MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Lakshmi Nivasa: ಸೈಕೋಗೆ ಈಗ ವೀಕ್ಷಕರಿಂದ ಲೈಕೋ ಲೈಕು: ಚಿನ್ನುಮರಿ ಬೇಗ ಸಿಗಲೆಂದು ದೇವರಲ್ಲಿ ಹರಕೆ!

Lakshmi Nivasa: ಸೈಕೋಗೆ ಈಗ ವೀಕ್ಷಕರಿಂದ ಲೈಕೋ ಲೈಕು: ಚಿನ್ನುಮರಿ ಬೇಗ ಸಿಗಲೆಂದು ದೇವರಲ್ಲಿ ಹರಕೆ!

ಜಯಂತ್​ ಮತ್ತು ಚಿನ್ನುಮರಿ ಒಂದಾಗೋದೇ ಬೇಡ ಅಂತಿದ್ದ ವೀಕ್ಷಕರು ಈಗ ಇಬ್ಬರೂ ಒಂದಾಗಲಿ ಎಂದು ದೇವರಲ್ಲಿ ಹರಕೆ ಹೊತ್ತುಕೊಳ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

3 Min read
Suchethana D
Published : Aug 14 2025, 05:02 PM IST
Share this Photo Gallery
  • FB
  • TW
  • Linkdin
  • Whatsapp
19
ಸೈಕೋ ಜಯಂತ್​ ಜಾಹ್ನವಿ ಒಂದಾಗಲಿ ಅಂತಿರೋ ವೀಕ್ಷಕರು
Image Credit : Instagram

ಸೈಕೋ ಜಯಂತ್​- ಜಾಹ್ನವಿ ಒಂದಾಗಲಿ ಅಂತಿರೋ ವೀಕ್ಷಕರು

ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್​ ಭಿನ್ನ ವಿಭಿನ್ನ ಟ್ವಿಸ್ಟ್​ ಪಡೆದುಕೊಳ್ಳುತ್ತಾ ಸಾಗಿದೆ. ಒಂದೆಡೆ ಜಾಹ್ನವಿ ಮತ್ತು ಜಯಂತ್​ ನಡುವಿನ ಸ್ಟೋರಿಯಾದರೆ ಇನ್ನೊಂದು ಕಡೆಯಲ್ಲಿ, ಸಿದ್ದೇಗೌಡ್ರು ಮತ್ತು ಭಾವನಾ ಸ್ಟೋರಿ. ಇದೀಗ ಸೈಕೋ ಎಂದೇ ಫೇಮಸ್​​ ಆಗಿರೋ ಜಯಂತ್​, ಪತ್ನಿ ಇಲ್ಲದೇ ವಿಲವಿಲ ಒದ್ದಾಡುತ್ತಿದ್ದಾನೆ. ಏನೇ ಆದರೂ ಇವನಿಗೆ ಪತ್ನಿ ಸಿಗಬಾರದು ಎಂದೇ ವೀಕ್ಷಕರು, ನೆಟ್ಟಿಗರು ಹೇಳ್ತಿರೋದು ಉಂಟು. ಆದರೆ ಇದೀಗ ಜಯಂತ್​ ಸಂಪೂರ್ಣ ಬದಲಾಗಿ ಹೋಗಿದ್ದಾನೆ. ತನ್ನ ಜಾನುಮರಿ ತನ್ನಿಂದ ದೂರವಾಗಲು ಸಿಸಿಟಿವಿಯೇ ಕಾರಣ ಎಂದುಕೊಂಡು ಎಲ್ಲವನ್ನೂ ಸುಟ್ಟು ಹಾಕಿದ್ದಾನೆ.

29
ಪತ್ನಿಯ ಕಳಕೊಂಡು ಕಣ್ಣೀರು
Image Credit : Zee Kannada

ಪತ್ನಿಯ ಕಳಕೊಂಡು ಕಣ್ಣೀರು

ಅದೇ ಇನ್ನೊಂದೆಡೆ, ಇವನ ಗೋಳನ್ನು ಕೆಲಸದಾಕೆ ಶಾಂತಮ್ಮನಿಗೆ ನೋಡಲು ಆಗುತ್ತಿಲ್ಲ. ತನ್ನದು ಅತಿರೇಕದ ವರ್ತನೆ ಎಂದು ಜಯಂತ್​ಗೆ ಗೊತ್ತಾಗಿದೆ. ತಾನು ಚಿನ್ನುಮರಿ ಮೇಲೆ ಹಾಗೆ ಮಾಡಿದ್ದು ಸರಿಯಲ್ಲ ಎಂದು ಅಳುತ್ತಿದ್ದಾನೆ. ಆಗ ಕೆಲಸದವಳು ಅದು ನಿನ್ನ ತಪ್ಪಲ್ಲ, ನಿನ್ನ ಮನಸ್ಸಿನದ್ದು ಎಂದಿದ್ದಾಳೆ. ಅಲ್ಲಿಗೆ ಜಯಂತ್​ ಈಗ ಸಂಪೂರ್ಣ ಬದಲಾಗಿದ್ದಾನೆ. ಹುಟ್ಟು ಗುಣ ಅಷ್ಟು ಬೇಗ ಹೋಗುವುದಿಲ್ಲ ಎನ್ನುವುದು ನಿಜವಾದರೂ ಜಯಂತ್​ಗೆ ಈಗ ತಾನು ಪತ್ನಿಯನ್ನು ಅತಿರೇಕದಿಂದ ಪ್ರೀತಿಸಿದೆ. ಅದು ಪ್ರೀತಿ ಅಲ್ಲ ಅತಿರೇಕ ಎನ್ನುವುದು ತಿಳಿದಿದೆ.

Related Articles

Related image1
ಲೀಡ್​ ರೋಲ್​ ಮಾಡುವಾಗ್ಲೂ ಚಾಪೆನೇ ಗತಿಯಾಗಿತ್ತು, ಅಮ್ಮನಿಗೆ ಇನ್​ಸಲ್ಟ್​ ಮಾಡಿದ್ರು: ನಟಿ ಲಕ್ಷ್ಮೀ ಸಿದ್ದಯ್ಯ
Related image2
Sudharani Birthday: ಬಿಸ್ಕೆಟ್ ಜಾಹೀರಾತಲ್ಲಿ ನಟಿಸಿದ್ದ 3 ವರ್ಷದ ಪುಟಾಣಿ ನಟಿಯ ರೋಚಕ ಪಯಣ...
39
ಪತ್ನಿಯ ಕಳಕೊಂಡು ಕಣ್ಣೀರು
Image Credit : Zee Kannada FB

ಪತ್ನಿಯ ಕಳಕೊಂಡು ಕಣ್ಣೀರು

ಅವನು ಅಳೋದನ್ನು ವೀಕ್ಷಕರಿಗೆ ನೋಡಲಾಗ್ತಿಲ್ಲ. ಈಗ ಹೇಗಿದ್ದರೂ ಅವನಿಗೆ ಬುದ್ಧಿಬಂದಿದೆ ಅಂತಿರೋ ನೆಟ್ಟಿಗರು, ಪ್ಲೀಸ್​ ಇಬ್ಬರನ್ನೂ ಒಂದು ಮಾಡಿ ಎನ್ನುತ್ತಿದ್ದಾರೆ. ಈಗ ಈತ ಸೈಕೋ ಅಲ್ಲ, ಇವನಿಗೆ ನಮ್ಮ ಲೈಕೋ ಲೈಕು ಎನ್ನುತ್ತಿದ್ದಾರೆ. ಆದರೆ ಜಾಹ್ನವಿಗೆ ಇದು ಗೊತ್ತಾಗತ್ತಾ? ಇಬ್ಬರೂ ಒಂದಾಗುತ್ತಾರಾ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ.

49
ಹೆಸರು ಬದಲಿಸಿಕೊಂಡ ಜಾಹ್ನವಿ
Image Credit : Zee Kannada FB

ಹೆಸರು ಬದಲಿಸಿಕೊಂಡ ಜಾಹ್ನವಿ

ಅಷ್ಟಕ್ಕೂ, ವಿಶ್ವನ ಮನೆಯಲ್ಲಿ ಜಾಹ್ನವಿ ಉಳಿದುಕೊಂಡಿದ್ದಾಳೆ. ವಿಶ್ವನ ನಿಶ್ಚಿತಾರ್ಥವೂ ನಡೆದಿದೆ. ಆದರೆ ಆತ ಇನ್ನೂ ಜಾಹ್ನವಿಯ ಗುಂಗಿನಿಂದ ಹೊರಕ್ಕೆ ಬಂದಿಲ್ಲ. ಆದರೆ ಜಾಹ್ನವಿಗೆ ವಿಶ್ವ ತನ್ನನ್ನೇ ಲವ್​ ಮಾಡ್ತಾ ಇರೋದು ಎನ್ನುವ ಸತ್ಯ ಅವಳಿಗೆ ತಿಳಿದಿದೆ. ಆದರೆ ಏನೂ ಮಾಡದ ಸ್ಥಿತಿ ಆಕೆಯದ್ದು. ಜಯಂತ್​ ವಿಶ್ವನ ಮನೆಗೇ ಬಂದಿದ್ದ. ಆತನ ನೋಡಿ ಜಾಹ್ನವಿಗೆ ಗಾಬರಿ ಆಗಿತ್ತು. ಆಕೆ ಅಲ್ಲಿ ಚಂದನಾ ಹೆಸರಿನಲ್ಲಿ ವಾಸವಾಗಿದ್ದಾಳೆ (ಅಸಲಿಗೆ ನಟಿಯ ಅಸಲಿ ಹೆಸರು ಕೂಡ ಚಂದನಾ). ಇದೇ ವೇಳೆ ವಿಶ್ವನ ಅಮ್ಮ ಜಯಂತ್​ಗೆ ಕಾಫಿ ತಂದುಕೊಡಲು ಹೇಳಿದ್ದಳು. ಇನ್ನು ಮುಗಿಯಿತು ತನ್ನ ಕಥೆ ಎಂದುಕೊಳ್ಳುವಷ್ಟರಲ್ಲಿ ವಿಶ್ವ ಬಂದು ಕಾಪಾಡಿದ್ದ.

59
ವಿಶ್ವನ ಮನೆಯಲ್ಲಿ ಜಾಹ್ನವಿ
Image Credit : Zee Kannada FB

ವಿಶ್ವನ ಮನೆಯಲ್ಲಿ ಜಾಹ್ನವಿ

ಸದ್ಯ ಜಯಂತ್​ಗೆ ಜಾಹ್ನವಿ ಅಲ್ಲೇ ಇರುವ ವಿಷಯ ತಿಳಿದಿಲ್ಲ. ಹಾಗೆಂದು ಆತನಿಗೆ ಅವಳು ಬದುಕಿದ್ದಾಳೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಆದರೆ, ಆಕೆಯನ್ನು ಹೇಗೆ ಪತ್ತೆ ಮಾಡುವುದು ತಿಳಿಯದೇ ಪೇಚಿಗೆ ಸಿಲುಕಿದ್ದಾನೆ. ಸದ್ಯ ಅವನ ಕೈಯಲ್ಲಿ ಇರುವುದು ಗೂಬೆಯ ಅಸ್ತ್ರ ಮಾತ್ರ.

69
ಹತ್ತಿರವಿದ್ದರೂ ತಿಳಿಯದ ಜಯಂತ್​
Image Credit : Instagram

ಹತ್ತಿರವಿದ್ದರೂ ತಿಳಿಯದ ಜಯಂತ್​

ಈ ಹಿಂದೆ ವಿಶ್ವ ಮನೆಗೆ ಬಂದು ಜಾಹ್ನವಿ ಕಾಣದಿದ್ದಾಗ ಪತ್ರವೊಂದನ್ನು ಬರೆದು ಮನೆಯೊಳಗೆ ಎಸೆದಿದ್ದನು. ಕೊನೆಯಲ್ಲಿ ತನ್ನ ಹೆಸರಿನ ಬದಲಾಗಿ ಗೂಬೆ ಎಂದು ಬರೆದಿದ್ದನು. ಈ ಪತ್ರ ಶಾಂತಮ್ಮಳಿಗೆ ಸಿಕ್ಕಿತ್ತು. ಈ ಪತ್ರ ನೋಡಿದ್ರೆ ಜಯಂತ್ ಇನ್ನೇನು ಮಾಡುತ್ತಾನೆ ಎಂದು ಶಾಂತಮ್ಮ ಭಯಪಟ್ಟಿದ್ದಳು. ಆದ್ರೂ ಪತ್ರ ಮುಚ್ಚಿಡಲು ಪ್ರಯತ್ನಿಸಿದ್ದ ಶಾಂತಮ್ಮಾ, ತಗ್ಲಾಕೊಂಡಿದ್ದಳು. ಕೊನೆಗೂ ಜಯಂತ್‌ಗೆ ಆ ಪತ್ರ ಸಿಕ್ಕಿತ್ತು.

79
ಗೂಬೆ ಬಗ್ಗೆ ತನಿಖೆ
Image Credit : Instagram

ಗೂಬೆ ಬಗ್ಗೆ ತನಿಖೆ

ಇದರಿಂದ ಗೂಬೆ ಯಾರು ಎನ್ನುವ ಬಗ್ಗೆ ತನಿಖೆ ಶುರುವಿಟ್ಟುಕೊಂಡಿದ್ದಾನೆ. ಒಂದು ವೇಳೆ ಜಾಹ್ನವಿ ವಿಶ್ವನ ಮನೆಯಲ್ಲಿ ಇರುವ ವಿಷ್ಯ ಗೊತ್ತಾದ್ರೆ ಅಷ್ಟೇ ಕಥೆ. ಏಕೆಂದ್ರೆ, ಅವನು ಜಾಹ್ನವಿ ಕಾಲೇಜಿನಲ್ಲಿದ್ದಾಗ ಅವಳ ಸ್ನೇಹಿತನಾಗಿದ್ದ ವಿಶ್ವನೊಂದಿಗೆ ಕ್ಲೋಸ್ ಆಗಿದ್ದಕ್ಕಾಗಿ ಅವಳನ್ನು ಶಿಕ್ಷಿಸಿದ್ದ. ಇದೀಗ ಮತ್ತೆ ಅಲ್ಲೇ ಇದ್ದಾಳೆ ಎಂದು ತಿಳಿದರೆ ಜಾಹ್ನವಿ ಪಾಡು ದೇವ್ರೇ ಗತಿ.

89
ಜಯಂತ್​ ಮುಂದಿನ ನಡೆಯೇನು?
Image Credit : Instagram

ಜಯಂತ್​ ಮುಂದಿನ ನಡೆಯೇನು?

ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಜಯಂತ್​, ಪೆನ್​ಡ್ರೈವ್​ನಲ್ಲಿ ಜಾಹ್ನವಿ ಕ್ಲಾಸ್​ಮೇಟ್ಸ್​ ಡಿಟೇಲ್ಸ್​ ತೆಗೆದುಕೊಂಡು ಬಂದಿದ್ದ. ಅದರಲ್ಲಿ ಎಲ್ಲರಿಗೂ ಕಾಲ್​ ಮಾಡಿ ಗೂಬೆ ಅಂತ ಹೇಳ್ತಿರೋದು ಯಾರಿಗೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ ಆತ. ಗೂಬೆ ಯಾರೆಂದು ಗೊತ್ತಾದರೆ ಜಾಹ್ನವಿ ಎಲ್ಲಿದ್ದಾಳೆ ಗೊತ್ತಾಗುತ್ತದೆ ಎನ್ನುವುದು ಅವನ ಅನಿಸಿಕೆ. ಶಾಂತಮ್ಮ ಇದನ್ನು ನೋಡಿ ಗಾಬರಿಗೊಂಡಿದ್ದಾಳೆ. ಇವನ ಕೈಗೆ ಅವಳು ಸಿಕ್ಕರೆ ಗತಿ ಏನು ಎನ್ನುವುದು ಆಕೆಗೂ ಗೊತ್ತು. ಆದರೆ ಏನೂ ಮಾಡದ ಸ್ಥಿತಿ.

99
ದಂಪತಿ ಒಂದಾಗಲಿ ಎಂದು ಹಾರೈಕೆ
Image Credit : Instagram

ದಂಪತಿ ಒಂದಾಗಲಿ ಎಂದು ಹಾರೈಕೆ

ಇಷ್ಟೆಲ್ಲಾ ಮಾಡಿದ ಮೇಲೆ ಜಾಹ್ನವಿ ಸಿಕ್ಕಿಬೀಳ್ತಾಳೆ ಎನ್ನೋ ಭಯ ಸೀರಿಯಲ್​ ಪ್ರೇಮಿಗಳದ್ದಾಗಿತ್ತು. ಯಾವುದೇ ಕಾರಣಕ್ಕೂ ಗೂಬೆ ಜಯಂತ್​ಗೆ ಸಿಗದಂತೆ ಮಾಡಪ್ಪಾ ಎಂದು ದೇವರಲ್ಲಿ ಬೇಡಿಕೊಂಡಿದ್ದರು. ಆದರೆ ಇದೀಗ ಜಯಂತ್​ಗೆ ತನ್ನ ತಪ್ಪಿನ ಅರಿವು ಆಗ್ತಿರೋ ಕಾರಣ ಇಬ್ಬರೂ ಒಂದಾಗಲಿ ಎನ್ನುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
Latest Videos
Recommended Stories
Recommended image1
ಅಜ್ಜಿಯರ ಜೊತೆ ಕೇಕ್ ಕತ್ತರಿಸಿದ ರಾಯನ್: Meghana Raj ಪುತ್ರನ ಬರ್ತ್ ಡೇ ಪಾರ್ಟಿಯಲ್ಲಿ ತಾರೆಯರ ಕಲರವ
Recommended image2
'ಬೆತ್ತಲೆ ಫೋಟೋ ಹಿಡಿದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ, ಪರ ಪುರುಷನ ಜೊತೆ ಮಲಗುವಂತೆ ಹೇಳ್ತಿದ್ದ..' ಗಂಡನ ವಿರುದ್ಧ ಬಾಲಿವುಡ್‌ ನಟಿ ಭಾರೀ ಆರೋಪ
Recommended image3
Amruthadhaare: ಕೆಡಿ ಜೈದೇವ್​ಗೆ ಚಮಕ್​ ಕೊಟ್ಟ ಆಕಾಶ್​- ಗೌತಮ್​ ಪುತ್ರ ಎಂದ್ರೆ ಸುಮ್ನೇನಾ?
Related Stories
Recommended image1
ಲೀಡ್​ ರೋಲ್​ ಮಾಡುವಾಗ್ಲೂ ಚಾಪೆನೇ ಗತಿಯಾಗಿತ್ತು, ಅಮ್ಮನಿಗೆ ಇನ್​ಸಲ್ಟ್​ ಮಾಡಿದ್ರು: ನಟಿ ಲಕ್ಷ್ಮೀ ಸಿದ್ದಯ್ಯ
Recommended image2
Sudharani Birthday: ಬಿಸ್ಕೆಟ್ ಜಾಹೀರಾತಲ್ಲಿ ನಟಿಸಿದ್ದ 3 ವರ್ಷದ ಪುಟಾಣಿ ನಟಿಯ ರೋಚಕ ಪಯಣ...
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved