MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಜಾನ್ ಅಬ್ರಹಾಂ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು.. ನಾನಂತೂ... ದೆಹಲಿ ಘಟನೆ ಬಗ್ಗೆ ಹೇಳಿದ ಚಿತ್ರಾಂಗದಾ ಸಿಂಗ್!

ಜಾನ್ ಅಬ್ರಹಾಂ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು.. ನಾನಂತೂ... ದೆಹಲಿ ಘಟನೆ ಬಗ್ಗೆ ಹೇಳಿದ ಚಿತ್ರಾಂಗದಾ ಸಿಂಗ್!

"ಜನಸಂದಣಿ ವಿಪರೀತವಾಗಿತ್ತು, ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಜನರೆಲ್ಲಾ ಜಾನ್ ಅವರ ಮೇಲೆ ಬೀಳುತ್ತಿದ್ದರು. ಆದರೆ ಜಾನ್ ನನ್ನನ್ನು ರಕ್ಷಿಸಲು ಮುಂದಾದರು. ಅವರು ನನ್ನನ್ನು ತಮ್ಮ ರಕ್ಷಣಾ ಕವಚದಂತೆ ಆವರಿಸಿಕೊಂಡು ಕಾರಿನವರೆಗೂ ಕರೆತಂದರು. ನಾವು ಹೇಗೋ ಕಷ್ಟಪಟ್ಟು ಕಾರಿನೊಳಗೆ ಕುಳಿತೆವು. ಆದರೆ..!

2 Min read
Author : Shriram Bhat
Published : Jan 09 2026, 02:57 PM IST
Share this Photo Gallery
  • FB
  • TW
  • Linkdin
  • Whatsapp
111
Image Credit : Instagram

ಮುಂಬೈ: ಬಾಲಿವುಡ್ ಲೋಕದಲ್ಲಿ ನಟ-ನಟಿಯರಿಗೆ ಇರುವ ಕ್ರೇಜ್ ಸಾಮಾನ್ಯವಾದದ್ದಲ್ಲ. ಆದರೆ ಈ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಹೋದಾಗ ಅದು ನಟರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸುತ್ತದೆ. ಇತ್ತೀಚೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಸೆಲೆಬ್ರಿಟಿಗಳನ್ನು ಅಭಿಮಾನಿಗಳು ಮುತ್ತುವ (Mobbing) ಘಟನೆಗಳು ಹೆಚ್ಚಾಗುತ್ತಿವೆ.

211
Image Credit : Instagram

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಖ್ಯಾತ ನಟಿ ಚಿತ್ರಾಂಗದಾ ಸಿಂಗ್ (Chitrangda Singh), ತಮ್ಮ ಜೀವನದಲ್ಲಿ ನಡೆದ ಒಂದು ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ಅಂದು ನಟ ಜಾನ್ ಅಬ್ರಹಾಂ ತಮ್ಮನ್ನು ರಕ್ಷಿಸಲು ಹೋಗಿ ಹೇಗೆ ಗಾಯಗೊಂಡರು ಎಂಬ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

Related Articles

Related image1
ಹಗಲಿನಲ್ಲಿ ಗರತಿ ಗೌರಮ್ಮನಂತಿರೋ ಸಮಂತಾ ರಾತ್ರಿಯಲ್ಲಿ '..' ತರ..! ಈ ಅವತಾರಕ್ಕೆ ಕನ್ನಡದ ನಟ ಸಾಕ್ಷಿ!
Related image2
'ಯಶ'ಸ್ಸೇ ಮಾನದಂಡ.. ಇಂಟರ್‌ನೆಟ್‌ಗೆ 'ಬೆಂಕಿ' ಬಿತ್ತು.. ಟಾಕ್ಸಿಕ್ ಟೀಸರ್ ಬಗ್ಗೆ ಪಬ್ಲಿಕ್ ಏನ್ ಹೇಳ್ತಿದಾರೆ?
311
Image Credit : Instagram

ನಿಯಂತ್ರಣ ತಪ್ಪಿದ ಜನಸಾಗರ: ಚಿತ್ರಾಂಗದಾ ಭೀತಿ

ಇತ್ತೀಚೆಗೆ ನಟಿ ಸಮಂತಾ ರುತ್ ಪ್ರಭು ಮತ್ತು ನಿಧಿ ಅಗರವಾಲ್ ಅವರು ಸಾರ್ವಜನಿಕವಾಗಿ ಅಭಿಮಾನಿಗಳ ಮಧ್ಯೆ ಸಿಲುಕಿ ಪರದಾಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದನ್ನು ನೋಡಿ ತಮಗೆ ತುಂಬಾನೇ ಭಯವಾಯಿತು ಎಂದು ಚಿತ್ರಾಂಗದಾ ಹೇಳಿದ್ದಾರೆ.

411
Image Credit : Instagram

"ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುವುದು ಬಹಳ ಮುಖ್ಯ. ಆ ಏಜೆನ್ಸಿಗಳು ನಟರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಸಮಂತಾ ಮತ್ತು ನಿಧಿ ಅವರ ವಿಡಿಯೋ ನೋಡಿದಾಗ ನನಗೆ ಆತಂಕವಾಯಿತು. ಅಂತಹ ಜಾಗಕ್ಕೆ ಅವರನ್ನು ಹೇಗೆ ಕಳುಹಿಸುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.

511
Image Credit : Instagram

ಜಾನ್ ಅಬ್ರಹಾಂ ಅವರ ಬೆನ್ನಿನ ಮೇಲೆಲ್ಲಾ ರಕ್ತದ ಗೆರೆಗಳು!

ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಡೆದ ಘಟನೆಯೊಂದನ್ನು ಚಿತ್ರಾಂಗದಾ ನೆನಪಿಸಿಕೊಂಡಿದ್ದಾರೆ. 'ಐ, ಮಿ ಔರ್ ಮೈನ್' (I, Me Aur Main) ಸಿನಿಮಾದ ಪ್ರಚಾರಕ್ಕಾಗಿ ಚಿತ್ರಾಂಗದಾ ಮತ್ತು ಜಾನ್ ಅಬ್ರಹಾಂ (John Abraham) ದೆಹಲಿಯ ಕಾಲೇಜೊಂದಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಹೊರಬರುವಾಗ ಅಭಿಮಾನಿಗಳ ಗುಂಪು ಅಕ್ಷರಶಃ ಇವರ ಮೇಲೆ ಮುಗಿಬಿದ್ದಿತ್ತು.

611
Image Credit : Instagram

"ಜನಸಂದಣಿ ವಿಪರೀತವಾಗಿತ್ತು, ಪರಿಸ್ಥಿತಿ ಕೈಮೀರಿ ಹೋಗುತ್ತಿತ್ತು. ಜನರೆಲ್ಲಾ ಜಾನ್ ಅವರ ಮೇಲೆ ಬೀಳುತ್ತಿದ್ದರು. ಆದರೆ ಜಾನ್ ನನ್ನನ್ನು ರಕ್ಷಿಸಲು ಮುಂದಾದರು. ಅವರು ನನ್ನನ್ನು ತಮ್ಮ ರಕ್ಷಣಾ ಕವಚದಂತೆ ಆವರಿಸಿಕೊಂಡು ಕಾರಿನವರೆಗೂ ಕರೆತಂದರು. ನಾವು ಹೇಗೋ ಕಷ್ಟಪಟ್ಟು ಕಾರಿನೊಳಗೆ ಕುಳಿತೆವು.

711
Image Credit : Instagram

ಆಗ ಜಾನ್ ತಮ್ಮ ಶರ್ಟ್ ತೆಗೆದರು. ಅವರ ಬೆನ್ನಿನ ತುಂಬೆಲ್ಲಾ ಉಗುರಿನಿಂದ ಗೀಚಿದ ಗಾಯಗಳಾಗಿದ್ದವು (Scratch marks). ಜನರು ಅವರನ್ನು ಅಷ್ಟು ಕ್ರೂರವಾಗಿ ಎಳೆದಿದ್ದರು. ಇದನ್ನು ನೋಡಿ ನಾನು ದಿಗ್ಭ್ರಮೆಗೊಂಡೆ," ಎಂದು ಚಿತ್ರಾಂಗದಾ ಆ ದಿನದ ಕಹಿ ನೆನಪನ್ನು ಬಿಚ್ಚಿಟ್ಟಿದ್ದಾರೆ.

811
Image Credit : Instagram

ಸೆಲೆಬ್ರಿಟಿಗಳ ಸುರಕ್ಷತೆ ಕೇವಲ ಮಹಿಳೆಯರಿಗಷ್ಟೇ ಅಲ್ಲ

ಈ ಘಟನೆಯ ಬಗ್ಗೆ ಮಾತನಾಡುತ್ತಾ ಅವರು, "ಅಭಿಮಾನಿಗಳು ಪ್ರೀತಿಯಿಂದ ಹತ್ತಿರ ಬರಲು ಬಯಸುತ್ತಾರೆ. ಆದರೆ ಒಮ್ಮೆ ಅವರು ಹತ್ತಿರ ಬಂದಾಗ ಮಿತಿ ಮೀರುತ್ತಾರೆ. ಮುತ್ತಿಗೆ ಹಾಕುವ ಇಂತಹ ಘಟನೆಗಳು ಕೇವಲ ಮಹಿಳಾ ನಟಿಯರಿಗಷ್ಟೇ ಅಲ್ಲ, ಪುರುಷ ನಟರಿಗೂ ಸಂಭವಿಸುತ್ತವೆ ಎಂಬುದಕ್ಕೆ ಜಾನ್ ಅಬ್ರಹಾಂ ಅವರಿಗೆ ಆದ ಗಾಯಗಳೇ ಸಾಕ್ಷಿ.

911
Image Credit : Instagram

ಅಂದು ಆ ಕಾಲೇಜಿನಲ್ಲಿ ಹುಡುಗಿಯರು ಹೆಚ್ಚಿದ್ದ ಕಾರಣ ನಾನು ಸ್ವಲ್ಪ ಸುರಕ್ಷಿತವಾಗಿದ್ದೆ, ಆದರೆ ಜಾನ್ ಬೆನ್ನು ಪೂರ್ತಿ ಗಾಯವಾಗಿತ್ತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ದಹಿ ಹಂಡಿ ಕಾರ್ಯಕ್ರಮಗಳಲ್ಲಿ ಜನರು ತಮ್ಮ ಕಾರಿನ ಮೇಲೆ ಬಡಿದು ಗಾಜು ಒಡೆಯಲು ಯತ್ನಿಸಿದ ಘಟನೆಗಳನ್ನೂ ಅವರು ನೆನಪಿಸಿಕೊಂಡಿದ್ದಾರೆ.

1011
Image Credit : Instagram

ಚಿತ್ರಾಂಗದಾ ಅವರ ಮುಂದಿನ ಸಿನಿಮಾಗಳು

ಚಿತ್ರಾಂಗದಾ ಸಿಂಗ್ ಕೊನೆಯದಾಗಿ 'ರಾತ್ ಅಕೇಲಿ ಹೈ' ಎಂಬ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿಯಿದೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅವರ ಜೊತೆ ಚಿತ್ರಾಂಗದಾ 'ಬ್ಯಾಟಲ್ ಆಫ್ ಗಾಲ್ವಾನ್' (Battle of Galwan) ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವು 2026 ರ ಏಪ್ರಿಲ್ 17 ರಂದು ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.

1111
Image Credit : Instagram

ಒಟ್ಟಿನಲ್ಲಿ, ಸೆಲೆಬ್ರಿಟಿಗಳ ಮೇಲಿನ ಅಭಿಮಾನವು ಹಿಂಸೆಯ ರೂಪ ಪಡೆಯಬಾರದು ಎಂಬುದು ಚಿತ್ರಾಂಗದಾ ಅವರ ಈ ಮಾತುಗಳ ಹಿಂದಿನ ಕಳಕಳಿಯಾಗಿದೆ. ಚಿತ್ರಾಂಗಧಾ ಆಶಯವೂ ಇದೇ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಬಾಲಿವುಡ್
ಮನರಂಜನಾ ಸುದ್ದಿ
ಸುದ್ದಿ

Latest Videos
Recommended Stories
Recommended image1
ಹಗಲಿನಲ್ಲಿ ಗರತಿ ಗೌರಮ್ಮನಂತಿರೋ ಸಮಂತಾ ರಾತ್ರಿಯಲ್ಲಿ '..' ತರ..! ಈ ಅವತಾರಕ್ಕೆ ಕನ್ನಡದ ನಟ ಸಾಕ್ಷಿ!
Recommended image2
ಎಪಿ ಧಿಲ್ಲೋನ್ ಕನ್ಸರ್ಟ್ ವೈರಲ್ ವೀಡಿಯೋ ಎಫೆಕ್ಟ್: ಟಾಕ್ಸಿಕ್ ನಟಿ ತಾರಾ ಸುತಾರಿಯಾ ವೀರ್ ಪಹಾರಿಯಾ ಬ್ರೇಕಪ್
Recommended image3
Yash: ರಾಕಿಂಗ್ ಸ್ಟಾರ್ ಬಗ್ಗೆ ಗೀತು ಮೋಹನ್‌ದಾಸ್.. 'ಟಾಕ್ಸಿಕ್' ನಿರ್ದೇಶಕಿಯೇ ಹೀಗೆ ಹೇಳಿದ್ರು!?.. ವೈರಲ್ ಆಗ್ತಿದೆ ಟಾಕ್!
Related Stories
Recommended image1
ಹಗಲಿನಲ್ಲಿ ಗರತಿ ಗೌರಮ್ಮನಂತಿರೋ ಸಮಂತಾ ರಾತ್ರಿಯಲ್ಲಿ '..' ತರ..! ಈ ಅವತಾರಕ್ಕೆ ಕನ್ನಡದ ನಟ ಸಾಕ್ಷಿ!
Recommended image2
'ಯಶ'ಸ್ಸೇ ಮಾನದಂಡ.. ಇಂಟರ್‌ನೆಟ್‌ಗೆ 'ಬೆಂಕಿ' ಬಿತ್ತು.. ಟಾಕ್ಸಿಕ್ ಟೀಸರ್ ಬಗ್ಗೆ ಪಬ್ಲಿಕ್ ಏನ್ ಹೇಳ್ತಿದಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved