MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Yash: ಬಸ್ ಡ್ರೈವರ್ ಮಗ.. 300 ರೂ ಜೊತೆ ಬಂದು, ಇಂದು ಜಗತ್ತಿನ ಟಾಪ್ ಸ್ಟಾರ್; ಸ್ಟೆಪ್ ಬೈ ಸ್ಟೆಪ್ ಕಹಾನಿಯಲ್ಲಿ ಟ್ವಿಸ್ಟೋ ಟ್ವಿಸ್ಟು!

Yash: ಬಸ್ ಡ್ರೈವರ್ ಮಗ.. 300 ರೂ ಜೊತೆ ಬಂದು, ಇಂದು ಜಗತ್ತಿನ ಟಾಪ್ ಸ್ಟಾರ್; ಸ್ಟೆಪ್ ಬೈ ಸ್ಟೆಪ್ ಕಹಾನಿಯಲ್ಲಿ ಟ್ವಿಸ್ಟೋ ಟ್ವಿಸ್ಟು!

ಈ 'ರಾಕಿ ಭಾಯ್' ಸಾಮ್ರಾಜ್ಯ ಅಷ್ಟು ಸುಲಭವಾಗಿ ಕಟ್ಟಿದ್ದಲ್ಲ. ಇಂದು 1000 ಕೋಟಿ ಬಿಸಿನೆಸ್ ಮಾಡುವ ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಹಿಂದೆ, ಹಸಿದ ಹೊಟ್ಟೆ, ಅವಮಾನ ಮತ್ತು ಹಗಲು-ರಾತ್ರಿ ಪಟ್ಟ ಪರಿಶ್ರಮದ ಕಥೆಯಿದೆ. ಏನಿದು ನೋಡಿ..!

2 Min read
Author : Shriram Bhat
Published : May 31 2026, 09:32 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Instagram

ಜೇಬಲ್ಲಿ 300 ರೂಪಾಯಿ, ಕಣ್ಣಲ್ಲಿ ಸಾವಿರ ಕನಸು: ಬಸ್ ಡ್ರೈವರ್ ಮಗ ಇಂದು 'ಇಂಡಿಯನ್ ಸಿನಿಮಾ' ದೊರೆ!

"ಸಲಾಂ ರಾಕಿ ಭಾಯ್..." ಈ ಹಾಡು ಕೇಳಿದ್ರೆ ಸಾಕು, ಮೈ ರೋಮಾಂಚನವಾಗುತ್ತೆ. ಆದರೆ ಈ 'ರಾಕಿ ಭಾಯ್' ಸಾಮ್ರಾಜ್ಯ ಅಷ್ಟು ಸುಲಭವಾಗಿ ಕಟ್ಟಿದ್ದಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
Image Credit : Instagram

ಇಂದು 1000 ಕೋಟಿ ಬಿಸಿನೆಸ್ ಮಾಡುವ ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಹಿಂದೆ, ಹಸಿದ ಹೊಟ್ಟೆ, ಅವಮಾನ ಮತ್ತು ಹಗಲು-ರಾತ್ರಿ ಪಟ್ಟ ಪರಿಶ್ರಮದ ಕಥೆಯಿದೆ. ಹೌದು, ಇದು ನಮ್ಮ ಕನ್ನಡಿಗರ ಹೆಮ್ಮೆ, ಸ್ಯಾಂಡಲ್‌ವುಡ್‌ನ 'ರಾಕಿಂಗ್ ಸ್ಟಾರ್' ಯಶ್ (Yash) ಅವರ ಸ್ಫೂರ್ತಿದಾಯಕ ಯಶಸ್ಸಿನ ಗಾಥೆ!

Related Articles

Related image1
ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ರೋಮ್ಯಾನ್ಸ್; ಆದ್ರೆ ಕ್ಲೈಮ್ಯಾಕ್ಸ್ ಮಾತ್ರ ಅತ್ಯದ್ಭುತ, ಭಾರೀ ಟ್ವಿಸ್ಟ್!
Related image2
Obsession: ಇದು ಈ ವರ್ಷದ 'ನಂಬರ್ 1' ಸಿನಿಮಾ; 7 ಕೋಟಿ ಬಜೆಟ್ 'ಆಬ್ಸೆಷನ್' ಗಳಿಸಿದ್ದು 1000 ಕೋಟಿ!
310
Image Credit : Instagram

ಮೈಸೂರಿನ ಹುಡುಗ ಬೆಂಗಳೂರಿಗೆ ಬಂದಿದ್ದು ಕೇವಲ 300 ರೂಪಾಯಿಯೊಂದಿಗೆ!

ಹಾಸನದಲ್ಲಿ ಜನಿಸಿ, ಮೈಸೂರಿನಲ್ಲಿ ಬೆಳೆದ ನವೀನ್ ಕುಮಾರ್ ಗೌಡ (ಯಶವಂತ್) ಎಂಬ ಹುಡುಗನಿಗೆ ಬಾಲ್ಯದಿಂದಲೂ ನಟನೆಯೆಂದರೆ ವಿಪರೀತ ಕ್ರೇಜ್. ತಂದೆ ಅರುಣ್ ಕುಮಾರ್ ಕೆಎಸ್‌ಆರ್‌ಟಿಸಿ ಬಸ್ ಚಾಲಕರು. ಮಗ ಓದಿ ದೊಡ್ಡ ಕೆಲಸಕ್ಕೆ ಹೋಗಲಿ ಎಂಬುದು ತಂದೆ-ತಾಯಿಯ ಆಸೆ.

410
Image Credit : Instagram

ಆದರೆ, ಯಶ್ ಮನಸ್ಸಿನಲ್ಲಿ ಮಾತ್ರ ಸಿನಿಮಾ ಕನಸು ಬಲವಾಗಿತ್ತು. ಸಿನಿಮಾ ಮಾಡ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದಾಗ ಅವರ ಜೇಬಿನಲ್ಲಿದ್ದದ್ದು ಕೇವಲ 300 ರೂಪಾಯಿ! "ಮರಳಿ ಮನೆಗೆ ಬರ್ತೀಯಾ ನೋಡು" ಎಂದು ಅವರ ಪೋಷಕರು ಅಂದು ಸವಾಲು ಹಾಕಿದ್ದರು. ಆದರೆ ಯಶ್ ಗೆದ್ದೇ ತೀರುತ್ತೇನೆ ಎಂಬ ಛಲದೊಂದಿಗೆ ಹೆಜ್ಜೆ ಇಟ್ಟರು.

510
Image Credit : sun next

ರಂಗಭೂಮಿಯಿಂದ ಬೆಳ್ಳಿಪರದೆಯವರೆಗೆ:

ಬೆಂಗಳೂರಿನಲ್ಲಿ ಆರಂಭದಲ್ಲಿ ಯಶ್ ಅವರಿಗೆ ಉಳಿದುಕೊಳ್ಳಲು ಸರಿಯಾದ ಜಾಗವಿರಲಿಲ್ಲ. ಬಿ.ವಿ. ಕಾರಂತರ 'ಬೆನಕ' ನಾಟಕ ತಂಡ ಸೇರಿ ಬ್ಯಾಕ್‌ಸ್ಟೇಜ್ ಕೆಲಸ ಮಾಡುತ್ತಾ ನಟನೆ ಕಲಿತರು. ಅಲ್ಲಿಂದ ಟಿವಿ ಧಾರಾವಾಹಿಗಳಾದ ನಂದ ಗೋಕುಲ, ಮಳೆಬಿಲ್ಲು, ಉತ್ತರಾಯಣ, ಪ್ರೀತಿ ಇಲ್ಲದ ಮೇಲೆ, ಶಿವ ಮೂಲಕ ಜನರ ಮನೆ-ಮನ ತಲುಪಿದರು. 2008ರಲ್ಲಿ 'ಮೊಗ್ಗಿನ ಮನಸು' ಚಿತ್ರದ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟ ಯಶ್, ಪೋಷಕ ನಟನಾಗಿ ಮೊದಲ ಫಿಲ್ಮ್ ಫೇರ್ ಅವಾರ್ಡ್ ಮುಡಿಗೇರಿಸಿಕೊಂಡರು.

610
Image Credit : sun next

ಸ್ಯಾಂಡಲ್‌ವುಡ್‌ನಿಂದ ಕೆಜಿಎಫ್ ಸಾಮ್ರಾಜ್ಯದವರೆಗೆ!

'ರಾಜಾಹುಲಿ', 'ಗೂಗ್ಲಿ', 'ಗಜಕೇಸರಿ' ಚಿತ್ರಗಳ ಮೂಲಕ ಯಶ್ ಕರ್ನಾಟಕದ ಬಾಕ್ಸ್ ಆಫೀಸ್ ಸುಲ್ತಾನನಾದರು. ಆದರೆ ಅವರ ಹಣೆಬರಹವನ್ನೇ ಬದಲಿಸಿದ್ದು ಪ್ರಶಾಂತ್ ನೀಲ್ ನಿರ್ದೇಶನದ 'KGF'. ಆ ಒಂದು ಸಿನಿಮಾ ಕನ್ನಡ ಚಿತ್ರರಂಗದ ಇಮೇಜ್ ಅನ್ನೇ ಬದಲಿಸಿತು.

710
Image Credit : sun next

ಚಂದನವನದ ಚಿತ್ರವೊಂದು ಸಾವಿರ ಕೋಟಿ ಗಳಿಸಬಹುದು ಎಂದು ಯಾರು ಊಹಿಸಿರಲಿಲ್ಲ. 'ರಾಕಿ ಭಾಯ್' ಮ್ಯಾನರಿಸಂಗೆ ಇಡೀ ದೇಶವೇ ಫಿದಾ ಆಯಿತು. ಇಂದು ಯಶ್ ಕೇವಲ ಕರ್ನಾಟಕದ ನಟನಲ್ಲ, ಇಡೀ ಭಾರತದ ಹೆಮ್ಮೆಯ ತಾರೆ.

810
Image Credit : Google

ಇಂದು 130 ಕೋಟಿ ಸಂಭಾವನೆಯ ಸರದಾರ!

ಒಂದು ಕಾಲದಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಯಶ್, ಇಂದು ಪ್ರತಿ ಚಿತ್ರಕ್ಕೆ ಬರೋಬ್ಬರಿ 130 ಕೋಟಿ ರೂ. ಸಂಭಾವನೆ ಪಡೆಯುವ ಹಂತಕ್ಕೆ ಬೆಳೆದಿದ್ದಾರೆ. ಪ್ರಸ್ತುತ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' (Toxic) ಚಿತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನ ಬೃಹತ್ ಚಿತ್ರ 'ರಾಮಾಯಣ'ದಲ್ಲಿ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿಯಂತಹ ಘಟಾನುಘಟಿ ನಟಿಯರು ಇವರ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದಾರೆ.

910
Image Credit : Instagram

ಬಾಟಮ್ ಲೈನ್:

ಯಶ್ ಅವರ ಜೀವನ ನಮಗೆ ಕಲಿಸಿಕೊಡುವುದು ಒಂದೇ - "ನಿಮ್ಮ ಹಿನ್ನೆಲೆ ಯಾವುದಾದರೂ ಆಗಿರಲಿ, ನಿಮ್ಮ ಛಲ ಮತ್ತು ಪರಿಶ್ರಮ ಗಟ್ಟಿಯಾಗಿದ್ದರೆ, ಜಗತ್ತೇ ನಿಮ್ಮ ಕಾಲಬುಡಕ್ಕೆ ಬರುತ್ತದೆ." ಬಸ್ ಡ್ರೈವರ್ ಮಗನಾಗಿ ಬಂದ ಹುಡುಗ ಇಂದು ಭಾರತೀಯ ಚಿತ್ರರಂಗದ ಅಧಿಪತಿಯಾಗಿ ಮೆರೆಯುತ್ತಿರುವುದು ಪ್ರತಿಯೊಬ್ಬ ಕನಸುಗಾರನಿಗೂ ಒಂದು ದೊಡ್ಡ ಸ್ಫೂರ್ತಿ!

1010
Image Credit : Instagram

ಅಂದಹಾಗೆ, ನಟ ಯಶ್ ಅವರು ನಟಿ ರಾಧಿಕಾ ಪಂಡಿತ್‌ ಅವರನ್ನು ಮದುವೆ ಆಗಿದ್ದಾರೆ. ಯಶ್-ರಾಧಿಕಾ ಜೋಡಿಗೆ ಮುದ್ದಾದ ಇಬ್ಬರು ಮಕ್ಕಳಿದ್ದಾರೆ. ಸದ್ಯ ನಟ ಯಶ್ ಅವರ ರಾಮಯಣ ಹಾಗೈ ಟಾಕ್ಸಿಕ್ ಸಿನಿಮಾಗಳನ್ನು ತೆರೆಯ ಮೇಲೆ ನೋಡಲು ಕಾಯಲಾಗುತ್ತಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ಅಂತರರಾಷ್ಟ್ರೀಯ ಸುದ್ದಿ
ಭಾರತ ಸುದ್ದಿ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಆಮೀರ್​ ಖಾನ್​ ಚಿತ್ರ ಫ್ಲಾಪ್​ ಆಯ್ತು, ಅಕ್ಷಯ್​ ಕುಮಾರ್​ ಮದ್ವೆಯಾಯ್ತು! ಬಾಲಿವುಡ್​ ತಾರೆಯರ ಇಂಟರೆಸ್ಟಿಂಗ್​ ಕಹಾನಿ
Recommended image2
Obsession: ಇದು ಈ ವರ್ಷದ 'ನಂಬರ್ 1' ಸಿನಿಮಾ; 7 ಕೋಟಿ ಬಜೆಟ್ 'ಆಬ್ಸೆಷನ್' ಗಳಿಸಿದ್ದು 1000 ಕೋಟಿ!
Recommended image3
Secret: ಆರಾಧ್ಯಾಗೆ ಸ್ಮಾರ್ಟ್‌ಫೋನ್ ಯಾಕೆ ಕೊಟ್ಟಿಲ್ಲ ಐಶ್ವರ್ಯಾ ರೈ-ಅಭಿಷೇಕ್ ಜೋಡಿ? ಈ ಸೀಕ್ರೆಟ್ ಗೊತ್ತಾದ್ರೆ ಜಗತ್ತೇ ಶಾಕ್ ಆಗುತ್ತೆ!
Related Stories
Recommended image1
ಗಂಡ ಮನೆಯಲ್ಲಿ ಇಲ್ಲದ ವೇಳೆ ಗೆಳೆಯನ ಜೊತೆ ರೋಮ್ಯಾನ್ಸ್; ಆದ್ರೆ ಕ್ಲೈಮ್ಯಾಕ್ಸ್ ಮಾತ್ರ ಅತ್ಯದ್ಭುತ, ಭಾರೀ ಟ್ವಿಸ್ಟ್!
Recommended image2
Obsession: ಇದು ಈ ವರ್ಷದ 'ನಂಬರ್ 1' ಸಿನಿಮಾ; 7 ಕೋಟಿ ಬಜೆಟ್ 'ಆಬ್ಸೆಷನ್' ಗಳಿಸಿದ್ದು 1000 ಕೋಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved