MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಯಾಸ್ಮಿನ್​ ಆಗಿ ಬುರ್ಖಾದಲ್ಲಿ ಕಾಣಿಸಿಕೊಂಡ ಖ್ಯಾತ ಬಹುಭಾಷಾ ನಟಿ! ಮತಾಂತರದ ಬಗ್ಗೆ ಹೇಳಿದ್ದೇನು?

ಯಾಸ್ಮಿನ್​ ಆಗಿ ಬುರ್ಖಾದಲ್ಲಿ ಕಾಣಿಸಿಕೊಂಡ ಖ್ಯಾತ ಬಹುಭಾಷಾ ನಟಿ! ಮತಾಂತರದ ಬಗ್ಗೆ ಹೇಳಿದ್ದೇನು?

ಖ್ಯಾತ ನಟಿ ಸೀತಾ ಲಕ್ಷ್ಮಿ ತಮ್ಮ ಹೆಸರನ್ನು ಯಾಸ್ಮಿನ್ ಎಂದು ಬದಲಿಸಿ ಬುರ್ಖಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮೊದಲ ಮದುವೆಯ ಚಿತ್ರಹಿಂಸೆ, ನೋವಿನಿಂದ ಹೊರಬಂದು, ಎರಡನೇ ಪತಿ ಅಬ್ದುಲ್ ಖಾದರ್ ಅವರ ಬೆಂಬಲದಿಂದ ಮತಾಂತರವಾಗಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ.

2 Min read
Author : Suchethana D
Published : May 01 2026, 01:06 PM IST
Share this Photo Gallery
  • FB
  • TW
  • Linkdin
  • Whatsapp
16
ಏಕಾಏಕಿ ಬುರ್ಖಾದಲ್ಲಿ ನಟಿ
Image Credit : Social Media

ಏಕಾಏಕಿ ಬುರ್ಖಾದಲ್ಲಿ ನಟಿ

ಮತಾಂತರ, ಲವ್​ ಜಿಹಾದ್​ ಎಲ್ಲವೂ ಸಾಕಷ್ಟು ಸದ್ದು ಮಾಡುತ್ತಿರುವ ನಡುವೆಯೇ ಇಲ್ಲೊಬ್ಬ ತೆಲಗು, ತಮಿಳು ಮತ್ತು ಮಲಯಾಳಂನ ಖ್ಯಾತ ಸಿನಿಮಾ ಮತ್ತು ಕಿರುತೆರೆ ನಟಿಯೊಬ್ಬರು ತಮ್ಮ ಹೆಸರನ್ನು ಯಾಸ್ಮಿನ್​ ಎಂದು ಬದಲಿಸಿ ಬುರ್ಖಾದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ. ಕೊನೆಗೂ ಅವರು ತಮ್ಮ ಮತಾಂತರದ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ಈ ನಟಿ ತೆಲುಗು ಸೀರಿಯಲ್​ನ ಖ್ಯಾತಿ ನಟಿಯಾಗಿದ್ದ ಸೀತಾ ಲಕ್ಷ್ಮಿ ಉರ್ಫ್​ ಯಾಸ್ಮಿನ್​.

26
ಮತಾಂತರದ ಬಗ್ಗೆ ನಟಿ
Image Credit : Social Media

ಮತಾಂತರದ ಬಗ್ಗೆ ನಟಿ

ತಮ್ಮ ಮತಾಂತರ ಬಗ್ಗೆ ನಟಿ ಈಗ ಮನಬಿಚ್ಚಿ ಮಾತನಾಡಿದ್ದಾರೆ. ತಾವು ಮತಾಂತರವಾಗಿರುವುದಕ್ಕೆ ಕಾರಣವನ್ನು ಹೇಳಿದ್ದಾರೆ. ನಾನು ಮೊದಲು ಅನಿಲ್​ ಎನ್ನುವವರ ಜೊತೆ ಮದುವೆಯಾಗಿದ್ದೆ. ಅದು ಲವ್​ ಮ್ಯಾರೇಜ್​. ನನಗಿಂತ ಕಿರಿಯರು. ಆದರೆ ಅವರೇ ನನ್ನನ್ನು ತುಂಬಾ ಇಷ್ಟಪಟ್ಟು ಮದುವೆಯಾದರು. ಅವರ ಕ್ಯಾರೆಕ್ಟರ್​ ಸರಿ ಇಲ್ಲ ಎಂದು ಹಲವರು ಹೇಳಿದರೂ ನಾನು ಕೇಳಲಿಲ್ಲ. ಎರಡು ವರ್ಷ ಲವ್​ ಮಾಡಿದ ಬಳಿಕ ಮದುವೆಯಾದೆ ಎಂದು ತಮ್ಮ ಮೊದಲ ಮದುವೆಯ ವಿಷ್ಯವನ್ನು ನಟಿ ಹೇಳಿದ್ದಾರೆ.

Related Articles

Related image1
ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್​, ಶಿವಣ್ಣ ನಾಯಕಿಯ ಬದುಕಿನ ಕರಾಳ ಸ್ಟೋರಿ
Related image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
36
ಚಿತ್ರಹಿಂಸೆ
Image Credit : Social Media

ಚಿತ್ರಹಿಂಸೆ

ಆದರೆ, ಅದು ನನ್ನ ಜೀವನದ ಅತಿದೊಡ್ಡ ತಪ್ಪಾಗಿತ್ತು. ತುಂಬಾ ಚಿತ್ರಹಿಂಸೆ ನೀಡಲು ಶುರು ಮಾಡಿದರು. ಅವರಿಗೆ ಬೇಕಾಗಿದ್ದು ನನ್ನ ದುಡ್ಡು ಮಾತ್ರ. ಈ ಮಧ್ಯೆ, ನಾನು ಗರ್ಭಿಣಿಯಾದೆ. ನನ್ನನ್ನು ಒದ್ದು ಹೊಡೆದರು ಮತ್ತು ಅದು ಗರ್ಭಪಾತದಲ್ಲಿ ಕೊನೆಗೊಂಡಿತು. ನಮ್ಮ ದಾಂಪತ್ಯ ಹತ್ತು ವರ್ಷಗಳು. ಆದರೆ ನಾನು ಅವನೊಂದಿಗೆ ಕೇವಲ ಮೂರು ವರ್ಷಗಳ ಕಾಲ ವಾಸಿಸಿದ್ದೆ. ಉಳಿದ ಏಳು ವರ್ಷಗಳು ನನ್ನ ತವರು ಮನೆಯಲ್ಲಿ ಕಳೆದದ್ದು ಎಂದು ಆಘಾತಕಾರಿ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

46
ಡಿವೋರ್ಸ್​ ಪಡೆದೆ
Image Credit : Social Media

ಡಿವೋರ್ಸ್​ ಪಡೆದೆ

ಅವರಿಗೆ ಬೇಕಾಗಿರುವುದು ಹಣ ಮಾತ್ರ. ನನ್ನ ತಾಯಿ ಕ್ಯಾನ್ಸರ್ ನಿಂದ ಅಸ್ವಸ್ಥರಾಗಿದ್ದಾಗ, ನಾನು ನನ್ನ ತಾಯಿಯ ಹೆಸರಿನಲ್ಲಿ ಖರೀದಿಸಿದ ಫ್ಲಾಟ್‌ಗೆ ಸಹಿ ಹಾಕುವಂತೆ ಅವನು ನನ್ನನ್ನು ಒತ್ತಾಯಿಸಿದನು. ಅದಕ್ಕಾಗಿ ಯಾವಾಗಲೂ ಹೊಡೆಯುವುದು ಮತ್ತು ಜಗಳವಾಡುವುದು ನಡೆಯುತ್ತಿತ್ತು. ಫ್ಲಾಟ್ ಖರೀದಿಸಿದ ನಂತರವೇ ನೀವು ನನ್ನೊಂದಿಗೆ ವಾಸಿಸಬಹುದು ಎಂದು ಅವನು ಹೇಳಿದನು. ಹಾಗಾಗಿ ನಾನು ವಿಚ್ಛೇದನವನ್ನು ಕೇಳಿದೆ. ತುಂಬಾ ನೋವು ಅನುಭವಿಸಿದೆ ಎಂದಿದ್ದಾರೆ ನಟಿ.

56
ಸಿಕ್ಕವರೇ ಅಬ್ದುಲ್​ ಖಾದರ್​
Image Credit : Social Media

ಸಿಕ್ಕವರೇ ಅಬ್ದುಲ್​ ಖಾದರ್​

ಕೊನೆಗೆ ನನ್ನ ಸ್ಕೂಲ್​ ಫ್ರೆಂಡ್​ ಆದ ಅಬ್ದುಲ್ ಖಾದರ್ ಸಿಕ್ಕ. ಅವರಲ್ಲಿ ನನ್ನ ವಿಷ್ಯ ಎಲ್ಲಾ ಹೇಳಿದೆ. ಆತ ನನಗೆ ಬಾಳು ಕೊಡಲು ಮುಂದೆ ಬಂದರು. ನನಗೂ ಒಂದು ಆಸರೆ ಬೇಕಿತ್ತು. ಅವರು ತುಂಬಾ ಒಳ್ಳೆಯವರು. ಆದ್ದರಿಂದ ಮದುವೆಯಾದೆ ಎಂದಿದ್ದಾರೆ ಸೀತಾಲಕ್ಷ್ಮಿ.

66
ತವರಿನ ಬೆಂಬಲವಿಲ್ಲ
Image Credit : Social Media

ತವರಿನ ಬೆಂಬಲವಿಲ್ಲ

ನನ್ನ ತವರು ಮನೆಯಿಂದ ಯಾವ ಬೆಂಬಲ ಇಲ್ಲ. ಆದ್ದರಿಂದ ನನಗೆ ಗಂಡನ ಮನೆಯವರೇ ಬೆಂಬಲ ನೀಡುತ್ತಿದ್ದಾರೆ. ಆದ್ದರಿಂದ ನಾನು ನನ್ನ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಆದ್ದರಿಂದಲೇ ಮತಾಂತರ ಕೂಡ ಆಗಿದ್ದೇನೆ, ಹೆಸರನ್ನು ಬದಲಿಸಿಕೊಂಡಿದ್ದೇನೆ ಎಂದಿದ್ದಾರೆ ನಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ಮದುವೆ
ಪ್ರೇಮ ವಿವಾಹ
ಮತಾಂತರ
ವಿಚ್ಛೇದನ
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಪ್ರಸಿದ್ಧ ನಟಿಯೊಬ್ಬರಿಗೆ "ನನ್ನ ಮುಂದೆಯೇ ಬಿಕಿನಿ ಧರಿಸು" ಎಂದ ಆ ನಿರ್ದೇಶಕ ಸ್ವಲ್ಪ ದಿನದ ನಂತ್ರ ಮಾಡಿದ್ದೇನು?
Recommended image2
ಮೀನಾಕ್ಷಿ ಕಣ್ಣಿಗೆ ಬೆಚ್ಚಿದ ಭಾಗ್ಯಾ, ಹೊರ ಬರ್ತಿದೆ ಅಸಲಿ ವಿಲನ್ ಬಣ್ಣ
Recommended image3
KD Movie Collection: ಅಬ್ಬಬ್ಬಾ... ಧ್ರುವ ಸರ್ಜಾ, ಜೋಗಿ ಪ್ರೇಮ್‌ ಸಿನಿಮಾ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?
Related Stories
Recommended image1
ಆತನಿಂದ 14 ತಿಂಗಳ ನರಕ ಯಾತನೆ: ಸುದೀಪ್​, ಶಿವಣ್ಣ ನಾಯಕಿಯ ಬದುಕಿನ ಕರಾಳ ಸ್ಟೋರಿ
Recommended image2
ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved