- Home
- Entertainment
- Underrated Movies: ಸೌಂಡ್ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!
Underrated Movies: ಸೌಂಡ್ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!
ಕೆಲ ಸಿನಿಮಾಗಳು ಯಾವುದ್ಯಾವುದೋ ಕಾರಣಕ್ಕೆ ಸದ್ದು ಮಾಡೋದಿಲ್ಲ, ಆದರೆ ನಿಜಕ್ಕೂ ಅದ್ಭುತವಾದ ಕಂಟೆಂಟ್ ಹೊಂದಿರುತ್ತವೆ. ಹಾಗಿದ್ದರೆ ಕನ್ನಡದಲ್ಲಿ Most underrated Movies ಕೂಡ ಇದೆ, ಹಾಗಾದರೆ ಅವು ಯಾವುವು?

ಉದ್ಭವ ಸಿನಿಮಾ
ಗಣೇಶ್ ತುಂಬ ಸ್ಮಾರ್ಟ್ ಹುಡುಗ, ಅವನಿಗೆ ಹೇಗೆ ಜನರನ್ನು ತನ್ನ ದಾರಿಗೆ ತಂದುಕೊಳ್ಳಬೇಕು ಎಂದು ಗೊತ್ತಿದೆ.
ನಿರ್ದೇಶಕ- ಕೂಡುಲು ರಾಮಕೃಷ್ಣ
ಟಿಎನ್ ಬಾಲಕೃಷ್ಣ, ಅನಂತ್ ನಾಗ್, ಕೆ ಎಸ್ ಅಶ್ವತ್ಥ್

ಒಂದಲ್ಲ ಎರಡಲ್ಲ ಸಿನಿಮಾ
ಏಳು ವರ್ಷದ ಸಮೀರಾ ತನ್ನ ಆಕಳು ಕರುವಿನಿಂದ ದೂರ ಆದಾಗ ಒದ್ದಾಡುವ ಕಥೆ ಇಲ್ಲಿದೆ. ಡಿ ಸತ್ಯ ಪ್ರಕಾಶ್ ಈ ಸಿನಿಮಾದ ನಿರ್ದೇಶಕರು.
ರೋಹಿತ್ ಪಾಂಡವಪುರ, ಸಂಧ್ಯಾ ಅರಕೆರೆ, ಪ್ರಭುದೇವ ಹೊಸದುರ್ಗ ಈ ಸಿನಿಮಾದಲ್ಲಿದ್ದಾರೆ.
ಚೂರಿಕಟ್ಟೆ
ಮಲೆನಾಡಿನಲ್ಲಿ ನಡೆಯುವ ಕಥೆ ಇದು. ಟಿಂಬರ್ ಮಾಫಿಯಾ ಕುರಿತು ಈ ಸಿನಿಮಾ ಕತೆ ಇದೆ.
ರಘು ಶಿವಮೊಗ್ಗ ಈ ಸಿನಿಮಾದ ನಿರ್ದೇಶಕರು
ಅರುಣಾ ಬಾಲರಾಜ್, ಎಚ್ ಜಿ ದತ್ತಾತ್ರೇಯ, ಮಂಜುನಾಥ್ ಹೆಗಡೆ ಈ ಸಿನಿಮಾದಲ್ಲಿದ್ದಾರೆ.
ಕಟಕ ಸಿನಿಮಾ
ಶಾಲೆ ಟೀಚರ್ ಒಬ್ಬರು ತಮ್ಮ ಊರಿಗೆ ಬಂದು ಶಾಲೆ ತೆರೆಯುವಾಗ ಎದುರಿಸಿದ ಸಮಸ್ಯೆಗಳು ಇಲ್ಲಿವೆ.
ರವಿ ಬಸ್ರೂರು ಈ ಸಿನಿಮಾದ ನಿರ್ದೇಶಕರು
ಅಶೋಕ್ ರಾಜ್, ಸ್ಪಂದನಾ ಪ್ರಸಾದ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಂಸ್ಕಾರ
ಮಾರ್ಧ್ವ ಕುಟುಂಬದಲ್ಲಿ ಹುಟ್ಟಿದ ನಾರಾಣಪ್ಪ, ಬ್ರಾಹ್ಮಣತ್ವವನ್ನು ವಿರೋಧಿಸಿದ ಕಥೆ ಇಲ್ಲಿದೆ
ಪಟ್ಟಾಭಿ ರಾಮ ರೆಡ್ಡಿ ಈ ಸಿನಿಮಾದ ನಿರ್ದೇಶಕರು
ಗಿರೀಶ್ ಕಾರ್ನಾಡ್, ಸ್ನೇಹಲತಾ ರೆಡ್ಡಿ, ಪಿ ಲಂಕೇಶ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮೌನಿ ಸಿನಿಮಾ
ಒಂದು ಸಮುದಾಯದಲ್ಲಿ ಬದುಕುವಾಗ ಏನೆಲ್ಲ ಸಮಸ್ಯೆ ಬರುತ್ತದೆ ಎನ್ನೋದು ಈ ಸಿನಿಮಾದಲ್ಲಿದೆ.
ಬಿ ಎಸ್ ಲಿಂಗದೇವರು ಈ ಸಿನಿಮಾದ ನಿರ್ದೇಶಕರು
ಎಚ್ ಜಿ ದತ್ತಾತ್ರೇಯ, ಅನಂತ್ ನಾಗ್, ವೆಂಕಟ ರಾವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಉಂಡು ಹೋದ, ಕೊಂಡು ಹೋದ
ಪಶು ವೈದ್ಯಾಧಿಕಾರಿ ಹೇಗೆ ಜನರನ್ನು ಮೂರ್ಖರನ್ನಾಗಿ ಮಾಡ್ತಾನೆ ಎನ್ನೋದು ಈ ಸಿನಿಮಾದಲ್ಲಿದೆ.
ನಾಗತೀಹಳ್ಳಿ ಚಂದ್ರಶೇಖರ್ ನಿರ್ದೇಶಕರು
ಅನಂತ್ ನಾಗ್, ತಾರಾ, ಅಂಜಲಿ ಈ ಸಿನಿಮಾದಲ್ಲಿದ್ದಾರೆ.
ಪರಮೇಶಿ ಪ್ರೇಮ ಪ್ರಸಂಗ
ರಮಾಮಣಿಯನ್ನು ಪರಮೇಶಿ ಮದುವೆ ಆಗುತ್ತಾನೆ. ಇವರಿಗೆ ಓರ್ವ ಮಗ ಇರುತ್ತಾರೆ. ಆಫೀಸ್ನಲ್ಲಿರುವವನ ಜೊತೆ ಬೆಟ್ ಕಟ್ಟಿ ಮಹಿಳೆ ಜೊತೆ ಎಹೋದಾಗ ಇವನ ಜೋವನ ಬದಲಾಗುತ್ತದೆ.
ನಿರ್ದೇಶಕ-ರಮೇಶ್ ಭಟ್
ರಮೇಶ್ ಭಟ್, ಅನಂತ್ ನಾಗ್, ಅರುಂಧತಿ ನಾಗ್
ಕಥಾ ಸಂಗಮ
1976ರ ಭಾರತದ Anthology. ಮೂರು ಕಥೆಗಳ ಸಂಗಮ ಇಲ್ಲಿದೆ.
ಎಸ್ ಆರ್ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನಿಮಾವಿದು. ಬಿ ಸರೋಜಾದೇವಿ, ಆರತಿ, ರಜಿನಿಕಾಂತ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಚಿಗುರಿದ ಕನಸು ಸಿನಿಮಾ
ಸಿಟಿಯಲ್ಲಿದ್ದ ಶಂಕರ್ ಹಳ್ಳಿಗೆ ಬಂದು ವಾಸ ಮಾಡಬೇಕು ಎಂದುಕೊಳ್ಳುವಾಗ, ಕುಟುಂಬದಿಂದಲೇ ಸಮಸ್ಯೆ ಎದುರಿಸುತ್ತಾನೆ.
ನಿರ್ದೇಶಕ
ಟಿ ಎಸ್ ನಾಗಾಭರಣ
ಶಿವರಾಜ್ಕುಮಾರ್, ವಿದ್ಯಾ ವೆಂಕಟೇಶ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

