MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​

ಅವಕಾಶ ಇದ್ರೆ ಹೇಳಿ ಪ್ಲೀಸ್​: ಬಾಡಿಗೆ ಹಣ ನಂಬಿ ಬದುಕುತ್ತಿರುವೆ- ನೋವು ತೋಡಿಕೊಂಡ ನಟ ದಿಗಂತ್​

'ದೂದ್ ಪೇಡ' ಎಂದೇ ಖ್ಯಾತರಾದ ನಟ ದಿಗಂತ್, ಸಿನಿಮಾಗಳಲ್ಲಿ ಅವಕಾಶಗಳಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಮನೆಯ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದು, ಊರಿಗೆ ಮರಳುವ ಯೋಚನೆಯಲ್ಲಿದ್ದಾಗ 'ರುದ್ರ ಕಾಲ' ಸಿನಿಮಾ ಕೈಹಿಡಿದಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Apr 30 2026, 07:21 PM IST
Share this Photo Gallery
  • FB
  • TW
  • Linkdin
  • Whatsapp
16
ದೂದ್​ ಪೇಡ ಬಾಯ್​
Image Credit : Social Media

ದೂದ್​ ಪೇಡ ಬಾಯ್​

ಕನ್ನಡ ಚಿತ್ರರಂಗದ ಚಾಕಲೇಟ್​, ʻದೂದ್‌ ಪೇಡʼ ಎಂದೆಲ್ಲಾ ಫೇಮಸ್​ ಆಗಿರೋ ನಟ ದಿಗಂತ್‌ ಈಚೆಗಷ್ಟೇ ತಮ್ಮ ಸಿನಿ ಪಯಣಕ್ಕೆ ಆದ 20 ವರ್ಷಗಳ ಸಂಭ್ರಮದ ಬಗ್ಗೆ ಮಾತನಾಡಿದ್ದರು. 2006ರಲ್ಲಿ ಬಿಡುಗಡೆಯಾದ ʻಮಿಸ್‌ ಕ್ಯಾಲಿಫೋರ್ನಿಯಾʼ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಟ, ಸದ್ಯ ʻರುದ್ರ ಕಾಲʼ ದವರೆಗೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

26
ಹಗ್ಗದ ಮೇಲಿನ ನಡಿಗೆ
Image Credit : our own

ಹಗ್ಗದ ಮೇಲಿನ ನಡಿಗೆ

ಆದರೆ, ಕಲಾವಿದರ ಜೀವನ ಹಗ್ಗದ ಮೇಲಿನ ನಡಿಗೆಯಂತೆ. ಅದೇ ರೀತಿಯ ಸ್ಥಿತಿ ದಿಗಂತ್​ ಅವರಿಗೂ ಬಂದಿದೆ. ಸದ್ಯ ಸಿನಿಮಾಗಳಲ್ಲಿ ಅವಕಾಶಗಳು ಇಲ್ಲದೇ ನಟ ಪರದಾಡುವಂತಾಗಿದ್ದು, ಅದರ ಬಗ್ಗೆ ಖುದ್ದು ದಿಗಂತ್​ ಅವರೇ ಕಣ್ಣೀರು ಹಾಕಿದ್ದಾರೆ. ಮನೆಯ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿರುವುದಾಗಿ ದಿಗಂತ್ ಹೇಳಿದ್ದಾರೆ. ಊರಿಗೆ ವಾಪಸ್​ ಹೋಗುವ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದಿದ್ದಾರೆ.

Related Articles

Related image1
ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ: ಆದ್ರೆ ಕೊನೆಗೆ ಆಗಿದ್ದೇ ಬೇರೆ
Related image2
ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
36
ನೋವಿನ ಮಾತು
Image Credit : our own

ನೋವಿನ ಮಾತು

ಆರು ತಿಂಗಳ ಹಿಂದೆ ಎರಡು ಸಿನಿಮಾ ಒಪ್ಪಿಕೊಂಡಿದ್ದೆ, ಆದರೆ ನಿರ್ಮಾಪಕರು ಒಂದು ದಿನ ಬಂದು ಸದ್ಯಕ್ಕೆ ಯಾಕೋ ಪರಿಸ್ಥಿತಿ ಸರಿ ಇಲ್ಲ, ನೋಡಿಕೊಂಡು ಮುಂದುವರೆಯೋಣ ಎಂದುಬಿಟ್ಟರು. ಇದನ್ನು ಕೇಳಿ ತುಂಬಾ ನೋವಾಯಿತು. ಇದು ನನ್ನೊಬ್ಬನ ಸ್ಥಿತಿ ಅಲ್ಲ, ಬಹಳಷ್ಟು ಸ್ನೇಹಿತದ್ದು ಇದೇ ಕಥೆ. ಇದನ್ನೇ ನಂಬಿದರೆ ಆಗುವುದಿಲ್ಲ. ನಿಜವಾಗಿಯೂ ನಾವು ಬೇರೇನಾದರೂ ಮಾಡಬೇಕಾ ಎನ್ನುವ ಯೋಚನೆ ಬರುತ್ತಿದೆ ಎಂದಿದ್ದಾರೆ.

46
ಊರಿಗೆ ವಾಪಸ್​
Image Credit : Asianet News

ಊರಿಗೆ ವಾಪಸ್​

ನನ್ನ ಊರಾದ ತೀರ್ಥಹಳ್ಳಿಗೆ ಹೋಗಿ ತೋಟದ ಕೆಲಸ ಮಾಡೋಣ ಎಂದು ಯೋಚಿಸಿದೆ. ಆಗ ನನ್ನ ಕೈಹಿಡಿದಿದ್ದು ʻರುದ್ರ ಕಾಲʼ. ಬೇಗನೇ ಶೂಟಿಂಗ್‌ ಕೂಡ ಆರಂಭವಾಗಿದೆ. ಆದರೆ ಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತದೆ ಎಂದಿದ್ದಾರೆ ನಟ.

56
 ಬಾಡಿಗೆ ನಂಬಿ
Image Credit : Asianet News

ಬಾಡಿಗೆ ನಂಬಿ

ಕಳೆದೆರಡು ವರ್ಷಗಳಲ್ಲಿ ತುಂಬಾ ಆಫರ್ ಇದ್ದವು. ಆದರೆ ಫಲಿತಾಂಶದ ಬಗ್ಗೆ ಸದ್ಯ ಚರ್ಚೆ ಬೇಡ. ಆದರೆ ಈಗ ಅವಕಾಶಗಳೇ ಇಲ್ಲವಾಗಿದೆ. ನಂದಿ ಬೆಟ್ಟದ ಬಳಿ ಗೇಟೆಡ್‍ ಕಮ್ಯುನಿಟಿಯಲ್ಲಿ ಮನೆ ಇದ್ದು ಬಾಡಿಗೆ ಕೊಟ್ಟಿದ್ದೇನೆ. ಸದ್ಯ ಅದರ ಮೇಲೆ ಅವಲಂಬನೆ ಆಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ನೋವಿನಿಂದ ನುಡಿದಿದ್ದಾರೆ ದಿಗಂತ್​.

66
 ಅವಕಾಶವಿದ್ರೆ ಹೇಳಿ
Image Credit : Asianet News

ಅವಕಾಶವಿದ್ರೆ ಹೇಳಿ

ಅಂದಹಾಗೆ ದಿಗಂತ್​ ಅವರು ಈಚೆಗೆ ತೆಲುಗಿನಲ್ಲಿ ಸಮಂತಾ ರುತ್​ ಪ್ರಭು ಜೊತೆ ವೆಬ್​ ಸೀರೀಸ್​ನಲ್ಲಿ ನಟಿಸಿದ್ದಾರೆ. ಅದಕ್ಕೂ ರೆಡಿ ಇದ್ದೇನೆ. ಅವಕಾಶ ಇದ್ದರೆ ಹೇಳಿ. ಸದ್ಯ ಅಂತೂ ಮುಂಬೈಗೆ ಹೋಗಲು ಇಷ್ಟವಿಲ್ಲ. ಮುಂದೆ ಅನಿವಾರ್ಯ ಪರಿಸ್ಥಿತಿ ಬಂದರೆ ನೋಡೋಣ. ತೆಲುಗಿನಲ್ಲಿ ಒಂದು ಸಿನಿಮಾಗೆ ನಟ-ನಟಿ ಫೈನಲ್‌ ಆಗುತ್ತಿದ್ದಂತೆಯೇ ಅಲ್ಲಿ ವ್ಯಾಪಾರ ಆರಂಭವಾಗುತ್ತದೆ. ಆದರೆ, ಕನ್ನಡದಲ್ಲಿ ಅಂಥದ್ದೊಂದು ಸಿಸ್ಟಂ ಇಲ್ಲ. ಇಲ್ಲಿ ದುಡ್ಡು ಹೂಡಿಕೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಟಿವಿ ಹಕ್ಕುಗಳನ್ನು ಕೂಡ ಇಲ್ಲಿ ಯಾರೂ ಖರೀದಿ ಮಾಡುತ್ತಿಲ್ಲ ಎಂದು ನೊಂದು ನುಡಿದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ

Latest Videos
Recommended Stories
Recommended image1
ಆ ಪಾತ್ರದ ಮೂಲಕವೇ ಕೆಡಿ ಸಿನಿಮಾದ ಕತೆ ನಡೆಯುತ್ತಿರುತ್ತದೆ: ಧ್ರುವ ಸರ್ಜಾ ಹೇಳಿದ್ದೇನು?
Recommended image2
KD Movie Review: ಬೋರ್‌ ಬರ್ತಿಲ್ಲ, ಕುರ್ಚಿಯಲ್ಲಿ ಕೂರೋಕಾಗ್ತಿಲ್ಲ: ಧ್ರುವ ಸರ್ಜಾ ನಟನೆಗೆ ವೀಕ್ಷಕರು ಸುಸ್ತು
Recommended image3
ಐಸ್ ಲ್ಯಾಂಡಲ್ಲಿ ಪ್ರಣೀತಾ ಸುಭಾಷ್.. ಪತಿ ಜೊತೆ ಜಾಲಿ ಮೂಡಲ್ಲಿ ನಟಿ
Related Stories
Recommended image1
ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ: ಆದ್ರೆ ಕೊನೆಗೆ ಆಗಿದ್ದೇ ಬೇರೆ
Recommended image2
ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್​ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved