಅವರು ಏನು ಹೇಳಿದ್ದಾರೆ ನೋಡಿ... 

2 Min read
Suchethana D
Published : Aug 04 2025, 10:46 PM IST
Share this Photo Gallery
  • FB
  • TW
  • Linkdin
  • Whatsapp
18
ಉರಿಮೂತ್ರಕ್ಕೆ ಮನೆಯಲ್ಲಿಯೇ ಮಾಡುವ ಮದ್ದು
Image Credit : Google

ಉರಿಮೂತ್ರಕ್ಕೆ ಮನೆಯಲ್ಲಿಯೇ ಮಾಡುವ ಮದ್ದು

ಮೂತ್ರ ವಿಸರ್ಜಿಸುವಾಗ ಉರಿ ಅಥವಾ ನೋವು ಬರುವುದು ಹಲವರಿಗೆ ಆಗಬಹುದು. ಮೂತ್ರನಾಳದ ಸೋಂಕು (UTI), ಪ್ರೊಸ್ಟೇಟ್ ಸೋಂಕು ಅಥವಾ ಮೂತ್ರನಾಳದ ಸೆಳೆತಗಳಿಂದ ಇವು ಆಗುವ ಸಾಧ್ಯತೆ ಇದೆಯಾದರೂ ಹೆಚ್ಚಿನವರಿಗೆ ಹೀಟ್​ ಹೆಚ್ಚಾದಾಗ ಹೀಗೆ ಆಗುವುದು ಇದೆ.

28
ಹಲವು ಕಾರಣಗಳಿಂದ ಉರಿಮೂತ್ರ
Image Credit : Google

ಹಲವು ಕಾರಣಗಳಿಂದ ಉರಿಮೂತ್ರ

ನೀರನ್ನು ಹೆಚ್ಚಿಗೆ ಸೇವನೆ ಮಾಡದಿದ್ದ ಸಂದರ್ಭದಲ್ಲಿ ಉರಿಮೂತ್ರ ಆಗುವುದು ಸರ್ವೇ ಸಾಮಾನ್ಯ. ಆದರೆ ಹಲವರು ಇಂಥ ಸಮಸ್ಯೆ ಬಂದಾಗಲೂ ಟ್ಯಾಬ್ಲೆಟ್​ಗಳ ಮೊರೆ ಹೋಗುವುದು ಇದೆ. ಆದರೆ ಹಾಗೆ ಮಾಡದೇ ಸುಲಭದಲ್ಲಿ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಕುರಿತು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿರೋ ಟಿಪ್ಸ್​ ಕೇಳಿ...

Related Articles

Related image1
ಹೇರ್​ಸ್ಟೈಲ್​ಗಾಗಿ ಬ್ಯೂಟಿ ಪಾರ್ಲರ್​ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...
Related image2
ಕಾಫಿ ಪ್ರಿಯರಿಗೆ ಶಾಕ್​! ಕಾಫಿ ಪುಡಿಯಲ್ಲಿ ಶೇಕಡಾ 10ರಷ್ಟು ಜಿರಲೆಗೆ FDI ಅನುಮತಿ
38
ಕುಂಬಳಕಾಯಿ ರಸ ಅತ್ಯದ್ಭುತ
Image Credit : Google

ಕುಂಬಳಕಾಯಿ ರಸ ಅತ್ಯದ್ಭುತ

ಸುಲಭದ ಉಪಾಯ ಎಂದರೆ ಬೂದುಗುಂಬಳ ಕಾಯಿಯ ರಸವನ್ನು ಕುಡಿಯುವುದು. ಬೂದುಗುಂಬಳ ತುಂಬಾ ತಂಪು. ಆದ್ದರಿಂದ ಕುಂಬಳಕಾಯಿಯನ್ನು ತುರಿದು ಅದರ ರಸವನ್ನು ಹಿಂಡಿ ಕುಡಿಯುವುದರಿಂದ ದೇಹವನ್ನು ತಂಪಾಗಿಸಿಕೊಳ್ಳಬಹುದು. ಹೀಗೆ ಮಾಡಿದ್ದೇ ಆದಲ್ಲೆ ಉರಿಮೂತ್ರವು ಶಮನವಾಗುತ್ತದೆ.

48
ಹೆಸರು ಕಾಳು, ಹರಳೆಣ್ಣೆಯಿಂದಲೂ ಪ್ರಯೋಜನ
Image Credit : Google

ಹೆಸರು ಕಾಳು, ಹರಳೆಣ್ಣೆಯಿಂದಲೂ ಪ್ರಯೋಜನ

ಹೆಸರುಕಾಳು ಕೂಡ ತಂಪಾಗಿರುವ ಕಾರಣ, ಅದನ್ನು ತಿಂದರೂ ಉರಿಮೂತ್ರವನ್ನು ಕಡಿಮೆ ಮಾಡಿಕೊಳ್ಳಬಹುದು. ಅದ್ಭುತವಾದ ಇನ್ನೊಂದು ಔಷಧವಿದೆ. ಅದು ಹರಳೆಣ್ಣೆ. ಹರಳೆಣ್ಣೆಯಿಂದ ಹಲವಾರು ಉಪಯೋಗಗಳು ಇವೆ. ಇದು ತುಂಬಾ ತಂಪು ಪ್ರಕೃತಿಯನ್ನು ಹೊಂದಿರುವ ಕಾರಣ, ಹರಳೆಣ್ಣೆಯನ್ನು ಸ್ವಲ್ಪ ಹೊಕ್ಕಳಿಗೆ, ಅನಾಹುತ ಮತ್ತು ವಿಷುದ್ಧಿ ಅಂದರೆ ಹೃದಯ ಮತ್ತು ಗಂಟಲ ಬಳಿ ಹಚ್ಚಬೇಕು. ಹಣೆಯ ಮೇಲೆ ಹಾಗೂ ಎರಡೂ ಕಿವಿಗಳ ಹಿಂಭಾಗದಲ್ಲಿ ಐದೇ ನಿಮಿಷಗಳಲ್ಲಿ ದೇಹ ತಣ್ಣಗಾಗುತ್ತದೆ. ಈಗ ಬಾತ್​ರೂಮ್​ಗೆ ಹೋಗಿ ನೋಡಿ ಎಂದಿದ್ದಾರೆ ಜಗ್ಗಿ ವಾಸುದೇವ ಅವರು.

58
ನಿರ್ಲಕ್ಷ್ಯ ಮಾಡುವುದು ಸಲ್ಲ
Image Credit : Google

ನಿರ್ಲಕ್ಷ್ಯ ಮಾಡುವುದು ಸಲ್ಲ

ಅಷ್ಟಕ್ಕೂ, ಮೂತ್ರ ವಿಸರ್ಜನೆ ವೇಳೆ ಉರಿಯೂತ ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಮಲ-ಮೂತ್ರಗಳು ಸರಾಗವಾಗಿ ಆಗುತ್ತಿದ್ದರೆ ಮಾತ್ರ ಆರೋಗ್ಯ. ಇಲ್ಲದೇ ಹೋದರೆ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಮೊದಲೇ ಹೇಳಿದ ಹಾಗೆ ಉಷ್ಣ (Heat) ಹೆಚ್ಚಾದರೆ ಉರಿಮೂತ್ರ ಕಾಣಿಸಿಕೊಳ್ಳುತ್ತದೆ. ಹೆರಿಗೆಯ ನಂತರ ಯೋನಿ ಕಣ್ಣೀರು ಇದ್ದರೆ, ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿ ಉಂಟಾಗಬಹುದು.

68
ದೀರ್ಘ ಅವಧಿಗೆ ಮೂತ್ರ ಕಟ್ಟಿಕೊಂಡರೆ...
Image Credit : Google

ದೀರ್ಘ ಅವಧಿಗೆ ಮೂತ್ರ ಕಟ್ಟಿಕೊಂಡರೆ...

ಯಾವುದೋ ಕಾರ್ಯನಿಮಿತ್ತ ಎಲ್ಲಿಗೋ ಹೋದಾಗ ಅಥವಾ ದೀರ್ಘ ಪ್ರಯಾಣದ ಸಮಯದಲ್ಲಿ ಮೂತ್ರ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ನೀರು ಕುಡಿಯದೇ ಹೋದಾಗ ಉರಿಮೂತ್ರ ಕಾಣಿಸಿಕೊಳ್ಳುವುದು ಸಹಜ. ಇಲ್ಲದೇ ಹೋದರೆ, ದೇಹಕ್ಕೆ ಉಷ್ಣಕಾರದ ಎನ್ನಿಸಿರುವ ಆಹಾರ ಸೇವನೆಯಿಂದಲೂ ಇದು ಉಂಟಾಗುತ್ತದೆ.

78
ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ
Image Credit : Google

ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ

ಆದ್ದರಿಂದ ಈ ಟಿಪ್ಸ್​ ಫಾಲೋ ಮಾಡಿದರೆ ಉರಿಮೂತ್ರ ಸಮಸ್ಯೆಯಿಂದ ಸುಲಭದಲ್ಲಿ ಪರಿಹಾರ ಕಂಡುಕೊಳ್ಳಬಹುದು. ವೈದ್ಯರು ಹೇಳುವ ಪ್ರಕಾರ, ನಾವು ದಿನನಿತ್ಯ ಕನಿಷ್ಠ ಒಂದೆರಡು ಲೀಟರ್ ನೀರು ಕುಡಿಯಲೇಬೇಕು. ದೇಹ ರಚನೆಗೆ ತಕ್ಕಂತೆ ನೀರಿನ ಪ್ರಮಾಣ ಬದಲಾದರೂ ಇಷ್ಟು ಪ್ರಮಾಣವಾದರೂ ಕುಡಿಯಲೇ ಬೇಕು. ಇದರ ಹೊರತಾಗಿಯೂ ಹಲವಾರು ಕಾರಣಗಳಿಂದ ಉರಿಮೂತ್ರ ಆಗಬಹುದು. ಆಗ ವೈದ್ಯರ ಸಲಹೆ ಮೇರೆಗೆ ನಡೆದುಕೊಳ್ಳುವುದು ಉತ್ತಮ.

88
ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ
Image Credit : Getty

ದೇಹಕ್ಕೆ ಸಾಕಷ್ಟು ನೀರಿನ ಅಗತ್ಯ

ಇದರಿಂದ ದೇಹದ ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ ಮಾತ್ರವಲ್ಲದೇ ದೇಹದಲ್ಲಿ ಕಂಡು ಬರುವ ವಿಷಕಾರಿ ಅಂಶಗಳು ಮೂತ್ರ ವಿಸರ್ಜನೆಯ ಮೂಲಕ ಹೊರ ಹೋಗುತ್ತದೆ. ಆದ್ದರಿಂದ ಕಾಲ ಯಾವುದೇ ಇರಲಿ, ನೀರು ಧಾರಾಳವಾಗಿ ಕುಡಿಯಬೇಕು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಆರೋಗ್ಯ
ಮಹಿಳೆಯರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved