- Home
- Life
- Relationship
- ಎಂಗೇಜ್ಮೆಂಟ್ ಬಳಿಕ ತ್ರಿಷಾ ಕೃಷ್ಣನ್ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
ಎಂಗೇಜ್ಮೆಂಟ್ ಬಳಿಕ ತ್ರಿಷಾ ಕೃಷ್ಣನ್ ಮದುವೆ ಮುರಿದದ್ದೇಕೆ? ನಟಿಯಿಂದ್ಲೇ ಕೊನೆಗೂ ಬಯಲಾಯ್ತು ಆ ಸತ್ಯ!
ದಳಪತಿ ವಿಜಯ್ ಮತ್ತು ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಕೃಷ್ಣನ್ ಹೆಸರು ಕೇಳಿಬರುತ್ತಿದೆ. ಈ ಸನ್ನಿವೇಶದಲ್ಲಿ, ತ್ರಿಷಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ವಿಚ್ಛೇದನ, ಮದುವೆ ಮತ್ತು ನಟನೆಯನ್ನು ಮುಂದುವರಿಸುವ ತಮ್ಮ ಬಲವಾದ ನಿಲುವಿನ ಬಗ್ಗೆ ಮಾತನಾಡಿದ್ದಾರೆ.

ದಳಪತಿ ವಿಜಯ್ ವಿಚ್ಛೇದನದ ಸದ್ದು
ಸದ್ಯ ನಟ ದಳಪತಿ ವಿಜಯ್ ಮತ್ತು ಸಂಗೀತಾ ಅವರ ಡಿವೋರ್ಸ್ ಸುದ್ದಿ ಬಹಳ ಸದ್ದು ಮಾಡುತ್ತಿದ್ದು, ಅದರ ನಡುವೆಯೇ ಇವರಿಬ್ಬರ ವಿಚ್ಛೇದನಕ್ಕೆ ನಟಿ ತ್ರಿಷಾ ಕೃಷ್ಣನ್ (Trisha Krishnan) ಅವರೇ ಕಾರಣ ಎನ್ನುವ ಸುದ್ದಿಯೂ ಸದ್ದು ಮಾಡುತ್ತಿದೆ.
ದಳಪತಿ ಜೊತೆ ತ್ರಿಷಾ
ಅಷ್ಟಕ್ಕೂ, ಇದೇ 5 ರಂದು ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಅವರೊಂದಿಗಿನ ತ್ರಿಷಾ ಕೃಷ್ಣನ್ ಕಾಣಿಸಿಕೊಂಡಾಗ ಇದು ಸುದ್ದಿ ಇನ್ನೂ ವೇಗ ಪಡೆದುಕೊಂಡಿದೆ.
ತ್ರಿಷಾ ವಿಡಿಯೋ ವೈರಲ್
ಇದೀಗ ಕುತೂಹಲ ಎನ್ನುವಂತೆ ನಟಿ ತ್ರಿಷಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ದಳಪತಿ ಅವರ ಡಿವೋರ್ಸ್ಗೆ ಲಿಂಕ್ ಮಾಡಲಾಗುತ್ತಿದೆ. ಈ ಸಂದರ್ಶನವನ್ನು ತ್ರಿಷಾ ಅವರು 2016ರಲ್ಲಿ ಇಂಡಿಯಾಗ್ಲಿಟ್ಜ್ ಗೆ ನೀಡಿದ್ದರು. 2015 ರಲ್ಲಿ ಚೆನ್ನೈ ಮೂಲದ ಉದ್ಯಮಿ ವರುಣ್ ಮಣಿಯನ್ ಅವರೊಂದಿಗಿನ ನಿಶ್ಚಿತಾರ್ಥ ಮುರಿದುಕೊಂಡ ಕೆಲವೇ ತಿಂಗಳುಗಳ ನಂತರ ಈ ಸಂದರ್ಶನ ನಡೆದಿತ್ತು.
ಡಿವೋರ್ಸ್ನಲ್ಲಿ ನಂಬಿಕೆ ಇಲ್ಲ
ಅದರಲ್ಲಿ ತ್ರಿಷಾ, ವಿಚ್ಛೇದನದಲ್ಲಿ ನಂಬಿಕೆಯಿಲ್ಲದ ಕಾರಣ, ಮದುವೆಯಾಗುವ ಮೊದಲು ಒಬ್ಬ ಪುರುಷನ ಬಗ್ಗೆ ಖಚಿತವಾಗಿರಲು ಬಯಸಿದ್ದೆ ಎಂದು ಹೇಳಿದ್ದರು. "ನನಗೆ ವಿಚ್ಛೇದನದಲ್ಲಿ ನಂಬಿಕೆಯಿಲ್ಲ. ನನ್ನ ಜೀವನದುದ್ದಕ್ಕೂ ನಾನು ಬದುಕಬಲ್ಲ ವ್ಯಕ್ತಿ ಇವನೇ ಎಂದು ನಾನು ಭಾವಿಸಲು ಬಯಸುತ್ತೇನೆ. ನಾನು ಮದುವೆಯಾದಾಗ ವಿಚ್ಛೇದನಕ್ಕೆ ಹೋಗಲು ನಾನು ಬಯಸುವುದಿಲ್ಲ, ಅದನ್ನು ನಾನು ಮಾಡಿಯೇ ತೀರುವವಳು ಎಂದಿದ್ದರು ತ್ರಿಷಾ. "ನನಗೆ ವಿಚ್ಛೇದನದಲ್ಲಿ ನಂಬಿಕೆ ಇಲ್ಲ. ಮದುವೆಗೆ ಮುನ್ನ 100 ಬಾರಿ ಯೋಚಿಸುತ್ತೇನೆ. ಬೇರೆಯವರನ್ನು ನೋಯಿಸಲು ಅಥವಾ ಅತೃಪ್ತಿಕರ ಜೀವನವನ್ನು ನಡೆಸಲು ನಾನು ಬಯಸುವುದಿಲ್ಲ" ಎಂದಿದ್ದರು.
ಅವರೆಲ್ಲಾ ಅತೃಪ್ತರು
"ನನ್ನ ಸುತ್ತಲೂ ಎಲ್ಲಾ ತಪ್ಪು ಕಾರಣಗಳಿಗಾಗಿ ಇರುವ ಹಲವಾರು ವಿವಾಹಿತ ದಂಪತಿ ನನಗೆ ತಿಳಿದಿದ್ದಾರೆ. ಅವರು ತುಂಬಾ ಅತೃಪ್ತರು. ನಾನು ಅಂತಹ ವಿವಾಹದಲ್ಲಿರಲು ಬಯಸುವುದಿಲ್ಲ. ನಾನು ಪ್ರೀತಿಯಲ್ಲಿ ಬೀಳಲು ಬಯಸುತ್ತೇನೆ. ಮದುವೆ ಗೌಣ, ಆದರೆ ನಾನು ಖಂಡಿತವಾಗಿಯೂ ನನ್ನ ಸಂಗಾತಿಯನ್ನು ಭೇಟಿಯಾಗಲು ಬಯಸುತ್ತೇನೆ - ಅದರ ಬಗ್ಗೆ ನಾನು ತುಂಬಾ ನಿರ್ದಿಷ್ಟ. ನಾನು ವಿಚ್ಛೇದನ ಪಡೆಯಲು, ಬೇರೆಯವರನ್ನು ನೋಯಿಸಲು ಅಥವಾ ಅತೃಪ್ತ ಜೀವನವನ್ನು ನಡೆಸಲು ಬಯಸುವುದಿಲ್ಲ, ಆದ್ದರಿಂದ ನಾನು ಅದನ್ನು ಮಾಡುವ ಮೊದಲು ಅದರ ಬಗ್ಗೆ 100 ಬಾರಿ ಯೋಚಿಸುತ್ತೇನೆ ಎಂದಿದ್ದರು.
ಮದುವೆ ರದ್ದತಿಗೆ ಕಾರಣ
"ಅದಕ್ಕಾಗಿಯೇ ನನ್ನ ಮದುವೆ ರದ್ದಾಗಿತ್ತು. ನಾನು ಮದುವೆಯಾಗಬೇಕಿದ್ದ ವ್ಯಕ್ತಿ ನಟನೆಯನ್ನು ನಿಲ್ಲಿಸುವಂತೆ ಕೇಳಿಕೊಂಡರು. ಸಿನಿಮಾಗಳ ಬದಲು, ನನ್ನ ನಿಶ್ಚಿತಾರ್ಥಕ್ಕೆ ಪೂರ್ಣ ವಿರಾಮ ಹಾಕಲು ನಾನು ನಿರ್ಧರಿಸಿದೆ. ನಾನು ಗರ್ಭಿಣಿಯಾದಾಗ ಮಾತ್ರ ವಿರಾಮ ತೆಗೆದುಕೊಳ್ಳುತ್ತೇನೆ. ನನಗೆ ಪ್ರಮುಖ ಪಾತ್ರಗಳನ್ನು ನೀಡದಿದ್ದರೆ, ನನ್ನ ಇಮೇಜ್ಗೆ ಸರಿಹೊಂದುವ ಪಾತ್ರಗಳನ್ನು ಮಾಡುತ್ತೇನೆ, ಆದರೆ ನಾನು ಚಲನಚಿತ್ರೋದ್ಯಮದಿಂದ ದೂರ ಸರಿಯುವುದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಟಿಸುವುದು ನನ್ನ ಆಸೆ" ಎಂದು ತ್ರಿಷಾ ತಿಳಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

