MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಕಡಲೆಕಾಯಿಯಂತೆ ಸಿಪ್ಪೆಯೂ ಪ್ರಯೋಜನಕಾರಿ.. ಒಂದೇ ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿ, ತುಟಿಗೆ ಪರಿಹಾರ ಸಿಗುತ್ತೆ

ಕಡಲೆಕಾಯಿಯಂತೆ ಸಿಪ್ಪೆಯೂ ಪ್ರಯೋಜನಕಾರಿ.. ಒಂದೇ ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿ, ತುಟಿಗೆ ಪರಿಹಾರ ಸಿಗುತ್ತೆ

Peanut peel home remedies: ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಎಸೆಯುವ ಕಡಲೆಕಾಯಿ ಸಿಪ್ಪೆಯೂ ಸಹ ಬಹಳ ಪ್ರಯೋಜನಕಾರಿ. ಕಡಲೆಕಾಯಿಯಂತೆಯೇ ಕಡಲೆಕಾಯಿ ಸಿಪ್ಪೆಯು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ.

1 Min read
Ashwini HR
Published : Nov 28 2025, 06:07 PM IST
Share this Photo Gallery
  • FB
  • TW
  • Linkdin
  • Whatsapp
16
ಅನೇಕ ರೋಗಗಳನ್ನ ಬರದಂತೆ ತಡೆಯುತ್ತೆ
Image Credit : Getty

ಅನೇಕ ರೋಗಗಳನ್ನ ಬರದಂತೆ ತಡೆಯುತ್ತೆ

ವಿಶೇಷವಾಗಿ ಚಳಿಗಾಲದಲ್ಲಿ ಬಿಸಿ ಬಿಸಿ ಕಡಲೆಕಾಯಿ ಅಥವಾ ಶೇಂಗಾ ತಿನ್ನಲು ಜನರಿಗೆ ಬಹಳ ಇಷ್ಟ. ಹಾಗಾಗಿಯೇ ಬಹುತೇಕರು ಬೆಂಕಿಯ ಬಳಿ ಕುಳಿತು ಕಡಲೆಕಾಯಿಯನ್ನ ಆಸ್ವಾದಿಸುತ್ತಾರೆ. ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದೂ ಕರೆಯುತ್ತಾರೆ. ಆದರೆ ಸಾಮಾನ್ಯವಾಗಿ ನಿಷ್ಪ್ರಯೋಜಕವೆಂದು ಎಸೆಯುವ ಕಡಲೆಕಾಯಿ ಸಿಪ್ಪೆಯು ಸಹ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?. ಹೌದು. ಕಡಲೆಕಾಯಿಯಂತೆ ಸಿಪ್ಪೆಯೂ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ಇವುಗಳ ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

26
ಕಡಲೆಕಾಯಿ ಸಿಪ್ಪೆಯೂ ತುಂಬಾ ಪ್ರಯೋಜನಕಾರಿ
Image Credit : Getty

ಕಡಲೆಕಾಯಿ ಸಿಪ್ಪೆಯೂ ತುಂಬಾ ಪ್ರಯೋಜನಕಾರಿ

ಬಿಎಂಎಸ್ ಹೋಲಿಸ್ಟಿಕ್ಸ್‌ನ ಡಾ. ಕರಣ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಕಡಲೆಕಾಯಿ ಸಿಪ್ಪೆಯೂ ತುಂಬಾ ಪ್ರಯೋಜನಕಾರಿ ಎಂದು ವಿವರಿಸಿದ್ದಾರೆ. ಚಳಿಗಾಲದಲ್ಲಿ ತುಟಿಗಳು ಮತ್ತು ಹಿಮ್ಮಡಿಗಳು ಬಿರುಕು ಬಿಟ್ಟಾಗ ಕಡಲೆಕಾಯಿ ಸಿಪ್ಪೆ ಗುಣಪಡಿಸುವಲ್ಲಿ ಬಹಳ ಪರಿಣಾಮಕಾರಿಯಂತೆ.

Related Articles

Related image1
ದಿನಾ ಬಡವರ ಬಾದಾಮಿ ಕಡಲೆಕಾಯಿ ತಿನ್ನೋದ್ರಿಂದ ಯಾವೆಲ್ಲಾ ಕಾಯಿಲೆ ಗುಣವಾಗುತ್ತೆ ಗೊತ್ತಾ?
Related image2
ಕಡಲೆಕಾಯಿ ತಿಂದ ನಂತರ ನೀರು ಕುಡಿದ್ರೆ ಈ ಅಪಾಯ ತಪ್ಪಿದ್ದಲ್ಲ: ಯಾಕೆ ಗೊತ್ತಾ?
36
ತುಟಿ ಮತ್ತು ಹಿಮ್ಮಡಿಗೆ ಪರಿಣಾಮಕಾರಿ
Image Credit : Getty

ತುಟಿ ಮತ್ತು ಹಿಮ್ಮಡಿಗೆ ಪರಿಣಾಮಕಾರಿ

ಬಿರುಕು ಬಿಟ್ಟ ಹಿಮ್ಮಡಿಯಿಂದ ಬಳಲುತ್ತಿರುವವರಿಗೆ ಕಡಲೆಕಾಯಿ ಸಿಪ್ಪೆ ತುಂಬಾ ಪರಿಣಾಮಕಾರಿ. ಕಡಲೆಕಾಯಿ ಸಿಪ್ಪೆಯಿಂದ ಪುಡಿ ಮಾಡಿ ಅರ್ಧ ಗ್ಲಾಸ್ ನೀರಿನೊಂದಿಗೆ ಬೆರೆಸಿ. ಪೇಸ್ಟ್ ಮಾಡಿ ನಿಮ್ಮ ತುಟಿ ಮತ್ತು ಹಿಮ್ಮಡಿಗಳಿಗೆ ಹಚ್ಚಿ. ಒಂದು ವಾರದೊಳಗೆ ಬಿರುಕು ಬಿಟ್ಟ ಹಿಮ್ಮಡಿಯಿಂದ ನಿಮಗೆ ಪರಿಹಾರ ಸಿಗುತ್ತದೆ.

46
ಕಡಲೆಕಾಯಿ ಸಿಪ್ಪೆಯ ಪ್ರಯೋಜನಗಳು
Image Credit : Getty

ಕಡಲೆಕಾಯಿ ಸಿಪ್ಪೆಯ ಪ್ರಯೋಜನಗಳು

ಕಡಲೆಕಾಯಿ ಸಿಪ್ಪೆಗಳು ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಇವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿರುವ ರೆಸ್ವೆರಾಟ್ರೊಲ್ ಮತ್ತು ಪಾಲಿಫಿನಾಲ್‌ಗಳಂತಹ ಸಂಯುಕ್ತಗಳು ದೇಹವನ್ನು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತದಿಂದ ರಕ್ಷಿಸುತ್ತವೆ.

56
ದೇಹವನ್ನು ಬೆಚ್ಚಗಿಡುತ್ತೆ
Image Credit : Getty

ದೇಹವನ್ನು ಬೆಚ್ಚಗಿಡುತ್ತೆ

ಕಡಲೆಕಾಯಿಗಳು ಉಷ್ಣತೆ ಹೆಚ್ಚಿಸುವ ಪರಿಣಾಮವನ್ನು ಹೊಂದಿರುತ್ತವೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಅವುಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇವು ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತವೆ.

66
ಕಡಲೆಕಾಯಿ ಸೇವನೆಯ ಪ್ರಯೋಜನಗಳು
Image Credit : freepik

ಕಡಲೆಕಾಯಿ ಸೇವನೆಯ ಪ್ರಯೋಜನಗಳು

ಇನ್ನು ಕಡಲೆಕಾಯಿ ತಿನ್ನುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಕಡಲೆಕಾಯಿ ಬಾದಾಮಿಗಿಂತ ಅಗ್ಗವಾಗಿದ್ದು, ಬಾದಾಮಿಯಂತೆಯೇ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕಡಲೆಕಾಯಿಗಳು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಇವು ವಿಟಮಿನ್ ಇ ಮತ್ತು ಬಿ 6, ಕಬ್ಬಿಣ, ಸತು, ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಆರೋಗ್ಯ
Latest Videos
Recommended Stories
Recommended image1
ಹಸಿ ಮೀನು ನುಂಗಿದ್ರೆ ಅಸ್ತಮಾ ರೋಗ ಮಾಯ… ಹೈದರಾಬಾದದಿನ ಈ ಫ್ಯಾಮಿಲಿ ನೀಡುತ್ತೆ ವಿಶೇಷ ಔಷಧಿ
Recommended image2
Egg Safety Tips: ಮೊಟ್ಟೆ ತಿಂದ ತಕ್ಷಣ ಈ ತಪ್ಪುಗಳನ್ನು ಮಾಡಲೇಬೇಡಿ
Recommended image3
ವಿಧವೆಯರ ಆಹಾರವಾಗಿತ್ತಂತೆ ಉಪ್ಪಿಟ್ಟು? ಈ ತಿಂಡಿ ಹುಟ್ಟಿಕೊಂಡಿದ್ದೇ ರೋಚಕ- ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ
Related Stories
Recommended image1
ದಿನಾ ಬಡವರ ಬಾದಾಮಿ ಕಡಲೆಕಾಯಿ ತಿನ್ನೋದ್ರಿಂದ ಯಾವೆಲ್ಲಾ ಕಾಯಿಲೆ ಗುಣವಾಗುತ್ತೆ ಗೊತ್ತಾ?
Recommended image2
ಕಡಲೆಕಾಯಿ ತಿಂದ ನಂತರ ನೀರು ಕುಡಿದ್ರೆ ಈ ಅಪಾಯ ತಪ್ಪಿದ್ದಲ್ಲ: ಯಾಕೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved