MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಲಕ್ಷ ಲಕ್ಷ ಹಿಂದೂಗಳ ಮಾರಣಹೋಮ ಮಾಡಿದವನ ಹೆಸರು ಮಗನಿಗ್ಯಾಕೆ? Kareena Kapoor Khan ಹೇಳಿದ್ದೇನು?

ಕರೀನಾ ಕಪೂರ್ ಪ್ರೀತಿಸಿ ಮದುವೆಯಾದ ಸೈಫ್ ಅಲಿ ಖಾನ್  ಲಕ್ಷಾಂತರ ಹಿಂದೂಗಳನ್ನು ಕೊಂದ ಐತಿಹಾಸಿಕ ವ್ಯಕ್ತಿ ತೈಮೂರ್ ಹೆಸರನ್ನು ತಮ್ಮ ಮಗನಿಗೆ ಇಟ್ಟು ವಿವಾದ ಸೃಷ್ಟಿಸಿದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ಹೆಸರಿನ ಹಿಂದಿನ ಕಾರಣದ ಬಗ್ಗೆ ಕರೀನಾ ನೀಡಿದ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

2 Min read
Author : Suchethana D
Published : Mar 11 2026, 07:52 PM IST
Share this Photo Gallery
  • FB
  • TW
  • Linkdin
  • Whatsapp
17
ಸೈಫ್​ ಕರೀನಾ ಜೋಡಿ
Image Credit : instagram

ಸೈಫ್​- ಕರೀನಾ ಜೋಡಿ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಗಂಡ-ಹೆಂಡತಿ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಕರೀನಾರನ್ನು ಮದುವೆ ಆಗುವುದಕ್ಕೂ ಮೊದಲು ನಟ ಸೈಫ್ ಅಲಿ ಖಾನ್ ಅಮೃತಾ ಸಿಂಗ್ (Amrita Singh)ಅವರನ್ನು ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳೂ ಸಹ ಇದ್ದಾರೆ. 1991ರಲ್ಲಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದ ಸೈಫ್ ಅಲಿ ಖಾನ್ 2004ರಲ್ಲಿ ಅವರಿಗೆ ಡಿವೋರ್ಸ್ ನೀಡಿದ್ದಾರೆ. ಅಷ್ಟರಲ್ಲಾಗಲೇ ಸೈಫ್ ಕರೀನಾ ಮೇಲೆ ಕಣ್ಣು ಹಾಕಿ ಆಗಿತ್ತು.

27
ಮಗಳೇ ಎಂದವಳನ್ನೇ ಮದ್ವೆಯಾದ ನಟ
Image Credit : Instagram\Kareena Kapoor

ಮಗಳೇ ಎಂದವಳನ್ನೇ ಮದ್ವೆಯಾದ ನಟ

ನಟ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯ ಲವ್ ಕಹಾನಿ ಭಾರೀ ವಿಚಿತ್ರ ಹಾಗೂ ವಿಭಿನ್ನವಾಗಿದೆ. ಅಮೃತಾ ಸಿಂಗ್ ಜತೆ ಮದುವೆ ಮಾಡಿಕೊಂಡ ವೇಳೆ ತಮ್ಮಿಬ್ಬರ ಮದುವೆಗೆ ಬಂದಿದ್ದ ಕರೀನಾರನ್ನು ಸೈಫ್ 'ಮಗಳೇ, ಮಗಳೇ..' ಎಂದೇ ಕರೆದಿದ್ದರಂತೆ. ಆದರೆ, ಯಾವಾಗ ಆಕೆಯ ಜೊತೆ ಶೂಟಿಂಗ್‌ನಲ್ಲಿ ಸಹನಟರಾಗಿ ಸೈಫ್ ನಟಿಸಲು ಶುರು ಮಾಡಿದರೋ, ಆಗ ಕರೀನಾ ಮೇಲೆ ಅವರಿಗೆ ಲವ್ ಶುರುವಾಗಿದೆ. ಲವ್ ಅದೆಷ್ಟು ಸ್ಟ್ರಾಂಗ್ ಆಗಿ ಮುಂದುವರೆಯಿತು ಎಂದರೆ, ಕೊನೆಗೆ ಪತ್ನಿ ಅಮೃತಾಗೆ ಡಿವೋರ್ಸ್ ಕೊಟ್ಟುಬಿಟ್ಟರು ಸೈಫ್ ಅಲಿಖಾನ್.

Related Articles

Related image1
ಎಂಗೇಜ್​ಮೆಂಟ್​ ಬಳಿಕ ತ್ರಿಷಾ ಕೃಷ್ಣನ್​ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
Related image2
ಖಾನ್​ ಸಾಹೇಬ್ರ ಫೋನ್​ ರಿಂಗ್​ಗೆ ವಿಮಾನ ಗಡಗಡ: ಫ್ಲೈಟ್ ದಿಕ್ಕೇ ಬದಲಾಯ್ತು​- ಜೀವ ಭಯದಲ್ಲಿ ಪ್ರಯಾಣಿಕರು ತತ್ತರ
37
ನಾಲ್ಕು ಮಕ್ಕಳ ಜನನ
Image Credit : sakpataudi instagram

ನಾಲ್ಕು ಮಕ್ಕಳ ಜನನ

ಮೊದಲೇ ಇಬ್ಬರು ಮಕ್ಕಳ ಅಪ್ಪನಾಗಿದ್ದ ಸೈಫ್​ ಅಲಿ, ಕರೀನಾಳಿಂದ ಮತ್ತೆ ಎರಡು ಮಕ್ಕಳನ್ನು ಪಡೆದಿದ್ದಾರೆ. ಒಬ್ಬ ಮಗನಿಗೆ ತೈಮೂರು ಇನ್ನೊಬ್ಬ ಮಗನಿಗೆ ಜಹಾಂಗೀರ್​ ಎನ್ನುವ ಹೆಸರು ಇಡಲಾಗಿದೆ. ಅಷ್ಟಕ್ಕೂ ಭಾರತದ ಇತಿಹಾಸ ತೆಗೆದು ನೋಡಿದರೆ, ತೈಮೂರ ಎಂಬ ರಾಜ, ಕಾಫೀರ್​ ಎನ್ನುವ ಕಾರಣಕ್ಕೆ ಐದು ಲಕ್ಷಕ್ಕೂ ಅಧಿಕ ಹಿಂದೂಗಳ ಹ*ತ್ಯೆ ಮಾಡಿರುವುದು ತಿಳಿಯುತ್ತದೆ.

47
ಭಾರತಕ್ಕೆ ಬಂದಿದ್ದ ಸುಲ್ತಾನ
Image Credit : instagram

ಭಾರತಕ್ಕೆ ಬಂದಿದ್ದ ಸುಲ್ತಾನ

14 ನೇ ಶತಮಾನದ ಕೊನೆಯಲ್ಲಿ (ಕ್ರಿ.ಶ. 1398–1399) ಭಾರತದ ಮೇಲೆ ಅವನ ಆಕ್ರಮಣವು ಭಾರತೀಯ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದೆ. ಪಶ್ಚಿಮದಲ್ಲಿ ಏಷ್ಯಾ ಮೈನರ್ ವರೆಗೆ ಪರ್ಷಿಯಾ ಮತ್ತು ಮೆಸೊಪಟ್ಯಾಮಿಯಾವನ್ನು ವಶಪಡಿಸಿಕೊಂಡ ನಂತರ ಮತ್ತು ದಕ್ಷಿಣದಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ತೈಮೂರ್ ತನ್ನ ಗಮನವನ್ನು ಭಾರತದ ಕಡೆಗೆ ತಿರುಗಿಸಿದನು.

57
ಮಿಲಿಟರಿ ಕಾರ್ಯಾಚರಣೆ
Image Credit : Social Media

ಮಿಲಿಟರಿ ಕಾರ್ಯಾಚರಣೆ

14 ನೇ ಶತಮಾನದ ಅಂತ್ಯದ ವೇಳೆಗೆ, ಶತಮಾನಗಳಿಂದ ಉತ್ತರ ಭಾರತದ ದೊಡ್ಡ ಭಾಗಗಳನ್ನು ಆಳುತ್ತಿದ್ದ ದೆಹಲಿ ಸುಲ್ತಾನರು ಆಂತರಿಕ ಸಂಘರ್ಷಗಳು ಮತ್ತು ದುರ್ಬಲ ನಾಯಕತ್ವವನ್ನು ಎದುರಿಸುತ್ತಿದ್ದರು. ಈ ಪ್ರಕ್ಷುಬ್ಧತೆಯ ಲಾಭವನ್ನು ಪಡೆದುಕೊಂಡು, ಟ್ಯಾಮರ್ಲೇನ್ ಎಂದೂ ಕರೆಯಲ್ಪಡುವ ತೈಮೂರ್ ತನ್ನ ಸ್ವಂತ ಸಾಮ್ರಾಜ್ಯವನ್ನು ವಿಸ್ತರಿಸಲು ಹಲವಾರು ಮಿಲಿಟರಿ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದನು.

67
ತೈಮೂರ್​ ನಮಗೆ ಆದರ್ಶ
Image Credit : Asianet News

ತೈಮೂರ್​ ನಮಗೆ ಆದರ್ಶ

ಆ ಸಮಯದಲ್ಲಿ ಹಿಂದೂಗಳ ನರಮೇಧವೇ ನಡೆದು ಹೋಗಿತ್ತು. ಅದೆಷ್ಟೋ ಹಿಂದೂ ಮಹಿಳೆಯರ ಮೇಲೆ ಅತ್ಯಾ*ಚಾರ ಮಾಡಲಾಗಿತ್ತು. ಅವರನ್ನು ಸಿಗಿದು ಅವರ ತಲೆ ಬುರುಡೆಗಳನ್ನು ಇಟ್ಟಿದ್ದ ಇದೇ ತೈಮೂರ್​. ತನ್ನ ತಂಟೆಗೆ ಯಾರೂ ಬರಬಾರದು ಎಂದು ತೋರಿಸುವುದಕ್ಕಾಗಿ ಹೀಗೆ ಮಾಡಿದ್ದ ಎನ್ನಲಾಗಿದೆ. ಇದೇ ತೈಮೂರ ಕರೀನಾ ಕಪೂರ್​ ಖಾನ್​ ಅವರಿಗೆ ಆದರ್ಶವಾಗಿದ್ದಕ್ಕೆ ಸಾಕಷ್ಟು ಟ್ರೋಲ್​ ಕೂಡ ಆಗಿತ್ತು.

77
ಆಗಿ ಹೇಳಿದ್ದೇ ಬೇರೆ
Image Credit : stockPhoto

ಆಗಿ ಹೇಳಿದ್ದೇ ಬೇರೆ

ನನಗೆ ಇತಿಹಾಸ ಚೆನ್ನಾಗಿ ಗೊತ್ತಿದೆ. ತೈಮೂರನ ಸಾಹಸ, ಆತನ ಬಲಾಢ್ಯ ದೇಹ, ಅವನ ವಿಕ್ರಮವನ್ನು ನೋಡಿ ನನ್ನ ಮಗನೂ ಹಾಗೆಯೇ ಆಗಬೇಕು ಎಂದು ಆ ಹೆಸರನ್ನು ಇಡಲಾಗಿದೆ ಎಂದಿದ್ದಾರೆ ಕರೀನಾ. ಈ ಹಿಂದೆ, ಸೈಫ್‌ಗೆ ತೈಮೂರ್ ಎಂಬ ಹೆಸರಿನ ಒಬ್ಬ ಗೆಳೆಯನಿದ್ದ, ಅವನೊಂದಿಗೆ ಅವನು ಬೆಳೆದನು. ಸೈಫ್ ಅವನನ್ನೂ ಮತ್ತು ಅವನ ಹೆಸರನ್ನೂ ಇಷ್ಟಪಡುತ್ತಿದ್ದರು. ಅದಕ್ಕಾಗಿಯೇ ಸೈಫ್, 'ನನಗೆ ಮಗನಿದ್ದರೆ, ನಾನು ಅವನಿಗೆ ತೈಮೂರ್ ಎಂದು ಹೆಸರಿಡುತ್ತೇನೆ' ಎಂದು ಹೇಳುತ್ತಿದ್ದರು. ಅದಕ್ಕಾಗಿ ಇಟ್ಟರು ಎಂದಿದ್ದರು. ಈಗ ಉಲ್ಟಾ ಹೊಡೆದು ತೈಮೂರ ಸುಲ್ತಾನನ ಪರಾಕ್ರಮಕ್ಕೆ ಇಟ್ಟಿರುವುದಾಗಿ ಹೇಳಿದ್ದಾರೆ. history.of.bharat ನಲ್ಲಿ ಈಕೆಯ ಸಂದರ್ಶನವನ್ನು ತೋರಿಸಲಾಗಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರೀನಾ ಕಪೂರ್
ಮನರಂಜನಾ ಸುದ್ದಿ
ಬಾಲಿವುಡ್
ಸಂಬಂಧಗಳು
ಮದುವೆ
ಪ್ರೇಮ ವಿವಾಹ
ಸೈಫ್ ಅಲಿ ಖಾನ್
Latest Videos
Recommended Stories
Recommended image1
ನಿರ್ದೇಶಕ ರಾಘವೇಂದ್ರ ರಾವ್ ಅವರ ಆ ದೊಡ್ಡ ಆಸೆ ಈಡೇರಲೇ ಇಲ್ಲ; ಮಾತು ಕೊಟ್ಟ ಸ್ಟಾರ್ ನಟಿ ಯಾರು?
Recommended image2
Trisha Krishnan: ತ್ರಿಷಾ ಜೊತೆ ನಟಿಸಿ ಸ್ಟಾರ್ ಆದ ಆ ಹೀರೋ ಯಾರು? ಈಗೇನ್ಮಾಡ್ತಿದ್ದಾರೆ?
Recommended image3
Ustaad Bhagat Singh ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ನಾಯಕಿ ಯಾರು?: ವಯಸ್ಸಿನ ಅಂತರ 30 ವರ್ಷವಂತೆ!
Related Stories
Recommended image1
ಎಂಗೇಜ್​ಮೆಂಟ್​ ಬಳಿಕ ತ್ರಿಷಾ ಕೃಷ್ಣನ್​ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
Recommended image2
ಖಾನ್​ ಸಾಹೇಬ್ರ ಫೋನ್​ ರಿಂಗ್​ಗೆ ವಿಮಾನ ಗಡಗಡ: ಫ್ಲೈಟ್ ದಿಕ್ಕೇ ಬದಲಾಯ್ತು​- ಜೀವ ಭಯದಲ್ಲಿ ಪ್ರಯಾಣಿಕರು ತತ್ತರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved