MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 1st Test
KPSC Recruitment Scam
Indian Air Force
Bidadi Township Row
Bengaluru HMT Watch Sales
Karnataka Excise Department
Bengaluru Traffic Police Assault Case
Belagavi Hidakal Reservoir
Dakshina Kannada Vande Bharat Train
Muslim Faces in BJP New Team
Karnataka Food Inspection
  • Home
  • Astrology
  • Festivals
  • ಯುಗಾದಿ ಸಂಭ್ರಮ: ಬೆಳಗೆರೆ ಗ್ರಾಮದಲ್ಲಿ ದಾಸ ಪರಂಪರೆಯ ವಿಶಿಷ್ಟ ಮಣೇವು ಆಚರಣೆ, ಏನಿದರ ವಿಶೇಷ?

ಯುಗಾದಿ ಸಂಭ್ರಮ: ಬೆಳಗೆರೆ ಗ್ರಾಮದಲ್ಲಿ ದಾಸ ಪರಂಪರೆಯ ವಿಶಿಷ್ಟ ಮಣೇವು ಆಚರಣೆ, ಏನಿದರ ವಿಶೇಷ?

ಯುಗಾದಿ ಹಬ್ಬ ಅಂದ್ರೆ ಮಾವು-ಬೇವು, ಬೆಲ್ಲ-ಹೂರಣಗಳ ಸಮಾಹಾರ. ಅದು ಎಲ್ಲ ಊರುಗಳಲ್ಲೂ ಸರ್ವೇ ಸಾಮಾನ್ಯ.  ಆದರೆ ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ  ಯುಗಾದಿ ಅಂದ್ರೆ ಊರಿಗೆ ಊರೇ ಭಗವಂತನಿಗೆ ಮಣೇವು ಸೇವೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತದೆ.  

1 Min read
Author : Ravi Janekal
Published : Apr 09 2024, 04:28 PM IST
Share this Photo Gallery
  • FB
  • TW
  • Linkdin
  • Whatsapp
15

ಯುಗಾದಿ- ಹೊಸ ಯುಗದ ಆದಿ. ವಸಂತ ಕಾಲದಲ್ಲಿ ಬರುವ ವಿಶಿಷ್ಟ ಹಬ್ಬಕ್ಕೆ ಅದುವರೆಗೆ ಬಿಸಲಿಗೆ ಒಣಗಿ ನಿಂತಿದ್ದ ಪ್ರಕೃತಿ ಹಸುರಿನಿಂದ ಕಂಗೊಳಿಸಿ ಸ್ವಾಗತ ಕೋರುತ್ತದೆ. ಜೀವನದ ಸಿಹಿ ಕಹಿಗಳನ್ನ ಉಂಡಂತೆ ಬೇವು ಬೆಲ್ಲ ಸವಿಯೋದು ಹಬ್ಬದ ವಿಶೇಷತೆ. ಹಳೆಯದು ಕಳೆದು ಹೊಸತು ಹುಟ್ಟುತ್ತದೆ, ಜೀವನದ ಕಹಿ ಮತ್ತು ಸಿಹಿ ದಿನಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದು ಯುಗಾದಿ ಮನುಜರಿಗೆ ಕಲಿಸುವ ಪಾಠವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25

ಊರಿನ ತಿರುಪತಿ ತಿಮ್ಮಪ್ಪನ ಒಕ್ಕಲಿನ ಭಕ್ತರು ತಮ್ಮ ಮನೆಗಳಲ್ಲಿ ಪೂಜಿಸುವ ತಿಮ್ಮಪ್ಪನ ವಿಗ್ರಹ - ಫೋಟೋಗಳನ್ನು ಊರ ಬಾಗಿಲಿಗೆ ತಂದು ಪೂಜಿಸುವ ಕ್ರಮವಿದೆ. ಊರಿನ ದಾಸಯ್ಯನವರು ಗಂಟೆ - ಜಾಗಟೆಗಳ ಮೂಲಕ ದೇವರನ್ನು ಹೊರಡಿಸಿಕೊಂಡು ಬಂದು,  ಊರ ಬಾಗಿಲ ಸಮ್ಮುಖದಲ್ಲಿ ವಿಸ್ತಾರ ಮಂಟಪ ಕಟ್ಟಿ,  ಮಂಟಪದ ಮಧ್ಯದಲ್ಲಿ ತಿಮ್ಮಪ್ಪನನ್ನು ಕೂಡಿಸಿ ಮಣೇವು ಎಂಬ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಾರೆ. 
 

35

ಏನು ಈ ಮಣೇವು? 

ಮಣೇವು ಹಾಕು ಎಂದರೆ ದೇವರ ಸೇವೆ ಮಾಡು ಎಂದರ್ಥ. (ಮಣೇವು < ಮಣಿಹ = ನಮಸ್ಕಾರ) ಸಾಮಾನ್ಯವಾಗಿ ವಿಷ್ಣುಭಕ್ತರಾದ ‘ದಾಸಯ್ಯಗಳು’, ಶಿವಭಕ್ತರಾದ ‘ಗೊರವಯ್ಯಗಳು’ ಹಾಸಿದ ಬಟ್ಟೆಯ ಮೇಲೆ ಜನರು ತಂದು ಸುರಿದಿರುವ ಬಾಳೇಹಣ್ಣು ಹಲಸಿನ ತೊಳೆ ಬೆಲ್ಲದಿಂದೊಡಗುಡಿದ ರಸಾಯನವನ್ನು ಕೈಯಲ್ಲಿ ತಿನ್ನದೆ ಬಾಯಿ ಹಾಕಿ ಬಕಬಕನೆ ತಿನ್ನುತವ ಒಂದು ಪದ್ದತಿ.  
 

45

ಮೈದುಂಬಿದವರಂತೆ ದೇವರಿಗೆ ಪರಾಕು ಹೇಳುತ್ತಾ ಮಂಡಿಯೂರಿ, ದೇವರಪ್ರಸಾದವಾದ ಆ ರಸಾಯನವನ್ನು ತಿನ್ನುವುದಕ್ಕೆ ಮಣೇವು ಹಾಕುವುದು ಎನ್ನುತ್ತಾರೆ. ಈ ಊರಲ್ಲಿ ಸ್ವಲ್ಪ ಭಿನ್ನತೆ ಇದೆ.  ಬಂದ ಭಕ್ತರು ದಾಸಯ್ಯನ ಕೈಯಲ್ಲಿ ಮಂತ್ರ ಜಲವನ್ನು ತಲೆಗೆ  ಪ್ರೋಕ್ಷಿಸಿಕೊಂಡು , ತಾವು ಮನೆಯಿಂದ ತಂದ ದೇವರಿಗೆ ತಂಬಿಟ್ಟು, ಬಾಳೆಹಣ್ಣುಗಳನ್ನು ಸಮರ್ಪಿಸಿ, ಪೂಜಿಸಿ ಭಕ್ತಿಯಿಂದ ನಮಸ್ಕರಿಸಿ, ಭಗವಂತನ ಆಶೀರ್ವಾದವನ್ನು ಕೋರುತ್ತಾರೆ. 
 

55

ಸಂವತ್ಸರದ ಕ್ಲಿಷ್ಟ ತಿರುವುಗಳಿಂದ ಪಾರುಮಾಡಿ ಜೀವನದ ಮುಂದಿನ ಹಾದಿಯನ್ನು ಹಗುರಮಾಡು ಎಂದು ಪ್ರಾರ್ಥಿಸುತ್ತಾರೆ. ನಂತರ ಯಥಾ ಪ್ರಕಾರ ದಾಸಯ್ಯನವರು ಭಕ್ತರು ತಂದ ದೇವರುಗಳನ್ನು ಅವರವರ ಮನೆಗೆ ಬಿಟ್ಟು ಬರುತ್ತಾರೆ. ಆನಂತರವೇ ಊರಿನವರು ಹಬ್ಬದ ಊಟ ಮಾಡುವುದು.  ಭಗವಂತನ ಸೇವೆಯಿಂದ ಶುರುವಾಗುವ ಹೊಸ ವರ್ಷ ಎಂಥವರಿಗೂ ಮಾದರಿಯಾಗಿದೆ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಚಿತ್ರದುರ್ಗ
ಹಬ್ಬ

Latest Videos
Recommended Stories
Recommended image1
ಗಣೇಶೋತ್ಸವಕ್ಕೆ ದಾಖಲೆಯ ₹508 ಕೋಟಿ ವಿಮೆ: ಕಳೆದ ವರ್ಷಕ್ಕಿಂತ 34 ಕೋಟಿ ಹೆಚ್ಚು!
Recommended image2
ಮಾಲವ್ಯ ರಾಜಯೋಗ ಜೊತೆ 3 ರಾಜಯೋಗಗಳ ಭವ್ಯ ಸಂಯೋಜನೆ, ಸೆಪ್ಟೆಂಬರ್‌ನಲ್ಲಿ 5 ರಾಶಿಗೆ ಸಮೃದ್ಧಿ
Recommended image3
ಸೂರ್ಯ-ಬುಧ ಮಹಾ ಯೋಗದ ಪ್ರಭಾವದಿಂದ. ಈ 4 ರಾಶಿ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved